AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spring Season: ಬಂದ ವಸಂತ; ಋತುಗಳ ರಾಜನನ್ನು ಹೊತ್ತು ತಂದ ಮುಳ್ಳುಹಂದಿ-ಗೂಗಲ್​ ಡೂಡಲ್​ನಿಂದ ಸ್ವಾಗತ

Google Doodle: ಸಮಭಾಜಕ ವೃತ್ತದ ಉತ್ತರಾರ್ಧಗೋಳದಲ್ಲಿ ಇಂದಿನಿಂದ ವಸಂತ ಋತು ಪ್ರಾರಂಭ. ವಸಂತ ಋತುವೆಂದರೆ ಋತುಗಳ ರಾಜ ಎಂದೇ ಹೇಳಲಾಗುತ್ತದೆ. ಗಿಡ-ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತವೆ. ಹೂವು-ಕಾಯಿಗಳನ್ನು ಹೊತ್ತು ನಳನಳಿಸುವ ಕಾಲವಿದು.

Spring Season: ಬಂದ ವಸಂತ; ಋತುಗಳ ರಾಜನನ್ನು ಹೊತ್ತು ತಂದ ಮುಳ್ಳುಹಂದಿ-ಗೂಗಲ್​ ಡೂಡಲ್​ನಿಂದ ಸ್ವಾಗತ
ವಸಂತ ಋತುವಿನ ಆಗಮನಕ್ಕೆ ಗೂಗಲ್ ವಿಶೇಷ ಡೂಡಲ್​
Lakshmi Hegde
|

Updated on:Mar 20, 2021 | 12:04 PM

Share

ಕೆಲವು ವಿಶೇಷ ಸಂದರ್ಭಗಳನ್ನು ಡೂಡಲ್​ ಮೂಲಕ ಆಚರಿಸುವುದು ಸಾಮಾನ್ಯ. ಇತ್ತೀಚೆಗೆ ಮಹಿಳಾ ದಿನಾಚರಣೆಯಂದು ಒಂದು ಸ್ಪೆಶಲ್​ ವಿಡಿಯೋ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿತ್ತು. ಇದೀಗ ವಸಂತ ಋತುವಿನ ಆಗಮನವನ್ನು ಗೂಗಲ್​ ಡೂಡಲ್​ ಸೆಲೆಬ್ರೇಟ್​ ಮಾಡಿದೆ. ಒಂದು ಆಹ್ಲಾದಕರ ಮ್ಯೂಸಿಕ್​ ಜತೆಗೆ ಚೆಂದನೆಯ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಸಮಭಾಜಕ ವೃತ್ತದ ಉತ್ತರಾರ್ಧಗೋಳದಲ್ಲಿ ಇಂದಿನಿಂದ ವಸಂತ ಋತು ಪ್ರಾರಂಭ. ವಸಂತ ಋತುವೆಂದರೆ ಋತುಗಳ ರಾಜ ಎಂದೇ ಹೇಳಲಾಗುತ್ತದೆ. ಗಿಡ-ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತವೆ. ಹೂವು-ಕಾಯಿಗಳನ್ನು ಹೊತ್ತು ನಳನಳಿಸುವ ಕಾಲವಿದು. ಕೋಗಿಲೆಯ ಇಂಪಾದ ಕೂಗು ಆಗಾಗ ಕಿವಿಗೆ ಬೀಳುತ್ತ, ಮನಸನ್ನು ಮುದಗೊಳಿಸುತ್ತಿರುತ್ತದೆ. ಬಿಸಿಲಿನ ತಾಪವಿದ್ದರೂ ಒಂದು ಸಣ್ಣನೆಯ ಸಂಭ್ರಮವನ್ನು ಹೊತ್ತುತರುವ ಋತು ಇದು. ಕವಿಗಳಂತೂ ವಸಂತ ಋತುವನ್ನು ಈಗಾಗಲೇ ತುಂಬ ವರ್ಣಿಸಿಬಿಟ್ಟಿದ್ದಾರೆ.

ಇಂದು ಪ್ರಾರಂಭವಾಗುವ ವಸಂತ ಋತು ಜೂನ್​ 20ರವರೆಗೆ ಇರುತ್ತದೆ. ಈ ವಸಂತನ ಆಗಮನಕ್ಕೆ ಗೂಗಲ್​ ಮುಳ್ಳುಹಂದಿಯ ಮೂಲಕ ಶುಭಕೋರಿದೆ. ಮುಳ್ಳು ಹಂದಿ ತನ್ನ ದೇಹದಲ್ಲಿ ಮುಳ್ಳುಗಳನ್ನು ಹೊಂದಿರುತ್ತದೆ. ಆದರೆ ಈ ವಸಂತ ಋತುವನ್ನು ಹೊತ್ತು ತಂದ ಮುಳ್ಳುಹಂದಿಯ ಮೈಮೇಲೆ ಬರೀ ಗುಲಾಬಿ, ನೀಲಿ, ಹಳದಿ ಹೂವುಗಳು, ಹಸಿರೇ ತುಂಬಿದೆ. ಅಷ್ಟೇ ಅಲ್ಲ, ಜೇನುನೊಣಗಳು ಮಕರಂದ ಹೀರುತ್ತಿರುವುದನ್ನೂ ಎನಿಮೇಶನ್​ ಮಾಡಲಾಗಿದೆ. ಒಂದು ನಿಮಿಷಗಳ ವಿಡಿಯೋ ಡೂಡಲ್​ ಇದಾಗಿದೆ. ಇಷ್ಟುದಿನಗಳ ಚಳಿಗಾಲದಲ್ಲಿ, ಚಳಿಗೆ ಹೆದರಿ ಮುದುಡಿ ಮಲಗುವ ಮುಳ್ಳುಹಂದಿಗಳು ವಸಂತ ಋತುವಿನ ಬಿಸಿಲು ಶುರುವಾಗುತ್ತಿದ್ದಂತೆ ಮತ್ತೆ ಚಟುವಟಿಕೆ ಪ್ರಾರಂಭ ಮಾಡುತ್ತವೆ. ಇದೇ ಕಾರಣಕ್ಕೆ ಮುಳ್ಳುಹಂದಿಯ ಮೈಮೇಲೆ ವಿವಿಧ ಹೂವುಗಳನ್ನು ಚಿತ್ರಿಸಿ, ವಸಂತ ಋತುವಿಗೆ ಸ್ವಾಗತಕೋರಿದೆ.

ಸೂರ್ಯ ಭೂಮಿಯ ಸಮಭಾಜಕ ವೃತ್ತಕ್ಕೆ ನೇರವಾಗಿ ಬಂದಾಗ ಈ ವಸಂತ ವಿಷುವತ್​ ಸಂಕ್ರಾಂತಿ ಸಂಭವಿಸುತ್ತದೆ. ಆಗ ಉತ್ತರಾರ್ಧಗೋಳದಲ್ಲಿ ಬೇಸಿಗೆ ಶುರುವಾಗುತ್ತದೆ. ಹಗಲಿನ ಅವಧಿ ಜಾಸ್ತಿಯಿದ್ದು, ರಾತ್ರಿಯ ಅವಧಿ ಕಡಿಮೆ ಇರುತ್ತದೆ. ಅದಕ್ಕೆ ವಿರುದ್ಧವಾಗಿ ದಕ್ಷಿರ್ಣಾರ್ಧಗೋಳದಲ್ಲಿ ಶರದ್​ ಋತು ಶುರುವಾಗಿ, ಹಗಲು-ರಾತ್ರಿಗಳ ಅವಧಿ ಒಂದೇ ಇರುತ್ತದೆ.

ಇದನ್ನೂ ಓದಿ: India vs England: ರಾಹುಲ್ ಮೇಲೆ ವಿರಾಟ್ ನಂಬಿಕೆ! ನಿರ್ಣಾಯಕ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಾಗುತ್ತಾ ಬದಲಾವಣೆ?

ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?

Published On - 11:23 am, Sat, 20 March 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ