AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spring Season: ಬಂದ ವಸಂತ; ಋತುಗಳ ರಾಜನನ್ನು ಹೊತ್ತು ತಂದ ಮುಳ್ಳುಹಂದಿ-ಗೂಗಲ್​ ಡೂಡಲ್​ನಿಂದ ಸ್ವಾಗತ

Google Doodle: ಸಮಭಾಜಕ ವೃತ್ತದ ಉತ್ತರಾರ್ಧಗೋಳದಲ್ಲಿ ಇಂದಿನಿಂದ ವಸಂತ ಋತು ಪ್ರಾರಂಭ. ವಸಂತ ಋತುವೆಂದರೆ ಋತುಗಳ ರಾಜ ಎಂದೇ ಹೇಳಲಾಗುತ್ತದೆ. ಗಿಡ-ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತವೆ. ಹೂವು-ಕಾಯಿಗಳನ್ನು ಹೊತ್ತು ನಳನಳಿಸುವ ಕಾಲವಿದು.

Spring Season: ಬಂದ ವಸಂತ; ಋತುಗಳ ರಾಜನನ್ನು ಹೊತ್ತು ತಂದ ಮುಳ್ಳುಹಂದಿ-ಗೂಗಲ್​ ಡೂಡಲ್​ನಿಂದ ಸ್ವಾಗತ
ವಸಂತ ಋತುವಿನ ಆಗಮನಕ್ಕೆ ಗೂಗಲ್ ವಿಶೇಷ ಡೂಡಲ್​
Lakshmi Hegde
|

Updated on:Mar 20, 2021 | 12:04 PM

Share

ಕೆಲವು ವಿಶೇಷ ಸಂದರ್ಭಗಳನ್ನು ಡೂಡಲ್​ ಮೂಲಕ ಆಚರಿಸುವುದು ಸಾಮಾನ್ಯ. ಇತ್ತೀಚೆಗೆ ಮಹಿಳಾ ದಿನಾಚರಣೆಯಂದು ಒಂದು ಸ್ಪೆಶಲ್​ ವಿಡಿಯೋ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿತ್ತು. ಇದೀಗ ವಸಂತ ಋತುವಿನ ಆಗಮನವನ್ನು ಗೂಗಲ್​ ಡೂಡಲ್​ ಸೆಲೆಬ್ರೇಟ್​ ಮಾಡಿದೆ. ಒಂದು ಆಹ್ಲಾದಕರ ಮ್ಯೂಸಿಕ್​ ಜತೆಗೆ ಚೆಂದನೆಯ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಸಮಭಾಜಕ ವೃತ್ತದ ಉತ್ತರಾರ್ಧಗೋಳದಲ್ಲಿ ಇಂದಿನಿಂದ ವಸಂತ ಋತು ಪ್ರಾರಂಭ. ವಸಂತ ಋತುವೆಂದರೆ ಋತುಗಳ ರಾಜ ಎಂದೇ ಹೇಳಲಾಗುತ್ತದೆ. ಗಿಡ-ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತವೆ. ಹೂವು-ಕಾಯಿಗಳನ್ನು ಹೊತ್ತು ನಳನಳಿಸುವ ಕಾಲವಿದು. ಕೋಗಿಲೆಯ ಇಂಪಾದ ಕೂಗು ಆಗಾಗ ಕಿವಿಗೆ ಬೀಳುತ್ತ, ಮನಸನ್ನು ಮುದಗೊಳಿಸುತ್ತಿರುತ್ತದೆ. ಬಿಸಿಲಿನ ತಾಪವಿದ್ದರೂ ಒಂದು ಸಣ್ಣನೆಯ ಸಂಭ್ರಮವನ್ನು ಹೊತ್ತುತರುವ ಋತು ಇದು. ಕವಿಗಳಂತೂ ವಸಂತ ಋತುವನ್ನು ಈಗಾಗಲೇ ತುಂಬ ವರ್ಣಿಸಿಬಿಟ್ಟಿದ್ದಾರೆ.

ಇಂದು ಪ್ರಾರಂಭವಾಗುವ ವಸಂತ ಋತು ಜೂನ್​ 20ರವರೆಗೆ ಇರುತ್ತದೆ. ಈ ವಸಂತನ ಆಗಮನಕ್ಕೆ ಗೂಗಲ್​ ಮುಳ್ಳುಹಂದಿಯ ಮೂಲಕ ಶುಭಕೋರಿದೆ. ಮುಳ್ಳು ಹಂದಿ ತನ್ನ ದೇಹದಲ್ಲಿ ಮುಳ್ಳುಗಳನ್ನು ಹೊಂದಿರುತ್ತದೆ. ಆದರೆ ಈ ವಸಂತ ಋತುವನ್ನು ಹೊತ್ತು ತಂದ ಮುಳ್ಳುಹಂದಿಯ ಮೈಮೇಲೆ ಬರೀ ಗುಲಾಬಿ, ನೀಲಿ, ಹಳದಿ ಹೂವುಗಳು, ಹಸಿರೇ ತುಂಬಿದೆ. ಅಷ್ಟೇ ಅಲ್ಲ, ಜೇನುನೊಣಗಳು ಮಕರಂದ ಹೀರುತ್ತಿರುವುದನ್ನೂ ಎನಿಮೇಶನ್​ ಮಾಡಲಾಗಿದೆ. ಒಂದು ನಿಮಿಷಗಳ ವಿಡಿಯೋ ಡೂಡಲ್​ ಇದಾಗಿದೆ. ಇಷ್ಟುದಿನಗಳ ಚಳಿಗಾಲದಲ್ಲಿ, ಚಳಿಗೆ ಹೆದರಿ ಮುದುಡಿ ಮಲಗುವ ಮುಳ್ಳುಹಂದಿಗಳು ವಸಂತ ಋತುವಿನ ಬಿಸಿಲು ಶುರುವಾಗುತ್ತಿದ್ದಂತೆ ಮತ್ತೆ ಚಟುವಟಿಕೆ ಪ್ರಾರಂಭ ಮಾಡುತ್ತವೆ. ಇದೇ ಕಾರಣಕ್ಕೆ ಮುಳ್ಳುಹಂದಿಯ ಮೈಮೇಲೆ ವಿವಿಧ ಹೂವುಗಳನ್ನು ಚಿತ್ರಿಸಿ, ವಸಂತ ಋತುವಿಗೆ ಸ್ವಾಗತಕೋರಿದೆ.

ಸೂರ್ಯ ಭೂಮಿಯ ಸಮಭಾಜಕ ವೃತ್ತಕ್ಕೆ ನೇರವಾಗಿ ಬಂದಾಗ ಈ ವಸಂತ ವಿಷುವತ್​ ಸಂಕ್ರಾಂತಿ ಸಂಭವಿಸುತ್ತದೆ. ಆಗ ಉತ್ತರಾರ್ಧಗೋಳದಲ್ಲಿ ಬೇಸಿಗೆ ಶುರುವಾಗುತ್ತದೆ. ಹಗಲಿನ ಅವಧಿ ಜಾಸ್ತಿಯಿದ್ದು, ರಾತ್ರಿಯ ಅವಧಿ ಕಡಿಮೆ ಇರುತ್ತದೆ. ಅದಕ್ಕೆ ವಿರುದ್ಧವಾಗಿ ದಕ್ಷಿರ್ಣಾರ್ಧಗೋಳದಲ್ಲಿ ಶರದ್​ ಋತು ಶುರುವಾಗಿ, ಹಗಲು-ರಾತ್ರಿಗಳ ಅವಧಿ ಒಂದೇ ಇರುತ್ತದೆ.

ಇದನ್ನೂ ಓದಿ: India vs England: ರಾಹುಲ್ ಮೇಲೆ ವಿರಾಟ್ ನಂಬಿಕೆ! ನಿರ್ಣಾಯಕ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಾಗುತ್ತಾ ಬದಲಾವಣೆ?

ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?

Published On - 11:23 am, Sat, 20 March 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!