Video: ಶಸ್ತ್ರಾಸ್ತ್ರ ಸಹಿತವಾಗಿಯೇ ಸಂಸತ್ತು ಪ್ರವೇಶಿಸಿ, ಎಲ್ಲೆಂದರಲ್ಲಿ ಕುಳಿತ ತಾಲಿಬಾನ್​ ಉಗ್ರರು; ಅಧ್ಯಕ್ಷರ ಭವನದಲ್ಲೂ ಕಾರುಬಾರು

Taliban: ಭಾನುವಾರ (ಆಗಸ್ಟ್​ 15) ಇಡೀ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್​ ಉಗ್ರರ ಕೈವಶವಾಗಿದೆ. ಅಲ್ಲಿನ ಸರ್ಕಾರ ಬಿದ್ದು, ಅಧ್ಯಕ್ಷ ಅಶ್ರಫ್​ ಘನಿ ಈಗಾಗಲೇ ದೇಶ ಬಿಟ್ಟಾಗಿದೆ.

Video: ಶಸ್ತ್ರಾಸ್ತ್ರ ಸಹಿತವಾಗಿಯೇ ಸಂಸತ್ತು ಪ್ರವೇಶಿಸಿ, ಎಲ್ಲೆಂದರಲ್ಲಿ ಕುಳಿತ ತಾಲಿಬಾನ್​ ಉಗ್ರರು; ಅಧ್ಯಕ್ಷರ ಭವನದಲ್ಲೂ ಕಾರುಬಾರು
ಅಫ್ಘಾನಿಸ್ತಾನ ಅಧ್ಯಕ್ಷರ ಭವನದಲ್ಲಿ ಶಸ್ತ್ರಾಸ್ತ್ರ ಸಹಿತರಾಗಿ ಕುಳಿತ ತಾಲಿಬಾನ್​ ಉಗ್ರರು
Follow us
| Updated By: Lakshmi Hegde

Updated on:Aug 16, 2021 | 8:29 PM

ಅಫ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ಉಗ್ರ (Taliban Terrorists)ರ ಕೈವಶದಲ್ಲಿದೆ. ಅಲ್ಲಿನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ (Ashraf Ghani) ಈಗಾಗಲೇ ದೇಶ ಬಿಟ್ಟಾಗಿದೆ. ಈಗಂತೂ ಅಫ್ಘಾನಿಸ್ತಾನ ಅಧ್ಯಕ್ಷರ ಭವನ, ಸಂಸತ್ತುಗಳಲ್ಲೆಲ್ಲ ತಾಲಿಬಾನ್​ ಉಗ್ರರದ್ದೇ ಕಾರುಬಾರು. ಕೈಯಲ್ಲಿ ಬಂದೂಕಿನಿಂತಹ ಶಸ್ತ್ರಾಸ್ತ್ರ ಹಿಡಿದ ಉಗ್ರರು ಅಧ್ಯಕ್ಷರ ಭವನ, ಸಂಸತ್ತಿನ ಆಸನಗಳಲ್ಲಿ ಕುಳಿತಿರುವ ಫೋಟೋ-ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ.

ಕಳೆದ ಎರಡು ವಾರಗಳ ಹಿಂದಷ್ಟೇ ಅಫ್ಘಾನ್​ ರಾಜಕೀಯ ನಾಯಕರಿಗಾಗಿ ಮೀಸಲಿದ್ದ ಸಂಸತ್ತನ್ನು ಇದೀಗ ತಾಲಿಬಾನ್ ಉಗ್ರರು ಶಸ್ತ್ರಾಸ್ತ್ರ ಸಮೇತ ಪ್ರವೇಶಿಸಿದ್ದಾರೆ. ಇಷ್ಟು ದಿನ ಅಶ್ರಫ್​ ಘನಿ ಅಲ್ಲಿ ಜಂಟಿ ಅಧಿವೇಶನಗಳನ್ನು ನಡೆಸುತ್ತಿದ್ದರು. ಈಗ ತಾಲಿಬಾನ್​ ಉಗ್ರರು ಒಟ್ಟೊಟ್ಟಿಗೆ ಕುಳಿತು ಮೊಬೈಲ್​ ನೋಡುತ್ತಿದ್ದಾರೆ. ತುಂಬ ಖುಷಿಯಿಂದ ಮಾತುಕತೆ ನಡೆಸುತ್ತಿದ್ದಾರೆ. ಸಂಸತ್ತಿನ ಕುರ್ಚಿಗಳ ಮೇಲೆ ತಾಲಿಬಾನ್ ಉಗ್ರರು ಶಸ್ತ್ರಾಸ್ತ್ರ ಸಮೇತರಾಗಿ ಕುಳಿತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಅಫ್ಘಾನ್​ ಅಧ್ಯಕ್ಷರ ಕಾಬೂಲ್​ ಮತ್ತು ಅಫ್ಘಾನಿಸ್ತಾನ ಎರಡೂ ಕಡೆ ಇರುವ ಭವನಗಳೂ ತಾಲಿಬಾನ್​ ಉಗ್ರರ ವಶವಾಗಿದೆ. ಭಾನುವಾರ (ಆಗಸ್ಟ್​ 15) ಇಡೀ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್​ ಉಗ್ರರ ಕೈವಶವಾಗಿದೆ. ಅಲ್ಲಿನ ಸರ್ಕಾರ ಬಿದ್ದು, ಅಧ್ಯಕ್ಷ ಅಶ್ರಫ್​ ಘನಿ ಈಗಾಗಲೇ ದೇಶ ಬಿಟ್ಟಾಗಿದೆ. ಸದ್ಯಕ್ಕಂತೂ ತಾಲಿಬಾನ್ ಉಗ್ರರು ಪೂರ್ತಿಯಾಗಿ ಶಸ್ತ್ರಾಸ್ತ್ರಗಳೊಂದಿಗೆ ಇಡೀ ಕಾಬೂಲ್​​ನಲ್ಲಿ ತಿರುಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮುಕ್ತ, ಅಂತರ್ಗತ ಇಸ್ಲಾಮಿಕ್ ಸರ್ಕಾರ ರಚನೆ ಮಾಡುವ ಸಂಬಂಧ ಮಾತುಕತೆ, ಚರ್ಚೆಗಳನ್ನು ನಡೆಸುತ್ತೇವೆ ಎಂದು ತಾಲಿಬಾನ್​ ವಕ್ತಾರ ಸುಹೇಲ್​ ಶಹೀನ್​ ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ನೆರವು: ಸರ್ಕಾರದ ಭರವಸೆ

ಅಫ್ಘನ್​ಗಳು ಪ್ರಾಣಭಯದಿಂದ ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ, ಅಲ್ಲಿನ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ

(Taliban have entered the Parliament of Afghanistan with Weapons)

Published On - 8:27 pm, Mon, 16 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ