Sign In

By signing in or creating an account, you agree with Associated Broadcasting Company's Terms & Conditions and Privacy Policy.

Auto Tips: ಕಾರಿನ ಹಿಂಭಾಗದ ಕನ್ನಡಿ ಮೇಲೆ ರೆಡ್ ಲೈನ್ ಇರುವುದೇಕೆ ಗೊತ್ತೇ?: ಇಲ್ಲಿದೆ ಕುತೂಹಲ ಸಂಗತಿ

ಇಂದು ಮಾರುಕಟ್ಟೆಗೆ ಬರುವ ಬಹುತೇಕ ಕಾರುಗಳ ಹಿಂಬದಿಯ ಗಾಜಿನ ಮೇಲೆ ಉದ್ದನೆಯ ಕೆಂಪು ಗೆರೆಗಳು ಇರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ. ಹಿಂದಿನ ಕೆಲವು ಕಾರು ಈ ರೇಖೆಯನ್ನು ಹೊಂದಿಲ್ಲ. ಇದು ಏಕೆ ಇರುತ್ತದೆ ಎಂದು ನೀವು ಯೋಚಿಸಿದ್ದೀರಾ..? ಇದರ ಹಿಂದಿನ ಕಾರಣ ಏನು ಗೊತ್ತಾ..?.

Auto Tips: ಕಾರಿನ ಹಿಂಭಾಗದ ಕನ್ನಡಿ ಮೇಲೆ ರೆಡ್ ಲೈನ್ ಇರುವುದೇಕೆ ಗೊತ್ತೇ?: ಇಲ್ಲಿದೆ ಕುತೂಹಲ ಸಂಗತಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Oct 16, 2024 | 5:34 PM

ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳು ಇಂದು ಮಾನವ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ಜನರು ತಮ್ಮ ದೈನಂದಿನ ಜೀವನದಲ್ಲಿ ವಾಹನಗಳೊಂದಿಗೆ ಹೆಚ್ಚು ಹೆಚ್ಚು ಪ್ರಯಾಣಿಸುತ್ತಾರೆ. ಹೀಗಿರುವಾಗ, ನೀವು ರಸ್ತೆಯಲ್ಲಿ ಹಾದುಹೋಗುವ ಕಾರುಗಳ ಹಿಂಬದಿಯ ಕನ್ನಡಿಗಳ ಮೇಲೆ ಕೆಲವು ಕೆಂಪು ಗೆರೆಗಳನ್ನು ಆಗಾಗ್ಗೆ ನೋಡಿರುತ್ತೀರಿ. ಸಾಮಾನ್ಯವಾಗಿ, ಈ ಕೆಂಪು ಗೆರೆಗಳ ಸಾಲುಗಳು ಎಲ್ಲಾ ಕಾರುಗಳಲ್ಲಿ ಇರುವುದಿಲ್ಲ. ಟಾಪ್ ವೇರಿಯಂಟ್ ಅಥವಾ ನಿರ್ದಿಷ್ಟ ಮಾದರಿಯ ಮಧ್ಯ ರೂಪಾಂತರದ ಕೆಲವು ಕಾರುಗಳಲ್ಲಿ ಮಾತ್ರ ಕಾಣಸಿಗುತ್ತದೆ. ಇದು ಏಕೆ ಇರುತ್ತದೆ ಎಂದು ನೀವು ಯೋಚಿಸಿದ್ದೀರಾ..? ಇದರ ಹಿಂದಿನ ಕಾರಣ ಏನು ಗೊತ್ತಾ..?.

ಏಕೆ ಈ ಕೆಂಪು ಗೆರೆಗಳು..?

ಈ ಸಾಲುಗಳು ಕಾರುಗಳ ಹಿಂಭಾಗದ ಕನ್ನಡಿಗಳಲ್ಲಿ (ವಿಂಡ್‌ಶೀಲ್ಡ್) ಇರುತ್ತದೆ. ಅನೇಕ ಜನರು ಇವುಗಳನ್ನು ಸ್ಟೈಲ್​ಗೆ ಅಥವಾ ಡಿಸೈನ್ ಸ್ಟಿಕ್ಕರ್‌ಗಳು ಎಂದು ಭಾವಿಸುತ್ತಾರೆ. ಆದರೆ, ಈ ಕೆಂಪು ಗೆರೆಗಳು ವಿನ್ಯಾಸದ ಸ್ಟಿಕ್ಕರ್‌ಗಳಲ್ಲ. ಇದು ಭದ್ರತಾ ಉದ್ದೇಶಕ್ಕಾಗಿ ಇರುತ್ತದೆ. ಕಾರನ್ನು ಸುರಕ್ಷಿತವಾಗಿ ಓಡಿಸಲು ಇದು ಸಹಾಯ ಮಾಡುತ್ತದೆ. ಕಾರಿನ ಹಿಂಭಾಗದ ಕನ್ನಡಿಯ ಮೇಲಿನ ಈ ಕೆಂಪು ಗೆರೆಗಳು ಲೋಹದಿಂದ ಮಾಡಿದ ತಂತಿಗಳಾಗಿವೆ. ಇದನ್ನು ‘ಡಿಫೊಗರ್ ಗ್ರಿಡ್ ಲೈನ್’ (ಡಿಫಾಗರ್) ಅಥವಾ ‘ಡಿಫ್ರೋಸ್ಟರ್ ಗ್ರಿಡ್ ಲೈನ್’ (ಡಿಫ್ರೋಸ್ಟರ್ಸ್) ಎಂದು ಕರೆಯಲಾಗುತ್ತದೆ.

ಕೆಂಪು ಗೆರೆಗಳು ಏನು ಮಾಡುತ್ತವೆ..?

ಸಾಮಾನ್ಯವಾಗಿ ಚಳಿ ಮತ್ತು ಮಳೆಗಾಲದಲ್ಲಿ ಹಿಮ ಮತ್ತು ಮಳೆ ಹನಿಗಳು ಕಾರಿನ ಹಿಂಬದಿಯ ಕಿಟಕಿಗಳ ಮೇಲೆ ಹರಡುತ್ತವೆ. ಹೀಗಾಗಿ, ಕಾರು ಚಾಲನೆ ಮಾಡುವ ಚಾಲಕನಿಗೆ ಹಿಂಬದಿಯ ಕನ್ನಡಿಯಿಂದ ಯಾವ ವಾಹನಗಳು ಹಿಂದಿನಿಂದ ಬರುತ್ತಿವೆ ಎಂದು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಈ ಸಮಸ್ಯೆಗಳನ್ನು ತಪ್ಪಿಸಲು, ಈ ಕೆಂಪು ರೇಖೆಗಳು ಹೆಚ್ಚು ಉಪಯುಕ್ತವಾಗಿವೆ.

ಇದರರ್ಥ ಹಿಂದಿನ ಕನ್ನಡಿಗಳ ಮೇಲಿನ ಈ ಕೆಂಪು ಗೆರೆಗಳೊಳಗಿನ ತಂತಿಗಳು ಹಿಮ ಮತ್ತು ಮಳೆಯಿಂದ ನೀರನ್ನು ತ್ವರಿತವಾಗಿ ತೆಗೆದುಹಾಕುತ್ತವೆ. ಅಂದರೆ, ಈ ಡಿಫ್ರಾಸ್ಟರ್ ಗ್ರಿಡ್ ಲೈನ್ ಅನ್ನು ಬಳಸಲು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಸ್ವಿಚ್ ಅನ್ನು ಒದಗಿಸಲಾಗಿದೆ. ಹಿಮ ಅಥವಾ ಮಳೆನೀರು ಹಿಂಭಾಗದ ಗಾಜನ್ನು ಸಂಪೂರ್ಣವಾಗಿ ಆವರಿಸಿದಾಗ ಈ ಸ್ವಿಚ್ ಆನ್ ಮಾಡಬೇಕು. ಆಗ ಈ ಕೆಂಪು ಗೆರೆಗಳೊಳಗಿನ ತಂತಿಗಳಿಗೆ ವಿದ್ಯುತ್ ಪ್ರವಹಿಸಿ ಬಿಸಿಯಾಗುತ್ತದೆ. ಆ ಸಮಯದಲ್ಲಿ, ಐಸ್ ಮತ್ತು ನೀರಿನ ಹನಿಗಳು ಬಿಸಿಯಾಗುತ್ತವೆ ಮತ್ತು ಆವಿಯಾಗುತ್ತವೆ.

ಇದರೊಂದಿಗೆ, ಚಾಲಕನು ಹಿಂಬದಿಯ ಕಿಟಕಿಯ ಮೂಲಕವೂ ಹಿಂಬದಿಯ ನೋಟವನ್ನು ಸ್ಪಷ್ಟವಾಗಿ ನೋಡಬಹುದು. ಕಾರಿನ ಹಿಂಬದಿಯ ಗಾಜಿನ ಮೇಲಿನ ಈ ಸಾಲುಗಳು ಮಳೆಗಾಲ ಮತ್ತು ಚಳಿಗಾಲದ ಪ್ರಯಾಣದ ಸಮಯದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Wed, 16 October 24

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್