AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid Vaccine ಆಕ್ಸ್‌ಫರ್ಡ್ ವಿವಿ ಪ್ರಯೋಗದ ಮೊದಲ ಹಂತದ ವರದಿ ಬಿಡುಗಡೆ!

[lazy-load-videos-and-sticky-control id=”rK3ShpMzpMY”] ದೆಹಲಿ: ಇಂದು ಆಕ್ಸ್‌ಫರ್ಡ್ ವಿವಿಯಿಂದ ಕೊರೊನಾ ಔಷಧಿ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಮೊದಲ ಹಂತದ ಪ್ರಯೋಗದ ವರದಿ ಇಂದು ಬಿಡುಗಡೆಯಾಗಲಿದ್ದು, ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವಕ್ತಾರರಿಂದ ಈ ಬಗ್ಗೆ ಮಾಹಿತಿ ಸಿಗಲಿದೆ. ಅಸ್ಟ್ರಾಜೆನೆಕ್ ಫಾರ್ಮಾಸೂಟಿಕಲ್ಸ್ ಜತೆಗೂಡಿ ಕೊರೊನಾಗೆ ಔಷಧ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫರ್ಡ್ 1, 2ನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣಗೊಳಿಸಿದೆ. ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಔಷಧಿ ಪ್ರಯೋಗ ಮಾಡಬೇಕಿದೆ. ಈವರೆಗಿನ ಪ್ರಯೋಗದಲ್ಲಿ ಶೇ.80ರಷ್ಟು ಪರಿಣಾಮಕಾರಿಯಾಗಿದೆ. ಔಷಧ ಪ್ರಯೋಗ ಯಶಸ್ವಿಯಾದರೆ […]

Covid Vaccine ಆಕ್ಸ್‌ಫರ್ಡ್ ವಿವಿ  ಪ್ರಯೋಗದ ಮೊದಲ ಹಂತದ ವರದಿ ಬಿಡುಗಡೆ!
ಆಯೇಷಾ ಬಾನು
| Edited By: |

Updated on:Jul 20, 2020 | 1:22 PM

Share

[lazy-load-videos-and-sticky-control id=”rK3ShpMzpMY”]

ದೆಹಲಿ: ಇಂದು ಆಕ್ಸ್‌ಫರ್ಡ್ ವಿವಿಯಿಂದ ಕೊರೊನಾ ಔಷಧಿ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಮೊದಲ ಹಂತದ ಪ್ರಯೋಗದ ವರದಿ ಇಂದು ಬಿಡುಗಡೆಯಾಗಲಿದ್ದು, ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವಕ್ತಾರರಿಂದ ಈ ಬಗ್ಗೆ ಮಾಹಿತಿ ಸಿಗಲಿದೆ.

ಅಸ್ಟ್ರಾಜೆನೆಕ್ ಫಾರ್ಮಾಸೂಟಿಕಲ್ಸ್ ಜತೆಗೂಡಿ ಕೊರೊನಾಗೆ ಔಷಧ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫರ್ಡ್ 1, 2ನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣಗೊಳಿಸಿದೆ. ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಔಷಧಿ ಪ್ರಯೋಗ ಮಾಡಬೇಕಿದೆ. ಈವರೆಗಿನ ಪ್ರಯೋಗದಲ್ಲಿ ಶೇ.80ರಷ್ಟು ಪರಿಣಾಮಕಾರಿಯಾಗಿದೆ. ಔಷಧ ಪ್ರಯೋಗ ಯಶಸ್ವಿಯಾದರೆ ಈ ವರ್ಷವೇ 200 ಕೋಟಿ ಔಷಧ ಉತ್ಪಾದನೆಯ ಗುರಿ ಹಾಕಿಕೊಂಡಿದೆ.

ಸದ್ಯ ಆಕ್ಸ್‌ಫರ್ಡ್ ವಿವಿ ಔಷಧಿಯು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ನ್ಯೂಮೋನಿಯಾ ಕಂಡು ಬಂದಿಲ್ಲ. ಔಷಧಿಯಿಂದ ವೈರಸ್ ಸಾವನ್ನಪ್ಪಿವೆ‌. ಈಗ ಬ್ರೆಜಿಲ್‌ನ ಕೊರೊನಾ ರೋಗಿಗಳ ಮೇಲೆ ಆಕ್ಸ್‌ಫರ್ಡ್ ವಿವಿಯ ಔಷಧ ಪ್ರಯೋಗ ಮಾಡಲಾಗಿದೆ. ಮೊದಲ ಹಂತದ ಪ್ರಯೋಗದ ವರದಿ ಜುಲೈ 20ರ ಸೋಮವಾರ ಅಂದ್ರೆ ಇಂದು ಬಿಡುಗಡೆಯಾಗಲಿದೆ.

ಮನುಷ್ಯರ ಮೇಲೆ ಮೂರನೇ ಹಂತದ ಪ್ರಯೋಗ ಮಾತ್ರ ಬಾಕಿ ಇದೆ. 3ನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಪ್ರಯೋಗ ಮಾಡಲಾಗುತ್ತೆ. ಆಕ್ಸ್‌ಫರ್ಡ್ ವಿವಿ ಔಷಧಿಗೆ ‘AZD 1222’ ಎಂದು ಹೆಸರಿಡಲಾಗಿದೆ. ಮತ್ತೊಂದೆಡೆ ಆಮೆರಿಕಾದ ಮೋಡರ್ನಾ ಕಂಪನಿಯು ಜುಲೈ 27 ರಿಂದ ಮೂರನೇ ಹಂತದ ಪ್ರಯೋಗ ಆರಂಭಿಸಲಿದೆ.

Published On - 10:12 am, Mon, 20 July 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್