AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಬಾಲಕನ ತಲೆಯನ್ನು ಬಲವಂತವಾಗಿ ಟಾಯ್ಲೆಟ್​ಗೆ​ ಅದ್ದಿ, ಅದರ ನೀರು ಕುಡಿಸಿದ್ದ ಮಹಿಳೆಯ ಬಂಧನ

ಬಾಲಕನನ್ನು ಬಾತ್‌ರೂಮ್‌ಗೆ ಎಳೆದುಕೊಂಡು ಹೋಗಿ ಟಾಯ್ಲೆಟ್‌ ನೀರು ಕುಡಿಯುವಂತೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಟೆಕ್ಸಾಸ್‌ನ ವುಡ್‌ವೇಯಲ್ಲಿ ಬಂಧಿಸಲಾಗಿದೆ. ಬಾಲಕ ಅಳುತ್ತಲೇ ಶಾಲೆಗೆ ಬಂದಿದ್ದ ಆಗ ಶಿಕ್ಷಕರು ವಿಚಾರಿಸಿದಾಗ ನಡೆದ ವಿಚಾರವನ್ನು ತಿಳಿಸಿದ್ದ. ಡಿಯಾ ವೆಲೆಡಿಯಾಜ್-ಬೋನಿಫಾಜಿಯನ್ನು ಏಪ್ರಿಲ್ 3 ರಂದು ಬಂಧನದಲ್ಲಿರಿಸಲಾಗಿದೆ.

ಅಮೆರಿಕ: ಬಾಲಕನ ತಲೆಯನ್ನು ಬಲವಂತವಾಗಿ ಟಾಯ್ಲೆಟ್​ಗೆ​ ಅದ್ದಿ, ಅದರ ನೀರು ಕುಡಿಸಿದ್ದ ಮಹಿಳೆಯ ಬಂಧನ
ಬಂಧನ
ನಯನಾ ರಾಜೀವ್
|

Updated on:Apr 07, 2024 | 12:41 PM

Share

ಬಾಲಕನನ್ನು ಬಾತ್‌ರೂಮ್‌ಗೆ ಎಳೆದುಕೊಂಡು ಹೋಗಿ ಟಾಯ್ಲೆಟ್‌ ನೀರು ಕುಡಿಯುವಂತೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಟೆಕ್ಸಾಸ್‌ನ ವುಡ್‌ವೇಯಲ್ಲಿ ಬಂಧಿಸಲಾಗಿದೆ. ಬಾಲಕ ಅಳುತ್ತಲೇ ಶಾಲೆಗೆ ಬಂದಿದ್ದ ಆಗ ಶಿಕ್ಷಕರು ವಿಚಾರಿಸಿದಾಗ ನಡೆದ ವಿಚಾರವನ್ನು ತಿಳಿಸಿದ್ದ. ಡಿಯಾ ವೆಲೆಡಿಯಾಜ್-ಬೋನಿಫಾಜಿಯನ್ನು ಏಪ್ರಿಲ್ 3 ರಂದು ಬಂಧನದಲ್ಲಿರಿಸಲಾಗಿದೆ.

ಬಾಲಕನ ಕೂದಲು ಹಿಡಿದು ಟಾಯ್ಲೆಟ್​ಗೆ ಎಳೆದೊಯ್ದು, ಟಾಯ್ಲೆಟ್​ ಗುಂಡಿಯೊಳಗಿದ್ದ ನೀರು ಕುಡಿಯುವಂತೆ ಮಹಿಳೆ ಒತ್ತಾಯಿಸಿದ್ದಳು. ಪರಿಣಾಮ ಆತನ ತಲೆಯ ಕೆಲವು ಭಾಗಗಳಲ್ಲಿ ಕೂದಲು ಉದುರಿ ಹೋಗಿದೆ. ತಕ್ಷಣ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯವರು ತನಿಖೆ ನಡೆಸಿದ್ದಾರೆ. ಈ ಬಾಲಕ ಹಲವು ಸಮಯಗಳಲ್ಲಿ ಹಿಂಸೆ ಅನುಭವಿಸಿದ್ದಾನೆ ಎಂಬುದು ತಿಳಿದುಬಂದಿದೆ.

ವುಡ್​ ವೇ ಪಬ್ಲಿಕ್ ಸೇಫ್ಟಿ ಡಿಪಾರ್ಟ್​ಮೆಂಟ್ ವರದಿ ಪ್ರಕಾರ, ಮಹಿಳೆಯು ಬಾಲಕನಿಗೆ ಪದೇ ಪದೇ ಹೊಡೆಯುತ್ತಿದ್ದಳು, ವಿವಿಧ ವಸ್ತುಗಳನ್ನು ಮೈಮೇಲೆ ಎಸೆಯುತ್ತಿದ್ದಳು, ದೀರ್ಘಕಾಲದವರೆಗೆ ಆಹಾರವನ್ನು ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಮನುಷ್ಯ ಅಲ್ಲ ಈತ ರಾಕ್ಷಸ, ಪತ್ನಿಯ ಹತ್ಯೆ ಮಾಡಿ 200 ತುಂಡುಗಳಾಗಿ ಕತ್ತರಿಸಿ ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ

ಹುಡುಗನನ್ನು ಅವನ ಸುರಕ್ಷತೆಗಾಗಿ ಕುಟುಂಬದ ಸದಸ್ಯರೊಂದಿಗೆ ಇರಿಸಲಾಯಿತು. ಬಾಲಕ ಮತ್ತು ಕ್ಲೌಡಿಯಾ ವೆಲೆಡಿಯಾಜ್-ಬೋನಿಫಾಜಿ ನಡುವಿನ ಸಂಬಂಧ ಏನೆಂಬುದು ತಿಳಿದುಬಂದಿಲ್ಲ.

ಫೆಬ್ರವರಿಯಲ್ಲಿ ಅಲಬಾಮಾದಲ್ಲಿ ಮಹಿಳೆಯೊಬ್ಬರು ತನ್ನ 7 ವರ್ಷದ ಮಗುವಿನ ಮೇಲೆ ಕಾರು ಹತ್ತಿಸಿದ ಘಟನೆ ನಡೆದಿತ್ತು. ಆಕೆ ಶಿಕ್ಷೆ ನೀಡಲು ಮನೆಗೆ ನಡೆದುಕೊಂಡೇ ಬರುವಂತೆ ಹೇಳಿ, ಹಿಂದಿನಿಂದ ಕಾರು ಹತ್ತಿಸಿದ್ದಳು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:41 pm, Sun, 7 April 24

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು