ಜಲಗಡಿ ಪ್ರವೇಶಿಸಿದ ಭಾರತದ ಜಲಾಂತರ್ಗಾಮಿ ನೌಕೆಯನ್ನು ತಡೆದಿದ್ದೇವೆ ಎಂದ ಪಾಕ್ ನೌಕಾ ಪಡೆ

ಅಕ್ಟೋಬರ್ 16 ರಂದು ಪಾಕಿಸ್ತಾನದ ನೌಕಾಪಡೆಯ (PN) ಗಸ್ತು ವಿಮಾನವು ಭಾರತೀಯ ಜಲಾಂತರ್ಗಾಮಿ ನೌಕೆ ಪತ್ತೆ ಮಾಡಿದಾಗ ಈ ಘಟನೆ ಸಂಭವಿಸಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಜಲಗಡಿ ಪ್ರವೇಶಿಸಿದ ಭಾರತದ ಜಲಾಂತರ್ಗಾಮಿ ನೌಕೆಯನ್ನು ತಡೆದಿದ್ದೇವೆ ಎಂದ ಪಾಕ್ ನೌಕಾ ಪಡೆ
ಪಾಕಿಸ್ತಾನ ನೌಕಾಪಡೆ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Oct 19, 2021 | 7:59 PM

ದೆಹಲಿ: ಪಾಕಿಸ್ತಾನದ ಸೇನೆಯು ಮಂಗಳವಾರ ತನ್ನ ನೌಕಾಪಡೆಯು ಕಳೆದ ವಾರ ಭಾರತದ ಜಲಾಂತರ್ಗಾಮಿ ನೌಕೆಯನ್ನು ತಮ್ಮ ದೇಶದ ಜಲಪ್ರದೇಶಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ ಎಂದು ಹೇಳಿದೆ. ಅಕ್ಟೋಬರ್ 16 ರಂದು ಪಾಕಿಸ್ತಾನದ ನೌಕಾಪಡೆಯ (PN) ಗಸ್ತು ವಿಮಾನವು ಭಾರತೀಯ ಜಲಾಂತರ್ಗಾಮಿ ನೌಕೆ ಪತ್ತೆ ಮಾಡಿದಾಗ ಈ ಘಟನೆ ಸಂಭವಿಸಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯ ಪ್ರಕಾರ ನೌಕಾಪಡೆಯು “2021 ಅಕ್ಟೋಬರ್ 16ರಂದು ಭಾರತೀಯ ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಮಾಡಿ ನಿರ್ಬಂಧಿಸಿತು”. ಚಾಲ್ತಿಯಲ್ಲಿರುವ ಭದ್ರತಾ ವಾತಾವರಣದಲ್ಲಿ ಪಾಕಿಸ್ತಾನದ ನೌಕಾಪಡೆಯು ದೇಶದ ಕಡಲ ಗಡಿಗಳನ್ನು ರಕ್ಷಿಸಲು ಕಟ್ಟುನಿಟ್ಟಾದ ಮೇಲ್ವಿಚಾರಣಾ ನಿಗಾ ಇರಿಸಲಾಗಿದೆ ಎಂದು ಅದು ಹೇಳಿದೆ.

ಹೇಳಿಕೆಯ ಪ್ರಕಾರ ಪಾಕಿಸ್ತಾನದ ನೌಕಾಪಡೆಯ ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ಏರ್‌ಕ್ರಾಫ್ಟ್‌ನಿಂದ ಭಾರತೀಯ ನೌಕಾ ಜಲಾಂತರ್ಗಾಮಿ ನೌಕೆಯನ್ನು ಪತ್ತೆಹಚ್ಚಿ ಮತ್ತು ಟ್ರ್ಯಾಕ್ ಮಾಡಲಾಗುತ್ತಿರುವ ಮೂರನೇ ಘಟನೆ ಇದಾಗಿದೆ.  ಸೇನೆಯು ಹೇಳಲಾದ ಘಟನೆಯ ಸಣ್ಣ ದೃಶ್ಯ ತುಣುಕನ್ನು ಸಹ ಹಂಚಿಕೊಂಡಿದೆ.

ಭಾರತೀಯ ಜಲಾಂತರ್ಗಾಮಿ ನೌಕೆಯ ಪ್ರವೇಶ ಪ್ರಯತ್ನವನ್ನು ನೌಕಾಪಡೆ ಪತ್ತೆಹಚ್ಚಿದಾಗ ಮತ್ತು ವಿಫಲಗೊಳಿಸಿದಾಗ ಈ ರೀತಿಯ ಘಟನೆಯನ್ನು ಕೊನೆಯದಾಗಿ ಮಾರ್ಚ್ 2019 ರಲ್ಲಿ ವರದಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಲಾಂತರ್ಗಾಮಿ ನೌಕೆಯನ್ನು ತಡೆಯಲು ಪಾಕಿಸ್ತಾನದ ನೌಕಾಪಡೆಯು ತನ್ನ ವಿಶೇಷ ಕೌಶಲ್ಯಗಳನ್ನು ಬಳಸಿತು, ಅದನ್ನು ಪಾಕಿಸ್ತಾನದ ನೀರಿನಲ್ಲಿ ಪ್ರವೇಶಿಸದಂತೆ ಯಶಸ್ವಿಯಾಗಿ ಇರಿಸಿತು, “ಎಂದು ಪಿಎನ್ ಈ ಹಿಂದೆ ಹೇಳಿತ್ತು. ನವೆಂಬರ್ 2016 ರಲ್ಲಿ ಭಾರತೀಯ ಜಲಾಂತರ್ಗಾಮಿ ನೌಕೆಯನ್ನು ಪಾಕಿಸ್ತಾನದ ನೀರಿನಿಂದ ಹೊರಗೆ ತಳ್ಳಲಾಯಿತು ಎಂದು ಅದು ಹೇಳಿಕೊಂಡಿದೆ.

ಇದನ್ನೂ ಓದಿ: T20 World Cup: ಕೊಳಕು ಮನಸ್ಥಿತಿಯ ದೇಶದ ಜೊತೆ ಆಟವಾಡುವ ಅವಶ್ಯಕತೆ ಏನಿದೆ; ಜನರಲ್ ವಿಕೆ ಸಿಂಗ್

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್