Charles Sobhraj 19 ವರ್ಷ ಜೈಲು ಶಿಕ್ಷೆ ನಂತರ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂಕೋರ್ಟ್ ಆದೇಶ

ಇಬ್ಬರು ಅಮೆರಿಕನ್ ಪ್ರವಾಸಿಗಳನ್ನು ಹತ್ಯೆಗೈದ ಆರೋಪದಲ್ಲಿ 2003ರಿಂದ ಈತ ನೇಪಾಳದ ಜೈಲಿನಲ್ಲಿದ್ದಾನೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜೈಲಿನಿಂದ ಬಂಧಮುಕ್ತನಾದ 15 ದಿನಗಳಲ್ಲಿ ಆತನನ್ನು ಗಡಿಪಾರು ಮಾಡಬೇಕೆಂದು ಉಚ್ಛ ನ್ಯಾಯಾಲಯ ಹೇಳಿದೆ

Charles Sobhraj 19 ವರ್ಷ ಜೈಲು ಶಿಕ್ಷೆ ನಂತರ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂಕೋರ್ಟ್ ಆದೇಶ
ಚಾರ್ಲ್ಸ್ ಶೋಭರಾಜ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Dec 21, 2022 | 8:28 PM

ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭಾರಾಜ್ (Charles Sobhraj) ಬಿಡುಗಡೆಗೆ ನೇಪಾಳ (Nepal) ಸುಪ್ರೀಂಕೋರ್ಟ್ ಆದೇಶಿಸಿದೆ. 19 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಶೋಭರಾಜ್​​ಗೆ ವಯಸ್ಸಾಗಿರುವುದರಿಂದ ಆತನನ್ನು ಬಿಡುಗಡೆ ಮಾಡಲು ಕೋರ್ಟ್ ಆದೇಶಿಸಿದೆ. ಇಬ್ಬರು ಅಮೆರಿಕನ್ ಪ್ರವಾಸಿಗಳನ್ನು ಹತ್ಯೆಗೈದ ಆರೋಪದಲ್ಲಿ 2003ರಿಂದ ಈತ ನೇಪಾಳದ ಜೈಲಿನಲ್ಲಿದ್ದಾನೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜೈಲಿನಿಂದ ಬಂಧಮುಕ್ತನಾದ 15 ದಿನಗಳಲ್ಲಿ ಆತನನ್ನು ಗಡಿಪಾರು ಮಾಡಬೇಕೆಂದು ಉಚ್ಛ ನ್ಯಾಯಾಲಯ ಹೇಳಿದೆ. ಭಾರತ ಮತ್ತು ವಿಯೇಟ್ನಾಮೀಸ್ ದಂಪತಿಗಳ ಮಗ, ಫ್ರಾನ್ಸ್ ಪೌರತ್ವ ಹೊಂದಿರುವ ಚಾರ್ಲ್ಸ್ ಶೋಭರಾಜ್ ನೇಪಾಳಕ್ಕೆ ನಕಲಿ ಪಾಸ್ ಪೋರ್ಟ್ ಬಳಸಿ ಪ್ರವೇಶಿಸಿದ್ದ. 1975ರಲ್ಲಿ ಈತ ಅಮೆರಿಕದ ಪ್ರಜೆಗಳಾದ ಕೋನಿ ಜೋ ಬೊರೊಜಿಂಚ್ (29)ಮತ್ತು ಆತನ ಗರ್ಲ್ ಫ್ರೆಂಡ್ ಕೆನಡಾ ಮೂಲದ ಲೌರೆಂಟ್ ಕಾರೆರ್ (26) ಅವರನ್ನು ಹತ್ಯೆ ಮಾಡಿದ್ದ. ಚಾರ್ಲ್ಸ್ ಫೋಟೊ ನ್ಯೂಸ್ ಪೇಪರ್ ನಲ್ಲಿ ಪ್ರಕಟವಾದ ನಂತರ 2003 ಸೆಪ್ಟೆಂಬರ್ 1ರಂದು ನೇಪಾಳದ ಕ್ಯಾಸಿನೋ ಹೊರಗಡಿ ಇದ್ದ ಆತನನ್ನು ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಪೊಲೀಸರು ಆತನ ವಿರುದ್ಧ 1975ರಲ್ಲಿ ಕಠ್ಮಂಡು ಮತ್ತು ಭಕ್ತಪುರ್ ನಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳನ್ನು ದಾಖಲಿಸಿದ್ದರು.

ಚಾರ್ಲ್ಸ್ ಶೋಭಾರಾಜ್​​ಗೆ   ಕಠ್ಮಂಡುವಿನ ಸೆಂಟ್ರಲ್ ಜೈಲಿನಲ್ಲಿ  21 ವರ್ಷ ಜೈಲು ವಿಧಿಸಲಾಗಿತ್ತು. ಯುಎಸ್ ಪ್ರಜೆಯನ್ನು ಹತ್ಯೆ ಮಾಡಿದಕ್ಕಾಗಿ 20 ವರ್ಷಗಳು ಮತ್ತು ನಕಲಿ ಪಾಸ್‌ಪೋರ್ಟ್ ಬಳಸಿದ್ದಕ್ಕಾಗಿ ಒಂದು ವರ್ಷ ಮತ್ತು ₹ 2,000 ದಂಡವನ್ನು ವಿಧಿಸಲಾಗಿತ್ತು.

ಯಾರು ಈ ಬಿಕಿನಿ ಕಿಲ್ಲರ್ ಶೋಭರಾಜ್?

  1. 1944 ರಲ್ಲಿ ವಿಯೆಟ್ನಾಂನಲ್ಲಿ ಜನಿಸಿದ ಶೋಭರಾಜ್, ಭಾರತೀಯ ತಂದೆ ಮತ್ತು ವಿಯೆಟ್ನಾಂ ಮೂಲದ ತಾಯಿಯ ಮಗ. ಈತ ಚಿಕ್ಕ ವಯಸ್ಸಿನಲ್ಲಿ ಫ್ರಾನ್ಸ್​​ ಗೆ ತೆರಳಿದ್ದು ಸಣ್ಣ ಕಳ್ಳತನ ಮತ್ತು ವಂಚನೆ ಸೇರಿದಂತೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ.
  2. 1970 ರ ದಶಕದಲ್ಲಿ ಶೋಭಾರಾಜ್ ಆಗ್ನೇಯ ಏಷ್ಯಾಕ್ಕೆ ಪ್ರಯಾಣಿಸಿ ಅಲ್ಲಿ ಕೊಲೆ ಸೇರಿದಂತೆ ಹೆಚ್ಚು ಗಂಭೀರ ಅಪರಾಧಗಳನ್ನು ಮಾಡಲು ಪ್ರಾರಂಭಿಸಿದ್ದ. ಶೋಭಾರಾಜ್ ಅಪರಾಧಗಳು ಅವನ ಕುತಂತ್ರ ಮತ್ತು ಅವನ ಸುತ್ತಲಿರುವವರನ್ನು ಕುಶಲತೆಯಿಂದ ನಿರ್ವಹಿಸುವ ಸಾಮರ್ಥ್ಯದಿಂದ ನಿರೂಪಿಸಲ್ಪಟ್ಟವು.
  3. ಮೋಡಿ ಮತ್ತು ಸೌಂದರ್ಯವನ್ನು ಬಳಸಿಕೊಂಡು ಆತ ಅಪರಾಧಗಳನ್ನು ಮಾಡಲು ಬಲೆ ಬೀಸುತ್ತಿದ್ದ.
  4. ಶೋಭರಾಜ್ ಥಾಯ್ಲೆಂಡ್, ನೇಪಾಳ ಮತ್ತು ಭಾರತದಲ್ಲಿ ಪ್ರವಾಸಿಗರನ್ನು, ವಿಶೇಷವಾಗಿ ಬ್ಯಾಕ್‌ಪ್ಯಾಕರ್‌ಗಳನ್ನು ಗುರಿಯಾಗಿಸಿಕೊಂಡಿದ್ದ. ಆತ ಅವರಲ್ಲಿ ಸ್ನೇಹ ಬೆಳೆಸಿ ಅವರಿಗೆ ಮಾದಕ ವಸ್ತು ನೀಡಿ ಅವರ ವಸ್ತುಗಳನ್ನು ಕದಿಯುತ್ತಿದ್ದ.
  5. ಕೆಲವು ಸಂದರ್ಭಗಳಲ್ಲಿ ಆತ ಹತ್ಯೆ ಮಾಡಿರುವ ವ್ಯಕ್ತಿಗಳ ದೇಹಗಳನ್ನು ಘೋರ ರೀತಿಯಲ್ಲಿ ವಿಲೇವಾರಿ ಮಾಡುತ್ತಿದ್ದ. ಈತನಿಗೆ ಬಿಕಿನಿ ಕಿಲ್ಲರ್ ಎಂಬ ಹೆಸರು ಇತ್ತು.
  6. ಶೋಭರಾಜ್ 1976 ರಲ್ಲಿ ನವದೆಹಲಿಯಲ್ಲಿ ನಗರದ ಅಶೋಕ ಹೋಟೆಲ್‌ನಲ್ಲಿ ಸರಣಿ ಕೊಲೆ ಮತ್ತು ಕಳ್ಳತನದ ನಂತರ ಸಿಕ್ಕಿಬಿದ್ದಿದ್ದ. ಆತನಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
  7. 21 ವರ್ಷಗಳ ಜೈಲಿನಲ್ಲಿ ಕಳೆದ ಆತ 1986 ರಲ್ಲಿ ಅವರು ತಪ್ಪಿಸಿಕೊಂಡು ಭಾರತದ ಕರಾವಳಿ ರಾಜ್ಯವಾದ ಗೋವಾದಲ್ಲಿ ಮತ್ತೆ ಸಿಕ್ಕಿಬಿದ್ದಿದ್ದ.
  8. 1997 ರಲ್ಲಿ ಬಿಡುಗಡೆಯಾದ ಶೋಭರಾಜ್ ಪ್ಯಾರಿಸ್‌ ಬಿಟ್ಟು 2003 ರಲ್ಲಿ ನೇಪಾಳದಲ್ಲಿ ಕಾಣಿಸಿಕೊಂಡ. ಕಠ್ಮಂಡುವಿನಲ್ಲಿ ಆತನನ್ನು ಬಂಧಿಸಲಾಯಿತು
  9. ನೇಪಾಳದ ನ್ಯಾಯಾಲಯವು 1975 ರಲ್ಲಿ ಅಮೆರಿಕದ ಪ್ರವಾಸಿ ಕೋನಿ ಜೋ ಬ್ರಾಂಜಿಚ್‌ನನ್ನು ಕೊಂದಿದ್ದಕ್ಕಾಗಿ  ಅವನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ಒಂದು ದಶಕದ ನಂತರ ಅವನು ಬ್ರಾಂಜಿಚ್‌ನ ಕೆನಡಾದ ಸಂಗಾತಿಯನ್ನು ಕೊಂದ ತಪ್ಪಿತಸ್ಥನೆಂದು ಕಂಡುಬಂದಿತು.
  10. ಶೋಭರಾಜ್ ಕಥೆಯು 2021 ರಲ್ಲಿ ಬಿಡುಗಡೆಯಾದ ಟಿವಿ ಸರಣಿ “ದಿ ಸರ್ಪೆಂಟ್” ಸೇರಿದಂತೆ ಹಲವಾರು ಪುಸ್ತಕಗಳು, ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳ ವಿಷಯವಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Wed, 21 December 22

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ