AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ ಮೇಲೆ ಲಂಡನ್​​ನಲ್ಲಿ ದಾಳಿ; ಇಮ್ರಾನ್​ ಖಾನ್​ ಪಕ್ಷದ ಕಾರ್ಯಕರ್ತನಿಂದ ಕೃತ್ಯ

ಇಮ್ರಾನ್​ ಖಾನ್​ ನಂತರ ಪಾಕಿಸ್ತಾನ ಪ್ರಧಾನಿ ಹುದ್ದೆಗೆ ಏರುವುದು ನವಾಜ್ ಶರೀಫ್ ಸಹೋದರ ಶೆಹಬಾಜ್​ ಶರೀಫ್​ ಎಂದು ಬಲವಾದ ಮೂಲಗಳು ತಿಳಿಸಿವೆ.

ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ ಮೇಲೆ ಲಂಡನ್​​ನಲ್ಲಿ ದಾಳಿ; ಇಮ್ರಾನ್​ ಖಾನ್​ ಪಕ್ಷದ ಕಾರ್ಯಕರ್ತನಿಂದ ಕೃತ್ಯ
ನವಾಜ್ ಶರೀಫ್​
TV9 Web
| Updated By: Lakshmi Hegde|

Updated on: Apr 03, 2022 | 11:57 AM

Share

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್​ ಶರೀಫ್​​ ಮೇಲೆ ಲಂಡನ್​​ನಲ್ಲಿ ದಾಳಿಯಾಗಿದೆ. ಪಾಕಿಸ್ತಾನದಲ್ಲಿ ಸದ್ಯದ ಮಟ್ಟಿಗೆ ಆಡಳಿತದಲ್ಲಿರುವ ಪಕ್ಷ ಪಾಕಿಸ್ತಾನ್​-ಇ-ಇನ್ಸಾಫ್​ (ಪಿಟಿಐ-ಇಮ್ರಾನ್​ ಖಾನ್​ ಪಕ್ಷ)ನ ಕಾರ್ಯಕರ್ತನೊಬ್ಬ ಶರೀಫ್​ ಮೇಲೆ ದಾಳಿ ನಡೆಸಿದ್ದಾಗಿ ಪಾಕ್​ ಪತ್ರಕರ್ತರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲು ಪೊಲೀಸ್ ಕಾರ್ಯಾಚರಣೆ ಪ್ರಾರಂಭವಾಗಿದ್ದಾಗಿಯೂ ತಿಳಿಸಲಾಗಿದೆ. ಟ್ವೀಟ್ ಮಾಡಿದ ಪತ್ರಕರ್ತನ ಹೆಸರು ಅಹ್ಮದ್​ ರೂನಾನಿ. ಪಾಕಿಸ್ತಾನದ ಫ್ಯಾಕ್ಟ್ ಫೋಕಸ್​ ವರದಿಗಾರ. ಈ ದಾಳಿಯಲ್ಲಿ ನವಾಜ್​ ಶರೀಫ್​ ಪಾರಾಗಿದ್ದಾರೆ, ಆದರೆ ಅವರ ಅಂಗರಕ್ಷಕನಿಗೆ ಗಾಯವಾಗಿದೆ ಎಂದೂ ಅವರು ತಿಳಿಸಿದ್ದಾರೆ. 

ಇತ್ತ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್​ ಪ್ರಧಾನಿ ಹುದ್ದೆಯಿಂದ ಇಳಿಯುವ ಕಾಲ ಸನ್ನಿಹಿತವಾಗಿದೆ. ಇಂದು ಇನ್ನು ಕೆಲವೇ ಹೊತ್ತಲ್ಲಿ ಪ್ರಧಾನಿ ಇಮ್ರಾನ್ ಖಾನ್​ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ನಾನು ಕೊನೇ ಕ್ಷಣದವರೆಗೂ ಹೋರಾಡುತ್ತೇನೆ ಎಂದು ಹಿಂದೆಯೇ ಹೇಳಿರುವ ಇಮ್ರಾನ್​ ಖಾನ್​, ತಮ್ಮ ವಿರುದ್ಧ ಮಂಡನೆಯಾದ  ಅವಿಶ್ವಾಸ ನಿರ್ಣಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಪಾಕ್ ಜನರಿಗೆ ಕರೆಕೊಟ್ಟಿದ್ದಾರೆ. ಇದೇ ಘಟನೆ ಬೇರೆ ಯಾವುದೇ ದೇಶಗಳಲ್ಲಿ ನಡೆದಿದ್ದರೆ, ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದರು. ಹಾಗೇ ನೀವು ಕೂಡ ಬೀದಿಗಿಳಿಯಬೇಕು ಎಂದು ಹೇಳಿದ್ದಾರೆ.

ಇನ್ನು ಇಮ್ರಾನ್​ ಖಾನ್​ ನಂತರ ಪಾಕಿಸ್ತಾನ ಪ್ರಧಾನಿ ಹುದ್ದೆಗೆ ಏರುವುದು ನವಾಜ್ ಶರೀಫ್ ಸಹೋದರ ಶೆಹಬಾಜ್​ ಶರೀಫ್​ ಎಂದು ಬಲವಾದ ಮೂಲಗಳು ತಿಳಿಸಿವೆ. ಇಂದು ಇಮ್ರಾನ್ ಖಾನ್ ಯಾವ್​ ಕಾರಣಕ್ಕೂ ವಿಶ್ವಾಸ ಮತ ಯಾಚನೆಯಲ್ಲಿ ಗೆಲ್ಲುವುದಿಲ್ಲ. ಇವರು ಹುದ್ದೆಯಿಂದ ಇಳಿದ ಬಳಿಕ ಪಾಕಿಸ್ತಾನ ಮುಸ್ಲಿಂ ಲೀಗ್​ (ಎನ್​) ಪಕ್ಷದ ಶೆಹಬಾಜ್​ ಶರೀಫ್​ ಅವರೇ ಹುದ್ದೆಗೆ ಏರಲಿದ್ದಾರೆ ಎಂಬುದು ಪಾಕ್​ ಮಾಧ್ಯಮಗಳ ವರದಿ. ಶೆಹಬಾಜ್​ ಬಗ್ಗೆ ಇಮ್ರಾನ್ ಖಾನ್ ನಿನ್ನೆ ಟೀಕಿಸಿದ್ದರು. ಶೆಹಬಾಜ್​ ಶರೀಫ್ ಖಂಡಿತ ಅಮೆರಿಕದ ಗುಲಾಮನಾಗುತ್ತಾನೆ. ಭಿಕ್ಷುಕರರು ಆಯ್ಕೆ ಮಾಡಿಕೊಳ್ಳಲು ಯೋಗ್ಯರಲ್ಲ ಎಂದು ಶೆಹಬಾಜ್​ ಹೇಳುತ್ತಾರೆ. ಅದರ ಅರ್ಥವೇನು? ಬಡವರು ಮತ್ತು ಭಿಕ್ಷುಕರು ಗುಲಾಮರೇ? ಪಾಕಿಸ್ತಾನಕ್ಕೆ ಈ ಗತಿ ತಂದವರು ಯಾರು ಎಂಬುದನ್ನು ಶೆಹಬಾಜ್​ ಬಳಿಯೇ ಕೇಳಿ ಎಂದು ಹೇಳುವ ಮೂಲಕ ನವಾಜ್ ಶರೀಫ್​​ ವಿರುದ್ಧ ವ್ಯಂಗ್ಯ ಮಾಡಿದ್ದರು.

ಇದನ್ನೂ ಓದಿ: ಮತ್ತೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ರಾಜಕೀಯಕ್ಕೆ; IPS ಭಾಸ್ಕರ್ ರಾವ್ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ