AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನ ಸರ್ಕಾರದ ಮಾಧ್ಯಮ-ಮಾಹಿತಿ ಕೇಂದ್ರದ ಉನ್ನತಾಧಿಕಾರಿಯನ್ನು ಹತ್ಯೆಗೈದ ತಾಲಿಬಾನ್ ಉಗ್ರರು..

ಇತ್ತೀಚೆಗೆ ತಾಲಿಬಾನ್​ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಕಾದಾಟ ಹೆಚ್ಚಾಗಿದೆ. ಹಿಂಸಾಚಾರವೂ ಮಿತಿಮೀರಿದೆ. ಉಗ್ರರಿಂದ ರಾಕೆಟ್​ ದಾಳಿ ಅದಕ್ಕೆ ಪ್ರತಿಯಾಗಿ ವಾಯುಸೇನೆಗಳ ಏರ್​ಸ್ಟ್ರೈಕ್​ ನಡೆಯುತ್ತಲೇ ಇದೆ.

ಅಫ್ಘಾನಿಸ್ತಾನ ಸರ್ಕಾರದ ಮಾಧ್ಯಮ-ಮಾಹಿತಿ ಕೇಂದ್ರದ ಉನ್ನತಾಧಿಕಾರಿಯನ್ನು ಹತ್ಯೆಗೈದ ತಾಲಿಬಾನ್ ಉಗ್ರರು..
ಮೃತ ಅಧಿಕಾರಿ
TV9 Web
| Edited By: |

Updated on: Aug 06, 2021 | 4:51 PM

Share

ಕಾಬೂಲ್​: ಅಫ್ಘಾನಿಸ್ತಾನ ಸರ್ಕಾರ (Afghanistan Government)ದ ಉನ್ನತ ಮಾಧ್ಯಮ ಮತ್ತು ಮಾಹಿತಿ ಅಧಿಕಾರಿಯನ್ನು ಕಾಬೂಲ್​​ನಲ್ಲಿ, ತಾಲಿಬಾನ್​ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಭಯೋತ್ಪಾದಕ ಸಂಘಟನೆಯ ವಕ್ತಾರ ತಿಳಿಸಿದ್ದಾರೆ. ಸರ್ಕಾರದ ಮಾಧ್ಯಮ ಮತ್ತು ಮಾಹಿತಿ ಕೇಂದ್ರ (GMIC) ಮುಖ್ಯಸ್ಥ ದವಾ ಖಾನ್​ ಮಿನಪಾಲ್​ ಹತ್ಯೆಯಾದ ಅಧಿಕಾರಿಯಾಗಿದ್ದಾರೆ. ಇವರು ಹತ್ಯೆಯಾಗಿದ್ದನ್ನು ಫೆಡರಲ್​ ಇಂಟೀರಿಯರ್​ ಸಚಿವಾಲಯ ಕೂಡ ದೃಢಪಡಿಸಿದೆ. ಆದರೆ ಹತ್ಯೆ ಮಾಡಿದ್ದು ಯಾರು ಎಂಬುದನ್ನು ಸಚಿವಾಲಯ ತಿಳಿಸಿಲ್ಲ.

ಮಿನಪಾಲ್​ ಅವರು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್​ ಘನಿ ಅವರ ವಕ್ತಾರರಾಗಿಯೂ ಕೆಲಸ ಮಾಡಿದ್ದರು. ಮಿನಪಾಲ್​ ಇನ್ನೂ ಯುವಕನಾಗಿದ್ದು, ಶತ್ರುಗಳಿಗೆ ಸದಾ ದುಃಸ್ವಪ್ನದಂತೆ ಇದ್ದರು. ಅಫ್ಘಾನ್​ ಸರ್ಕಾರದ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾಗಿದ್ದರು ಎಂದು ಆಂತರಿಕ ಸಚಿವಾಲಯದ ವಕ್ತಾರ, ಮಿರ್ವೈಸ್​ ಸ್ಟಾನಿಕ್​ಜಾಯ್ ಹೇಳಿದ್ದಾರೆ.

ಇತ್ತೀಚೆಗೆ ತಾಲಿಬಾನ್​ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಕಾದಾಟ ಹೆಚ್ಚಾಗಿದೆ. ಹಿಂಸಾಚಾರವೂ ಮಿತಿಮೀರಿದೆ. ಉಗ್ರರಿಂದ ರಾಕೆಟ್​ ದಾಳಿ ಅದಕ್ಕೆ ಪ್ರತಿಯಾಗಿ ವಾಯುಸೇನೆಗಳ ಏರ್​ಸ್ಟ್ರೈಕ್​ ನಡೆಯುತ್ತಲೇ ಇದೆ. ಉದಾರವಾದ ಇಸ್ಲಾಮಿಕ್​ ಆಡಳಿತ ಬೆಂಬಲಿಸುವ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತರು, ಅಧಿಕಾರಶಾಹಿಗಳು, ನ್ಯಾಯಾಧೀಶರು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ತಾಲಿಬಾನ್​ ಉಗ್ರರು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ, ಮೈದಾನ್ ವಾರ್ಡಕ್ ಪ್ರಾಂತ್ಯದ ಸಯ್ಯದ್ ಜಿಲ್ಲಾ ಗವರ್ನರ್​​ನನ್ನೂ ಕೂಡ ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳುವ ಹಾಗೆ ರಾಮಮಂದಿರದ ಲೋಕಾರ್ಪಣೆ 2023 ರಲ್ಲಿ ಆಗುತ್ತದೆಯೇ?

57 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ವೇಳೆಯೇ ಕೈಕೊಟ್ಟ ಮೋಟಾರ್! ಅಧಿಕಾರಿಗಳ ವಿರುದ್ಧ ಎಚ್ ಡಿ ರೇವಣ್ಣ ಗರಂ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್