AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ಸೇನೆಗೆ ದಾರಿ ತಪ್ಪಿಸುತ್ತಿರುವ ಉಕ್ರೇನ್​ ಸರ್ಕಾರಿ ಕಂಪನಿ; ನರಕಕ್ಕೆ ಹೋಗಲು ಸಹಾಯ ಮಾಡುತ್ತಿರುವುದಾಗಿ ಫೇಸ್​​ಬುಕ್​ ಪೋಸ್ಟ್​​, ಅಶ್ಲೀಲ ಬೈಗುಳ

ರಷ್ಯಾ ಸೇನೆ ಸೀದಾ ನರಕಕ್ಕೆ ಹೋಗಲು ನಾವು ಸಹಾಯ ಮಾಡುತ್ತಿದ್ದೇವೆ. ನಾವು ಒಂದು ಕಡೆಯಿಂದ ಈ ಮಾರ್ಗಸೂಚಿಗಳನ್ನು ತೆಗೆದುಹಾಕುತ್ತಿದ್ದೇವೆ. ಹಾಗೇ ಈ ಕೆಲಸಕ್ಕೆ ನಮ್ಮೊಂದಿಗೆ ಸಾರ್ವಜನಿಕರು, ಸ್ಥಳೀಯ ಆಡಳಿತಗಳೂ ಕೈಜೋಡಿಸಬೇಕು ಎಂದು ಕಂಪನಿ ಹೇಳಿದೆ.

ರಷ್ಯಾ ಸೇನೆಗೆ ದಾರಿ ತಪ್ಪಿಸುತ್ತಿರುವ ಉಕ್ರೇನ್​ ಸರ್ಕಾರಿ ಕಂಪನಿ; ನರಕಕ್ಕೆ ಹೋಗಲು ಸಹಾಯ ಮಾಡುತ್ತಿರುವುದಾಗಿ ಫೇಸ್​​ಬುಕ್​ ಪೋಸ್ಟ್​​, ಅಶ್ಲೀಲ ಬೈಗುಳ
ಉಕ್ರೇನ್​ ರಸ್ತೆ ಸೂಚಕ ಬೋರ್ಡ್​ಗಳು
TV9 Web
| Edited By: |

Updated on:Feb 27, 2022 | 10:41 AM

Share

ಉಕ್ರೇನ್​ ಮೇಲೆ ರಷ್ಯಾ ಯುದ್ಧ (Russia-Ukraine War) ಸಾರಿ ನಾಲ್ಕು ದಿನಗಳಾಯಿತು. ರಷ್ಯಾಕ್ಕೆ ಹೋಲಿಸಿದರೆ ಉಕ್ರೇನ್​ ಸಾಮರ್ಥ್ಯ ಎಲ್ಲದರಲ್ಲೂ ಕಡಿಮೆ. ಹಾಗಿದ್ದಾಗ್ಯೂ ಉಕ್ರೇನ್​ (Ukraine) ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಬರೀ ಸೇನೆಯಷ್ಟೇ ಅಲ್ಲ, ನಾಗರಿಕರೂ ಕೈಯಲ್ಲಿ ಬಂದೂಕು ಹಿಡಿದು ಯುದ್ಧಭೂಮಿಗೆ ಇಳಿದಿದ್ದಾರೆ. ಹಲವು ದೇಶಗಳು ಉಕ್ರೇನ್​ಗೆ ಮಿಲಿಟರಿ ಉಪಕರಣಗಳನ್ನು ಒದಗಿಸುತ್ತಿವೆ. ಈ ಮಧ್ಯೆ ಉಕ್ರೇನ್​​ನ ಕಟ್ಟಡಗಳು ಮತ್ತು ರಸ್ತೆ ನಿರ್ವಹಣೆ ಉಸ್ತುವಾರಿ ಕಂಪನಿಯೊಂದು ವಿಭಿನ್ನವಾಗಿ ರಷ್ಯಾ ವಿರುದ್ಧ ಹೋರಾಡುತ್ತಿದೆ.

ಉಕ್ರಾವ್ಟೋಡರ್ ಎಂಬ ಸರ್ಕಾರಿ ಕಂಪನಿಯೊಂದು ಎಲ್ಲ ಕಡೆಗಳಲ್ಲಿರುವ ರಸ್ತೆ ಮಾರ್ಗ ತೋರುವ ಬೋರ್ಡ್​​ಗಳು, ಸಂಕೇತಗಳನ್ನು ತೆಗೆದುಹಾಕುತ್ತಿದೆ.  ಜನರಿಗೆ ಅನುಕೂಲವಾಗುವಂತೆ ರಸ್ತೆ ಬದಿಯಲ್ಲಿ ರಸ್ತೆ ಮಾರ್ಗ ಸಂಕೇತಗಳ ಬೋರ್ಡ್​​ಗಳನ್ನು ಹಾಕುವುದು ಸಾಮಾನ್ಯ. ಹೊಸದಾಗಿ ಆ ಪ್ರದೇಶಗಳಿಗೆ ಬರುವವರು ಚಿಹ್ನೆ (Signs) ಗಳನ್ನು ನೋಡಿಯೇ ದಾರಿ ಅರಿಯುತ್ತಾರೆ. ಹಾಗೇ, ಉಕ್ರೇನ್​​ನಲ್ಲೂ ಹಾಕಲಾಗಿದ್ದ ಮಾರ್ಗಸೂಚಿ ಸೈನ್​ ಬೋರ್ಡ್​ಗಳನ್ನು ಈ ಕಂಪನಿ ತೆಗೆದುಹಾಕುತ್ತಿದೆ. ರಷ್ಯಾದ ಸೈನಿಕರಿಗೆ ಉಕ್ರೇನ್​ನ ದಾರಿಗಳು ಸರಿಯಾಗಿ ಗೊತ್ತಿಲ್ಲ. ಅಲ್ಲದೆ ಅವರು ಅತ್ಯಂತ ಕಳಪೆ ಸಂವಹನ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇಲ್ಲಿನ ಭೂಪ್ರದೇಶಗಳನ್ನು ಸಂಕೇತಗಳ ಸಹಾಯವಿಲ್ಲದೆ ಪ್ರವೇಶಿಸಲಾರರು. ನಾವು ಶತ್ರುಗಳ ದಾರಿ ತಪ್ಪಿಸಲು ಆ ಬೋರ್ಡ್​ಗಳನ್ನೆಲ್ಲ ತೆಗೆದುಹಾಕುತ್ತಿದ್ದೇವೆ ಎಂದು ಫೇಸ್​ಬುಕ್ ಪೋಸ್ಟ್​ನಲ್ಲಿ ಹೇಳಿಕೊಂಡಿದೆ.

ಅಷ್ಟೇ ಅಲ್ಲ, ರಷ್ಯಾ ಸೇನೆ ಸೀದಾ ನರಕಕ್ಕೆ ಹೋಗಲು ನಾವು ಸಹಾಯ ಮಾಡುತ್ತಿದ್ದೇವೆ. ನಾವು ಒಂದು ಕಡೆಯಿಂದ ಈ ಮಾರ್ಗಸೂಚಿಗಳನ್ನು ತೆಗೆದುಹಾಕುತ್ತಿದ್ದೇವೆ. ಹಾಗೇ ಈ ಕೆಲಸಕ್ಕೆ ನಮ್ಮೊಂದಿಗೆ ಸಾರ್ವಜನಿಕರು, ಸ್ಥಳೀಯ ಆಡಳಿತಗಳೂ ಕೈಜೋಡಿಸಬೇಕು ಎಂದು ಕಂಪನಿ ಹೇಳಿದೆ. ಕೆಲವು ಕಡೆಗಳಲ್ಲಂತೂ ರಸ್ತೆ ತೋರುವ ಸಂಕೇತವನ್ನು ತಪ್ಪು ನಿರ್ದೇಶನದಲ್ಲಿ ಇಡುವ ಕೆಲಸವನ್ನೂ ಕಂಪನಿ ಮಾಡಿದೆ. ಮತ್ತು ಅಶ್ಲೀಲ ಭಾಷೆಯಲ್ಲಿ ರಷ್ಯಾಕ್ಕೆ ಬೈದು ಫೇಸ್​ಬುಕ್​ ಪೋಸ್ಟ್ ಹಾಕಿಕೊಂಡಿದೆ. ಪ್ರತಿರಸ್ತೆಯನ್ನೂ ಜನರು ಟೈಯರ್​​ಗಳನ್ನು ಸುಡಬೇಕು. ಒಣಮರಗಳಿಗೆ ಬೆಂಕಿ ಹಾಕಬೇಕು. ಬ್ಯಾರಿಕೇಡ್​ಗಳನ್ನು ಹಾಕಬೇಕು. ಈ ಮೂಲಕ ಶತ್ರುಗಳ ಪ್ರವೇಶವನ್ನು ನಿರ್ಬಂಧಿಸಬೇಕು.  ಎಲ್ಲೇ ಹೋದರೂ ಅವರಿಗೆ ತಾವಿಲ್ಲ ತಪ್ಪಾಗಿ ಬಂದಿದ್ದೇವೆ ಎನ್ನಿಸುವಷ್ಟು ಕಷ್ಟ ಕೊಡಬೇಕು ಎಂದೂ ಈ ಸರ್ಕಾರಿ ಕಂಪನಿ ಹೇಳಿದೆ.

ಉಕ್ರೇನ್​ ಯಾವ ಕಾರಣಕ್ಕೂ ರಷ್ಯಾಕ್ಕೆ ಮಣಿಯುವುದಿಲ್ಲ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೊಂಡಿದ್ದಾರೆ. ತಮಗೆ ಶಸ್ತ್ರಾಸ್ತ್ರಗಳನ್ನು ನೀಡಿ ಎಂದು ವಿಶ್ವನಾಯಕರನ್ನು ಕೇಳಿಕೊಳ್ಳುತ್ತಿದ್ದಾರೆ. ಅದರಂತೆ ಹಲವು ದೇಶಗಳು ಉಕ್ರೇನ್​ಗೆ ಮಿಲಿಟರಿ ಉಪಕರಣಗಳ ನೆರವು ನೀಡುತ್ತಿದ್ದಾರೆ. ಇನ್ನೊಂದೆಡೆ ರಷ್ಯಾ ತಾವು ಜನರನ್ನು ಕೊಲ್ಲುವುದಿಲ್ಲ, ಪ್ರದೇಶಗಳನ್ನು ಅತಿಕ್ರಮಣ ಮಾಡುವುದಿಲ್ಲ ಎಂದು ಹೇಳುತ್ತಲೇ ಈ ಎರಡೂ ಕೆಲಸಗಳನ್ನೂ ಮಾಡುತ್ತಿದೆ.

ಇದನ್ನೂ ಓದಿ:  Russia-Ukraine War: ರಷ್ಯಾದ ದಾಳಿಯ ನಡುವೆ ಶೆಲ್ಟರ್​​ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ

Published On - 10:40 am, Sun, 27 February 22

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ