ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?

ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆ ಸೇರಿದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಮನೆಯಲ್ಲಿ ಜಾಲಿಯಾಗಿರೋದು. ಈಗ ಅವರ ಕನಸಲ್ಲಿ ರಾಜಕುಮಾರನೋರ್ವ ಬಂದು ಕಾಡುತ್ತಿದ್ದಾನೆ.

ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?
ಶುಭಾ ಫೂಂಜಾ
Follow us
| Updated By: Skanda

Updated on: Mar 20, 2021 | 10:51 AM

ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆ ಸೇರಿದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಮನೆಯಲ್ಲಿ ಜಾಲಿಯಾಗಿರೋದು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶುಭಾ ಹಾಯಾಗಿರುತ್ತಾರೆ. ಈಗ ಶುಭಾಗೆ ಮನೆಯಲ್ಲಿ ಸಮಸ್ಯೆ ಒಂದು ಕಾಡುತ್ತಿದೆ. ಕನಸಲ್ಲಿ ರಾಜಕುಮಾರನೋರ್ವ ಬಂದು ಕಾಡುತ್ತಿದ್ದಾನೆ! ಈ ಬಗ್ಗೆ ಅವರು ತುಂಬಾನೇ ತಲೆಕೆಡಿಸಿಕೊಂಡಿದ್ದಾರೆ. ಮನೆ ಮಂದಿ ಜತೆಗೆಲ್ಲ ಈ ಬಗ್ಗೆ ಹೇಳಿಕೊಂಡಿದ್ದಾರೆ. ಶುಭಾ ಅವರಿಗೆ ನಿತ್ಯ ಕನಸಲ್ಲಿ ಅವರನ್ನು ಮದುವೆ ಆಗುವ ಹುಡುಗ ಸುಮಂತ್​ ಬರುತ್ತಿದ್ದಾರಂತೆ. ಈ ಬಗ್ಗೆ ಹೇಳಿಕೊಂಡಿರುವ ಅವರು, ನನಗೆ ನಿನ್ನೆ ಒಂದು ಕನಸು ಬಿದ್ದಿತ್ತು. ಆ ಕನಸಲ್ಲಿ ಸುಮಂತ್​ ಬಂದಿದ್ದರು. ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದರು. ಮನೆಯಲ್ಲಿ ಅವರನ್ನು ಸುತ್ತಾಡಿಸಿದ್ದೆ. ಆದರೆ, ನೋಡಿದ್ರೆ ಒಂದೇ ಕ್ಷಣಕ್ಕೆ ಅದು ಹಳ್ಳಿ ಮನೆಯಾಗಿಬಿಟ್ಟಿತ್ತು. ಎಲ್ಲಾ ಸ್ಪರ್ಧಿಗಳು ಸಣ್ಣ ಸಣ್ಣ ಗೂಡಲ್ಲಿ ಅಡಗಿ ಕೂತಿದ್ದರು ಎಂದು ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಮಂಜು ಪಾವಗಡ, ನಾವು ಯಾರನ್ನು ಹೆಚ್ಚು ನೆನಪಿಸಿಕೊಳ್ಳುತ್ತೇವೋ ಅವರೇ ಕನಸಲ್ಲಿ ಬರುತ್ತಾರೆ ಎಂದಿದ್ದಾರೆ.

ಇದಾದ ಸ್ವಲ್ಪ ಹೊತ್ತಿನ ನಂತರ ಮತ್ತೆ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ ಶುಭಾ. ನನಗೆ ಸುಮಂತ್​ ಕೆಲ ದಿನಗಳಿಂದ ಕನಸಲ್ಲಿ ಬರುತ್ತಿದ್ದಾರೆ. ಆದರೆ, ಕನಸಲ್ಲಿ ಅವರನ್ನು ತಲುಪೋಕೆ ಸಾಧ್ಯವಾಗುತ್ತಿಲ್ಲ. ಏಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ ಶುಭಾ. ಅವರು ಆರಾಮಾಗೇ ಇರುತ್ತಾರೆ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿಕೊಂಡಿದ್ದಾರೆ.

ಹಾಗೆಲ್ಲ ಮುಟ್ಬೇಡಿ ಅಂದ್ರು ವೈಷ್ಣವಿ ವೈಷ್ಣವಿ ಮನೆಯಲ್ಲಿ ತುಂಬಾನೇ ಸೈಲೈಂಟ್​. ಅವರು ಬೇರೆಯವರ ಮೇಲೆ ರೇಗಾಡಿದ ಉದಾಹರಣೆ ಕಡಿಮೆ. ಅವರು, ಯಾರ ತಂಟೆಗೂ ಹೋದವರಲ್ಲ. ಈ ವಿಚಾರ ವೀಕೆಂಡ್​ನಲ್ಲಿ ಕೂಡ ಚರ್ಚೆಗೆ ಕಾರಣವಾಗಿದ್ದಿದೆ. ಈ ಮಧ್ಯೆ, ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಯಾರಿಗೆ? ಏಕೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ 19ನೇ ದಿನ. ಎಲ್ಲರೂ ಬೆಳಗ್ಗೆ ಎದ್ದು ಅವರವರ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ಶುಭಾ ಪೂಂಜಾ ಹಾಗೂ ವೈಷ್ಣವಿ ಒಟ್ಟಾಗಿ ಮಾತನಾಡುತ್ತಿದ್ದರು. ವೈಷ್ಣವಿ ಆಗತಾನೇ ಸ್ನಾನ ಮಾಡಿ ಬಂದಿದ್ದರಿಂದ ಅವರಿಗೆ ತೊಂದರೆ ಕೊಡೋ ಕೆಲಸ ಮಾಡುತ್ತಿದ್ದರು. ಈ ಕೀಟಲೆ ಮುಂದುವರಿದೇ ಇತ್ತು. ವೈಷ್ಣವಿ ಸಮೀಪ ಸೈಲೆಂಟ್​ ಆಗಿ ಬಂದ ಶುಭಾ ತುಂಬಾನೇ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ವರ್ಕೌಟ್​ ಆಗಲೇ ಇಲ್ಲ. ಏಕೆಂದರೆ, ವೈಷ್ಣವಿ ಅವರಿಗೆ ಅದು ತಾಗಲೇ ಇಲ್ಲ. ಆಗ, ವೈಷ್ಣವಿ ಹೀಗೆ ಮುಟ್ತಾ ಇದ್ರೆ ಕಚ್ಚಿ ಬಿಡುತ್ತೇನೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರ ಮುಚ್ಚಿಟ್ಟಿದ್ದ ವಿಶೇಷ ಪ್ರತಿಭೆಯನ್ನು ಹೊರ ಹಾಕಿದ ಶಮಂತ್​