AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ಮಂಡನೆ ವೇಳೆ ನೀಲಿ ಚಿತ್ರ ವೀಕ್ಷಿಸಿದ ಸಂಸದ, ಸಿಕ್ಕಿಬಿದ್ದಾಗ ಕೊಟ್ಟ ಸಬೂಬು ಏನು ಗೊತ್ತಾ?

ಥಾಯ್​ ಲ್ಯಾಂಡ್​ ಸಂಸತ್ತಿನಲ್ಲಿ ಬಜೆಟ್​ ಮಂಡನೆ ವೇಳೆ ಸಂಸದನೊಬ್ಬ ತಮ್ಮ ಮೊಬೈಲ್​‌ನಲ್ಲಿ ನೀಲಿ ಚಿತ್ರವನ್ನು ವೀಕ್ಷಿಸುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡುತ್ತಾ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ರಾಜಕಾರಣಿ ಈಗ ತೀರಾ ಮುಜುಗರಕ್ಕೆ ಒಳಗಾಗಿದ್ದಾರೆ. ದೇಶದ ರಾಜಧಾನಿಯಾದ ಬ್ಯಾಂಕಾಕ್‌ನಲ್ಲಿರುವ ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ಸಂಸದ ರೊನಾಥೆಪ್ ಅನುವಾತ್ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಿರುವ ದೃಶ್ಯ ವರದಿಗಾರರ ಕ್ಯಾಮರಾದಲ್ಲಿ ಸೆರೆಸಿಕ್ಕಿದೆ. ವರದಿಗಳ ಪ್ರಕಾರ ಸಂಸದ ಅನುವಾತ್ ತನ್ನ ಫೋನ್‌ನಲ್ಲಿ ಸುಮಾರು 10 […]

ಬಜೆಟ್ ಮಂಡನೆ ವೇಳೆ ನೀಲಿ ಚಿತ್ರ ವೀಕ್ಷಿಸಿದ ಸಂಸದ, ಸಿಕ್ಕಿಬಿದ್ದಾಗ ಕೊಟ್ಟ ಸಬೂಬು ಏನು ಗೊತ್ತಾ?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on: Sep 20, 2020 | 6:36 PM

Share

ಥಾಯ್​ ಲ್ಯಾಂಡ್​ ಸಂಸತ್ತಿನಲ್ಲಿ ಬಜೆಟ್​ ಮಂಡನೆ ವೇಳೆ ಸಂಸದನೊಬ್ಬ ತಮ್ಮ ಮೊಬೈಲ್​‌ನಲ್ಲಿ ನೀಲಿ ಚಿತ್ರವನ್ನು ವೀಕ್ಷಿಸುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡುತ್ತಾ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ರಾಜಕಾರಣಿ ಈಗ ತೀರಾ ಮುಜುಗರಕ್ಕೆ ಒಳಗಾಗಿದ್ದಾರೆ.

ದೇಶದ ರಾಜಧಾನಿಯಾದ ಬ್ಯಾಂಕಾಕ್‌ನಲ್ಲಿರುವ ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ಸಂಸದ ರೊನಾಥೆಪ್ ಅನುವಾತ್ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಿರುವ ದೃಶ್ಯ ವರದಿಗಾರರ ಕ್ಯಾಮರಾದಲ್ಲಿ ಸೆರೆಸಿಕ್ಕಿದೆ. ವರದಿಗಳ ಪ್ರಕಾರ ಸಂಸದ ಅನುವಾತ್ ತನ್ನ ಫೋನ್‌ನಲ್ಲಿ ಸುಮಾರು 10 ನಿಮಿಷಗಳ ಕಾಲ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನ ನೋಡುತ್ತಿರುವ ದೃಶ್ಯಾವಳಿಯನ್ನು ಪತ್ರಿಕಾ ಗ್ಯಾಲರಿಯಲ್ಲಿದ್ದ ವರದಿಗಾರರು ಸೆರೆ ಹಿಡಿದಿದ್ದಾರೆ.

ಚೊನ್ಬುರಿ ಪ್ರಾಂತ್ಯವನ್ನು ಪ್ರತಿನಿಧಿಸುವ ಆಡಳಿತ ಪಕ್ಷದ ಸಂಸದ ರೊನಾಥೆಪ್ ಅನುವಾತ್ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯೊಬ್ಬಳು ಸಹಾಯ ಕೋರಿ ನನಗೆ ಪದೇ ಪದೇ ಮೆಸೆಜ್​ ಮಾಡುತ್ತಿದ್ದಳು. ಹೀಗಾಗಿ, ಆಕೆ ಎಲ್ಲಿದ್ದಾಳೆ ಮತ್ತು ಆಕೆಗೆ ಯಾರು ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ನಾನು ಆ ದೃಶ್ಯಾವಳಿಗಳನ್ನು ನೋಡಿದೆ ಎಂಬ ಸಮಜಾಯಿಷಿ ನೀಡಿದ್ದಾನೆ!

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು