Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆ ಕೂದಲನ್ನು ಚಿಕ್ಕದಾಗಿ ಕಟ್​ ಮಾಡಿಕೊಳ್ಳುತ್ತಿರುವ ಉಕ್ರೇನ್​ ಯುವತಿಯರು; ಅತ್ಯಾಚಾರದಿಂದ ಪಾರಾಗಲು ಈ ನಿರ್ಧಾರ

ಇಲ್ಲಿನ ಹಳ್ಳಿಯೊಂದರಲ್ಲಿ ಇಬ್ಬರು ಯುವತಿಯರನ್ನು ರಷ್ಯಾ ಸೈನಿಕರು ರೇಪ್​ ಮಾಡಿದ್ದಾರೆ. ಅವರಿಬ್ಬರೂ ಸಹೋದರಿಯರಾಗಿದ್ದು ಒಬ್ಬಳಿಗೆ 15 ವರ್ಷ, ಮತ್ತೊಬ್ಬಾಕೆಗೆ 16 ವರ್ಷ.

ತಲೆ ಕೂದಲನ್ನು ಚಿಕ್ಕದಾಗಿ ಕಟ್​ ಮಾಡಿಕೊಳ್ಳುತ್ತಿರುವ ಉಕ್ರೇನ್​ ಯುವತಿಯರು; ಅತ್ಯಾಚಾರದಿಂದ ಪಾರಾಗಲು ಈ ನಿರ್ಧಾರ
ಉಕ್ರೇನ್​ನಲ್ಲಿ ಯುದ್ಧದ ಪರಿಸ್ಥಿತಿ
Follow us
TV9 Web
| Updated By: Lakshmi Hegde

Updated on:Apr 09, 2022 | 5:20 PM

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಶುರು ಮಾಡಿ ತಿಂಗಳ ಮೇಲಾಯಿತು. ಉಕ್ರೇನ್​ನಲ್ಲಿ ಒಟ್ಟಾರೆ ಪರಿಸ್ಥಿತಿ ಹದಗೆಟ್ಟಿದೆ. ಇತ್ತ ರಷ್ಯಾದ ಆರ್ಥಿಕ ಸ್ಥಿತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರ ದೇಶಗಳೊಂದಿಗಿನ ಸ್ನೇಹ ಕುಂದುತ್ತ ಬರುತ್ತಿದೆ. ಇಷ್ಟಾದರೂ ರಷ್ಯಾ ಯುದ್ಧ ನಿಲ್ಲಿಸುತ್ತಿಲ್ಲ. ಇನ್ನೊಂದೆಡೆ ಉಕ್ರೇನ್​ ಪುಟ್ಟ ದೇಶವಾದರೂ ರಷ್ಯಾಕ್ಕೆ ತೀವ್ರ ಪೈಪೋಟಿ ಒಡ್ಡುತ್ತಿದೆ. ರಷ್ಯಾ ಸರಿಯಾಗಿ ಯುದ್ಧಮಾಡುತ್ತಿಲ್ಲ. ಯುದ್ಧಾಪರಾಧಗಳನ್ನು ಎಸಗುತ್ತಿದೆ ಎಂಬ ಆರೋಪವನ್ನು ಗಟ್ಟಿಧ್ವನಿಯಲ್ಲಿ ಮಾಡುತ್ತಿದೆ. ಅದರಲ್ಲೂ ರಷ್ಯಾ ಸೈನಿಕರು ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. 

ಉಕ್ರೇನ್​ನ ರಾಜಧಾನಿ ಕೀವ್​ನಿಂದ 50 ಮೈಲುಗಳಷ್ಟು ದೂರದಲ್ಲಿ ಇವಾಂಕಿವ್​ ಎಂಬ ನಗರವಿದೆ. ಅಲ್ಲಂತೂ ಹದಿಹರೆಯದ ಯುವತಿಯರೆಲ್ಲ ತಮ್ಮ ತಲೆಕೂದಲನ್ನು ತುಂಬ ಸಣ್ಣದಾಗಿ ಕತ್ತರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ಮನ ಮಿಡಿಯದೆ ಇರದು. ಇಂಥದ್ದೊಂದು ಕೆಟ್ಟ ಸನ್ನಿವೇಶದಲ್ಲಿ ಅವರೆಲ್ಲ ಸಿಲುಕಿದ್ದಾರಾ ಎಂದು ಅನ್ನಿಸುತ್ತದೆ. ‘ನಮ್ಮ ನಗರದಲ್ಲಿ ಯುವತಿಯರು ಕೂದಲನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳುತ್ತಿದ್ದಾರೆ. ಕಾರಣ ಕೇಳಿದರೆ, ರಷ್ಯಾದ ಸೈನಿಕರು ಚೆಂದನೆಯ ಹುಡುಗಿಯರು, ಮಹಿಳೆಯರನ್ನು ಯಾರನ್ನೂ ಬಿಡದೆ ಅತ್ಯಾಚಾರ ಮಾಡುತ್ತಿದ್ದಾರೆ. ನಾವೂ ಅಂದವಾಗಿ ಕಂಡರೆ ನಮ್ಮನ್ನೂ ಬಿಡುವುದಿಲ್ಲ. ಹೀಗಾಗಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ನಮ್ಮನ್ನು ನಾವು ಕುರೂಪಗೊಳಿಸಿಕೊಳ್ಳುತ್ತಿದ್ದೇವೆ’ ಎಂಬುದಾಗಿ ಹೇಳುತ್ತಿದ್ದಾರೆ ಎಂದು ಇವಾಂಕಿವ್​ನ ಮೇಯರ್​ ಮರೀನಾ ಬೆಸ್ಚಾಸ್ಟ್ನಾ ತಿಳಿಸಿದ್ದಾರೆ.

ಹಾಗೇ, ಬೆಸ್ಚಾಟ್ನಾ ಅವರು ರಷ್ಯಾ ಸೈನಿಕರ ಕ್ರೌರ್ಯತೆಯನ್ನೂ ಬಿಚ್ಚಿಟ್ಟಿದ್ದಾರೆ. ಇಲ್ಲಿನ ಹಳ್ಳಿಯೊಂದರಲ್ಲಿ ಇಬ್ಬರು ಯುವತಿಯರನ್ನು ರಷ್ಯಾ ಸೈನಿಕರು ರೇಪ್​ ಮಾಡಿದ್ದಾರೆ. ಅವರಿಬ್ಬರೂ ಸಹೋದರಿಯರಾಗಿದ್ದು ಒಬ್ಬಳಿಗೆ 15 ವರ್ಷ, ಮತ್ತೊಬ್ಬಾಕೆಗೆ 16 ವರ್ಷ. ಇವರ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿ, ಬೇಸ್​ಮೆಂಟ್​ಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ. ಇದನ್ನೆಲ್ಲ ನೋಡಿ ಉಳಿದ ಯುವತಿಯರು ಹೆದರಿಹೋಗಿದ್ದಾರೆ. ತಮ್ಮ ಕೂದಲನ್ನು ಅತ್ಯಂತ ಚಿಕ್ಕದಾಗಿ ಕಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾಗಿ ITV News ವರದಿ ಮಾಡಿದೆ.

ಉಕ್ರೇನ್​ನಲ್ಲಿ ಫೆ.24ರಿಂದಲೂ ರಷ್ಯಾ ಯುದ್ಧ ಮಾಡುತ್ತಿದೆ. ರಷ್ಯನ್ ದೌರ್ಜನ್ಯಕ್ಕೆ ಹೆದರಿ ಅಲ್ಲಿನ ಸುಮಾರು 4 ಮಿಲಿಯನ್ ನಾಗರಿಕರು ದೇಶ ತೊರೆದು ಹೋಗಿದ್ದಾರೆ. ಬುಚಾದಲ್ಲಂತೂ ನಾಗರಿಕರ ಹೆಣ ಬೀದಿಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಆದೇಶದ ಮೇರೆಗೆ ಕೀವ್​ನಿಂದ ಸೇನೆ ಹಿಂದಕ್ಕೆ ಬಂದಿದೆ.

ಇದನ್ನೂ ಓದಿ: ರಷ್ಯಾದಲ್ಲಿ ಐಷಾರಾಮಿ ಬ್ರ್ಯಾಂಡ್​ ವಸ್ತುಗಳ ಮಾರಾಟಕ್ಕೆ ನಿಷೇಧ; ಬ್ಯಾಗ್ ಕತ್ತರಿಸಿ ಪ್ರತಿಭಟಿಸಿದ ರಷ್ಯನ್ ಮಹಿಳೆಯರು

Published On - 5:19 pm, Sat, 9 April 22

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ