AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​ ಸೇನಾ ಮುಖ್ಯಸ್ಥನ ರಾಜೀನಾಮೆಗೆ ಆಗ್ರಹಿಸಿದ ಕಂಪ್ಯೂಟರ್​ ಇಂಜಿನಿಯರ್​ಗೆ 5 ವರ್ಷ ಜೈಲು ಶಿಕ್ಷೆ; ಹೈಕೋರ್ಟ್​ ಮೆಟ್ಟಿಲೇರಿದ ಸೇನಾ ನಿವೃತ್ತ ಅಧಿಕಾರಿ

ಹಸನ್​ ಅಸ್ಕಾರಿ ಕಂಪ್ಯೂಟರ್​ ಇಂಜಿನಿಯರ್ ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಕಮರ್​ ಜಾವೇದ್​​ಗೆ ಪತ್ರ ಬರೆದಿದ್ದರು. ಆಡಳಿತ ಅವಧಿ ವಿಸ್ತರಣೆಯಾಗಿದ್ದನ್ನು ಕಟುವಾಗಿ ಟೀಕಿಸಿದ್ದಲ್ಲದೆ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದರು. 

ಪಾಕ್​ ಸೇನಾ ಮುಖ್ಯಸ್ಥನ ರಾಜೀನಾಮೆಗೆ ಆಗ್ರಹಿಸಿದ ಕಂಪ್ಯೂಟರ್​ ಇಂಜಿನಿಯರ್​ಗೆ 5 ವರ್ಷ ಜೈಲು ಶಿಕ್ಷೆ; ಹೈಕೋರ್ಟ್​ ಮೆಟ್ಟಿಲೇರಿದ ಸೇನಾ ನಿವೃತ್ತ ಅಧಿಕಾರಿ
ಜನರಲ್​ ಕಮರ್​ ಜಾವೇದ್​ ಬಜ್ವಾ
TV9 Web
| Edited By: |

Updated on: Oct 30, 2021 | 3:45 PM

Share

ಕರಾಚಿ: ಪಾಕ್​ ಸೇನಾ ಮುಖ್ಯಸ್ಥ ಜನರಲ್​  ಕಮರ್ ಜಾವೇದ್ ಬಾಜ್ವಾ(General Qamar Javed Bajwa) ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದ ಸೇನೆಯ ನಿವೃತ್ತ ಮೇಜರ್​ ಜನರಲ್​ವೊಬ್ಬರ ಪುತ್ರನಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ (Pakistan Military Court) ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ. ನಿವೃತ್ತ ಮೇಜರ್​ ಜನರಲ್​ ಜಫರ್​ ಮೆಹ್ದಿ ಅಸ್ಕಾರಿ ಅವರ ಪುತ್ರ ಹಸನ್​ ಅಸ್ಕಾರಿ ಇದೀಗ ಜೈಲು ಶಿಕ್ಷೆಗೆ ಗುರಿಯಾದವರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಕಮರ್​ ಜಾವೇದ್​​ ಬಾಜ್ವಾರ ಅಧಿಕಾರ ಅವಧಿ ವಿಸ್ತರಿಸಿದ್ದನ್ನು ಟೀಕಿಸಿ, ರಾಜೀನಾಮೆ ನೀಡುವಂತೆ ಆಗ್ರಹಿಸಿ ಅವರಿಗೇ ಪತ್ರ ಬರೆದಿದ್ದರು ಎಂದು ಬಿಬಿಸಿ ಉರ್ದು ಮಾಧ್ಯಮ ವರದಿ ಮಾಡಿದೆ.  

ಈ ಹಸನ್​ ಅಸ್ಕಾರಿ ಕಂಪ್ಯೂಟರ್​ ಇಂಜಿನಿಯರ್ ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಕಮರ್​ ಜಾವೇದ್​​ಗೆ ಪತ್ರ ಬರೆದಿದ್ದರು. ಆಡಳಿತ ಅವಧಿ ವಿಸ್ತರಣೆಯಾಗಿದ್ದನ್ನು ಕಟುವಾಗಿ ಟೀಕಿಸಿದ್ದಲ್ಲದೆ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದರು.  ಜನವರಿಯಲ್ಲಿ  ಇಸ್ಲಮಾಬಾದ್​​ ಹೈಕೋರ್ಟ್​ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಅದಾದ ಬಳಿಕ ಜುಲೈನಿಂದ ಪಾಕಿಸ್ತಾನ ಮಿಲಿಟರಿ ಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿದೆ. ಜುಲೈನಲ್ಲಿ ನಡೆದ ವಿಚಾರಣೆ ವೇಳೆ ಪಾಕಿಸ್ತಾನ ಸೇನಾ ನ್ಯಾಯಾಲಯದಲ್ಲಿ ಅಧಿಕಾರಿಯೊಬ್ಬರು ಹಸನ್​ ಅಸ್ಕಾರಿಯನ್ನು ಪ್ರತಿನಿಧಿಸಿದ್ದರು. ಸಾಹಿವಾಲ್​​ನ ಉನ್ನತ ಭದ್ರತೆಯುಳ್ಳ ಜೈಲಿನಲ್ಲಿ ತನ್ನ ಮಗನನ್ನು ಇಟ್ಟಿದ್ದರಿಂದ, ಆತನನ್ನು ಭೇಟಿಯಾಗಲು ತುಂಬ ಕಷ್ಟಪಡುತ್ತಿದ್ದೇನೆ ಎಂದು ಇದೇ ವೇಳೆ ಅಸ್ಕಾರಿ ತಂದೆ ಕೋರ್ಟ್​​ನಲ್ಲಿ ಹೇಳಿಕೊಂಡಿದ್ದರು.

ಸದ್ಯ ಇದನ್ನೊಂದು ದೇಶದ್ರೋಹ ಪ್ರಕರಣವೆಂದು ಪರಿಗಣಿಸಿ ಸೇನಾ ಕೋರ್ಟ್​ ಆದೇಶ ನೀಡಿದೆ. ಈ ಆದೇಶದ ವಿರುದ್ಧ ಲಾಹೋರ್​ ಹೈಕೋರ್ಟ್​ನ ರಾವಲ್ಪಿಂಡಿ ಪೀಠಕ್ಕೆ ಹಸನ್​ ತಂದೆ ನಿವೃತ್ತ ಮೇಜರ್​ ಜನರಲ್​ ಜಫರ್​ ಮೆಹ್ದಿ ಅಸ್ಕಾರಿ ಅರ್ಜಿ ಸಲ್ಲಿಸಿದ್ದಾರೆ. ತನ್ನ ಮಗನನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಬೇಕಾದಂತೆ ವಕೀಲರ ನೇಮಕ ಮಾಡಿಕೊಳ್ಳಲೂ ನಮಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮಗನನ್ನು  ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಕೂಡ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Galaxy M52 5G: ಸ್ಯಾಮ್​ಸಂಗ್ ವೆಬ್​ಸೈಟ್​ನಲ್ಲಿ ದೀಪಾವಳಿಗೆ ಬಂಪರ್ ಆಫರ್: ಕೈಗೆಟಕುವ ದರದಲ್ಲಿ ಗ್ಯಾಲಕ್ಸಿ M52 5G

Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್