ಗುಂಡಿನ ದಾಳಿ, ಅಧ್ಯಕ್ಷ ಟ್ರಂಪ್​ರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದ ಭದ್ರತಾಧಿಕಾರಿಗಳು

[lazy-load-videos-and-sticky-control id=”TZ_EDRao1z4″] ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ಶಕ್ತಿಕೇಂದ್ರ ವಾಷಿಂಗ್ಟನ್ ಸಮೀಪ ಗುಂಡಿನ ದಾಳಿ ನಡೆದಿದೆ. ಆ ವೇಳೆ, ಶ್ವೇತ ಭವನದ ಒಳಗೆ ಮಹತ್ವದ ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯ ಸೇವಾ ಭದ್ರತಾಧಿಕಾರಿಗಳು ಸುತ್ತುವರಿದು ಸುರಕ್ಷಿತ ತಾಣಕ್ಕೆ ಕರೆದೊಯ್ದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರನ್ನೂ ಸುರಕ್ಷಿತ ತಾಣಕ್ಕೆ ತಲುಪಿಸಲಾಗಿದೆ ಎಂದು ವೈಟ್​ ಹೌಸ್​ ಮೂಲಗಳು ತಿಳಿಸಿವೆ. ಶ್ವೇತ ಭವನದ ಭದ್ರತೆಗೆ ನಿಯೋಜನೆ ಗೊಂಡಿದ್ದ ಭದ್ರತಾಪಡೆಗಳು ಸ್ವಯಂಚಾಲಿತ ರಫಲ್ಸ್​​ನೊಂದಿಗೆ ಶ್ವೇತಭನವನ್ನ […]

ಗುಂಡಿನ ದಾಳಿ, ಅಧ್ಯಕ್ಷ ಟ್ರಂಪ್​ರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದ ಭದ್ರತಾಧಿಕಾರಿಗಳು
ಡೊನಾಲ್ಡ್​ ಟ್ರಂಪ್​
ಸಾಧು ಶ್ರೀನಾಥ್​

Updated on: Aug 11, 2020 | 12:58 PM

[lazy-load-videos-and-sticky-control id=”TZ_EDRao1z4″]

ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ಶಕ್ತಿಕೇಂದ್ರ ವಾಷಿಂಗ್ಟನ್ ಸಮೀಪ ಗುಂಡಿನ ದಾಳಿ ನಡೆದಿದೆ. ಆ ವೇಳೆ, ಶ್ವೇತ ಭವನದ ಒಳಗೆ ಮಹತ್ವದ ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯ ಸೇವಾ ಭದ್ರತಾಧಿಕಾರಿಗಳು ಸುತ್ತುವರಿದು ಸುರಕ್ಷಿತ ತಾಣಕ್ಕೆ ಕರೆದೊಯ್ದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರನ್ನೂ ಸುರಕ್ಷಿತ ತಾಣಕ್ಕೆ ತಲುಪಿಸಲಾಗಿದೆ ಎಂದು ವೈಟ್​ ಹೌಸ್​ ಮೂಲಗಳು ತಿಳಿಸಿವೆ.

ಶ್ವೇತ ಭವನದ ಭದ್ರತೆಗೆ ನಿಯೋಜನೆ ಗೊಂಡಿದ್ದ ಭದ್ರತಾಪಡೆಗಳು ಸ್ವಯಂಚಾಲಿತ ರಫಲ್ಸ್​​ನೊಂದಿಗೆ ಶ್ವೇತಭನವನ್ನ ಸುತ್ತುವರಿದಿದ್ದಾರೆ. ಇದೇ ವೇಳೆ ಶ್ವೇತ ಭವನದ ಉತ್ತರ ಭಾಗದಲ್ಲಿ ಶಸ್ತ್ರಧಾರಿಯೊಬ್ಬ Secret Service guards ಕಣ್ಣಿಗೆ ಬಿದ್ದಿದ್ದು, ಅವನ ಮೇಲೆ ಗುಂಡಿನ ಮಳೆಗರೆದಿದ್ದಾರೆ.

ಪ್ರಪಂಚ ಅಪಾಯಕಾರಿಯಾಗಿದೆ: ಟ್ರಂಪ್​
ಇನ್ನು ಘಟನೆ ನಂತರ ಸುದ್ದಿಗೋಷ್ಠಿ ಮುಂದುವರಿಸಿದ ಮಾತನಾಡಿರುವ ಟ್ರಂಪ್​ ದಾಳಿ ನಡೆದಿದ್ದು ಶ್ವೇತಭವನದ ಹೊರಗಡೆ. ನನಗೆ ಬೆದರಿಕೆ ಇತ್ತು ಎಂದು ಹೇಳಲಾಗದು. ಆದರೂ ಈ ಪ್ರಪಂಚ ಅಪಾಯಕಾರಿಯಾಗಿದೆ. ಇದು ಯಾವುದೂ ವಿರಳ ಘಟನೆ ಎಂದು ತಳ್ಳಿಹಾಕಲಾಗದು ಎಂದರು.

ನನ್ನ ಭದ್ರತಾಧಿಕಾರಿಗಳು ನಿಜಕ್ಕೂ ಅದ್ಭುತ, ಬೆಸ್ಟ್​ ಬೆಸ್ಟ್​. ಅವರು ತಕ್ಷಣ ನನ್ನ ನೆರವಿಗೆ ಧಾವಿಸಿದ್ದಾರೆ. ಅವರ ಕೈಯಲ್ಲಿ ನಾನು ಸುರಕ್ಷಿತವಾಗಿರಬಲ್ಲೆ ಎಂಬ ನಂಬಿಕೆ ನನಗಿದೆ ಎಂದು ಟ್ರಂಪ್​ ಹೇಳಿದರು.

Published On - 8:46 am, Tue, 11 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us