AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಆರೋಗ್ಯಕ್ಕೇನಾಯ್ತು?-ಕೊವಿಡ್​ 19 ಸೋಂಕು ಅಲ್ಲ, ಕೆಮ್ಮು ನಿಲ್ಲುತ್ತಲೇ ಇಲ್ಲ..

ಪುತಿನ್​ ಕಳೆದ ವಾರವಷ್ಟೇ 69ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರ ಕಚೇರಿಯ ಸುಮಾರು 12ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 1 ತಿಂಗಳು ಸೆಲ್ಫ್​ ಐಸೋಲೇಶನ್​​ಗೆ ಒಳಗಾಗಿದ್ದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಆರೋಗ್ಯಕ್ಕೇನಾಯ್ತು?-ಕೊವಿಡ್​ 19 ಸೋಂಕು ಅಲ್ಲ, ಕೆಮ್ಮು ನಿಲ್ಲುತ್ತಲೇ ಇಲ್ಲ..
ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​
TV9 Web
| Edited By: |

Updated on:Oct 12, 2021 | 1:06 PM

Share

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್ (Vladimir Putin)​ ಆರೋಗ್ಯಕ್ಕೇನಾಯಿತು? ಹೀಗೊಂದು ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಅವರು ತಮ್ಮ ಸರ್ಕಾರದ ಅಧಿಕಾರಿಗಳೊಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಮಾತನಾಡುವಾಗ ಪದೇಪದೆ ಕೆಮ್ಮುತ್ತಿದ್ದರು. ಆದರೆ ಜತೆಜತೆಗೇ, ‘ನನಗೇನೂ ಆಗಿಲ್ಲ..ಕೊರೊನಾ ವೈರಸ್​ ತಗುಲಿಲ್ಲ. ನಾನು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದೇನೆ’ ಎಂದೂ ಹೇಳುತ್ತಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಶೀತವಾಗಿದ್ದು ಸರಿಯಾಗಿ ಗೊತ್ತಾಗುತ್ತಿತ್ತು..ಮಾತಾಡುತ್ತಿದ್ದಂತೆ ಕೆಮ್ಮು ಬರುತ್ತಿತ್ತು. ಆದರೆ ಅವರು, ‘ಯಾರೂ ಏನೂ ಅಂದುಕೊಳ್ಳಬೇಡಿ. ನಾನು ಚೆನ್ನಾಗಿಯೇ ಇದ್ದೇನೆ. ವೈದ್ಯರು ಕೊವಿಡ್​ 19 ಟೆಸ್ಟ್ (Covid 19 Test) ಮಾಡಿದ್ದಾರೆ. ಬೇರೆ ಏನಾದರೂ ಸಮಸ್ಯೆಯಿದೆಯಾ ಎಂಬುದನ್ನೂ ತಪಾಸಣೆ ಮಾಡಿದ್ದಾರೆ’ ಎಂದು ಹೇಳುತ್ತಿದ್ದರು. ಆದರೆ ಕೆಮ್ಮುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಈ ಸಭೆ ರಷ್ಯಾ ದೂರದರ್ಶನದಲ್ಲಿ ನೇರಪ್ರಸಾರ ಇದ್ದುದರಿಂದ ಸಹಜವಾಗಿಯೇ ಪುತಿನ್​ ಆರೋಗ್ಯದ ಬಗ್ಗೆ ಅಲ್ಲಿನ ಜನರೂ ಚರ್ಚಿಸುತ್ತಿದ್ದಾರೆ. 

ಇನ್ನು ಪುತಿನ್​ ಹೀಗೆ ಕೆಮ್ಮುತ್ತಿರುವುದು ಇದೇ ಮೊದಲಲ್ಲ. ಸ್ವಲ್ಪ ದಿನಗಳ ಹಿಂದೆ ಕೃಷಿ ಸಂಬಂಧ ವಿಷಯಗಳನ್ನು ಚರ್ಚಿಸಲು ಅಧಿಕಾರಿಗಳ ಸಭೆ ಕರೆದಾಗಲೂ ಹೀಗೆ ಪದೇಪದೆ ಕೆಮ್ಮುತ್ತಿದ್ದರು ಎಂದು ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. ಹಾಗೇ, ಈ ಬಾರಿ ಭದ್ರತಾ ಮಂಡಳಿ ಸಭೆ ನಡೆಸುವಾಗಲೂ ಅವರು ಕೆಮ್ಮುತ್ತ, ಕಷ್ಟಪಡುತ್ತಿರುವುದನ್ನು ನೋಡಿದ ರಷ್ಯಾ ಮೇಲ್ಮನೆ ಸ್ಪೀಕರ್​ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ, ನಿಮ್ಮ ಆರೋಗ್ಯದ ಬಗ್ಗೆ ನಾವೆಲ್ಲ ಚಿಂತಿತರಾಗಿದ್ದೇವೆ ಎಂದರು. ಅದಕ್ಕೆ ಉತ್ತರಿಸಿದ ಪುತಿನ್​, ‘ಹೆದರುವಂಥದ್ದು ಏನೂ ಇಲ್ಲ. ನಾನು ತಂಪಾದ ಗಾಳಿಯಲ್ಲಿ ತಿರುಗಾಡಿದ್ದೇನೆ. ಇದೇ ಕಾರಣಕ್ಕೆ ಈಗ ಶೀತವಾಗಿದೆ’ ಎಂದಿದ್ದಾರೆ.

ಪುತಿನ್​ ಕಳೆದ ವಾರವಷ್ಟೇ 69ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರ ಕಚೇರಿಯ ಸುಮಾರು 12ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 1 ತಿಂಗಳು ಸೆಲ್ಫ್​ ಐಸೋಲೇಶನ್​​ಗೆ ಒಳಗಾಗಿದ್ದರು. ಆಗಲೂ ಕಾಡು-ಮೇಡು ಸುತ್ತಿದ್ದರು. ಸಣ್ಣ ಹೊಳೆಯಲ್ಲಿ ಮೀನು ಹಿಡಿದಿದ್ದರು. ಅಲ್ಲಿಂದ ಬಂದ ಬಳಿಕವೂ ಕೂಡ ಯಾರೊಂದಿಗೂ ಮುಖಾ-ಮುಖಿ ಸಭೆ ನಡೆಸಿಲ್ಲ. ಎಲ್ಲ ಸಭೆಗಳನ್ನೂ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ನಡೆಸಿದ್ದಾರೆ.

ಇದನ್ನೂ ಓದಿ:ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಆನ್​​ಲೈನ್ ಬುಕಿಂಗ್ ಆರಂಭ

ಉಪ್ಪಿನಂಗಡಿ ಬಳಿ ಭೀಕರ ಅಪಘಾತ; ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು

Published On - 12:58 pm, Tue, 12 October 21

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!