AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beating Child ಹೆತ್ತವರು ಮಕ್ಕಳಿಗೆ ಹೊಡೆಯುವಂತಿಲ್ಲ.. ಹೊಸ ಆದೇಶ ಜಾರಿಗೊಳಿಸಿದೆ ಈ ದೇಶ!

ನಮ್ಮನೆ ಮಕ್ಕಳಿಗೆ ನಾವು ಹೊಡೆಯಬಾರದಾ? ನಾವು ನಮ್ಮ ತಂದೆ ತಾಯಿ ಕೈಯಲ್ಲಿ ಎಷ್ಟು ಏಟು ತಿಂದಿದ್ವಿ ಗೊತ್ತಾ? ಅನ್ನುವ ಮಾತಿನ ಜೊತೆಗೆ ಮಕ್ಕಳಿಗೆ ಹೊಡೀಬಾರದು ಎಂದೇ ಹೇಳುವ ಹಲವರು ನಿಮಗೆ ಸಿಕ್ಕಿರಬಹುದು. ಶಾಲೆಯಲ್ಲಿ ಶಿಕ್ಷಕರು ಏಟು ಕೊಟ್ಟಿದ್ದಕ್ಕೆ ಹೆತ್ತವರು ದೂರು ನೀಡಿರುವ ಘಟನೆಗಳನ್ನೂ ನೀವು ಗಮನಿಸಿರಬಹುದು. ಶಿಕ್ಷಕರಂತೂ ಮಕ್ಕಳಿಗೆ ಹೊಡೆಯೋದು ಬಿಡಿ, ಬೈಯ್ಯೋಕೂ ಭಯ ಆಗುತ್ತಪ್ಪಾ ಎಂದು ಉದ್ಘರಿಸುತ್ತಲೇ ಇರುತ್ತಾರೆ. ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಬಗ್ಗೆ ನಾವು ಚರ್ಚಿಸುತ್ತಾ ಇರುವಂತೆ ಇಲ್ಲೊಂದು ದೇಶ ಮಕ್ಕಳಿಗೆ […]

Beating Child ಹೆತ್ತವರು ಮಕ್ಕಳಿಗೆ ಹೊಡೆಯುವಂತಿಲ್ಲ.. ಹೊಸ ಆದೇಶ ಜಾರಿಗೊಳಿಸಿದೆ ಈ ದೇಶ!
ಸಾಧು ಶ್ರೀನಾಥ್​
|

Updated on: Nov 21, 2020 | 11:53 AM

Share

ನಮ್ಮನೆ ಮಕ್ಕಳಿಗೆ ನಾವು ಹೊಡೆಯಬಾರದಾ? ನಾವು ನಮ್ಮ ತಂದೆ ತಾಯಿ ಕೈಯಲ್ಲಿ ಎಷ್ಟು ಏಟು ತಿಂದಿದ್ವಿ ಗೊತ್ತಾ? ಅನ್ನುವ ಮಾತಿನ ಜೊತೆಗೆ ಮಕ್ಕಳಿಗೆ ಹೊಡೀಬಾರದು ಎಂದೇ ಹೇಳುವ ಹಲವರು ನಿಮಗೆ ಸಿಕ್ಕಿರಬಹುದು. ಶಾಲೆಯಲ್ಲಿ ಶಿಕ್ಷಕರು ಏಟು ಕೊಟ್ಟಿದ್ದಕ್ಕೆ ಹೆತ್ತವರು ದೂರು ನೀಡಿರುವ ಘಟನೆಗಳನ್ನೂ ನೀವು ಗಮನಿಸಿರಬಹುದು. ಶಿಕ್ಷಕರಂತೂ ಮಕ್ಕಳಿಗೆ ಹೊಡೆಯೋದು ಬಿಡಿ, ಬೈಯ್ಯೋಕೂ ಭಯ ಆಗುತ್ತಪ್ಪಾ ಎಂದು ಉದ್ಘರಿಸುತ್ತಲೇ ಇರುತ್ತಾರೆ.

ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಬಗ್ಗೆ ನಾವು ಚರ್ಚಿಸುತ್ತಾ ಇರುವಂತೆ ಇಲ್ಲೊಂದು ದೇಶ ಮಕ್ಕಳಿಗೆ ಹೊಡೆಯಬಾರದು ಎಂಬ ಕಾನೂನು ಹೊರಡಿಸಿದೆ. ಇತರೆ ಜನರು ಬಿಡಿ, ಖುದ್ದು ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನೂ ಈ ದೇಶದ ಕಾನೂನು ಒಪ್ಪುವುದಿಲ್ಲ!

ಈ ಕಾನೂನನ್ನು UK ದಲ್ಲಿ ಜಾರಿಗೊಳಿಸಿದ ಮೊದಲ ದೇಶವಿದು! ಯುನೈಟೆಡ್ ಕಿಂಗ್ಡಮ್ನ ಸ್ಕಾಟ್ಲ್ಯಾಂಡ್, ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಜಾರಿಗೊಳಿಸಿದ UK ನ ಮೊದಲ ದೇಶ ಅನಿಸಿಕೊಂಡಿರುವ ಸ್ಕಾಟ್ಲ್ಯಾಂಡ್, ವಿಶ್ವದಲ್ಲಿ ಈ ನಿಯಮ ತಂದ 58ನೇ ದೇಶವಾಗಿದೆ. ಮೊತ್ತ ಮೊದಲು 1979ರಲ್ಲಿ ಸ್ವೀಡನ್ ಮಕ್ಕಳಿಗೆ ದೈಹಿಕ ದಂಡನೆ ನೀಡುವುದನ್ನು ನಿಷೇಧಿಸಿತ್ತು.

ಇನ್ನುಮುಂದೆ ಯಾವುದೇ ವಿಧದ ದೈಹಿಕ ದಂಡನೆಯನ್ನು ಮಕ್ಕಳು ಅನುಭವಿಸಬಾರದು. ತನ್ಮೂಲಕ ಮಕ್ಕಳ ಹಕ್ಕುಗಳು ಸಂಪೂರ್ಣವಾಗಿ ಗೌರವಿಸಲ್ಪಡಬೇಕು ಎಂದು ಸ್ಕಾಟ್ಲ್ಯಾಂಡ್ ಮಕ್ಕಳ ಮೇಲಿನ ಕ್ರೌರ್ಯ ತಡೆಯ ರಾಷ್ಟ್ರೀಯ ಮಂಡಳಿ ವಕ್ತಾರ ಜೊಆನ್ ಬ್ಯಾರೆಟ್ ಹೇಳಿದ್ದಾರೆ.

ಇದನ್ನು ಎಲ್ಲರೂ ಒಂದೇಟಿಗೇ ಒಪ್ಪಿಬಿಟ್ಟರು ಅಂದುಕೊಳ್ಳಬೇಡಿ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವರ್ಗವೂ ಸ್ಕಾಟ್ಲ್ಯಾಂಡ್ನಲ್ಲಿದೆ. ಹೆತ್ತವರು ಮಕ್ಕಳಿಗೆ ಶಿಸ್ತು ಕಲಿಸಬೇಕು. ಶಿಸ್ತು ಕಲಿಕೆ ಯಾವತ್ತೂ ಹಿತವಾಗಿ ಇರುವುದಿಲ್ಲ ಎಂದು ಹಲವರು ನಿಯಮವನ್ನು ಆಕ್ಷೇಪಿಸಿದ್ದಾರೆ. ಯುಕೆನ ವೇಲ್ಸ್ ದೇಶವೂ ಈ ನಿಯಮ ಜಾರಿಗೆ ತರಲು ತಯಾರಿಯಲ್ಲಿದ್ದು, 2022ರಲ್ಲಿ ಜಾರಿಗೊಳಿಸುವ ನಿರೀಕ್ಷೆಯಲ್ಲಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ