AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಯುದ್ಧದಲ್ಲಿ ಸಂವಹನ ರಹಸ್ಯವಾಗಿಡಲು ನಾಜಿಗಳು ಬಳಕೆ ಮಾಡುತ್ತಿದ್ದ ಟೈಪ್​ರೈಟರ್​ ನಂತಹ ಯಂತ್ರ ಪತ್ತೆ!

ಎಲೆಕ್ಟ್ರೋಮೆಕಾನಿಕಲ್ ಯಂತ್ರ ಇದಾಗಿದ್ದು, ನಾಜಿ ಸೇನೆ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಿತ್ತು. ಸಂವಹನ ಸೋರಿಕೆ ಆಗದಂತೆ ನೋಡಿಕೊಳ್ಳಲು ಈ ಯಂತ್ರ ಸಹಕಾರಿಯಾಗಿತ್ತು.

ವಿಶ್ವಯುದ್ಧದಲ್ಲಿ ಸಂವಹನ ರಹಸ್ಯವಾಗಿಡಲು ನಾಜಿಗಳು ಬಳಕೆ ಮಾಡುತ್ತಿದ್ದ ಟೈಪ್​ರೈಟರ್​ ನಂತಹ ಯಂತ್ರ ಪತ್ತೆ!
ಸಮುದ್ರದಲ್ಲಿ ಪತ್ತೆಯಾದ ಯಂತ್ರ
TV9 Web
| Updated By: ganapathi bhat|

Updated on:Apr 07, 2022 | 5:42 PM

Share

ಜರ್ಮನಿಯ ಬಳಿ ಇರುವ ಬಾಲ್ಟಿಕ್​ ಸಮುದ್ರದಲ್ಲಿ ಕೆಲ ಮೀನುಗಾರರು ಮೀನುಗಾರಿಕೆಗೆ ಇಳಿದಿದ್ದರು. ಬಲೆ ಕೂಡ ಬೀಸಿದ್ದರು. ಬಲೆಯನ್ನು ಆಳಕ್ಕೆ ಇಳಿಸಿದರೆ ದೊಡ್ಡ ಮೀನು ಸಿಗಬಹುದು ಎನ್ನುವುದು ಇವರ ಲೆಕ್ಕಾಚಾರವಾಗಿತ್ತು. ಬಲೆ ಎತ್ತುವಾಗ ಭಾರವೇನೋ ಅನಿಸಿತ್ತು.  ಆದರೆ, ಎತ್ತಿ ನೋಡಿದಾಗ ಅಲ್ಲಿ ಮೀನಿರಲಿಲ್ಲ. ಅಲ್ಲಿ ಸಿಕ್ಕಿದ್ದು ತುಕ್ಕು ಹಿಡಿದ ಎನಿಗ್ಮಾ ಯಂತ್ರ!

1939ರಿಂದ 1945ರ ಅವಧಿಯಲ್ಲಿ ಎರಡನೇ ವಿಶ್ವ ಯುದ್ಧ ನಡೆದಿತ್ತು. ಈ ವೇಳೆ ವೈರಿ ರಾಷ್ಟ್ರಗಳನ್ನು ಬಗ್ಗು ಬಡಿಯಲು ಅನೇಕ ರಾಷ್ಟ್ರಗಳು ನಾನಾ ತಂತ್ರಗಳನ್ನು ಅನುಸರಿಸಿದ್ದರು. ಅಂತೆಯೇ ನಾಯಕರ ನಡುವೆ ನಡೆಯುವ ಸಂವಹನ ಗುಟ್ಟಾಗಿರಿಸಲು ನಾಜಿ ಸೇನೆ ಎನಿಗ್ಮಾ ಯಂತ್ರ ಬಳಕೆ ಮಾಡುತ್ತಿತ್ತು. ಈಗ ಈ ಯಂತ್ರ ಸಮುದ್ರದಾಳದಲ್ಲಿ ಪತ್ತೆ ಆಗಿದೆ.

ಎಲೆಕ್ಟ್ರೋಮೆಕಾನಿಕಲ್ ಯಂತ್ರ ಇದಾಗಿದ್ದು, ನಾಜಿ ಸೇನೆ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಿತ್ತು. ಸಂವಹನ ಸೋರಿಕೆ ಆಗದಂತೆ ನೋಡಿಕೊಳ್ಳಲು ಈ ಯಂತ್ರ ಸಹಕಾರಿಯಾಗಿತ್ತು. ಇದರಲ್ಲಿ ರವಾನೆಯಾಗುತ್ತಿದ್ದ ಸಂದೇಶ ಸಾಮಾನ್ಯರಿಂದ ಓದಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ವಿಶೇಷ ತರಬೇತಿ ಅಗತ್ಯವಿತ್ತು. ಹೀಗಾಗಿ, ನಾಜಿಗಳ ಸಂವಹನ ಗುಟ್ಟಾಗಿಯೇ ಉಳಿಯುತ್ತಿತ್ತು.

ಈ ಯಂತ್ರ ನೋಡಲು ಟೈಪ್​ರೈಟರ್​ ಯಂತ್ರದ ರೀತಿಯಲ್ಲೇ ಕಾಣುತ್ತದೆ. ವಿಶ್ವಯುದ್ಧದ ಸಮಯದಲ್ಲಿ ಸಾಕಷ್ಟು ಈ ರೀತಿಯ ಯಂತ್ರಗಳನ್ನು ನಾಜಿಗಳು ಅಭಿವೃದ್ಧಿಪಡಿಸಿದ್ದರು. ಈ ಮೂಲಕ ಯುದ್ಧದಲ್ಲಿ ತಮ್ಮ ಸಂವಹನವನ್ನು ಗುಟ್ಟಾಗಿರಿಸಿದ್ದಾರೆ.

3ನೇ ಮಹಾಯುದ್ಧದ ಹೊಸ್ತಿಲಲ್ಲಿ ವಿಶ್ವ? ಭಾರತದ ಮೇಲೂ ಬೀರಲಿದೆ ಪ್ರಭಾವ!

Published On - 12:01 pm, Sat, 5 December 20

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ