AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಕೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಲಭಿಸಲಿದೆ ಆದ್ಯತೆ ಮತ್ತು ಸೂಪರ್ ಪ್ರಯಾರಿಟಿ ವೀಸಾ

ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಅಗತ್ಯವಿರುವ ದಾಖಲಾತಿಗಳೊಂದಿಗೆ ಸಾಧ್ಯವಾದಷ್ಟು ಬೇಗ ನಿಮ್ಮ ವೀಸಾಕ್ಕೆ ಅರ್ಜಿ ಸಲ್ಲಿಸಲು ನಾವು ಶಿಫಾರಸು ಮಾಡುತ್ತೇವೆ ಎಂದು ಎಲ್ಲಿಸ್ ಮುಂಬರುವ ಶೈಕ್ಷಣಿಕ ಅಧಿವೇಶನಕ್ಕಾಗಿ ಯುಕೆಗೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.

ಯುಕೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಲಭಿಸಲಿದೆ ಆದ್ಯತೆ ಮತ್ತು ಸೂಪರ್ ಪ್ರಯಾರಿಟಿ ವೀಸಾ
TV9 Web
| Edited By: |

Updated on: Aug 30, 2022 | 6:09 PM

Share

ಯುನೈಟೆಡ್ ಕಿಂಗ್‌ಡಮ್ ಇದೀಗ ಭಾರತೀಯ ವಿದ್ಯಾರ್ಥಿಗಳಿಗೆ ಆದ್ಯತೆ (Priority) ಮತ್ತು ಪರಮೋಚ್ಛ ಆದ್ಯತೆ ವೀಸಾಗಳನ್ನು (Super Priority Visa) ಲಭ್ಯವಾಗುವಂತೆ ಮಾಡಿದೆ ಎಂದು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ (Alex Ellis) ಮಂಗಳವಾರ ಹೇಳಿದ್ದಾರೆ. ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಅಗತ್ಯವಿರುವ ದಾಖಲಾತಿಗಳೊಂದಿಗೆ ಸಾಧ್ಯವಾದಷ್ಟು ಬೇಗ ನಿಮ್ಮ ವೀಸಾಕ್ಕೆ ಅರ್ಜಿ ಸಲ್ಲಿಸಲು ನಾವು ಶಿಫಾರಸು ಮಾಡುತ್ತೇವೆ ಎಂದು ಎಲ್ಲಿಸ್ ಮುಂಬರುವ ಶೈಕ್ಷಣಿಕ ಅಧಿವೇಶನಕ್ಕಾಗಿ ಯುಕೆಗೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ನೀವು ಬಯಸಿದರೆ, ನೀವು ಆದ್ಯತೆಯ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು, ಅದು ಸುಮಾರು ಐದು ದಿನಗಳಲ್ಲಿ ನಿಮಗೆ ಸಿಗುತ್ತದೆ ಅಥವಾ ಅದಕ್ಕಿಂತ ವೇಗವಾಗಿ ಬೇಕಾದರೆ ಸೂಪರ್ ಪ್ರಿಯಾರಿಟಿ ವೀಸಾವನ್ನು ಪಡೆಯಬಹುದು ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ಪ್ರಸ್ತುತ ಯುಕೆ ಸುಮಾರು 15 ದಿನಗಳಲ್ಲಿ ವೀಸಾ ವಿನಂತಿಗಳೊಂದಿಗೆ ವ್ಯವಹರಿಸುತ್ತಿದೆ ಎಂದು ಬ್ರಿಟಿಷ್ ಹೈ ಕಮಿಷನರ್ ಹೇಳಿದ್ದಾರೆ. ಭಾರತೀಯ ವಿದ್ಯಾರ್ಥಿಗಳೇ, ನೀವು ಯುಕೆಗೆ ಬರಲು ಬಯಸುತ್ತೀರಿ ಎಂದಾದರೇ  ಈಗಲೇ ಅರ್ಜಿ ಸಲ್ಲಿಸಿ, ದಾಖಲೆಗಳನ್ನು ಸರಿಯಾಗಿ ಪಡೆದುಕೊಳ್ಳಿ” ಎಂದು ಅವರು ಹೇಳಿದ್ದಾರೆ

ಯುಕೆ  ಸರ್ಕಾರದ ವೆಬ್‌ಸೈಟ್‌ನ ಪ್ರಕಾರ, ವೀಸಾ ನಿರ್ಧಾರವನ್ನು ಸುರಕ್ಷಿತವಾಗಿರಿಸಲು ಇವು ತ್ವರಿತ ಮಾರ್ಗಗಳಾಗಿವೆ. ‘ಪ್ರಿಯಾರಿಟಿ’ ಸೇವೆಯು ಐದು ಕೆಲಸದ ದಿನಗಳಲ್ಲಿ ವೀಸಾ ನಿರ್ಧಾರವನ್ನು ಖಚಿತಪಡಿಸುತ್ತದೆ, ‘ಸೂಪರ್ ಪ್ರಿಯಾರಿಟಿ’ ಸೇವೆಯ ಅಡಿಯಲ್ಲಿ, ಮುಂದಿನ ಕೆಲಸದ ದಿನದ ಅಂತ್ಯದೊಳಗೆ ನಿರ್ಧಾರವನ್ನು ಪ್ರಕಟಿಸಬಹುದು.

ವಾರದ ಕೊನೆಯ ಕೆಲಸದ ದಿನದಂದು ಅಥವಾ ಸಾರ್ವಜನಿಕ ರಜೆಯ ಮೊದಲು ಕೊನೆಯ ಕೆಲಸದ ದಿನದಂದು ಸಲ್ಲಿಸಿದ ಅರ್ಜಿಗಳು ಮುಂದಿನ ಕೆಲಸದ ದಿನದ ಕೊನೆಯಲ್ಲಿ ಕೈ ಸೇರುತ್ತದೆ ಎಂದು ವೆಬ್‌ಸೈಟ್ ಹೇಳುತ್ತದೆ.

‘ಸೂಪರ್  ಪ್ರಿಯಾರಿಟಿ’ ಸೇವೆಯು ಐಚ್ಛಿಕವಾಗಿದೆ ಮತ್ತು ವೀಸಾ ಶುಲ್ಕದ ಜೊತೆಗೆ ಶುಲ್ಕವನ್ನು ಹೊಂದಿದೆ.

ವೀಸಾ ಅನುಮೋದನೆಗಳಲ್ಲಿನ ವಿಳಂಬದ ಕುರಿತು  ಎಲ್ಲಿಸ್ ಟ್ವಿಟರ್‌ನಲ್ಲಿ ವಿಡಿಯೊ ಸಂದೇಶವನ್ನು ಹಂಚಿಕೊಂಡ ವಾರಗಳ ನಂತರ ಆ ಟ್ವೀಟ್ ಬಂದಿದೆ. ವೀಸಾ ವಿಳಂಬದಿಂದಾಗಿ ನೊಂದ ಜನರಲ್ಲಿ ಅವರು ಕ್ಷಮೆಯಾಚಿಸಿದ್ದಾರೆ

ವಿಳಂಬದ ಹಿಂದಿನ ಕಾರಣವನ್ನು ಉಲ್ಲೇಖಿಸಿದ, ಹೈ ಕಮಿಷನರ್ “ಕೋವಿಡ್ ನಂತರದ ಯುಕೆ ವೀಸಾಗಳ ಬೇಡಿಕೆಯಲ್ಲಿ ಅಭೂತಪೂರ್ವ ಏರಿಕೆಯಾಗಿದೆ.  ವಿಶೇಷವಾಗಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮೊದಲಾದ ಜಾಗತಿಕ ಘಟನೆಗಳ ಕಾರಣ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಇತ್ತೀಚಿನ ಯುಕೆ ವಲಸೆ ಅಂಕಿಅಂಶಗಳ ಮಾಹಿತಿಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತೀಯರಿಗೆ ನೀಡಲಾದ ವಿದ್ಯಾರ್ಥಿ ವೀಸಾಗಳಲ್ಲಿ ಶೇಕಡಾ 89 ರಷ್ಟು ಹೆಚ್ಚಳವನ್ನು ತೋರಿಸಿದೆ. ಜೂನ್ 2022ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ 1.18 ಲಕ್ಷ ವೀಸಾಗಳೊಂದಿಗೆ ಯುಕೆಯಲ್ಲಿ ಪ್ರಾಯೋಜಿತ ಅಧ್ಯಯನ ವೀಸಾಗಳನ್ನು ನೀಡಲಾಗುತ್ತಿರುವ ಅತಿದೊಡ್ಡ ರಾಷ್ಟ್ರೀಯತೆಯಾಗಿ ಚೀನಾವನ್ನು ಹಿಂದಿಕ್ಕಿದೆ ಎಂದು ಅದು ತೋರಿಸಿದೆ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು