Beating Child ಹೆತ್ತವರು ಮಕ್ಕಳಿಗೆ ಹೊಡೆಯುವಂತಿಲ್ಲ.. ಹೊಸ ಆದೇಶ ಜಾರಿಗೊಳಿಸಿದೆ ಈ ದೇಶ!

ನಮ್ಮನೆ ಮಕ್ಕಳಿಗೆ ನಾವು ಹೊಡೆಯಬಾರದಾ? ನಾವು ನಮ್ಮ ತಂದೆ ತಾಯಿ ಕೈಯಲ್ಲಿ ಎಷ್ಟು ಏಟು ತಿಂದಿದ್ವಿ ಗೊತ್ತಾ? ಅನ್ನುವ ಮಾತಿನ ಜೊತೆಗೆ ಮಕ್ಕಳಿಗೆ ಹೊಡೀಬಾರದು ಎಂದೇ ಹೇಳುವ ಹಲವರು ನಿಮಗೆ ಸಿಕ್ಕಿರಬಹುದು. ಶಾಲೆಯಲ್ಲಿ ಶಿಕ್ಷಕರು ಏಟು ಕೊಟ್ಟಿದ್ದಕ್ಕೆ ಹೆತ್ತವರು ದೂರು ನೀಡಿರುವ ಘಟನೆಗಳನ್ನೂ ನೀವು ಗಮನಿಸಿರಬಹುದು. ಶಿಕ್ಷಕರಂತೂ ಮಕ್ಕಳಿಗೆ ಹೊಡೆಯೋದು ಬಿಡಿ, ಬೈಯ್ಯೋಕೂ ಭಯ ಆಗುತ್ತಪ್ಪಾ ಎಂದು ಉದ್ಘರಿಸುತ್ತಲೇ ಇರುತ್ತಾರೆ. ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಬಗ್ಗೆ ನಾವು ಚರ್ಚಿಸುತ್ತಾ ಇರುವಂತೆ ಇಲ್ಲೊಂದು ದೇಶ ಮಕ್ಕಳಿಗೆ […]

Beating Child ಹೆತ್ತವರು ಮಕ್ಕಳಿಗೆ ಹೊಡೆಯುವಂತಿಲ್ಲ.. ಹೊಸ ಆದೇಶ ಜಾರಿಗೊಳಿಸಿದೆ ಈ ದೇಶ!
ಸಾಧು ಶ್ರೀನಾಥ್​

Updated on: Nov 21, 2020 | 11:53 AM

ನಮ್ಮನೆ ಮಕ್ಕಳಿಗೆ ನಾವು ಹೊಡೆಯಬಾರದಾ? ನಾವು ನಮ್ಮ ತಂದೆ ತಾಯಿ ಕೈಯಲ್ಲಿ ಎಷ್ಟು ಏಟು ತಿಂದಿದ್ವಿ ಗೊತ್ತಾ? ಅನ್ನುವ ಮಾತಿನ ಜೊತೆಗೆ ಮಕ್ಕಳಿಗೆ ಹೊಡೀಬಾರದು ಎಂದೇ ಹೇಳುವ ಹಲವರು ನಿಮಗೆ ಸಿಕ್ಕಿರಬಹುದು. ಶಾಲೆಯಲ್ಲಿ ಶಿಕ್ಷಕರು ಏಟು ಕೊಟ್ಟಿದ್ದಕ್ಕೆ ಹೆತ್ತವರು ದೂರು ನೀಡಿರುವ ಘಟನೆಗಳನ್ನೂ ನೀವು ಗಮನಿಸಿರಬಹುದು. ಶಿಕ್ಷಕರಂತೂ ಮಕ್ಕಳಿಗೆ ಹೊಡೆಯೋದು ಬಿಡಿ, ಬೈಯ್ಯೋಕೂ ಭಯ ಆಗುತ್ತಪ್ಪಾ ಎಂದು ಉದ್ಘರಿಸುತ್ತಲೇ ಇರುತ್ತಾರೆ.

ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಬಗ್ಗೆ ನಾವು ಚರ್ಚಿಸುತ್ತಾ ಇರುವಂತೆ ಇಲ್ಲೊಂದು ದೇಶ ಮಕ್ಕಳಿಗೆ ಹೊಡೆಯಬಾರದು ಎಂಬ ಕಾನೂನು ಹೊರಡಿಸಿದೆ. ಇತರೆ ಜನರು ಬಿಡಿ, ಖುದ್ದು ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನೂ ಈ ದೇಶದ ಕಾನೂನು ಒಪ್ಪುವುದಿಲ್ಲ!

ಈ ಕಾನೂನನ್ನು UK ದಲ್ಲಿ ಜಾರಿಗೊಳಿಸಿದ ಮೊದಲ ದೇಶವಿದು!
ಯುನೈಟೆಡ್ ಕಿಂಗ್ಡಮ್ನ ಸ್ಕಾಟ್ಲ್ಯಾಂಡ್, ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಜಾರಿಗೊಳಿಸಿದ UK ನ ಮೊದಲ ದೇಶ ಅನಿಸಿಕೊಂಡಿರುವ ಸ್ಕಾಟ್ಲ್ಯಾಂಡ್, ವಿಶ್ವದಲ್ಲಿ ಈ ನಿಯಮ ತಂದ 58ನೇ ದೇಶವಾಗಿದೆ. ಮೊತ್ತ ಮೊದಲು 1979ರಲ್ಲಿ ಸ್ವೀಡನ್ ಮಕ್ಕಳಿಗೆ ದೈಹಿಕ ದಂಡನೆ ನೀಡುವುದನ್ನು ನಿಷೇಧಿಸಿತ್ತು.

ಇನ್ನುಮುಂದೆ ಯಾವುದೇ ವಿಧದ ದೈಹಿಕ ದಂಡನೆಯನ್ನು ಮಕ್ಕಳು ಅನುಭವಿಸಬಾರದು. ತನ್ಮೂಲಕ ಮಕ್ಕಳ ಹಕ್ಕುಗಳು ಸಂಪೂರ್ಣವಾಗಿ ಗೌರವಿಸಲ್ಪಡಬೇಕು ಎಂದು ಸ್ಕಾಟ್ಲ್ಯಾಂಡ್ ಮಕ್ಕಳ ಮೇಲಿನ ಕ್ರೌರ್ಯ ತಡೆಯ ರಾಷ್ಟ್ರೀಯ ಮಂಡಳಿ ವಕ್ತಾರ ಜೊಆನ್ ಬ್ಯಾರೆಟ್ ಹೇಳಿದ್ದಾರೆ.

ಇದನ್ನು ಎಲ್ಲರೂ ಒಂದೇಟಿಗೇ ಒಪ್ಪಿಬಿಟ್ಟರು ಅಂದುಕೊಳ್ಳಬೇಡಿ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವರ್ಗವೂ ಸ್ಕಾಟ್ಲ್ಯಾಂಡ್ನಲ್ಲಿದೆ. ಹೆತ್ತವರು ಮಕ್ಕಳಿಗೆ ಶಿಸ್ತು ಕಲಿಸಬೇಕು. ಶಿಸ್ತು ಕಲಿಕೆ ಯಾವತ್ತೂ ಹಿತವಾಗಿ ಇರುವುದಿಲ್ಲ ಎಂದು ಹಲವರು ನಿಯಮವನ್ನು ಆಕ್ಷೇಪಿಸಿದ್ದಾರೆ. ಯುಕೆನ ವೇಲ್ಸ್ ದೇಶವೂ ಈ ನಿಯಮ ಜಾರಿಗೆ ತರಲು ತಯಾರಿಯಲ್ಲಿದ್ದು, 2022ರಲ್ಲಿ ಜಾರಿಗೊಳಿಸುವ ನಿರೀಕ್ಷೆಯಲ್ಲಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us