AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಆರೋಗ್ಯಕ್ಕೇನಾಯ್ತು?-ಕೊವಿಡ್​ 19 ಸೋಂಕು ಅಲ್ಲ, ಕೆಮ್ಮು ನಿಲ್ಲುತ್ತಲೇ ಇಲ್ಲ..

ಪುತಿನ್​ ಕಳೆದ ವಾರವಷ್ಟೇ 69ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರ ಕಚೇರಿಯ ಸುಮಾರು 12ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 1 ತಿಂಗಳು ಸೆಲ್ಫ್​ ಐಸೋಲೇಶನ್​​ಗೆ ಒಳಗಾಗಿದ್ದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಆರೋಗ್ಯಕ್ಕೇನಾಯ್ತು?-ಕೊವಿಡ್​ 19 ಸೋಂಕು ಅಲ್ಲ, ಕೆಮ್ಮು ನಿಲ್ಲುತ್ತಲೇ ಇಲ್ಲ..
ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​
TV9 Web
| Edited By: |

Updated on:Oct 12, 2021 | 1:06 PM

Share

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್ (Vladimir Putin)​ ಆರೋಗ್ಯಕ್ಕೇನಾಯಿತು? ಹೀಗೊಂದು ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಅವರು ತಮ್ಮ ಸರ್ಕಾರದ ಅಧಿಕಾರಿಗಳೊಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಮಾತನಾಡುವಾಗ ಪದೇಪದೆ ಕೆಮ್ಮುತ್ತಿದ್ದರು. ಆದರೆ ಜತೆಜತೆಗೇ, ‘ನನಗೇನೂ ಆಗಿಲ್ಲ..ಕೊರೊನಾ ವೈರಸ್​ ತಗುಲಿಲ್ಲ. ನಾನು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದೇನೆ’ ಎಂದೂ ಹೇಳುತ್ತಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಶೀತವಾಗಿದ್ದು ಸರಿಯಾಗಿ ಗೊತ್ತಾಗುತ್ತಿತ್ತು..ಮಾತಾಡುತ್ತಿದ್ದಂತೆ ಕೆಮ್ಮು ಬರುತ್ತಿತ್ತು. ಆದರೆ ಅವರು, ‘ಯಾರೂ ಏನೂ ಅಂದುಕೊಳ್ಳಬೇಡಿ. ನಾನು ಚೆನ್ನಾಗಿಯೇ ಇದ್ದೇನೆ. ವೈದ್ಯರು ಕೊವಿಡ್​ 19 ಟೆಸ್ಟ್ (Covid 19 Test) ಮಾಡಿದ್ದಾರೆ. ಬೇರೆ ಏನಾದರೂ ಸಮಸ್ಯೆಯಿದೆಯಾ ಎಂಬುದನ್ನೂ ತಪಾಸಣೆ ಮಾಡಿದ್ದಾರೆ’ ಎಂದು ಹೇಳುತ್ತಿದ್ದರು. ಆದರೆ ಕೆಮ್ಮುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಈ ಸಭೆ ರಷ್ಯಾ ದೂರದರ್ಶನದಲ್ಲಿ ನೇರಪ್ರಸಾರ ಇದ್ದುದರಿಂದ ಸಹಜವಾಗಿಯೇ ಪುತಿನ್​ ಆರೋಗ್ಯದ ಬಗ್ಗೆ ಅಲ್ಲಿನ ಜನರೂ ಚರ್ಚಿಸುತ್ತಿದ್ದಾರೆ. 

ಇನ್ನು ಪುತಿನ್​ ಹೀಗೆ ಕೆಮ್ಮುತ್ತಿರುವುದು ಇದೇ ಮೊದಲಲ್ಲ. ಸ್ವಲ್ಪ ದಿನಗಳ ಹಿಂದೆ ಕೃಷಿ ಸಂಬಂಧ ವಿಷಯಗಳನ್ನು ಚರ್ಚಿಸಲು ಅಧಿಕಾರಿಗಳ ಸಭೆ ಕರೆದಾಗಲೂ ಹೀಗೆ ಪದೇಪದೆ ಕೆಮ್ಮುತ್ತಿದ್ದರು ಎಂದು ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. ಹಾಗೇ, ಈ ಬಾರಿ ಭದ್ರತಾ ಮಂಡಳಿ ಸಭೆ ನಡೆಸುವಾಗಲೂ ಅವರು ಕೆಮ್ಮುತ್ತ, ಕಷ್ಟಪಡುತ್ತಿರುವುದನ್ನು ನೋಡಿದ ರಷ್ಯಾ ಮೇಲ್ಮನೆ ಸ್ಪೀಕರ್​ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ, ನಿಮ್ಮ ಆರೋಗ್ಯದ ಬಗ್ಗೆ ನಾವೆಲ್ಲ ಚಿಂತಿತರಾಗಿದ್ದೇವೆ ಎಂದರು. ಅದಕ್ಕೆ ಉತ್ತರಿಸಿದ ಪುತಿನ್​, ‘ಹೆದರುವಂಥದ್ದು ಏನೂ ಇಲ್ಲ. ನಾನು ತಂಪಾದ ಗಾಳಿಯಲ್ಲಿ ತಿರುಗಾಡಿದ್ದೇನೆ. ಇದೇ ಕಾರಣಕ್ಕೆ ಈಗ ಶೀತವಾಗಿದೆ’ ಎಂದಿದ್ದಾರೆ.

ಪುತಿನ್​ ಕಳೆದ ವಾರವಷ್ಟೇ 69ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರ ಕಚೇರಿಯ ಸುಮಾರು 12ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 1 ತಿಂಗಳು ಸೆಲ್ಫ್​ ಐಸೋಲೇಶನ್​​ಗೆ ಒಳಗಾಗಿದ್ದರು. ಆಗಲೂ ಕಾಡು-ಮೇಡು ಸುತ್ತಿದ್ದರು. ಸಣ್ಣ ಹೊಳೆಯಲ್ಲಿ ಮೀನು ಹಿಡಿದಿದ್ದರು. ಅಲ್ಲಿಂದ ಬಂದ ಬಳಿಕವೂ ಕೂಡ ಯಾರೊಂದಿಗೂ ಮುಖಾ-ಮುಖಿ ಸಭೆ ನಡೆಸಿಲ್ಲ. ಎಲ್ಲ ಸಭೆಗಳನ್ನೂ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ನಡೆಸಿದ್ದಾರೆ.

ಇದನ್ನೂ ಓದಿ:ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಆನ್​​ಲೈನ್ ಬುಕಿಂಗ್ ಆರಂಭ

ಉಪ್ಪಿನಂಗಡಿ ಬಳಿ ಭೀಕರ ಅಪಘಾತ; ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು

Published On - 12:58 pm, Tue, 12 October 21

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ