AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​ ಸೇನಾ ಮುಖ್ಯಸ್ಥನ ರಾಜೀನಾಮೆಗೆ ಆಗ್ರಹಿಸಿದ ಕಂಪ್ಯೂಟರ್​ ಇಂಜಿನಿಯರ್​ಗೆ 5 ವರ್ಷ ಜೈಲು ಶಿಕ್ಷೆ; ಹೈಕೋರ್ಟ್​ ಮೆಟ್ಟಿಲೇರಿದ ಸೇನಾ ನಿವೃತ್ತ ಅಧಿಕಾರಿ

ಹಸನ್​ ಅಸ್ಕಾರಿ ಕಂಪ್ಯೂಟರ್​ ಇಂಜಿನಿಯರ್ ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಕಮರ್​ ಜಾವೇದ್​​ಗೆ ಪತ್ರ ಬರೆದಿದ್ದರು. ಆಡಳಿತ ಅವಧಿ ವಿಸ್ತರಣೆಯಾಗಿದ್ದನ್ನು ಕಟುವಾಗಿ ಟೀಕಿಸಿದ್ದಲ್ಲದೆ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದರು. 

ಪಾಕ್​ ಸೇನಾ ಮುಖ್ಯಸ್ಥನ ರಾಜೀನಾಮೆಗೆ ಆಗ್ರಹಿಸಿದ ಕಂಪ್ಯೂಟರ್​ ಇಂಜಿನಿಯರ್​ಗೆ 5 ವರ್ಷ ಜೈಲು ಶಿಕ್ಷೆ; ಹೈಕೋರ್ಟ್​ ಮೆಟ್ಟಿಲೇರಿದ ಸೇನಾ ನಿವೃತ್ತ ಅಧಿಕಾರಿ
ಜನರಲ್​ ಕಮರ್​ ಜಾವೇದ್​ ಬಜ್ವಾ
TV9 Web
| Edited By: |

Updated on: Oct 30, 2021 | 3:45 PM

Share

ಕರಾಚಿ: ಪಾಕ್​ ಸೇನಾ ಮುಖ್ಯಸ್ಥ ಜನರಲ್​  ಕಮರ್ ಜಾವೇದ್ ಬಾಜ್ವಾ(General Qamar Javed Bajwa) ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದ ಸೇನೆಯ ನಿವೃತ್ತ ಮೇಜರ್​ ಜನರಲ್​ವೊಬ್ಬರ ಪುತ್ರನಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ (Pakistan Military Court) ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ. ನಿವೃತ್ತ ಮೇಜರ್​ ಜನರಲ್​ ಜಫರ್​ ಮೆಹ್ದಿ ಅಸ್ಕಾರಿ ಅವರ ಪುತ್ರ ಹಸನ್​ ಅಸ್ಕಾರಿ ಇದೀಗ ಜೈಲು ಶಿಕ್ಷೆಗೆ ಗುರಿಯಾದವರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಕಮರ್​ ಜಾವೇದ್​​ ಬಾಜ್ವಾರ ಅಧಿಕಾರ ಅವಧಿ ವಿಸ್ತರಿಸಿದ್ದನ್ನು ಟೀಕಿಸಿ, ರಾಜೀನಾಮೆ ನೀಡುವಂತೆ ಆಗ್ರಹಿಸಿ ಅವರಿಗೇ ಪತ್ರ ಬರೆದಿದ್ದರು ಎಂದು ಬಿಬಿಸಿ ಉರ್ದು ಮಾಧ್ಯಮ ವರದಿ ಮಾಡಿದೆ.  

ಈ ಹಸನ್​ ಅಸ್ಕಾರಿ ಕಂಪ್ಯೂಟರ್​ ಇಂಜಿನಿಯರ್ ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಕಮರ್​ ಜಾವೇದ್​​ಗೆ ಪತ್ರ ಬರೆದಿದ್ದರು. ಆಡಳಿತ ಅವಧಿ ವಿಸ್ತರಣೆಯಾಗಿದ್ದನ್ನು ಕಟುವಾಗಿ ಟೀಕಿಸಿದ್ದಲ್ಲದೆ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದರು.  ಜನವರಿಯಲ್ಲಿ  ಇಸ್ಲಮಾಬಾದ್​​ ಹೈಕೋರ್ಟ್​ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಅದಾದ ಬಳಿಕ ಜುಲೈನಿಂದ ಪಾಕಿಸ್ತಾನ ಮಿಲಿಟರಿ ಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿದೆ. ಜುಲೈನಲ್ಲಿ ನಡೆದ ವಿಚಾರಣೆ ವೇಳೆ ಪಾಕಿಸ್ತಾನ ಸೇನಾ ನ್ಯಾಯಾಲಯದಲ್ಲಿ ಅಧಿಕಾರಿಯೊಬ್ಬರು ಹಸನ್​ ಅಸ್ಕಾರಿಯನ್ನು ಪ್ರತಿನಿಧಿಸಿದ್ದರು. ಸಾಹಿವಾಲ್​​ನ ಉನ್ನತ ಭದ್ರತೆಯುಳ್ಳ ಜೈಲಿನಲ್ಲಿ ತನ್ನ ಮಗನನ್ನು ಇಟ್ಟಿದ್ದರಿಂದ, ಆತನನ್ನು ಭೇಟಿಯಾಗಲು ತುಂಬ ಕಷ್ಟಪಡುತ್ತಿದ್ದೇನೆ ಎಂದು ಇದೇ ವೇಳೆ ಅಸ್ಕಾರಿ ತಂದೆ ಕೋರ್ಟ್​​ನಲ್ಲಿ ಹೇಳಿಕೊಂಡಿದ್ದರು.

ಸದ್ಯ ಇದನ್ನೊಂದು ದೇಶದ್ರೋಹ ಪ್ರಕರಣವೆಂದು ಪರಿಗಣಿಸಿ ಸೇನಾ ಕೋರ್ಟ್​ ಆದೇಶ ನೀಡಿದೆ. ಈ ಆದೇಶದ ವಿರುದ್ಧ ಲಾಹೋರ್​ ಹೈಕೋರ್ಟ್​ನ ರಾವಲ್ಪಿಂಡಿ ಪೀಠಕ್ಕೆ ಹಸನ್​ ತಂದೆ ನಿವೃತ್ತ ಮೇಜರ್​ ಜನರಲ್​ ಜಫರ್​ ಮೆಹ್ದಿ ಅಸ್ಕಾರಿ ಅರ್ಜಿ ಸಲ್ಲಿಸಿದ್ದಾರೆ. ತನ್ನ ಮಗನನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಬೇಕಾದಂತೆ ವಕೀಲರ ನೇಮಕ ಮಾಡಿಕೊಳ್ಳಲೂ ನಮಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮಗನನ್ನು  ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಕೂಡ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Galaxy M52 5G: ಸ್ಯಾಮ್​ಸಂಗ್ ವೆಬ್​ಸೈಟ್​ನಲ್ಲಿ ದೀಪಾವಳಿಗೆ ಬಂಪರ್ ಆಫರ್: ಕೈಗೆಟಕುವ ದರದಲ್ಲಿ ಗ್ಯಾಲಕ್ಸಿ M52 5G

Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು