AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರ್ವೆಯಲ್ಲಿ ಫೈಜರ್​ ಲಸಿಕೆ ಪಡೆದ 23 ಮಂದಿ ಸಾವು; ಇನ್ನೂ ಹಲವರಲ್ಲಿ ಗಂಭೀರ ಅಡ್ಡಪರಿಣಾಮ

ಇಲ್ಲಿಯವರೆಗೆ ಫೈಜರ್ ಲಸಿಕೆಯನ್ನು ನಾರ್ವೆಯಲ್ಲಿ ಒಟ್ಟು 30ಸಾವಿರ ಜನರು ಸ್ವೀಕರಿಸಿದ್ದಾರೆ. 23 ಜನರು ಸಾಯುತ್ತಿದ್ದಂತೆ ಅಲರ್ಟ್​ ಆಗಿರುವ ತಜ್ಞರು, ಲಸಿಕೆ ನೀಡುವಾಗ ವೈದ್ಯರು ಎಚ್ಚರಿಕೆ ವಹಿಸಬೇಕು. ಯಾರಿಗೆ ಕೊಡಬೇಕು? ಕೊಡಬಾರದು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.

ನಾರ್ವೆಯಲ್ಲಿ ಫೈಜರ್​ ಲಸಿಕೆ ಪಡೆದ 23 ಮಂದಿ ಸಾವು; ಇನ್ನೂ ಹಲವರಲ್ಲಿ ಗಂಭೀರ ಅಡ್ಡಪರಿಣಾಮ
ಪ್ರಾತಿನಿಧಿಕ ಚಿತ್ರ
Lakshmi Hegde
| Updated By: ರಾಜೇಶ್ ದುಗ್ಗುಮನೆ|

Updated on:Jan 16, 2021 | 4:07 PM

Share

ನಾರ್ವೆಯಲ್ಲಿ ಕೊರೊನಾ ಲಸಿಕೆ ಪಡೆದ 23 ಮಂದಿ ಮೃತಪಟ್ಟಿದ್ದು, ಇನ್ನೂ ಹಲವರು ಲಸಿಕೆ ತೆಗೆದುಕೊಂಡ ಕೆಲವೇ ಹೊತ್ತಲ್ಲಿ ತೀವ್ರ ಅಸ್ವಸ್ಥರಾಗಿದ್ದಾರೆ. ಇಷ್ಟು ಜೀವಗಳು ಹೋದ ಬಳಿಕ ಈಗ ಹೇಳಿಕೆ ಬಿಡುಗಡೆ ಮಾಡಿರುವ ನಾರ್ವೆ ಆರೋಗ್ಯ ಇಲಾಖೆ, ವೃದ್ಧರಿಗೆ ಮತ್ತು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಒಳ್ಳೆಯದಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಈ ಸಾವಿನ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ನಾರ್ವೆ ಸರ್ಕಾರ ಆದೇಶ ಹೊರಡಿಸಿದೆ.

80 ವರ್ಷ ದಾಟಿದವರಿಗೆ ಲಸಿಕೆ ಹಾಕಿದಾಗ ಅವರಲ್ಲಿ ರಿಯಾಕ್ಷನ್​ ಆಗುತ್ತಿದೆ. ವಯಸ್ಸಾದವರ ದೇಹ ಮೊದಲೇ ದುರ್ಬಲವಾಗಿರುತ್ತದೆ. ಅಂಥವರಿಗೆ ಲಸಿಕೆಯಿಂದ ಪ್ರತಿಕೂಲ ಆಗುತ್ತಿದೆ ಎಂದು ನಾರ್ವೆ ವೈದ್ಯರು ತಿಳಿಸಿದ್ದಾರೆ. ಹಾಗಂತ, ಲಸಿಕೆ ತೆಗದುಕೊಂಡಿದ್ದಕ್ಕೇ ಇವರು ಮೃತರಾಗಿದ್ದಾರೆಯೇ ಎಂಬುದು ಪರಿಶೀಲನೆಯ ನಂತರವಷ್ಟೇ ತಿಳಿದುಬರಬೇಕು ಎಂದೂ ಹೇಳಿದ್ದಾರೆ. ಈ ಮಧ್ಯೆ ಫೈಜರ್​ ಲಸಿಕೆಯ ಪೂರೈಕೆಯನ್ನು ಅದರ ತಯಾರಿಕಾ ಕಂಪನಿ ತಾತ್ಕಾಲಿಕವಾಗಿ ಕೆಲವು ಕಡೆಗಳಲ್ಲಿ ನಿಲ್ಲಿಸಿದೆ.

ಇಲ್ಲಿಯವರೆಗೆ ಫೈಜರ್ ಲಸಿಕೆಯನ್ನು ನಾರ್ವೆಯಲ್ಲಿ ಒಟ್ಟು 30ಸಾವಿರ ಜನರು ಸ್ವೀಕರಿಸಿದ್ದಾರೆ. 23 ಜನರು ಸಾಯುತ್ತಿದ್ದಂತೆ ಅಲರ್ಟ್​ ಆಗಿರುವ ತಜ್ಞರು, ಲಸಿಕೆ ನೀಡುವಾಗ ವೈದ್ಯರು ಎಚ್ಚರಿಕೆ ವಹಿಸಬೇಕು. ಯಾರಿಗೆ ಕೊಡಬೇಕು? ಕೊಡಬಾರದು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ. ಇನ್ನು 23 ಮಂದಿ ಮೃತಪಟ್ಟಿದ್ದಲ್ಲದೆ, 21 ಮಹಿಳೆಯರು, ಎಂಟು ಮಂದಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಅದರಲ್ಲೂ 9ಮಂದಿಗೆ ಗಂಭೀರವಾಗಿ ಅಡ್ಡಪರಿಣಾಮ ಉಂಟಾಗಿದೆ. ಆದರೆ ಮಾರಣಾಂತಿಕವಾಗಿ ಅಲ್ಲ ಎಂದೂ ನಾರ್ವೆ ಆರೋಗ್ಯ ಇಲಾಖೆ ತಿಳಿಸಿದೆ.

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ: ಬಿಜೆಪಿ-ಟಿಎಂಸಿ ಪಕ್ಷಗಳಲ್ಲಿನ ಆಂತರಿಕ ಬೆಳವಣಿಗೆಗಳು ಹೀಗಿವೆ

Published On - 4:07 pm, Sat, 16 January 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!