AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

US vs China: ಸ್ಪೈ ಬಲೂನು ಹೊಡೆದುರುಳಿಸಿದ ಅಮೆರಿಕ; ಗರಂ ಆದ ಚೀನಾ

America Shots Down Chinese Balloon: ಶಂಕಿತ ಚೀನೀ ಬೇಹುಗಾರಿಕಾ ಬಲೂನೊಂದನ್ನು ಅಮೆರಿಕ ಹೊಡೆದುರುಳಿಸಿದೆ. ಶನಿವಾರ ಇಲ್ಲಿಯ ಕಡಲತೀರದ ಮೇಲೆ ಹಾದು ಹೋಗುತ್ತಿತ್ತೆನ್ನಲಾದ ಈ ಬಲೂನನ್ನು ಅಮೆರಿಕದ ಯುದ್ಧವಿಮಾನ ನಾಶಗೊಳಿಸಿರುವುದು ವರದಿಯಾಗಿದೆ.

US vs China: ಸ್ಪೈ ಬಲೂನು ಹೊಡೆದುರುಳಿಸಿದ ಅಮೆರಿಕ; ಗರಂ ಆದ ಚೀನಾ
ಸ್ಪೈ ಬಲೂನು ಹೊಡೆದುರುಳಿಸಿದ ಅಮೆರಿಕImage Credit source: Reuters
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2023 | 7:43 AM

Share

ಸೌತ್ ಕರೋಲಿನಾ: ಶಂಕಿತ ಚೀನೀ ಬೇಹುಗಾರಿಕಾ ಬಲೂನೊಂದನ್ನು (Chinese Spy Balloon) ಅಮೆರಿಕ ಹೊಡೆದುರುಳಿಸಿದೆ. ಶನಿವಾರ ಇಲ್ಲಿಯ ಕಡಲತೀರದ ಮೇಲೆ ಹಾದು ಹೋಗುತ್ತಿತ್ತೆನ್ನಲಾದ ಈ ಬಲೂನನ್ನು ಅಮೆರಿಕದ ಯುದ್ಧವಿಮಾನ ನಾಶಗೊಳಿಸಿರುವುದು ವರದಿಯಾಗಿದೆ. ಈ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕದಿಂದ ಅಂತಾರಾಷ್ಟ್ರೀಯ ಪ್ರಮಾಣಿತ ನಡಾವಳಿ ನಿಯಮಗಳ (International Standard Practices) ಉಲ್ಲಂಘನೆಯಾಗಿದೆ ಎಂದಿದೆ.

ಚೀನಾದ ಬಲೂನುಗಳು ಅಮೆರಿಕದ ವಾಯುಭಾಗದಲ್ಲಿ ಹಾರಾಡುತ್ತಿದ್ದ ಬಗ್ಗೆ ಇತ್ತೀಚೆಗೆ ಕೆಲ ವರದಿಗಳು ಬಂದಿದ್ದವು. ಇವುಗಳು ಬೇಹುಗಾರಿಕೆ ಉದ್ದೇಶದಿಂದ ಹಾರಾಡುತ್ತಿದ್ದ ವಸ್ತುಗಳೆಂದು ಅಮೆರಿಕ ಶಂಕಿಸಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಬಲೂನುಗಳನ್ನು ಹೊಡೆದುರುಳಿಸುವಂತೆ ಆದೇಶಿಸಿದ್ದರು. ಆದರೆ, ಬಲೂನು ಶೂಟ್ ಮಾಡಿದರೆ ನಾಗರಿಕರಿಗೆ ಅಪಾಯವಾಗುವ ಸಾಧ್ಯತೆಯಿಂದ ಅಮೆರಿಕನ್ ಮಿಲಿಟರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ವರದಿಗಳ ಪ್ರಕಾರ, ನಿನ್ನೆ ಹೊಡೆದುರುಳಿಸಲಾದ ಬಲೂನು ಜನವರಿ 28ರಂದು ಅಮೆರಿಕದ ವಾಯುಪ್ರದೇಶವನ್ನು ಮೊದಲು ಪ್ರವೇಶಿಸಿತು. ಬಳಿಕ ಜನವರಿ 30ರಂದು ಕೆನಡಾ ಭಾಗಕ್ಕೆ ಹೋಗಿ ಮರುದಿನ ಮತ್ತೆ ಅಮೆರಿಕದ ಕಡೆ ಬಂದಿತ್ತು. ಆದರೆ ಇದು ಸಾಗರ ಪ್ರದೇಶಕ್ಕೆ ಬರದೇ ಇದ್ದರಿಂದ ಶೂಟ್ ಮಾಡಲು ಕಷ್ಟವಾಗಿತ್ತು. ಕೊನೆಗೆ ನಿನ್ನೆ ಶನಿವಾರ ಈ ಬಲೂನನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ.

ಇದನ್ನೂ ಓದಿ: Chinese ‘Spy’ Balloon: ಅಮೆರಿಕದಲ್ಲಿ ಮತ್ತೆ ಕಾಣಿಸಿದ ಚೀನಾ ರಹಸ್ಯ ಬಲೂನ್; ಬ್ಲಿಂಕೆನ್ ಚೀನಾ ಭೇಟಿ ರದ್ದು

ಚೀನಾದ ಈ ಬಲೂನು ತಮ್ಮ ದೇಶದ ಸಾರ್ವಭೌಮತೆಗೆ (Sovereignty) ಧಕ್ಕೆ ತರುವಂತಿತ್ತು ಎಂದು ಹೇಳಿರುವ ಅಮೆರಿಕ, ಬಲೂನು ಹೊಡೆಯುತ್ತಿರುವ ಬಗ್ಗೆ ಚೀನಾಗೆ ಮಾಹಿತಿಯನ್ನೂ ನೀಡಿತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಚೀನಾ ಗರಂ:

ಅಮೆರಿಕ ಹೊಡೆದುರುಳಿಸುವ ತನ್ನ ಬಲೂನು ಯಾವುದೇ ಬೇಹುಗಾರಿಕೆ ಕಾರ್ಯಕ್ಕೆ ಬಳಕೆಯಾಗುತ್ತಿರಲಿಲ್ಲ. ನಾಗರಿಕ ಸೇವೆ ಉದ್ದೇಶದಿಂದ ಆ ಪ್ರದೇಶದ ಬಳಿ ಹೋಗಿತ್ತು. ಆದರೆ, ಆಕಸ್ಮಿಕವಾಗಿ ಅದು ಅಮೆರಿಕ ಪ್ರದೇಶಕ್ಕೆ ಹಾದು ಹೋಗಿದೆ. ಅಷ್ಟಕ್ಕೆ ಅಮೆರಿಕ ಅತಿರೇಕವಾಗಿ ವರ್ತಿಸಿದೆ ಎಂದು ಚೀನಾ ಹೇಳಿದೆ.

ಅಮೆರಿಕದ ಈ ಕ್ರಮಕ್ಕೆ ತಾನು ಅಷ್ಟೇ ತೀವ್ರವಾಗಿ ಸ್ಪಂದಿಸುವ ಅಧಿಕಾರ ತನಗಿದೆ ಎಂದೂ ಚೀನಾ ಬೆದಕರಿಕೆ ಹಾಕಿದೆ.

ಇದನ್ನೂ ಓದಿ: Pakistan: ಕೈಯಲ್ಲಿ ಕುರಾನ್, ಅಣುಬಾಂಬ್; ಬಡತನ ನಿರ್ಮೂಲನೆಗೆ ಸೂತ್ರ ಕೊಟ್ಟ ಪಾಕ್ ಇಸ್ಲಾಮಿಕ್ ಮುಖಂಡ

ಅಮೆರಿಕದ ಗುಪ್ತಚರ ವರದಿಗಳ ಪ್ರಕಾರ, ಚೀನಾದ ಸ್ಪೈ ಬಲೂನುಗಳು ಬೇರೆ ದೇಶದ ಮೇಲೆ ಕದ್ದು ಹೋಗುವುದು ಇದೇ ಮೊದಲಲ್ಲ. ಅಮೆರಿಕ ಮಾತ್ರವಲ್ಲ, ಏಷ್ಯಾ, ಯೂರೋಪ್ ಸೇರಿದಂತೆ ಐದು ಖಂಡಗಳ ವಿವಿಧ ದೇಶಗಳ ವಾಯು ಪ್ರದೇಶಗಳಲ್ಲಿ ಚೀನಾದ ಬಲೂನುಗಳು ಅಕ್ರಮವಾಗಿ ಪ್ರವೇಶಿಸಿ ಬೇಹುಗಾರಿಕೆ ನಡೆಸುತ್ತಿರುವ ಘಟನೆಗಳು ಹಲವು ವರ್ಷಗಳಿಂದ ಆಗುತ್ತಿವೆ ಎಂದು ಆರೋಪಿಸಲಾಗಿದೆ.

ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರು ಮೊನ್ನೆ ಶುಕ್ರವಾರ ಚೀನಾಗೆ ಪೂರ್ವನಿಗಧಿತ ಭೇಟಿ ನೀಡಬೇಕಿತ್ತು. ಆದರೆ, ಈ ಬೇಹುಗಾರಿಕೆ ಬಲೂನು ಕಾರಣದಿಂದ ಅವರ ಭೇಟಿಯನ್ನು ಮುಂದೂಡಲಾಗಿದೆ.

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ