AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯನ್ನು ಅರೆಬೆತ್ತಲೆಯಾಗಿ ಚಳಿಯಲ್ಲಿ ನಿಲ್ಲಿಸಿ, ಕೊಂದ ಯುವಕ! ಅದೆಲ್ಲ ಯೂಟ್ಯೂಬ್ ಲೈವ್​ನಲ್ಲಿ ಪ್ರಸಾರವಾಯ್ತು ..

ತಕ್ಷಣ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದೆಲ್ಲ ನಡೆಯುವಾಗ ಲೈವ್​​ ವಿಡಿಯೋ ಪ್ರಸಾರವಾಗುತ್ತಲೇ ಇತ್ತು.

ಪ್ರೇಯಸಿಯನ್ನು ಅರೆಬೆತ್ತಲೆಯಾಗಿ ಚಳಿಯಲ್ಲಿ ನಿಲ್ಲಿಸಿ, ಕೊಂದ ಯುವಕ! ಅದೆಲ್ಲ ಯೂಟ್ಯೂಬ್ ಲೈವ್​ನಲ್ಲಿ ಪ್ರಸಾರವಾಯ್ತು ..
ಯೂಟ್ಯೂಬರ್
TV9 Web
| Edited By: |

Updated on:Apr 07, 2022 | 5:40 PM

Share

ಆತ ಯೂಟ್ಯೂಬ್​ ಚಾನೆಲ್​ ಒಂದನ್ನು ಹೊಂದಿದ್ದ. ಸಿಕ್ಕಿ  ಸಿಕ್ಕಿದ್ದನ್ನೆಲ್ಲ ವಿಡಿಯೋ ಮಾಡಿ ಹಾಕುತ್ತಿದ್ದ. ಆತನ ವಿಡಿಯೋಗಳಿಗೆ ಹೆಚ್ಚು ವ್ಯೂಸ್ ​ಬರುತ್ತಿದ್ದರಿಂದ ಸಾಕಷ್ಟು ಹಣ ಕೂಡ ಮಾಡುತ್ತಿದ್ದ. ಆದರೆ, ಬರಬರುತ್ತಾ ಹಣದ ಮದ ಈತನ ತಲೆಗೇರಿತ್ತು. ಹಣದ ಹುಚ್ಚಿಗೆ ಈತ ಇದೀಗ ಗರ್ಲ್​ಫ್ರೆಂಡ್​ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾನೆ. ಸದ್ಯ ಈತ ಪೊಲೀಸರ ಅತಿಥಿ ಆಗಿದ್ದಾನೆ.

30 ವರ್ಷದ ಸ್ಟಾಸ್​ ರೀಫ್ಲೆ ಬಂಧಿತ ವ್ಯಕ್ತಿ. 28 ವರ್ಷದ ವ್ಯಾಲೆಂಟಿನಾ ಗ್ರಿಗೋರಿವಾ ಈತನ ಪ್ರೇಯಸಿ. ಆಕೆ ಗರ್ಭಿಣಿ ಕೂಡ ಹೌದು. ಸಾಮಾಜಿಕ ಜಾಲತಾಣದಲ್ಲಿ ವ್ಯಾಲೆಂಟಿನಾ ಗ್ರಿಗೋರಿವಾ ಫೋಟೋವನ್ನು ನೋಡಿದ್ದ ವ್ಯಕ್ತಿಯೋರ್ವ ಆಕೆಯನ್ನು ಮೈನಸ್​ ಡಿಗ್ರಿ ತಾಪಮಾನವಿರುವ ಕೋಣೆಯಲ್ಲಿ ನಿಲ್ಲಿಸಿ ಲೈವ್​ ವಿಡಿಯೋ ಮಾಡಿದರೆ 70 ಸಾವಿರ ರೂಪಾಯಿ ನೀಡುವುದಾಗಿ ಆಕೆಯ ಪ್ರಿಯಕರ ಯೂಟ್ಯೂಬರ್​​ ಸ್ಟಾಸ್​ ರೀಫ್ಲೆಗೆ ಆಮಿಷ ಒಡ್ಡಿದ್ದ. ಅಷ್ಟೇ ಅಲ್ಲ, ಆಕೆ ಒಳ ಉಡುಪು ಮಾತ್ರ ಹಾಕಿರಬೇಕು ಎನ್ನುವ ಷರತ್ತನ್ನೂ ಹಾಕಿದ್ದ.

ಇದಕ್ಕೆ ಒಪ್ಪಿದ್ದ ಸ್ಟಾಸ್​ ರೀಫ್ಲೆ, ಗರ್ಲ್​ಫ್ರೆಂಡ್​ ಬಳಿ ಈ ಮನವಿ ಇಟ್ಟಿದ್ದ. ಆದ್ರೆ ಆಕೆ ಇಂತಹ ಅಮಾನುಷ ಕೃತ್ಯಕ್ಕೆ ಸುತರಾಂ ಒಪ್ಪುವುದಿಲ್ಲ. ಆದರೂ ಆಕೆಯನ್ನು ಕೇವಲ ಒಳ ಉಡುಪಿನಲ್ಲಿ ಮೈನಸ್​ ಡಿಗ್ರಿ ತಾಪಮಾನದ ಕೋಣೆಯೊಳಗೆ ನಿಲ್ಲಿಸಿದ್ದ. ಮೈ ಕೊರೆಯುವ ಚಳಿಗೆ ಆಕೆ ನಡುಗಿ ಹೋಗಿದ್ದಳು. ದೀರ್ಘ ಕಾಲ ಚಳಿಯಲ್ಲೇ ಇದ್ದಿದ್ದರಿಂದ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.

ವ್ಯಾಲೆಂಟಿನಾ ಬಿದ್ದಿದ್ದನ್ನು ನೋಡಿದ ಸ್ಟಾಸ್​ ರೀಫ್ಲೆ ಆಕೆಯನ್ನು ಕೋಣೆಯಿಂದ ಹೊರಗೆ ತಂದಿದ್ದಾನೆ. ಈ ವೇಳೆ ಎದ್ದೇಳು, ಎದ್ದೇಳು ಎಂದು ಗೋಳಾಡಿದ್ದಾನೆ. ಆದರೆ, ಆಕೆ ಪ್ರತಿಕ್ರಿಯಿಸಿಲ್ಲ. ತಕ್ಷಣ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದೆಲ್ಲ ನಡೆಯುವಾಗ ಲೈವ್​​ ವಿಡಿಯೋ ಪ್ರಸಾರವಾಗುತ್ತಲೇ ಇತ್ತು. ನಂತರ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್

Published On - 3:48 pm, Sat, 5 December 20

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ