AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಪಾಕಿಸ್ತಾನ ಗಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಪಾಕ್​ ಮಹಿಳೆ; ನವಜಾತ ಶಿಶುವಿಗೆ ಬಾರ್ಡರ್​ ಎಂದು ಹೆಸರಿಟ್ಟ ದಂಪತಿ !

ಬಾಲಂ ರಾಮ್​ ಹೊರತಾಗಿ ಇದೇ ಗಡಿಯಲ್ಲಿ ಸಿಲುಕಿರುವ ಲಾಗ್ಯಾ ರಾಮ್​​ ತನ್ನ ಮಗುವಿಗೆ ಭರತ್​ ಎಂದು ನಾಮಕರಣ ಮಾಡಿದ್ದಾರೆ. ಲಾಗ್ಯಾ ರಾಮ್​ ತನ್ನ ಸೋದರನನ್ನು ಭೇಟಿ ಮಾಡಲು 2020ರಲ್ಲಿ ಜೋಧ್​ಪುರಕ್ಕೆ ತೆರಳಿದ್ದರು. ಅಲ್ಲಿಯೇ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.

ಭಾರತ-ಪಾಕಿಸ್ತಾನ ಗಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಪಾಕ್​ ಮಹಿಳೆ; ನವಜಾತ ಶಿಶುವಿಗೆ ಬಾರ್ಡರ್​ ಎಂದು ಹೆಸರಿಟ್ಟ ದಂಪತಿ !
ನವಜಾತ ಶಿಶುವಿನೊಂದಿಗೆ ಬಾಲಂ ರಾಮ್​
TV9 Web
| Edited By: |

Updated on: Dec 06, 2021 | 12:10 PM

Share

ಕಳೆದ 70 ದಿನಗಳಿಂದಲೂ ಭಾರತ-ಪಾಕಿಸ್ತಾನ ಅಟ್ಟಾರಿ ಗಡಿಯಲ್ಲಿ ಸಿಲುಕಿರುವ ಪಾಕಿಸ್ತಾನಿ ದಂಪತಿ, ತಮ್ಮ ನವಜಾತ ಶಿಶುವಿಗೆ ‘ಬಾರ್ಡರ್​’ ಎಂದು ಹೆಸರಿಟ್ಟಿದ್ದಾರೆ. ಗಡಿಯಲ್ಲೇ ವಾಸವಾಗಿರುವ ನಿಂಬು ಬಾಯಿ ಮತ್ತು ಬಾಲಂ ರಾಮ್​ ದಂಪತಿಗೆ ಡಿಸೆಂಬರ್​ 2ರಂದು ಮಗು ಜನಿಸಿದೆ. ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ರಾಜನ್​ಪುರ ಜಿಲ್ಲೆಯವರಾಗಿರುವ ಇವರು, ಸುಮಾರು 97 ಪಾಕಿಸ್ತಾನಿ ಪ್ರಜೆಗಳೊಟ್ಟಿಗೆ ಕಳೆದ 70 ದಿನಗಳಿಂದಲೂ ಇಲ್ಲಿಯೇ ಇದ್ದಾರೆ.  ನಿಂಬು ಬಾಯಿಗೆ ಡಿಸೆಂಬರ್​ 2ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಲ್ಲಿನ ಸ್ಥಳೀಯ ಹಳ್ಳಿಗಳ ಮಹಿಳೆಯರೇ ಆಕೆಗೆ ಸಹಾಯ ಮಾಡಿದ್ದರು. ಮಹಿಳೆ ಮತ್ತು ಆಕೆಯ ನವಜಾತ ಶಿಶುವಿಗೆ ವೈದ್ಯಕೀಯ ಸೌಲಭ್ಯವನ್ನೂ ಒದಗಿಸಿಕೊಟ್ಟಿದ್ದರು. 

ಅವರು ಗಡಿಯಲ್ಲಿ ಸಿಲುಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಂ ರಾಮ್​, ನಾವು ತೀರ್ಥಯಾತ್ರೆಗಾಗಿ ಭಾರತಕ್ಕೆ ಬಂದಿದ್ದೆವು. ಆದರೆ ಇದೀಗ ವಾಪಸ್​ ಹೋಗಲು ಗಡಿಯ ಬಳಿ ಬಂದರೆ ಒಂದಷ್ಟು ದಾಖಲೆಗಳನ್ನು ಕೇಳುತ್ತಿದ್ದಾರೆ. ಆ ಅಗತ್ಯ ದಾಖಲೆಗಳು ನಮ್ಮ ಬಳಿ ಇಲ್ಲ. ಇಲ್ಲೀಗ ನಾವು 97 ಮಂದಿ ಸಿಲುಕಿದ್ದೇವೆ. ಅದರಲ್ಲಿ 47 ಮಂದಿ ಮಕ್ಕಳೇ ಆಗಿದ್ದಾರೆ. ಅವರಲ್ಲೂ ಆರು ಮಕ್ಕಳು ಒಂದುವರ್ಷಕ್ಕಿಂತಲೂ ಕೆಳಗಿನವು. ಭಾರತದಲ್ಲಿ ಹುಟ್ಟಿವೆ ಎಂದು ತಿಳಿಸಿದ್ದಾರೆ.

ಬಾಲಂ ರಾಮ್​ ಹೊರತಾಗಿ ಇದೇ ಗಡಿಯಲ್ಲಿ ಸಿಲುಕಿರುವ ಲಾಗ್ಯಾ ರಾಮ್​​ ತನ್ನ ಮಗುವಿಗೆ ಭರತ್​ ಎಂದು ನಾಮಕರಣ ಮಾಡಿದ್ದಾರೆ. ಲಾಗ್ಯಾ ರಾಮ್​ ತನ್ನ ಸೋದರನನ್ನು ಭೇಟಿ ಮಾಡಲು 2020ರಲ್ಲಿ ಜೋಧ್​ಪುರಕ್ಕೆ ತೆರಳಿದ್ದರು. ಅಲ್ಲಿಯೇ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಭರತ್ ಎಂದು ಹೆಸರಿಡಲಾಗಿದೆ. ಜೋಧ್​ಪುರದಿಂದ ಅಟ್ಟಾರಿ ಗಡಿಯವರೆಗೆ ಬಂದರೆ ಅವರಿಗೂ ಇನ್ನೂ ಪಾಕ್​ಗೆ ಮರಳಲು ಸಾಧ್ಯವಾಗಲಿಲ್ಲ.  ಇನ್ನೂ ಹಲವರು ಇದೇ ಗಡಿಯ ಅಂತಾರಾಷ್ಟ್ರೀಯ ಚೆಕ್​ಪೋಸ್ಟ್​ ಬಳಿ ಬೀಡುಬಿಟ್ಟಿದ್ದಾರೆ. ಪಾಕಿಸ್ತಾನಿ ರೇಂಜರ್​ಗಳು ಅಗತ್ಯ ದಾಖಲೆ ತೋರಿಸಿದ ವಿನಃ ಯಾರನ್ನೂ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಕೊರೊನಾ ಕಾರಣಕ್ಕೆ ಗಡಿ ನಿಯಮಗಳಲ್ಲೆ ಇನ್ನಷ್ಟು ಬಿಗಿಯಾಗಿದ್ದು, ಇವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಆತಂಕ ತಂದಿದೆ: ಅಲಾರಂ ಬೆಲ್​​ ಹೊಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?