AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೀಸೆಲ್ ಕಾರುಗಳಿಗೆ ಇಂದುಕೂಡ ಇಷ್ಟೊಂದು ಬೇಡಿಕೆ ಏಕೆ?: ಇದರ 5 ದೊಡ್ಡ ಅನುಕೂಲಗಳು ಇಲ್ಲಿ ತಿಳಿಯಿರಿ

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳು ಉತ್ತಮ ಮೈಲೇಜ್ ನೀಡುತ್ತವೆ. ಉದಾಹರಣೆಗೆ, ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 15 ಕಿಲೋ ಮೀಟರ್ ಮೈಲೇಜ್ ನೀಡಿದರೆ, ಅದೇ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 20 ಕಿಲೋ ಮೀಟರ್‌ಗಳವರೆಗೆ ಹೋಗಬಹುದು. ಡೀಸೆಲ್ ಕಾರುಗಳ ಈ 5 ದೊಡ್ಡ ಅನುಕೂಲಗಳ ಬಗ್ಗೆ ಮಾಹಿತಿ ಇಲ್ಲಿದೆ.

ಡೀಸೆಲ್ ಕಾರುಗಳಿಗೆ ಇಂದುಕೂಡ ಇಷ್ಟೊಂದು ಬೇಡಿಕೆ ಏಕೆ?: ಇದರ 5 ದೊಡ್ಡ ಅನುಕೂಲಗಳು ಇಲ್ಲಿ ತಿಳಿಯಿರಿ
Diesel Car
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 05, 2025 | 10:59 AM

Share

ಹೊಸ ಕಾರು ಖರೀದಿಸುವ ವಿಷಯ ಬಂದಾಗಲೆಲ್ಲಾ, ಪೆಟ್ರೋಲ್ ಕಾರು ಖರೀದಿಸಬೇಕೇ ಅಥವಾ ಡೀಸೆಲ್ ಕಾರು ಖರೀದಿಸಬೇಕೇ ಎಂಬ ದೊಡ್ಡ ಪ್ರಶ್ನೆ ಮೂಡುತ್ತದೆ. ಮಾರುಕಟ್ಟೆಯಲ್ಲಿ ಈಗ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಲಭ್ಯವಿದ್ದರೂ, ಡೀಸೆಲ್ ಕಾರುಗಳ ಜನಪ್ರಿಯತೆ ಇನ್ನೂ ಹಾಗೆ ಉಳಿದಿದೆ. ಡೀಸೆಲ್ ಎಂಜಿನ್‌ಗಳು ಅವುಗಳ ಶಕ್ತಿಶಾಲಿ ಕಾರ್ಯಕ್ಷಮತೆ, ಮೈಲೇಜ್ ಮತ್ತು ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿದೆ. ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಡೀಸೆಲ್ ಕಾರುಗಳ ಈ 5 ದೊಡ್ಡ ಅನುಕೂಲಗಳ ಬಗ್ಗೆ ತಿಳಿದಿರಲೇಬೇಕು.

ಉತ್ತಮ ಮೈಲೇಜ್: ದೂರದ ಪ್ರಯಾಣಕ್ಕೆ ಉತ್ತಮ:

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳು ಉತ್ತಮ ಮೈಲೇಜ್ ನೀಡುತ್ತವೆ. ನೀವು ಹೆಚ್ಚು ದೂರ ಡ್ರೈವ್ ಮಾಡುತ್ತಿದ್ದರೆ ಅಥವಾ ಪ್ರತಿ ದಿನ ಟ್ರಾವೆಲ್ ಮಾಡುವವರಾಗಿದ್ದರೆ, ಡೀಸೆಲ್ ಕಾರು ನಿಮಗೆ ಆರ್ಥಿಕವಾಗಿ ಉತ್ತಮ ಆಯ್ಕೆಯಾಗಿದೆ. ಉದಾಹರಣೆಗೆ, ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 15 ಕಿಲೋ ಮೀಟರ್ ಮೈಲೇಜ್ ನೀಡಿದರೆ, ಅದೇ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 20 ಕಿಲೋ ಮೀಟರ್‌ಗಳವರೆಗೆ ಹೋಗಬಹುದು ಎಂದು ತಿಳಿಯಿರಿ. ಇದರಿಂದಾಗಿ, ಡೀಸೆಲ್ ಕಾರು ದೀರ್ಘಾವಧಿಯಲ್ಲಿ ನಿಮ್ಮ ಹಣವನ್ನು ಉಳಿಸುತ್ತದೆ ಎನ್ನಬಹುದು.

ದೀರ್ಘಾಯುಷ್ಯ ಮತ್ತು ಬಲಿಷ್ಠ ಎಂಜಿನ್:

ಡೀಸೆಲ್ ಎಂಜಿನ್‌ಗಳು ಪೆಟ್ರೋಲ್ ಎಂಜಿನ್‌ಗಳಿಗಿಂತ ಬಲಿಷ್ಠ ಮತ್ತು ಹೆಚ್ಚು ಬಾಳಿಕೆ ಬರುತ್ತವೆ. ಇದಕ್ಕಾಗಿಯೇ ವಾಣಿಜ್ಯ ವಾಹನಗಳು (ಟ್ರಕ್‌ಗಳು, ಬಸ್‌ಗಳು, ಟ್ಯಾಕ್ಸಿಗಳು) ಹೆಚ್ಚಾಗಿ ಡೀಸೆಲ್ ಎಂಜಿನ್‌ಗಳಲ್ಲಿ ಚಲಿಸುತ್ತವೆ. ಡೀಸೆಲ್ ಎಂಜಿನ್‌ಗಳು ಪೆಟ್ರೋಲ್ ಎಂಜಿನ್‌ಗಳಿಗಿಂತ ಲೆಸ್ ಕಾಂಪ್ಲೆಕ್ಸ್ ಎಲೆಕ್ಟ್ರಾನಿಕ್ಸ್ ಅನ್ನು ಹೊಂದಿರುತ್ತವೆ, ಇದು ಯಾವುದೇ ಸಮಸ್ಯೆಗಳಿಲ್ಲದೆ ಹೆಚ್ಚು ಕಾಲ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಡೀಸೆಲ್ ಎಂಜಿನ್‌ಗಳು ಸಹ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿವೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಡೀಸೆಲ್ ಕಾರು 3-5 ಲಕ್ಷ ಕಿಲೋ ಮೀಟರ್‌ಗಳವರೆಗೆ ಸುಲಭವಾಗಿ ಓಡಬಲ್ಲದು.

Maruti E-Vitara: ಹೊಸ ಕಾರು ಖರೀದಿಸ್ತೀರ?: ಮಾರುತಿಯ ಬಹುಬೇಡಿಕೆಯ ಮೊದಲ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಪ್ರಾರಂಭ

ಟಾರ್ಕ್ ಮತ್ತು ಶಕ್ತಿ: ಹೆವಿ ಡ್ಯೂಟಿ ಕಾರ್ಯಕ್ಷಮತೆ:

ಡೀಸೆಲ್ ಎಂಜಿನ್ ಉತ್ತಮ ಟಾರ್ಕ್ ಮತ್ತು ಕಡಿಮೆ-ಮಟ್ಟದ ಶಕ್ತಿಯನ್ನು ನೀಡುತ್ತದೆ. ಇದಕ್ಕಾಗಿಯೇ ಡೀಸೆಲ್ ಕಾರುಗಳು, ವಿಶೇಷವಾಗಿ ಎಸ್​ ಯುವಿಗಳು ಮತ್ತು ಭಾರೀ ವಾಹನಗಳು, ಒರಟು ರಸ್ತೆಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಡೀಸೆಲ್ ಕಾರುಗಳೊಂದಿಗೆ ಹೆದ್ದಾರಿಯಲ್ಲಿ ಹಿಂದಿಕ್ಕುವುದು ಸುಲಭ. ಅಲ್ಲದೆ, ಅವು ಆಫ್-ರೋಡಿಂಗ್ ಮತ್ತು ಪರ್ವತ ರಸ್ತೆಗಳಿಗೆ ಅತ್ಯುತ್ತಮ ಆಯ್ಕೆಗಳಾಗಿವೆ.

ಹೆದ್ದಾರಿಗಳು ಮತ್ತು ದೂರದ ಪ್ರಯಾಣಗಳಿಗೆ ಉತ್ತಮವಾಗಿದೆ:

ನೀವು ಆಗಾಗ್ಗೆ ದೀರ್ಘ ದೂರ ಪ್ರಯಾಣಿಸುತ್ತಿದ್ದರೆ ಅಥವಾ ನಿಮ್ಮ ಕಾರನ್ನು ಹೆಚ್ಚಾಗಿ ಹೆದ್ದಾರಿಯಲ್ಲಿ ಓಡಿಸುತ್ತಿದ್ದರೆ, ಡೀಸೆಲ್ ಕಾರು ಅತ್ಯಂತ ಸೂಕ್ತವಾದ ಆಯ್ಕೆಯಾಗಿರಬಹುದು. ಹೆದ್ದಾರಿಯಲ್ಲಿ ಇಂಧನ ದಕ್ಷತೆ ಉತ್ತಮವಾಗಿದೆ. ದೀರ್ಘ ಪ್ರಯಾಣಗಳಲ್ಲಿ ಡೀಸೆಲ್ ಪೆಟ್ರೋಲ್‌ ಗಿಂತ ಹೆಚ್ಚು ಮಿತವ್ಯಯಕಾರಿಯಾಗಿದೆ ಮತ್ತು ಹೆಚ್ಚಿನ ಟಾರ್ಕ್‌ನಿಂದಾಗಿ, ಸವಾರಿ ಸುಗಮವಾಗಿರುತ್ತದೆ.

ಡೀಸೆಲ್ ಬೆಲೆ ಕಡಿಮೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತವೆ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಡೀಸೆಲ್ ಬೆಲೆ ಪೆಟ್ರೋಲ್‌ ಬೆಲೆಗಿಂತ ಅಗ್ಗವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ವಾಣಿಜ್ಯ ಬಳಕೆಗಾಗಿ (ಕ್ಯಾಬ್, ಟ್ಯಾಕ್ಸಿ, ಸಾರಿಗೆ) ಕಾರನ್ನು ಖರೀದಿಸುತ್ತಿದ್ದರೆ, ಡೀಸೆಲ್ ಎಂಜಿನ್ ಹೆಚ್ಚು ಪ್ರಯೋಜನಕಾರಿಯಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ