AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಪಾಕಿಸ್ತಾನ ಗಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಪಾಕ್​ ಮಹಿಳೆ; ನವಜಾತ ಶಿಶುವಿಗೆ ಬಾರ್ಡರ್​ ಎಂದು ಹೆಸರಿಟ್ಟ ದಂಪತಿ !

ಬಾಲಂ ರಾಮ್​ ಹೊರತಾಗಿ ಇದೇ ಗಡಿಯಲ್ಲಿ ಸಿಲುಕಿರುವ ಲಾಗ್ಯಾ ರಾಮ್​​ ತನ್ನ ಮಗುವಿಗೆ ಭರತ್​ ಎಂದು ನಾಮಕರಣ ಮಾಡಿದ್ದಾರೆ. ಲಾಗ್ಯಾ ರಾಮ್​ ತನ್ನ ಸೋದರನನ್ನು ಭೇಟಿ ಮಾಡಲು 2020ರಲ್ಲಿ ಜೋಧ್​ಪುರಕ್ಕೆ ತೆರಳಿದ್ದರು. ಅಲ್ಲಿಯೇ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.

ಭಾರತ-ಪಾಕಿಸ್ತಾನ ಗಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಪಾಕ್​ ಮಹಿಳೆ; ನವಜಾತ ಶಿಶುವಿಗೆ ಬಾರ್ಡರ್​ ಎಂದು ಹೆಸರಿಟ್ಟ ದಂಪತಿ !
ನವಜಾತ ಶಿಶುವಿನೊಂದಿಗೆ ಬಾಲಂ ರಾಮ್​
TV9 Web
| Updated By: Lakshmi Hegde|

Updated on: Dec 06, 2021 | 12:10 PM

Share

ಕಳೆದ 70 ದಿನಗಳಿಂದಲೂ ಭಾರತ-ಪಾಕಿಸ್ತಾನ ಅಟ್ಟಾರಿ ಗಡಿಯಲ್ಲಿ ಸಿಲುಕಿರುವ ಪಾಕಿಸ್ತಾನಿ ದಂಪತಿ, ತಮ್ಮ ನವಜಾತ ಶಿಶುವಿಗೆ ‘ಬಾರ್ಡರ್​’ ಎಂದು ಹೆಸರಿಟ್ಟಿದ್ದಾರೆ. ಗಡಿಯಲ್ಲೇ ವಾಸವಾಗಿರುವ ನಿಂಬು ಬಾಯಿ ಮತ್ತು ಬಾಲಂ ರಾಮ್​ ದಂಪತಿಗೆ ಡಿಸೆಂಬರ್​ 2ರಂದು ಮಗು ಜನಿಸಿದೆ. ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ರಾಜನ್​ಪುರ ಜಿಲ್ಲೆಯವರಾಗಿರುವ ಇವರು, ಸುಮಾರು 97 ಪಾಕಿಸ್ತಾನಿ ಪ್ರಜೆಗಳೊಟ್ಟಿಗೆ ಕಳೆದ 70 ದಿನಗಳಿಂದಲೂ ಇಲ್ಲಿಯೇ ಇದ್ದಾರೆ.  ನಿಂಬು ಬಾಯಿಗೆ ಡಿಸೆಂಬರ್​ 2ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಲ್ಲಿನ ಸ್ಥಳೀಯ ಹಳ್ಳಿಗಳ ಮಹಿಳೆಯರೇ ಆಕೆಗೆ ಸಹಾಯ ಮಾಡಿದ್ದರು. ಮಹಿಳೆ ಮತ್ತು ಆಕೆಯ ನವಜಾತ ಶಿಶುವಿಗೆ ವೈದ್ಯಕೀಯ ಸೌಲಭ್ಯವನ್ನೂ ಒದಗಿಸಿಕೊಟ್ಟಿದ್ದರು. 

ಅವರು ಗಡಿಯಲ್ಲಿ ಸಿಲುಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಂ ರಾಮ್​, ನಾವು ತೀರ್ಥಯಾತ್ರೆಗಾಗಿ ಭಾರತಕ್ಕೆ ಬಂದಿದ್ದೆವು. ಆದರೆ ಇದೀಗ ವಾಪಸ್​ ಹೋಗಲು ಗಡಿಯ ಬಳಿ ಬಂದರೆ ಒಂದಷ್ಟು ದಾಖಲೆಗಳನ್ನು ಕೇಳುತ್ತಿದ್ದಾರೆ. ಆ ಅಗತ್ಯ ದಾಖಲೆಗಳು ನಮ್ಮ ಬಳಿ ಇಲ್ಲ. ಇಲ್ಲೀಗ ನಾವು 97 ಮಂದಿ ಸಿಲುಕಿದ್ದೇವೆ. ಅದರಲ್ಲಿ 47 ಮಂದಿ ಮಕ್ಕಳೇ ಆಗಿದ್ದಾರೆ. ಅವರಲ್ಲೂ ಆರು ಮಕ್ಕಳು ಒಂದುವರ್ಷಕ್ಕಿಂತಲೂ ಕೆಳಗಿನವು. ಭಾರತದಲ್ಲಿ ಹುಟ್ಟಿವೆ ಎಂದು ತಿಳಿಸಿದ್ದಾರೆ.

ಬಾಲಂ ರಾಮ್​ ಹೊರತಾಗಿ ಇದೇ ಗಡಿಯಲ್ಲಿ ಸಿಲುಕಿರುವ ಲಾಗ್ಯಾ ರಾಮ್​​ ತನ್ನ ಮಗುವಿಗೆ ಭರತ್​ ಎಂದು ನಾಮಕರಣ ಮಾಡಿದ್ದಾರೆ. ಲಾಗ್ಯಾ ರಾಮ್​ ತನ್ನ ಸೋದರನನ್ನು ಭೇಟಿ ಮಾಡಲು 2020ರಲ್ಲಿ ಜೋಧ್​ಪುರಕ್ಕೆ ತೆರಳಿದ್ದರು. ಅಲ್ಲಿಯೇ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಭರತ್ ಎಂದು ಹೆಸರಿಡಲಾಗಿದೆ. ಜೋಧ್​ಪುರದಿಂದ ಅಟ್ಟಾರಿ ಗಡಿಯವರೆಗೆ ಬಂದರೆ ಅವರಿಗೂ ಇನ್ನೂ ಪಾಕ್​ಗೆ ಮರಳಲು ಸಾಧ್ಯವಾಗಲಿಲ್ಲ.  ಇನ್ನೂ ಹಲವರು ಇದೇ ಗಡಿಯ ಅಂತಾರಾಷ್ಟ್ರೀಯ ಚೆಕ್​ಪೋಸ್ಟ್​ ಬಳಿ ಬೀಡುಬಿಟ್ಟಿದ್ದಾರೆ. ಪಾಕಿಸ್ತಾನಿ ರೇಂಜರ್​ಗಳು ಅಗತ್ಯ ದಾಖಲೆ ತೋರಿಸಿದ ವಿನಃ ಯಾರನ್ನೂ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಕೊರೊನಾ ಕಾರಣಕ್ಕೆ ಗಡಿ ನಿಯಮಗಳಲ್ಲೆ ಇನ್ನಷ್ಟು ಬಿಗಿಯಾಗಿದ್ದು, ಇವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಆತಂಕ ತಂದಿದೆ: ಅಲಾರಂ ಬೆಲ್​​ ಹೊಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು