AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತ ಮತ್ತು ಕಣ್ಣೀರಿನ ನದಿಗಳು ಹರಿಯುತ್ತಿವೆ: ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಂತೆ ರಷ್ಯಾಕ್ಕೆ ಕರೆ ನೀಡಿದ ಪೋಪ್ ಫ್ರಾನ್ಸಿಸ್

ಉಕ್ರೇನ್‌ನಲ್ಲಿ ರಕ್ತ ಮತ್ತು ಕಣ್ಣೀರಿನ ನದಿಗಳು ಹರಿಯುತ್ತಿವೆ. ಇದು ಮಿಲಿಟರಿ ಕಾರ್ಯಾಚರಣೆ ಮಾತ್ರವಲ್ಲ, ಸಾವು, ವಿನಾಶ ಮತ್ತು ದುಃಖಕ್ಕೆ ಕಾರಣವಾಗುವ ಯುದ್ಧವಾಗಿದೆ" ಎಂದು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರು ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಸ್ಕ್ವೇರ್​​ನಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಹೇಳಿದರು.

ರಕ್ತ ಮತ್ತು ಕಣ್ಣೀರಿನ ನದಿಗಳು ಹರಿಯುತ್ತಿವೆ: ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಂತೆ ರಷ್ಯಾಕ್ಕೆ ಕರೆ ನೀಡಿದ ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 06, 2022 | 6:57 PM

ಪೋಪ್ ಫ್ರಾನ್ಸಿಸ್ (Pope Francis )ಭಾನುವಾರ ಉಕ್ರೇನ್‌ನ (Ukraine) ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿದ್ದಾರೆ. ಉಕ್ರೇನ್ ಮೇಲೆ  ನಡೆಯುತ್ತಿರುವ ಹಿಂಸಾಚಾರವನ್ನು ಕೇವಲ ‘ಮಿಲಿಟರಿ ಕಾರ್ಯಾಚರಣೆ’ ಎಂದು ಮಾಸ್ಕೊದ ವಿವರಣೆಯನ್ನು ಅವರು  ತಿರಸ್ಕರಿಸಿದರು. “ಉಕ್ರೇನ್‌ನಲ್ಲಿ ರಕ್ತ ಮತ್ತು ಕಣ್ಣೀರಿನ ನದಿಗಳು ಹರಿಯುತ್ತಿವೆ. ಇದು ಮಿಲಿಟರಿ ಕಾರ್ಯಾಚರಣೆ ಮಾತ್ರವಲ್ಲ, ಸಾವು, ವಿನಾಶ ಮತ್ತು ದುಃಖಕ್ಕೆ ಕಾರಣವಾಗುವ ಯುದ್ಧವಾಗಿದೆ” ಎಂದು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರು ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಸ್ಕ್ವೇರ್​​ನಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಹೇಳಿದರು.  ಪೋಲೆಂಡ್‌ನಲ್ಲಿನ ಚರ್ಚುಗಳು ಉಕ್ರೇನ್‌ನಲ್ಲಿ ರಕ್ತಪಾತ ಮತ್ತು ಹಿಂಸಾಚಾರದಿಂದ ಪಲಾಯನ ಮಾಡುವ ನಿರಾಶ್ರಿತರನ್ನು ಸ್ವಾಗತಿಸಿದ ಕೆಲವು ದಿನಗಳ ನಂತರ ಪೋಪ್‌ನ ಈ ಹೇಳಿಕೆ ಬಿಂದಿದೆ. ಪೋಪ್ ಉಕ್ರೇನ್ ಮೇಲಿನ ಆಕ್ರಮಣವನ್ನು ಸಾರ್ವಜನಿಕವಾಗಿ ಖಂಡಿಸಿದ್ದು ಯುದ್ಧವನ್ನು ಕೊನೆಗೊಳಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ನೊಂದಿಗೆ ತನ್ನ ಪ್ರಭಾವವನ್ನು ಬಳಸುವಂತೆ ರಷ್ಯಾದ ಆರ್ಥೊಡಾಕ್ಸ್ ಚರ್ಚ್ ಅನ್ನು ಒತ್ತಾಯಿಸಿದ್ದಾರೆ. ಉಕ್ರೇನ್‌ನಲ್ಲಿ ಕನಿಷ್ಠ ಕೆಲವು ಮಿಲಿಯನ್ ಕ್ಯಾಥೋಲಿಕರಿದ್ದಾರೆ.  “ಅಂತರರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಸೇರಿದಂತೆ ಈ ಅಪರಾಧಗಳನ್ನು ಇತ್ಯರ್ಥಪಡಿಸುವ ಸಮಯ ಬರುತ್ತದೆ” ಎಂದು ಪೋಲೆಂಡ್‌ನ ಆರ್ಚ್‌ಬಿಷಪ್ ಸ್ಟಾನಿಸ್ಲಾವ್ ಗಡೆಕಿ ಕಳೆದ ವಾರ ರಷ್ಯಾದ ಆರ್ಥೊಡಾಕ್ಸ್ ಚರ್ಚ್ ಮುಖ್ಯಸ್ಥ ಪ್ಯಾಟ್ರಿಯಾಚ್ ಕಿರಿಲ್‌ಗೆ ಬರೆದಿದ್ದಾರೆ.  ಯಾರಾದರೂ ಮಾನವ ನ್ಯಾಯವನ್ನು ತಪ್ಪಿಸಲು ಪ್ರಯತ್ನಿಸಿದರೂಹ, ದೈವಿಕ ಲೆಕ್ಕಾಚಾರವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.  ಆರ್ಚ್‌ಬಿಷಪ್‌ನ ಈ ಹೇಳಿಕೆ ಗಮನಾರ್ಹವಾಗಿದೆ ಏಕೆಂದರೆ ಅದು ಆ ಸಮಯದಲ್ಲಿ ಕ್ಯಾಥೋಲಿಕ್ ಚರ್ಚ್‌ನ ಸ್ಥಾನದೊಂದಿಗೆ ತೀವ್ರವಾಗಿ ವ್ಯತಿರಿಕ್ತವಾಗಿತ್ತು. ಪೋಪ್ ಅವರು ಕದನ ವಿರಾಮಕ್ಕೆ ಕರೆ ನೀಡಿದ್ದು ಯುದ್ಧದಲ್ಲಿ ಭಾಗಿಯಾಗದ ಹೋರಾಟಗಾರರನ್ನು ಸ್ಥಳಾಂತರಿಸಲು ಹೇಳಿದ್ದಾರೆ, ಆದರೆ ಪೋಪ್ ಇನ್ನೂ ರಷ್ಯಾಕ್ಕೆ ಸಾರ್ವಜನಿಕವಾಗಿ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಲು ಕರೆ ನೀಡಲಿಲ್ಲ.

ಶುಕ್ರವಾರ ಉಕ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಮಾಣು ವಿದ್ಯುತ್ ಸ್ಥಾವರದಲ್ಲಿ ರಷ್ಯಾದ ಮಿಲಿಟರಿ ದಾಳಿ ಬಗ್ಗೆ ವ್ಯಾಟಿಕನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ಇದು ಬೆಂಕಿ ಮತ್ತು ಚೆರ್ನೋಬಿಲ್ ತರಹದ ದುರಂತದ ಆತಂಕಕ್ಕೆ ಕಾರಣವಾಯಿತು.

ಪೋಪ್ ಅವರ ಮೌನವು ಆಶ್ಚರ್ಯ ಹುಟ್ಟಿಸಿದೆ. ಯಾಕೆಂದರೆ ಅವರು ಈ ಹಿಂದೆ, ಕೇವಲ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದು ಅನೈತಿಕ ಕ್ರಿಯೆ ಎಂದು ಘೋಷಿಸಿದರು.

ರಷ್ಯಾವು ವಿಶ್ವದ ಅತಿದೊಡ್ಡ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೊಂದಿದೆ. ಪುಟಿನ್ ಅವರು ಡಿಸೆಂಬರ್‌ನಲ್ಲಿ ಅವುಗಳನ್ನು ನಿಯೋಜಿಸಲು ಇಚ್ಛೆಯನ್ನು ಸೂಚಿಸಿದ್ದಾರೆ.  ಮಾಸ್ಕೋ ಕಳೆದ ವಾರ ತನ್ನ ಪರಮಾಣು “ತಡೆಗಟ್ಟುವಿಕೆ ಪಡೆಗಳನ್ನು” ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಿದ್ದು ಪ್ರಪಂಚದಾದ್ಯಂತ ಕೆಲವು ಭೀತಿಗೆ ಕಾರಣವಾಯಿತು.

ವ್ಯಾಟಿಕನ್ ಸೂಕ್ಷ್ಮ ವಿಷಯಗಳಲ್ಲಿ ಶಾಂತ ರಾಜತಾಂತ್ರಿಕತೆಯ ಇತಿಹಾಸವನ್ನು ಹೊಂದಿದೆ, ಅದು ಒಂದರ ಪರ ಅಥವಾ ಸಾರ್ವಜನಿಕವಾಗಿ ಆಕ್ರಮಣಕಾರರನ್ನು ಖಂಡಿಸಿದರೆ ಅದು ಸಂಭಾಷಣೆಯನ್ನು ಸುಗಮಗೊಳಿಸುತ್ತದೆ ಎಂದು ನಂಬಲಾಗುತ್ತದೆ.

ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ರಷ್ಯಾದ ರಾಯಭಾರಿಯನ್ನು ಭೇಟಿಯಾದಾಗ ವ್ಯಾಟಿಕನ್‌ನಿಂದ ಹೊರಬಂದರು. ಆದರೆ ಅಧಿಕೃತ ಮಾರ್ಗವೆಂದರೆ ‘ಯುದ್ಧದ ಬಗ್ಗೆ ಅವರ ಕಾಳಜಿಯನ್ನು ವ್ಯಕ್ತಪಡಿಸುವುದು’ ಅವರು ರಷ್ಯಾದ ಚರ್ಚ್‌ನ ಮುಖ್ಯಸ್ಥರೊಂದಿಗೆ (ಎರಡನೇ) ಸಭೆಗೆ ಕರೆ ನೀಡಿದರು. ಮಾಸ್ಕೊಗೆ ಹೋಗಲು ಸಿದ್ಧ. ಸಹೋದರನೊಂದಿಗೆ ಮಾತನಾಡಲು, ಪ್ರೋಟೋಕಾಲ್ ಗಳ ಅಗತ್ಯವಿಲ್ಲ ಎಂದು ಅವರು ಹೇಳಿದ್ದು, ಇಲ್ಲಿಯವರೆಗೆ ಯಾವುದೇ ಸಭೆಯನ್ನು ನಿಗದಿಪಡಿಸಲಾಗಿಲ್ಲ.

ಇದನ್ನೂ ಓದಿ: ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಿದ್ದು ಚುನಾವಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ: ಅಮಿತ್ ಶಾ

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್