AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೀಸೆಲ್ ಕಾರುಗಳಿಗೆ ಇಂದುಕೂಡ ಇಷ್ಟೊಂದು ಬೇಡಿಕೆ ಏಕೆ?: ಇದರ 5 ದೊಡ್ಡ ಅನುಕೂಲಗಳು ಇಲ್ಲಿ ತಿಳಿಯಿರಿ

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳು ಉತ್ತಮ ಮೈಲೇಜ್ ನೀಡುತ್ತವೆ. ಉದಾಹರಣೆಗೆ, ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 15 ಕಿಲೋ ಮೀಟರ್ ಮೈಲೇಜ್ ನೀಡಿದರೆ, ಅದೇ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 20 ಕಿಲೋ ಮೀಟರ್‌ಗಳವರೆಗೆ ಹೋಗಬಹುದು. ಡೀಸೆಲ್ ಕಾರುಗಳ ಈ 5 ದೊಡ್ಡ ಅನುಕೂಲಗಳ ಬಗ್ಗೆ ಮಾಹಿತಿ ಇಲ್ಲಿದೆ.

ಡೀಸೆಲ್ ಕಾರುಗಳಿಗೆ ಇಂದುಕೂಡ ಇಷ್ಟೊಂದು ಬೇಡಿಕೆ ಏಕೆ?: ಇದರ 5 ದೊಡ್ಡ ಅನುಕೂಲಗಳು ಇಲ್ಲಿ ತಿಳಿಯಿರಿ
Diesel Car
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 05, 2025 | 10:59 AM

Share

ಹೊಸ ಕಾರು ಖರೀದಿಸುವ ವಿಷಯ ಬಂದಾಗಲೆಲ್ಲಾ, ಪೆಟ್ರೋಲ್ ಕಾರು ಖರೀದಿಸಬೇಕೇ ಅಥವಾ ಡೀಸೆಲ್ ಕಾರು ಖರೀದಿಸಬೇಕೇ ಎಂಬ ದೊಡ್ಡ ಪ್ರಶ್ನೆ ಮೂಡುತ್ತದೆ. ಮಾರುಕಟ್ಟೆಯಲ್ಲಿ ಈಗ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಲಭ್ಯವಿದ್ದರೂ, ಡೀಸೆಲ್ ಕಾರುಗಳ ಜನಪ್ರಿಯತೆ ಇನ್ನೂ ಹಾಗೆ ಉಳಿದಿದೆ. ಡೀಸೆಲ್ ಎಂಜಿನ್‌ಗಳು ಅವುಗಳ ಶಕ್ತಿಶಾಲಿ ಕಾರ್ಯಕ್ಷಮತೆ, ಮೈಲೇಜ್ ಮತ್ತು ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿದೆ. ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಡೀಸೆಲ್ ಕಾರುಗಳ ಈ 5 ದೊಡ್ಡ ಅನುಕೂಲಗಳ ಬಗ್ಗೆ ತಿಳಿದಿರಲೇಬೇಕು.

ಉತ್ತಮ ಮೈಲೇಜ್: ದೂರದ ಪ್ರಯಾಣಕ್ಕೆ ಉತ್ತಮ:

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳು ಉತ್ತಮ ಮೈಲೇಜ್ ನೀಡುತ್ತವೆ. ನೀವು ಹೆಚ್ಚು ದೂರ ಡ್ರೈವ್ ಮಾಡುತ್ತಿದ್ದರೆ ಅಥವಾ ಪ್ರತಿ ದಿನ ಟ್ರಾವೆಲ್ ಮಾಡುವವರಾಗಿದ್ದರೆ, ಡೀಸೆಲ್ ಕಾರು ನಿಮಗೆ ಆರ್ಥಿಕವಾಗಿ ಉತ್ತಮ ಆಯ್ಕೆಯಾಗಿದೆ. ಉದಾಹರಣೆಗೆ, ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 15 ಕಿಲೋ ಮೀಟರ್ ಮೈಲೇಜ್ ನೀಡಿದರೆ, ಅದೇ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 20 ಕಿಲೋ ಮೀಟರ್‌ಗಳವರೆಗೆ ಹೋಗಬಹುದು ಎಂದು ತಿಳಿಯಿರಿ. ಇದರಿಂದಾಗಿ, ಡೀಸೆಲ್ ಕಾರು ದೀರ್ಘಾವಧಿಯಲ್ಲಿ ನಿಮ್ಮ ಹಣವನ್ನು ಉಳಿಸುತ್ತದೆ ಎನ್ನಬಹುದು.

ದೀರ್ಘಾಯುಷ್ಯ ಮತ್ತು ಬಲಿಷ್ಠ ಎಂಜಿನ್:

ಡೀಸೆಲ್ ಎಂಜಿನ್‌ಗಳು ಪೆಟ್ರೋಲ್ ಎಂಜಿನ್‌ಗಳಿಗಿಂತ ಬಲಿಷ್ಠ ಮತ್ತು ಹೆಚ್ಚು ಬಾಳಿಕೆ ಬರುತ್ತವೆ. ಇದಕ್ಕಾಗಿಯೇ ವಾಣಿಜ್ಯ ವಾಹನಗಳು (ಟ್ರಕ್‌ಗಳು, ಬಸ್‌ಗಳು, ಟ್ಯಾಕ್ಸಿಗಳು) ಹೆಚ್ಚಾಗಿ ಡೀಸೆಲ್ ಎಂಜಿನ್‌ಗಳಲ್ಲಿ ಚಲಿಸುತ್ತವೆ. ಡೀಸೆಲ್ ಎಂಜಿನ್‌ಗಳು ಪೆಟ್ರೋಲ್ ಎಂಜಿನ್‌ಗಳಿಗಿಂತ ಲೆಸ್ ಕಾಂಪ್ಲೆಕ್ಸ್ ಎಲೆಕ್ಟ್ರಾನಿಕ್ಸ್ ಅನ್ನು ಹೊಂದಿರುತ್ತವೆ, ಇದು ಯಾವುದೇ ಸಮಸ್ಯೆಗಳಿಲ್ಲದೆ ಹೆಚ್ಚು ಕಾಲ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಡೀಸೆಲ್ ಎಂಜಿನ್‌ಗಳು ಸಹ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿವೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಡೀಸೆಲ್ ಕಾರು 3-5 ಲಕ್ಷ ಕಿಲೋ ಮೀಟರ್‌ಗಳವರೆಗೆ ಸುಲಭವಾಗಿ ಓಡಬಲ್ಲದು.

Maruti E-Vitara: ಹೊಸ ಕಾರು ಖರೀದಿಸ್ತೀರ?: ಮಾರುತಿಯ ಬಹುಬೇಡಿಕೆಯ ಮೊದಲ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಪ್ರಾರಂಭ

ಟಾರ್ಕ್ ಮತ್ತು ಶಕ್ತಿ: ಹೆವಿ ಡ್ಯೂಟಿ ಕಾರ್ಯಕ್ಷಮತೆ:

ಡೀಸೆಲ್ ಎಂಜಿನ್ ಉತ್ತಮ ಟಾರ್ಕ್ ಮತ್ತು ಕಡಿಮೆ-ಮಟ್ಟದ ಶಕ್ತಿಯನ್ನು ನೀಡುತ್ತದೆ. ಇದಕ್ಕಾಗಿಯೇ ಡೀಸೆಲ್ ಕಾರುಗಳು, ವಿಶೇಷವಾಗಿ ಎಸ್​ ಯುವಿಗಳು ಮತ್ತು ಭಾರೀ ವಾಹನಗಳು, ಒರಟು ರಸ್ತೆಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಡೀಸೆಲ್ ಕಾರುಗಳೊಂದಿಗೆ ಹೆದ್ದಾರಿಯಲ್ಲಿ ಹಿಂದಿಕ್ಕುವುದು ಸುಲಭ. ಅಲ್ಲದೆ, ಅವು ಆಫ್-ರೋಡಿಂಗ್ ಮತ್ತು ಪರ್ವತ ರಸ್ತೆಗಳಿಗೆ ಅತ್ಯುತ್ತಮ ಆಯ್ಕೆಗಳಾಗಿವೆ.

ಹೆದ್ದಾರಿಗಳು ಮತ್ತು ದೂರದ ಪ್ರಯಾಣಗಳಿಗೆ ಉತ್ತಮವಾಗಿದೆ:

ನೀವು ಆಗಾಗ್ಗೆ ದೀರ್ಘ ದೂರ ಪ್ರಯಾಣಿಸುತ್ತಿದ್ದರೆ ಅಥವಾ ನಿಮ್ಮ ಕಾರನ್ನು ಹೆಚ್ಚಾಗಿ ಹೆದ್ದಾರಿಯಲ್ಲಿ ಓಡಿಸುತ್ತಿದ್ದರೆ, ಡೀಸೆಲ್ ಕಾರು ಅತ್ಯಂತ ಸೂಕ್ತವಾದ ಆಯ್ಕೆಯಾಗಿರಬಹುದು. ಹೆದ್ದಾರಿಯಲ್ಲಿ ಇಂಧನ ದಕ್ಷತೆ ಉತ್ತಮವಾಗಿದೆ. ದೀರ್ಘ ಪ್ರಯಾಣಗಳಲ್ಲಿ ಡೀಸೆಲ್ ಪೆಟ್ರೋಲ್‌ ಗಿಂತ ಹೆಚ್ಚು ಮಿತವ್ಯಯಕಾರಿಯಾಗಿದೆ ಮತ್ತು ಹೆಚ್ಚಿನ ಟಾರ್ಕ್‌ನಿಂದಾಗಿ, ಸವಾರಿ ಸುಗಮವಾಗಿರುತ್ತದೆ.

ಡೀಸೆಲ್ ಬೆಲೆ ಕಡಿಮೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತವೆ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಡೀಸೆಲ್ ಬೆಲೆ ಪೆಟ್ರೋಲ್‌ ಬೆಲೆಗಿಂತ ಅಗ್ಗವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ವಾಣಿಜ್ಯ ಬಳಕೆಗಾಗಿ (ಕ್ಯಾಬ್, ಟ್ಯಾಕ್ಸಿ, ಸಾರಿಗೆ) ಕಾರನ್ನು ಖರೀದಿಸುತ್ತಿದ್ದರೆ, ಡೀಸೆಲ್ ಎಂಜಿನ್ ಹೆಚ್ಚು ಪ್ರಯೋಜನಕಾರಿಯಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ