AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಲು ಶಿಕ್ಷೆಗೆ ಗುರಿಯಾದವ, ಸಂಸತ್ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ! ಎಲ್ಲಿ?

ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಶ್ರೀಲಂಕಾದ ರಾಜಕಾರಣಿ ಜೈಲಿನಿಂದಲೇ ಸಂಸತ್ತಿಗೆ ಬಂದು ಸಂಸತ್ತಿನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಅಪರಾಧಿ ಎನಿಸಿಕೊಂಡಿದ್ದಾರೆ. 2015 ರಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರತಿಪಕ್ಷದ ಕಾರ್ಯಕರ್ತನನ್ನು ಗುಂಡು ಹಾರಿಸಿ ಕೊಲೆ ಮಾಡಿದ ಆಡಳಿತಾರೂಡ ಶ್ರೀಲಂಕಾ ಪೊಡುಜಾನ ಪಕ್ಷದ (ಎಸ್‌ಎಲ್‌ಪಿಪಿ) ಪ್ರೇಮಲಾಲ್ ಜಯಶೇಖರಗೆ ಜುಲೈನಲ್ಲಿ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಆದರೆ ಪ್ರೇಮಲಾಲ್ ಜಯಶೇಖರ ಆಗಸ್ಟ್ 5 ರ ಮತದಾನಕ್ಕೆ ನಾಮನಿರ್ದೇಶನಗೊಂಡ ನಂತರ ನ್ಯಾಯಾಲಯ ಅವರಿಗೆ ಮರಣ ದಂಡನೆ ವಿಧಿಸಿತ್ತು. ಆದರಿಂದ […]

ಗಲ್ಲು ಶಿಕ್ಷೆಗೆ ಗುರಿಯಾದವ, ಸಂಸತ್ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ! ಎಲ್ಲಿ?
ಸಾಧು ಶ್ರೀನಾಥ್​
|

Updated on:Sep 09, 2020 | 1:47 PM

Share

ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಶ್ರೀಲಂಕಾದ ರಾಜಕಾರಣಿ ಜೈಲಿನಿಂದಲೇ ಸಂಸತ್ತಿಗೆ ಬಂದು ಸಂಸತ್ತಿನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಅಪರಾಧಿ ಎನಿಸಿಕೊಂಡಿದ್ದಾರೆ.

2015 ರಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರತಿಪಕ್ಷದ ಕಾರ್ಯಕರ್ತನನ್ನು ಗುಂಡು ಹಾರಿಸಿ ಕೊಲೆ ಮಾಡಿದ ಆಡಳಿತಾರೂಡ ಶ್ರೀಲಂಕಾ ಪೊಡುಜಾನ ಪಕ್ಷದ (ಎಸ್‌ಎಲ್‌ಪಿಪಿ) ಪ್ರೇಮಲಾಲ್ ಜಯಶೇಖರಗೆ ಜುಲೈನಲ್ಲಿ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು.

ಆದರೆ ಪ್ರೇಮಲಾಲ್ ಜಯಶೇಖರ ಆಗಸ್ಟ್ 5 ರ ಮತದಾನಕ್ಕೆ ನಾಮನಿರ್ದೇಶನಗೊಂಡ ನಂತರ ನ್ಯಾಯಾಲಯ ಅವರಿಗೆ ಮರಣ ದಂಡನೆ ವಿಧಿಸಿತ್ತು. ಆದರಿಂದ ಜಯಶೇಖರ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದರು.

ಆಗಸ್ಟ್ 20 ರಂದು ನಡೆದ ಸಂಸತ್ತಿನ ಮೊದಲ ಅಧಿವೇಶನಕ್ಕೆ ಜೈಲಿನ ಅಧಿಕಾರಿಗಳು ಜಯಶೇಖರ ಅವರನ್ನು ಹೊರಗೆ ಬಿಡಲು ನಿರಾಕರಿಸಿದರು. ಇದರಿಂದ ಜೈಲಿನ ಅಧಿಕಾರಿಗಳ ಈ ನಡೆಯ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪರಿಶೀಲಿಸಿದ ನ್ಯಾಯಾಲಯ, ಸಂಸದರಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಲು ಅವರನ್ನು ಜೈಲಿನಿಂದ ಕರೆದೊಯ್ಯಬೇಕು ಹಾಗೂ ಅಧಿವೇಶನದ ನಂತರ ಅವರನ್ನು ಮತ್ತೆ ಜೈಲಿಗೆ ಕರೆದೊಯ್ಯಬೇಕೆಂದು ಎಂದು ಸೋಮವಾರ ಮಧ್ಯಂತರ ಆದೇಶ ಹೊರಡಿಸಿದೆ.

ಕುತ್ತಿಗೆಗೆ ಕಪ್ಪು ವಸ್ತ್ರ ಧರಿಸಿ ಪ್ರತಿಭಟನೆ ಈ ಹಿನ್ನೆಲೆಯಲ್ಲಿ.. ಜಯಶೇಖರ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರತಿಪಕ್ಷದ ಸಂಸದರು ಕುತ್ತಿಗೆಗೆ ಕಪ್ಪು ವಸ್ತ್ರ ಧರಿಸಿ ಪ್ರತಿಭಟನೆ ನಡೆಸಿದಲ್ಲದೆ ಹಲವರು ಸಭಾತ್ಯಾಗ ಮಾಡಿದರು.

Published On - 1:42 pm, Wed, 9 September 20