AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಪತ್ತೆ, ತಕ್ಷಣ ಪೈಲಟ್ ಮಾಡಿದ್ದೇನು?

ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡು ಪೈಲಟ್​ಗಳಿಗೆ ಭಯ ಹುಟ್ಟಿಸಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಪತ್ತೆ, ತಕ್ಷಣ ಪೈಲಟ್ ಮಾಡಿದ್ದೇನು?
ವಿಮಾನImage Credit source: The Economic Times
ನಯನಾ ರಾಜೀವ್
|

Updated on: Apr 06, 2023 | 9:03 AM

Share

ವಿಮಾನದ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡು ಪೈಲಟ್​ಗಳಿಗೆ ಭಯ ಹುಟ್ಟಿಸಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ಪೈಲಟ್ ರುಡಾಲ್ಫ್​ ಎರಾಸ್ಮಸ್ ವಿಮಾನದ ಮಧ್ಯದಲ್ಲಿ ಕಾಕ್​ಪಿಟ್​ನಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡಿತ್ತು. ಆದರೆ ಪೈಲಟ್ ಧೈರ್ಯಗೆಡದೆ, ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ವೋರ್ಸೆಸ್ಟರ್‌ನಿಂದ ನೆಲ್ಸ್‌ಪ್ರೂಟ್‌ಗೆ ನಾಲ್ಕು ಪ್ರಯಾಣಿಕರೊಂದಿಗೆ ಸಣ್ಣ ವಿಮಾನವನ್ನು ಹಾರಿಸುತ್ತಿದ್ದರು. ಬೆಳಗ್ಗೆ ವಿಮಾನದ ರೆಕ್ಕೆಯ ಬಳಿ ಹಾವನ್ನು ಸಿಬ್ಬಂದಿ ನೋಡಿದ್ದರು ಅದನ್ನು ಹಿಡಿಯಲು ಪ್ರಯತ್ನಿಸಿದ್ದರು. ಎಂಜಿನ್ ಕೌಲಿಂಗ್ ಬಳಿ ಇತ್ತು, ಬಳಿಕ ಅಲ್ಲಿಯೂ ಕಾಣಿಸಲಿಲ್ಲ, ಎಲ್ಲೋ ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ವಿಮಾನ ಹಾರಾಟ ಆರಂಭವಾದ ಬಳಿಕ ಕಾಕ್​ಪಿಟ್​ನಲ್ಲಿ ಕಾಣಿಸಿಕೊಂಡಿದ್ದು, ಪೈಲಟ್​ ಎದೆ ಒಮ್ಮೆ ಝೆಲ್​ ಎಂದಿತ್ತು.

ಮತ್ತಷ್ಟು ಓದಿ: Nepal Air Crash: ಯೇತಿ ಏರ್‌ಲೈನ್ಸ್ ವಿಮಾನ ಪತನಕ್ಕೆ ಎಂಜಿನ್ ಸಮಸ್ಯೆ ಕಾರಣ: ವರದಿ

ಸಾಮಾನ್ಯವಾಗಿ ನೀರಿನ ಬಾಟಲಿಯೊಂದಿಗೆ ನಾನು ಪ್ರಯಾಣಿಸುತ್ತೇನೆ, ಪೈಲಟ್ ಕೂರುವ ಆಸನದ ಹಿಡಿಕೆಗಳು ತಣ್ಣನೆಯ ಅನುಭವ ನೀಡಿತ್ತು, ಬಳಿಕ ನೀರು ಚೆಲ್ಲಿದೆಯೇ ಎಂದು ನೋಡಿದರು ಆದರೆ ಬಾಟಲಿ ದೂರದಲ್ಲಿತ್ತು, ಬಳಿಕ ಸೀಟಿನ ಕೆಳಗೆ ಹಾವು ತಲೆ ಹಾಕುತ್ತಿರುವುದು ಕಾಣಿಸಿತ್ತು ಎಂದು ಎರಾಸ್ಮಸ್ ಹೇಳಿದ್ದಾರೆ.

ಒಂದು ಕ್ಷಣ ಮೌನವಾಗಿದ್ದೆ, ಇದನ್ನು ಪ್ರಯಾಣಿಕರಿಗೆ ಹೇಳಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದೆ. ಆದರೆ ಧೈರ್ಯ ಮಾಡಿ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಸೀಟಿನ ಕೆಳಗೆ ಹಾವು ಇರುವ ಕಾರಣ ಎಲ್ಲಾದರೂ ತುರ್ತು ಭೂ ಸ್ಪರ್ಶ ಮಾಡಲೇಬೇಕಿದೆ ಎಂದು ಹೇಳಿದೆ. ವಿಮಾನವು ವೆಲ್​ಕಾಮ್​ನ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿತ್ತು, ಹಾಗಾಗಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಮೊದಲು ಮೂರು ಪ್ರಯಣಿಕರು ಹೊರಗಡೆ ಬಂದರು, ಬಳಿಕ ಉಳಿದವರು ಪೈಲಟ್​ ಜತೆ ವಿಮಾನದಿಂದ ಕೆಳಗಿಳಿದಿದ್ದರು. ಬಳಿಕ ಆಸನವನ್ನು ಮುಂದೆ ಮಾಡಿದಾಗ ಸೀಟಿಗೆ ಸುರುಳಿಯಾಕಾರಾದಲ್ಲಿ ಸುತ್ತಿಕೊಂಡಿರುವುದನ್ನು ಗಮನಿಸಿದರು. ಆದರೆ ಮತ್ತೆ ಹಾವು ಅಲ್ಲಿಂದ ಮಾಯವಾಗಿತ್ತು, ಮತ್ತೆ ಒಂದು ದಿನಗಳ ಕಾಲ ಅದನ್ನು ಹುಡುಕಿದರೂ ಕಾಣಿಸಿಲ್ಲ. ವಾಯುಯಾನ ಉದ್ಯಮದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಇಂತಹ ಪ್ರಕರಣಗಳು ಕೇಳಿರಲಿಲ್ಲ ಎಂದು ಎರಾಸ್ಮಸ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ