AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯನ್ನು ಅರೆಬೆತ್ತಲೆಯಾಗಿ ಚಳಿಯಲ್ಲಿ ನಿಲ್ಲಿಸಿ, ಕೊಂದ ಯುವಕ! ಅದೆಲ್ಲ ಯೂಟ್ಯೂಬ್ ಲೈವ್​ನಲ್ಲಿ ಪ್ರಸಾರವಾಯ್ತು ..

ತಕ್ಷಣ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದೆಲ್ಲ ನಡೆಯುವಾಗ ಲೈವ್​​ ವಿಡಿಯೋ ಪ್ರಸಾರವಾಗುತ್ತಲೇ ಇತ್ತು.

ಪ್ರೇಯಸಿಯನ್ನು ಅರೆಬೆತ್ತಲೆಯಾಗಿ ಚಳಿಯಲ್ಲಿ ನಿಲ್ಲಿಸಿ, ಕೊಂದ ಯುವಕ! ಅದೆಲ್ಲ ಯೂಟ್ಯೂಬ್ ಲೈವ್​ನಲ್ಲಿ ಪ್ರಸಾರವಾಯ್ತು ..
ಯೂಟ್ಯೂಬರ್
TV9 Web
| Edited By: |

Updated on:Apr 07, 2022 | 5:40 PM

Share

ಆತ ಯೂಟ್ಯೂಬ್​ ಚಾನೆಲ್​ ಒಂದನ್ನು ಹೊಂದಿದ್ದ. ಸಿಕ್ಕಿ  ಸಿಕ್ಕಿದ್ದನ್ನೆಲ್ಲ ವಿಡಿಯೋ ಮಾಡಿ ಹಾಕುತ್ತಿದ್ದ. ಆತನ ವಿಡಿಯೋಗಳಿಗೆ ಹೆಚ್ಚು ವ್ಯೂಸ್ ​ಬರುತ್ತಿದ್ದರಿಂದ ಸಾಕಷ್ಟು ಹಣ ಕೂಡ ಮಾಡುತ್ತಿದ್ದ. ಆದರೆ, ಬರಬರುತ್ತಾ ಹಣದ ಮದ ಈತನ ತಲೆಗೇರಿತ್ತು. ಹಣದ ಹುಚ್ಚಿಗೆ ಈತ ಇದೀಗ ಗರ್ಲ್​ಫ್ರೆಂಡ್​ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾನೆ. ಸದ್ಯ ಈತ ಪೊಲೀಸರ ಅತಿಥಿ ಆಗಿದ್ದಾನೆ.

30 ವರ್ಷದ ಸ್ಟಾಸ್​ ರೀಫ್ಲೆ ಬಂಧಿತ ವ್ಯಕ್ತಿ. 28 ವರ್ಷದ ವ್ಯಾಲೆಂಟಿನಾ ಗ್ರಿಗೋರಿವಾ ಈತನ ಪ್ರೇಯಸಿ. ಆಕೆ ಗರ್ಭಿಣಿ ಕೂಡ ಹೌದು. ಸಾಮಾಜಿಕ ಜಾಲತಾಣದಲ್ಲಿ ವ್ಯಾಲೆಂಟಿನಾ ಗ್ರಿಗೋರಿವಾ ಫೋಟೋವನ್ನು ನೋಡಿದ್ದ ವ್ಯಕ್ತಿಯೋರ್ವ ಆಕೆಯನ್ನು ಮೈನಸ್​ ಡಿಗ್ರಿ ತಾಪಮಾನವಿರುವ ಕೋಣೆಯಲ್ಲಿ ನಿಲ್ಲಿಸಿ ಲೈವ್​ ವಿಡಿಯೋ ಮಾಡಿದರೆ 70 ಸಾವಿರ ರೂಪಾಯಿ ನೀಡುವುದಾಗಿ ಆಕೆಯ ಪ್ರಿಯಕರ ಯೂಟ್ಯೂಬರ್​​ ಸ್ಟಾಸ್​ ರೀಫ್ಲೆಗೆ ಆಮಿಷ ಒಡ್ಡಿದ್ದ. ಅಷ್ಟೇ ಅಲ್ಲ, ಆಕೆ ಒಳ ಉಡುಪು ಮಾತ್ರ ಹಾಕಿರಬೇಕು ಎನ್ನುವ ಷರತ್ತನ್ನೂ ಹಾಕಿದ್ದ.

ಇದಕ್ಕೆ ಒಪ್ಪಿದ್ದ ಸ್ಟಾಸ್​ ರೀಫ್ಲೆ, ಗರ್ಲ್​ಫ್ರೆಂಡ್​ ಬಳಿ ಈ ಮನವಿ ಇಟ್ಟಿದ್ದ. ಆದ್ರೆ ಆಕೆ ಇಂತಹ ಅಮಾನುಷ ಕೃತ್ಯಕ್ಕೆ ಸುತರಾಂ ಒಪ್ಪುವುದಿಲ್ಲ. ಆದರೂ ಆಕೆಯನ್ನು ಕೇವಲ ಒಳ ಉಡುಪಿನಲ್ಲಿ ಮೈನಸ್​ ಡಿಗ್ರಿ ತಾಪಮಾನದ ಕೋಣೆಯೊಳಗೆ ನಿಲ್ಲಿಸಿದ್ದ. ಮೈ ಕೊರೆಯುವ ಚಳಿಗೆ ಆಕೆ ನಡುಗಿ ಹೋಗಿದ್ದಳು. ದೀರ್ಘ ಕಾಲ ಚಳಿಯಲ್ಲೇ ಇದ್ದಿದ್ದರಿಂದ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.

ವ್ಯಾಲೆಂಟಿನಾ ಬಿದ್ದಿದ್ದನ್ನು ನೋಡಿದ ಸ್ಟಾಸ್​ ರೀಫ್ಲೆ ಆಕೆಯನ್ನು ಕೋಣೆಯಿಂದ ಹೊರಗೆ ತಂದಿದ್ದಾನೆ. ಈ ವೇಳೆ ಎದ್ದೇಳು, ಎದ್ದೇಳು ಎಂದು ಗೋಳಾಡಿದ್ದಾನೆ. ಆದರೆ, ಆಕೆ ಪ್ರತಿಕ್ರಿಯಿಸಿಲ್ಲ. ತಕ್ಷಣ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದೆಲ್ಲ ನಡೆಯುವಾಗ ಲೈವ್​​ ವಿಡಿಯೋ ಪ್ರಸಾರವಾಗುತ್ತಲೇ ಇತ್ತು. ನಂತರ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್

Published On - 3:48 pm, Sat, 5 December 20

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು