AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Afghanistan Crisis: ಅಪಾಯ ಪರಿಸ್ಥಿತಿಯಿರುವ ಕಾಬೂಲ್​​ನಲ್ಲಿ ಇನ್ನೂ ಇದ್ದಾರೆ 200 ಮಂದಿ ಭಾರತೀಯರು; ರಕ್ಷಣೆಯೇ ದೊಡ್ಡ ಸವಾಲು

Kabul Airport: ಇನ್ನೊಂದೆಡೆ ಅಫ್ಘಾನಿಸ್ತಾನ ವಾಯುಪ್ರದೇಶಗಳನ್ನು ಬಂದ್​ ಮಾಡಲಾಗಿದ್ದರಿಂದ ಯುಎಸ್​​ನಿಂದ ಭಾರತಕ್ಕೆ ಬರುತ್ತಿರುವ ಏರ್​ ಇಂಡಿಯಾ ವಿಮಾನಗಳು ಪರ್ಯಾಯ ಮಾರ್ಗ ಹಿಡಿಯುವಂತಾಗಿದೆ ಎಂದೂ ಹೇಳಲಾಗಿದೆ.

Afghanistan Crisis: ಅಪಾಯ ಪರಿಸ್ಥಿತಿಯಿರುವ ಕಾಬೂಲ್​​ನಲ್ಲಿ ಇನ್ನೂ ಇದ್ದಾರೆ 200 ಮಂದಿ ಭಾರತೀಯರು; ರಕ್ಷಣೆಯೇ ದೊಡ್ಡ ಸವಾಲು
ಕಾಬೂಲ್​ ಏರ್​ಪೋರ್ಟ್​ನಲ್ಲಿ ತಾಲಿಬಾನ್ ಉಗ್ರರು (ಚಿತ್ರಕೃಪೆ-ಪಿಟಿಐ)
TV9 Web
| Edited By: |

Updated on:Aug 16, 2021 | 6:52 PM

Share

ದೆಹಲಿ: ಅಫ್ಘಾನಿಸ್ತಾನ ಇದೀಗ ತಾಲಿಬಾನ್​ ಉಗ್ರರ ವಶಕ್ಕೆ ಸೇರ್ಪಡೆಯಾಗಿದೆ. ಉಗ್ರರ ವಶದಲ್ಲಿರುವ ಅಫ್ಘಾನ್​​ನಿಂದ ಭಾರತ ಸೇರಿ ಹಲವು ದೇಶಗಳ ಜನರು ತಮ್ಮ ದೇಶಗಳಿಗೆ ಮರಳುತ್ತಿದ್ದಾರೆ. ನಿನ್ನೆ ಅಫ್ಘಾನಿಸ್ತಾನದಿಂದ 129 ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ವಿಮಾನ ಭಾರತಕ್ಕೆ ತಲುಪಿದೆ. ಅಫ್ಘಾನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಭಾರತೀಯರನ್ನು ಭಾರತಕ್ಕೆ ಕಳಿಸಲು ಎಲ್ಲ ವ್ಯವಸ್ಥೆಗಳನ್ನೂ ಮಾಡುತ್ತಿದೆ. ಆದರೆ ಇನ್ನೂ ಸುಮಾರು 200 ಭಾರತೀಯರು ಕಾಬೂಲ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿಯೇ ಉಳಿದಿದ್ದು, ಅವರ ರಕ್ಷಣೆಯು ತುರ್ತಾಗಿ ಆಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ಉಗ್ರರ ಕೈವಶ ಆಗುತ್ತಿದ್ದಂತೆ ಇಂದು ಕಾಬೂಲ್​ ಏರ್​ಪೋರ್ಟ್​​ನಲ್ಲಿ ಜನಸಾಗರವೇ ಇತ್ತು. ಸಾವಿರಾರು ಜನರು ಅಲ್ಲಿಂದ, ಬೇರೆಡೆಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಇಂದು ಕಾಬೂಲ್​​ನಲ್ಲಿ ಗುಂಡಿನ ದಾಳಿ ನಡೆದು ಐವರ ಮೃತಪಟ್ಟ ಘಟನೆಯೂ ನಡೆದಿದೆ. ಈ ಮಧ್ಯೆ ಭಾರತದ ವಿಮಾನವೊಂದು ಕಾಬೂಲ್​ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಅದರಲ್ಲಿ ಸುಮಾರು 200 ಜನರು ಭಾರತಕ್ಕೆ ವಾಪಸ್​ ಆಗಬೇಕಿದೆ. ಹೀಗೆ ಕಾಬೂಲ್​​ನಲ್ಲಿ ಉಳಿದುಹೋದವರಲ್ಲಿ ಸಾಮಾನ್ಯ ಜನರಷ್ಟೇ ಅಲ್ಲ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿ, ಅರೆಸೇನಾ ಪಡೆಯ ಸೈನಿಕರೂ ಇದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಮುಖ್ಯವಾಗಿ ಸುಮಾರು 100 ಮಂದಿ ಇಂಡೋ-ಟಿಬೆಟಿಯನ್​ ಪೊಲೀಸರು ಇದ್ದಾರೆ ಎನ್ನಲಾಗಿದೆ. ಇವರೆಲ್ಲ ಅಫ್ಘಾನಿಸ್ತಾನದಲ್ಲಿ ಭಾರತದ ಮಿಷನ್​ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು.

ಕಾಬೂಲ್​ ನಗರದಲ್ಲಿ ತಾಲಿಬಾನ್​ ಉಗ್ರರು ಕರ್ಫ್ಯೂ ಹೇರಿದ್ದಾರೆ. ಅಲ್ಲಿ ದುಗುಡ ಸೃಷ್ಟಿಸುವ ವಾತಾವರಣ ಇದ್ದು, ಜೀವ ಉಳಿಸಿಕೊಂಡು ಬರುವುದೇ ದೊಡ್ಡ ಸವಾಲು ಎಂಬಂತಾಗಿದೆ. ಈ ಮಧ್ಯೆಯೂ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್​ ಕರೆತರುವ ಬಗ್ಗೆ ಸಹಜವಾಗಿಯೇ ಕಳವಳ ವ್ಯಕ್ತವಾಗಿದೆ.

ಇನ್ನೊಂದೆಡೆ ಅಫ್ಘಾನಿಸ್ತಾನ ವಾಯುಪ್ರದೇಶಗಳನ್ನು ಬಂದ್​ ಮಾಡಲಾಗಿದ್ದರಿಂದ ಯುಎಸ್​​ನಿಂದ ಭಾರತಕ್ಕೆ ಬರುತ್ತಿರುವ ಏರ್​ ಇಂಡಿಯಾ ವಿಮಾನಗಳು ಪರ್ಯಾಯ ಮಾರ್ಗ ಹಿಡಿಯುವಂತಾಗಿದೆ ಎಂದೂ ಹೇಳಲಾಗಿದೆ. AI-126 (ಚಿಕಾಗೋ-ದೆಹಲಿ) ಮತ್ತು AI-174 (ಸ್ಯಾನ್​ ಫ್ರಾನ್ಸಿಸ್ಕೋ-ದೆಹಲಿ) ವಿಮಾನಗಳು ಅಫ್ಘಾನಿಸ್ತಾನ ಮಾರ್ಗದಲ್ಲಿ ಬರಲು ಸಾಧ್ಯವಾಗದೆ, ಗಲ್ಫ್​ ದೇಶಕ್ಕೆ ಹೋಗಿ ಇಂಧನ ತುಂಬಿಕೊಂಡಿವೆ. ಹಾಗೇ, ಭಾರತದಿಂದ ಅಮೆರಿಕಕ್ಕೆ ತೆರಳುವ ಏರ್​ ಇಂಡಿಯಾ ವಿಮಾನಗಳೂ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ: ಚಾಸಿ ಕಟ್​ ಆಗಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಸರ್ಕಾರಿ ಬಸ್​; 20ಕ್ಕೂ ಹೆಚ್ಚು ಜನರಿಗೆ ಗಾಯ

Afghanistan Plane Crash: ಉಜಬೆಕಿಸ್ತಾನದಲ್ಲಿ ಅಫ್ಘಾನಿಸ್ತಾನದ ಮಿಲಿಟರಿ ವಿಮಾನ ಪತನ

(Over 200 Indians are yet to be evacuated from Afghanistan’s capital Kabul)

Published On - 6:48 pm, Mon, 16 August 21

Follow Us
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ