AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಸರ್ಗಕ್ಕೆ ಸಡ್ಡು ಹೊಡೆದು, ಕೃತಕವಾಗಿಯೂ ತಯಾರಾಯಿತು ವಜ್ರ!

ನೈಸರ್ಗಿಕಕ್ಕೆ ಸಡ್ಡು ಹೊಡೆದು,  ಕೃತಕವಾಗಿಯೂ ಕೂಡ ಅತ್ಯಮೂಲ್ಯ ವಜ್ರವನ್ನು ತಯಾರಿಸಬಹುದು ಎಂಬುದು ಸಾಬೀತಾಗಿದೆ. 1,000 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನದಲ್ಲಿ ನೈಸರ್ಗಿಕ ವಜ್ರಗಳು ರೂಪುಗೊಳ್ಳಲು ಸಾಮಾನ್ಯವಾಗಿ ಶತಕೋಟಿ ವರ್ಷಗಳೇ ಬೇಕಾಗುತ್ತವೆ! ಆದರೆ ಈಗ ವಿಜ್ಞಾನಿಗಳ ಸಂಶೋಧನಾ ತಂಡವೊಂದು ಸಾಮಾನ್ಯ ಕೋಣೆಯ ತಾಪಮಾನದಲ್ಲಿ ವಜ್ರವನ್ನು ತಯಾರಿಸುವ ಮೂಲಕ ಸಾಧನೆಯನ್ನೇ ಮಾಡಿದೆ. ಯುನೈಟೆಡ್ ಸ್ಟೇಟ್​​ನ ಸಿಡ್ನಿ ವಿಶ್ವವಿದ್ಯಾಲಯ ಮತ್ತು ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಆಎಂಟಿ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯ ನ್ಯಾಷನಲ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಎರಡು […]

ನಿಸರ್ಗಕ್ಕೆ ಸಡ್ಡು ಹೊಡೆದು, ಕೃತಕವಾಗಿಯೂ ತಯಾರಾಯಿತು ವಜ್ರ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Nov 19, 2020 | 2:25 PM

Share

ನೈಸರ್ಗಿಕಕ್ಕೆ ಸಡ್ಡು ಹೊಡೆದು,  ಕೃತಕವಾಗಿಯೂ ಕೂಡ ಅತ್ಯಮೂಲ್ಯ ವಜ್ರವನ್ನು ತಯಾರಿಸಬಹುದು ಎಂಬುದು ಸಾಬೀತಾಗಿದೆ. 1,000 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನದಲ್ಲಿ ನೈಸರ್ಗಿಕ ವಜ್ರಗಳು ರೂಪುಗೊಳ್ಳಲು ಸಾಮಾನ್ಯವಾಗಿ ಶತಕೋಟಿ ವರ್ಷಗಳೇ ಬೇಕಾಗುತ್ತವೆ! ಆದರೆ ಈಗ ವಿಜ್ಞಾನಿಗಳ ಸಂಶೋಧನಾ ತಂಡವೊಂದು ಸಾಮಾನ್ಯ ಕೋಣೆಯ ತಾಪಮಾನದಲ್ಲಿ ವಜ್ರವನ್ನು ತಯಾರಿಸುವ ಮೂಲಕ ಸಾಧನೆಯನ್ನೇ ಮಾಡಿದೆ.

ಯುನೈಟೆಡ್ ಸ್ಟೇಟ್​​ನ ಸಿಡ್ನಿ ವಿಶ್ವವಿದ್ಯಾಲಯ ಮತ್ತು ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಆಎಂಟಿ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯ ನ್ಯಾಷನಲ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಎರಡು ರೀತಿಯ ವಜ್ರಗಳನ್ನು ತಯಾರಿಸಿ ಹೆಮ್ಮೆಗೆ ಪಾತ್ರವಾಗಿದೆ. ಈ ವಿಜ್ಞಾನಿಗಳು 100 ಜಿಪಿಎ ಒತ್ತಡ ಮೂಲಕ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ‘ಲಾನ್ಸ್ ಡೇಲೈಟ್’ ಮತ್ತು ‘ಸಾಮಾನ್ಯ ವಜ್ರ’(ಸಾಮಾನ್ಯವಾಗಿ ಉಂಗುರದಲ್ಲಿ ಕಂಡುಬರುವ) ತಯಾರಿಸಿ ಹುಬ್ಬೇರುವಂತೆ ಮಾಡಿದ್ದಾರೆ.

ಸ್ಫಟಿಕ ಶಾಸ್ತ್ರಜ್ಞೆ ಡೇಮ್ ಕ್ಯಾಥ್ಲೀನ್ ಲಾನ್ಸ್ಡೇಲ್ ಅವರ ಹೆಸರಿನ ‘ಲಾನ್ಸ್ ಡೇಲೈಟ್’ ಮತ್ತು ‘ಸಾಮಾನ್ಯ ವಜ್ರ’ವು ವಿಭಿನ್ನ ಸ್ಫಟಿಕ ರಚನೆಯನ್ನು ಹೊಂದಿದ್ದು, ಇದು ಶೇ. 50ರಷ್ಟು ಕಠಿಣವಾಗಿರುತ್ತದೆ ಎಂದು ಊಹಿಸಲಾಗಿದೆ.

Published On - 2:20 pm, Thu, 19 November 20

Follow Us
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!