AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಗಡಿ ಪ್ರವೇಶಿಸಿದ ಭಾರತದ ಜಲಾಂತರ್ಗಾಮಿ ನೌಕೆಯನ್ನು ತಡೆದಿದ್ದೇವೆ ಎಂದ ಪಾಕ್ ನೌಕಾ ಪಡೆ

ಅಕ್ಟೋಬರ್ 16 ರಂದು ಪಾಕಿಸ್ತಾನದ ನೌಕಾಪಡೆಯ (PN) ಗಸ್ತು ವಿಮಾನವು ಭಾರತೀಯ ಜಲಾಂತರ್ಗಾಮಿ ನೌಕೆ ಪತ್ತೆ ಮಾಡಿದಾಗ ಈ ಘಟನೆ ಸಂಭವಿಸಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಜಲಗಡಿ ಪ್ರವೇಶಿಸಿದ ಭಾರತದ ಜಲಾಂತರ್ಗಾಮಿ ನೌಕೆಯನ್ನು ತಡೆದಿದ್ದೇವೆ ಎಂದ ಪಾಕ್ ನೌಕಾ ಪಡೆ
ಪಾಕಿಸ್ತಾನ ನೌಕಾಪಡೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 19, 2021 | 7:59 PM

Share

ದೆಹಲಿ: ಪಾಕಿಸ್ತಾನದ ಸೇನೆಯು ಮಂಗಳವಾರ ತನ್ನ ನೌಕಾಪಡೆಯು ಕಳೆದ ವಾರ ಭಾರತದ ಜಲಾಂತರ್ಗಾಮಿ ನೌಕೆಯನ್ನು ತಮ್ಮ ದೇಶದ ಜಲಪ್ರದೇಶಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ ಎಂದು ಹೇಳಿದೆ. ಅಕ್ಟೋಬರ್ 16 ರಂದು ಪಾಕಿಸ್ತಾನದ ನೌಕಾಪಡೆಯ (PN) ಗಸ್ತು ವಿಮಾನವು ಭಾರತೀಯ ಜಲಾಂತರ್ಗಾಮಿ ನೌಕೆ ಪತ್ತೆ ಮಾಡಿದಾಗ ಈ ಘಟನೆ ಸಂಭವಿಸಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯ ಪ್ರಕಾರ ನೌಕಾಪಡೆಯು “2021 ಅಕ್ಟೋಬರ್ 16ರಂದು ಭಾರತೀಯ ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಮಾಡಿ ನಿರ್ಬಂಧಿಸಿತು”. ಚಾಲ್ತಿಯಲ್ಲಿರುವ ಭದ್ರತಾ ವಾತಾವರಣದಲ್ಲಿ ಪಾಕಿಸ್ತಾನದ ನೌಕಾಪಡೆಯು ದೇಶದ ಕಡಲ ಗಡಿಗಳನ್ನು ರಕ್ಷಿಸಲು ಕಟ್ಟುನಿಟ್ಟಾದ ಮೇಲ್ವಿಚಾರಣಾ ನಿಗಾ ಇರಿಸಲಾಗಿದೆ ಎಂದು ಅದು ಹೇಳಿದೆ.

ಹೇಳಿಕೆಯ ಪ್ರಕಾರ ಪಾಕಿಸ್ತಾನದ ನೌಕಾಪಡೆಯ ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ಏರ್‌ಕ್ರಾಫ್ಟ್‌ನಿಂದ ಭಾರತೀಯ ನೌಕಾ ಜಲಾಂತರ್ಗಾಮಿ ನೌಕೆಯನ್ನು ಪತ್ತೆಹಚ್ಚಿ ಮತ್ತು ಟ್ರ್ಯಾಕ್ ಮಾಡಲಾಗುತ್ತಿರುವ ಮೂರನೇ ಘಟನೆ ಇದಾಗಿದೆ.  ಸೇನೆಯು ಹೇಳಲಾದ ಘಟನೆಯ ಸಣ್ಣ ದೃಶ್ಯ ತುಣುಕನ್ನು ಸಹ ಹಂಚಿಕೊಂಡಿದೆ.

ಭಾರತೀಯ ಜಲಾಂತರ್ಗಾಮಿ ನೌಕೆಯ ಪ್ರವೇಶ ಪ್ರಯತ್ನವನ್ನು ನೌಕಾಪಡೆ ಪತ್ತೆಹಚ್ಚಿದಾಗ ಮತ್ತು ವಿಫಲಗೊಳಿಸಿದಾಗ ಈ ರೀತಿಯ ಘಟನೆಯನ್ನು ಕೊನೆಯದಾಗಿ ಮಾರ್ಚ್ 2019 ರಲ್ಲಿ ವರದಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಲಾಂತರ್ಗಾಮಿ ನೌಕೆಯನ್ನು ತಡೆಯಲು ಪಾಕಿಸ್ತಾನದ ನೌಕಾಪಡೆಯು ತನ್ನ ವಿಶೇಷ ಕೌಶಲ್ಯಗಳನ್ನು ಬಳಸಿತು, ಅದನ್ನು ಪಾಕಿಸ್ತಾನದ ನೀರಿನಲ್ಲಿ ಪ್ರವೇಶಿಸದಂತೆ ಯಶಸ್ವಿಯಾಗಿ ಇರಿಸಿತು, “ಎಂದು ಪಿಎನ್ ಈ ಹಿಂದೆ ಹೇಳಿತ್ತು. ನವೆಂಬರ್ 2016 ರಲ್ಲಿ ಭಾರತೀಯ ಜಲಾಂತರ್ಗಾಮಿ ನೌಕೆಯನ್ನು ಪಾಕಿಸ್ತಾನದ ನೀರಿನಿಂದ ಹೊರಗೆ ತಳ್ಳಲಾಯಿತು ಎಂದು ಅದು ಹೇಳಿಕೊಂಡಿದೆ.

ಇದನ್ನೂ ಓದಿ: T20 World Cup: ಕೊಳಕು ಮನಸ್ಥಿತಿಯ ದೇಶದ ಜೊತೆ ಆಟವಾಡುವ ಅವಶ್ಯಕತೆ ಏನಿದೆ; ಜನರಲ್ ವಿಕೆ ಸಿಂಗ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ