AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೃಂದಾವನವಿರುವ ಶ್ರೀ ಕ್ಷೇತ್ರವೇ ಸೋದೆ ಅಥವಾ ಸ್ವಾದಿ ಕ್ಷೇತ್ರ! ವಾದಿರಾಜರ ಮಠದಲ್ಲಿ ಒಟ್ಟು ಐದು ಬೃಂದಾವನ

ಸೋದೆ ಗ್ರಾಮದ ಮಠವನ್ನು ಸ್ವಾಮಿ ಶ್ರೀ ವಿಷ್ಣು ತೀರ್ಥರು ಸ್ಥಾಪಿಸಿದರು . ಸ್ವಾಮಿ ವಾದಿರಾಜ ತೀರ್ಥರ ಬೃಂದಾವನವನ್ನು ಸೋದೆಯಲ್ಲಿ ಕಾಣಬಹುದು. ಸೋದೆ ಮಠದಲ್ಲಿ ಪೂಜಿಸುವ ಮುಖ್ಯ ದೇವತೆಗಳೆಂದರೆ ಭಗವಾನ್ ಭೂ ವರಾಹ ಮತ್ತು ಭಗವಾನ್ ಹಯಗ್ರೀವ . ಶ್ರೀ ಭೂತರಾಜನನ್ನೂ ಇಲ್ಲಿ ಪೂಜಿಸಲಾಗುತ್ತದೆ.  ಸೋದೆ ಮಲೆನಾಡು ಪ್ರದೇಶದ ಒಂದು ಹಳ್ಳಿಯಾಗಿದ್ದು, ಸುತ್ತಲೂ ದಟ್ಟಕಾಡುಗಳಿಂದ ಆವೃತವಾಗಿದೆ .

ಬೃಂದಾವನವಿರುವ ಶ್ರೀ ಕ್ಷೇತ್ರವೇ ಸೋದೆ ಅಥವಾ ಸ್ವಾದಿ ಕ್ಷೇತ್ರ! ವಾದಿರಾಜರ ಮಠದಲ್ಲಿ ಒಟ್ಟು ಐದು ಬೃಂದಾವನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 11, 2022 | 8:48 AM

Share

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ. ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು ದೇವರು ನೆಲೆಸಿರುವ ಸ್ಥಳ. ಇದಕ್ಕೆ ಸಾಕ್ಷಿ ಎಂಬಂತೆ  ಸೋಂದಾ ಅಥವಾ ಸ್ವಾದಿ ಎಂದೂ ಕರೆಯಲ್ಪಡುವ ಸೋಧೆ ಭಾರತದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಬಳಿಯ ಹಳ್ಳಿಯಾಗಿದೆ . ಪ್ರಸಿದ್ಧ ದ್ವೈತ ತತ್ವಜ್ಞಾನಿ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟ ಮಠಗಳಲ್ಲಿ ಒಂದಾದ ಸೋಧೆ ಮಠದ ಪ್ರಧಾನ ಕಛೇರಿ ಸೋಧೆಯಾಗಿದೆ. ಸೋದೆ ಗ್ರಾಮದ ಮಠವನ್ನು ಸ್ವಾಮಿ ಶ್ರೀ ವಿಷ್ಣು ತೀರ್ಥರು ಸ್ಥಾಪಿಸಿದರು . ಸ್ವಾಮಿ ವಾದಿರಾಜ ತೀರ್ಥರ ಬೃಂದಾವನವನ್ನು ಸೋದೆಯಲ್ಲಿ ಕಾಣಬಹುದು. ಸೋದೆ ಮಠದಲ್ಲಿ ಪೂಜಿಸುವ ಮುಖ್ಯ ದೇವತೆಗಳೆಂದರೆ ಭಗವಾನ್ ಭೂ ವರಾಹ ಮತ್ತು ಭಗವಾನ್ ಹಯಗ್ರೀವ . ಶ್ರೀ ಭೂತರಾಜನನ್ನೂ ಇಲ್ಲಿ ಪೂಜಿಸಲಾಗುತ್ತದೆ.  ಸೋದೆ ಮಲೆನಾಡು ಪ್ರದೇಶದ ಒಂದು ಹಳ್ಳಿಯಾಗಿದ್ದು, ಸುತ್ತಲೂ ದಟ್ಟಕಾಡುಗಳಿಂದ ಆವೃತವಾಗಿದೆ . ಇದು ಶಿರಸಿಯಿಂದ 22 ಕಿಮೀ ಮತ್ತು ಹುಲೇಕಲ್ ನಿಂದ 13 ಕಿಮೀ ದೂರದಲ್ಲಿದೆ.

ಇತಿಹಾಸ

ಸೋಂದಾ ಸುದೀರ್ಘ, ದಾಖಲಾದ ಇತಿಹಾಸವನ್ನು ಹೊಂದಿದೆ. ಸೋಂದಾ ಸಾಮ್ರಾಜ್ಯವನ್ನು 1555 ರಲ್ಲಿ ಜೈನ ಮುಖ್ಯಸ್ಥ ಅರಸಪ್ಪ ನಾಯಕ (1555-1598) ಸ್ಥಾಪಿಸಿದರು. ಸೋಂದಾವನ್ನು ಇನ್ನೂರು ವರ್ಷಗಳ ಕಾಲ (1555-1763) ಸೋಂದಾ ನಾಯಕರು ಆಳಿದರು. 1565 ರಲ್ಲಿ ವಿಜಯನಗರ ಬಹಮನಿಗಳು ಪತನವಾಗುವವರೆಗೂ ಅರಸಪ್ಪ ನಾಯಕ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿದ್ದನು. ಅವನು 1598 ರಲ್ಲಿ ಸಾಯುವವರೆಗೂ ಆದಿಲ್ ಶಾನ ಅಧೀನ ಆಡಳಿತಗಾರನಾಗಿ ಮುಂದುವರೆದನು. ಅರಸಪ್ಪ ನಾಯಕನು ಸೋಂದಾದಲ್ಲಿ ವಾದಿರಾಜ ಮಠವನ್ನು ಸ್ಥಾಪಿಸಿದನು, ಅದು ಇನ್ನೂ ಅಸ್ತಿತ್ವದಲ್ಲಿದೆ. ಶಿವಾಜಿ , ಮರಾಠ ಚಕ್ರವರ್ತಿ 1674 ರಲ್ಲಿ ಸೋಂದಾವನ್ನು ವಶಪಡಿಸಿಕೊಂಡರು ಮತ್ತು ಅದನ್ನು ಸೋಂದಾ ದೊರೆ ಸದಾಶಿವ ನಾಯಕನಿಗೆ ಹಿಂದಿರುಗಿಸಿದರು. 1763 ರಲ್ಲಿ ಮೈಸೂರಿನ ಸುಲ್ತಾನ ಹೈದರ್ ಅಲಿ ಸೋಂದಾದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣವಾಗಿ ನಾಶಪಡಿಸಿದನು. ಸೋಂದಾದ ಕೊನೆಯ ಮುಖ್ಯಸ್ಥ ಇಮ್ಮೋಡಿ ಸದಾಶಿವರಾಯರು ಪೋರ್ಚುಗೀಸ್ ಗೋವಾಕ್ಕೆ ಪಲಾಯನ ಮಾಡಿದರು. ಸೋಂದಾವನ್ನು ರಕ್ಷಿಸುತ್ತಿದ್ದ ಕೋಟೆಯ ಅವಶೇಷಗಳು ಪೊದೆಗಳ ಬೆಳವಣಿಗೆಯಿಂದ ಆವೃತವಾಗಿವೆ.

ಮಾಧ್ವ ಸಂಪ್ರದಾಯದವರಿಗೆ ಪೂಜ್ಯನೀಯರಾದ ಹಾಗೂ ದಾಸ ಸಾಹಿತ್ಯಕ್ಕೆ ತಮ್ಮದೆ ಆದ ಅಪಾರ ಕಾಣಿಕೆ ಸಲ್ಲಿಸಿರುವ ಮಾಧ್ವ ಯತಿಗಳಲ್ಲೊಬ್ಬರಾದ ಶ್ರೀ ವಾದಿರಾಜರ ದಿವ್ಯ ಬೃಂದಾವನವಿರುವ ಶ್ರೀಕ್ಷೇತ್ರವೆ ಸ್ವಾದಿ. ಇದನ್ನು ಸೋದೆ, ಸೋಂದ ಎಂಬ ಹೆಸರುಗಳಿಂದಲೂ ಸಹ ಕರೆಯಲಾಗುತ್ತದೆ. 120 ವರ್ಷಗಳ ಜೀವನ ನಡೆಸಿದ ವಾದಿರಾಜ ಯತಿವರ್ಯರ ಆರಾಧ್ಯ ದೈವ ಹಯವದನ ಅಥವಾ ಹಯಗ್ರೀವ. ತಮ್ಮ ಎಂಟನೇಯ ವಯಸ್ಸಿನಲ್ಲೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ಈ ಮಹಾನುಭಾವರು 112 ವರ್ಷಗಳ ಕಾಲ ಸತತವಾಗಿ ದೈವ ಚಿಂತನೆ, ಹರಿ ಕೀರ್ತನೆ, ಧರ್ಮಪ್ರಸಾರ ಹಾಗೂ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.

ಉಡುಪಿ ಜಿಲ್ಲೆಯ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನಿಸಿದ್ದ ವಾದಿರಾಜರು, ವಿಜಯನಗರ ಅರಸರಿಂದ ಸನ್ಮಾನಿಸಲ್ಪಟ್ಟವರು ಹಾಗೂ ಇನ್ನೊಂದು ರೋಚಕ ವಿಷಯವೆಂದರೆ ಕುಡುಮ ಎಂದು ಕರೆಯಲ್ಪಡುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳ ಎಂದು ಹೆಸರು ಬದಲಿಸಿದವರು ಇವರು. ಇವರ ಬೃಂದಾವನವಿರುವ ಶ್ರೀಕ್ಷೇತ್ರವೇ ಸೋದೆ ಅಥವಾ ಸ್ವಾದಿ ಕ್ಷೇತ್ರ. ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಸ್ಥಿತವಿದೆ. ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಸಾಕಷ್ಟು ಪವಿತ್ರವಾದ ಕ್ಷೇತ್ರ ಇದಾಗಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಸ್ವಾದಿ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ. ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿರುವುದನ್ನು ಕಾಣಬಹುದು. ವಾದಿರಾಜರ ಮಠವು ಪ್ರಮುಖ ಕೇಂದ್ರವಾಗಿದ್ದು ಈ ಮಠವನ್ನು ಭಾವಿ ಸಮೀರ ಎಂದು ಕರೆಯಲ್ಪಟ್ಟಿದ್ದ ವಾದಿರಾಜರು ಪ್ರತಿಷ್ಠಾಪಿಸಿದ್ದಾರೆ. ಹಲವು ವರ್ಷಗಳ ಧ್ಯಾನದ ಬಳಿಕ ವಾದಿರಾಜರು ಸಮಾಧಿಯನ್ನು ಸ್ವೀಕರಿಸಿ ಆ ಸ್ಥಳದಲ್ಲೆ ಇಂದು ಬೃಂದಾವನವಿರುವುದನ್ನು ಕಾಣಬಹುದು.

ಮೂಲತಃ ವಾದಿರಾಜರ ಮಠದಲ್ಲಿ ಒಟ್ಟು ಐದು ಬೃಂದಾವನಗಳಿವೆ. ಮಧ್ಯದಲ್ಲಿರುವ ಬೃಂದಾವನವು ವಾದಿರಾಜರದ್ದಾಗಿದ್ದರೆ ಅದರ ಎಡ ಹಾಗೂ ಬಲಕ್ಕಿರುವ ಎರಡೆರಡು ಬೃಂದಾವನಗಳು ಬ್ರಹ್ಮ, ವಿಷ್ಣು, ಶಿವ ಹಾಗೂ ವಾಯುವನ್ನು ಪ್ರತಿನಿಧಿಸುತ್ತವೆ. ಉಡುಪಿಯಲ್ಲಿ ಅಷ್ಟ ಮಠಗಳಿದ್ದು ಅಲ್ಲಿ ಪರ್ಯಾಯ ವ್ಯವಸ್ಥೆಯು ಕಟ್ಟುನಿಟ್ಟಾಗಿದೆ.ಒಂದು ವ್ಯವಸ್ಥೆಯನ್ನು ಉಡುಪಿಯಲ್ಲಿ ಜಾರಿಗೆ ತಂದವರು ವಾದಿರಾಜರೆ ಎಂದು. ಮಠಗಳ ಶಿಸ್ತನ್ನು ಪಾಲಿಸುವ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಯತಿಗಳು ಜಾರಿಗೆ ತಂದರು ಎಂಬ ಮಾತಿದೆ. ಉಡುಪಿ ಕೃಷ್ಣ ಮಠ.

ಭೂತರಾಜರ ಗುಡಿ ಇಲ್ಲಿರುವ ಇನ್ನೊಂದು ಧಾರ್ಮಿಕ ತಾಣವಾಗಿದ್ದು ಭೂತರಾಜರು ಈ ಪವಿತ್ರ ಭೂಮಿಯ ರಕ್ಷಕರು ಎನ್ನಲಾಗಿದೆ. ಇಂದಿಗೂ ನಿರ್ದಿಷ್ಟ ಸಮಯದ ನಂತರ ಭೂತರಾಜರ ಸನ್ನಿಧಿಯೊಳಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ. ತೆಂಗಿನಕಾಯಿಗಳನ್ನು ಕಾಣಿಕೆಯಾಗಿ ಭೂತರಾಜರಿಗೆ ಅರ್ಪಿಸಿ, ಭೂತರಾಜರ ದರ್ಶನ ಪಡೆದ ತರುವಾಯ ಭಕ್ತರು ವಾದಿರಾಜ ಮಠದೆಡೆ ಸಾಗುತ್ತಾರೆ. ಧವಳಗಂಗಾ ಕಲ್ಯಾಣಿಯು ಮೂರು ಮೂಲೆಗಳನ್ನು ಹೊಂದಿದ್ದು ಅದರಲ್ಲಿ ಎರಡು ಮೂಲೆಗಳನ್ನು ಮಾತ್ರವೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿಡಲಾಗಿದೆ. ಮೂರನೇಯ ಮೂಲೆಗೆ ಪ್ರವೇಶಿಸಲು ಅನುಮತಿಯಿಲ್ಲ ಹಾಗೂ ಈ ಮೂಲೆಯು ಭೂತರಾಜರು ಮಾತ್ರವೆ ಉಪಯೋಗಿಸುತ್ತಾರೆಂಬ ಪ್ರತೀತಿಯಿದೆ. ಇನ್ನುಳಿದಂತೆ ವಾದಿರಾಜರಿಂದ ಪ್ರತಿಷ್ಠಾಪಿತ ಚಂದ್ರಮೌಳೀಶ್ವರ, ಆಂಜನೇಯ, ವೇಣುಗೋಪಾಲಸ್ವಾಮಿಯರ ಸನ್ನಿಧಿಗಳು ಹಾಗೂ ಮಠದ ಆವರಣದಲ್ಲಿ ವೇದವ್ಯಾಸರ ಚಿಕ್ಕ ದೇಗುಲ ಮತ್ತು ನಾಗಗಳಿಗೆ ಮುಡಿಪಾದ ನಾಗವನವಿದೆ.

ಕೃಷ್ಣ ಮಠ

ಮಠದ ದಿನ ನಿತ್ಯದ ಪೂಜೆ ಪುನಸ್ಕಾರವನ್ನು ಅಷ್ಟ ಮಠಗಳು ನೋಡಿಕೊಳ್ಳುತ್ತವೆ.ಪ್ರತಿ ಮಠವು 2 ವರ್ಷಗಳಿಗೊಮ್ಮೆ ಆವರ್ತಿಕ ಕ್ರಮದ ಅನುಸಾರ ಜವಬ್ದಾರಿ ನೋಡಿಕೊಳ್ಳುತ್ತದೆ. ಕೃಷ್ಣ ಮಠವು ಧಾರ್ಮಿಕ ಪದ್ದತಿ,ಆಚಾರ ವಿಚಾರ,ದ್ವೈತ ಮತ್ತು ತತ್ವವಾದ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾದ ಜಾಗ.ಉಡುಪಿಯಿಂದ ಹುಟ್ಟಿಕೊಂಡ ದಾಸ ಸಾಹಿತ್ಯಕ್ಕೆ ಜನಪ್ರಿಯತೆ ಪಡೆದುಕೊಂಡಿದೆ. ಮಠದ ವೆಚ್ಚಗಳನ್ನು ಅಷ್ಟ ಮಠಗಳು ಮತ್ತು ಭಕ್ತರೇ ಸ್ವತಃ ಸ್ವಯಂಪ್ರೇರಿತವಾಗಿ ನೋಡಿಕೊಳ್ಳುತ್ತಾರೆ. 1975ರ ಭೂ ಸುಧಾರಣಾ ಕಾಯಿದೆಯ ಅನುಷ್ಠಾನದಿಂದಾಗಿ ಮಠವು ತನ್ನ ಹಲವಾರು ಭೂಮಿಯನ್ನು ಕಳೆದುಕೊಂಡಿತು. ಕೃಷ್ಣ ಮಠದ ಪೌಳಿಯನ್ನು ನವೀಕರಿಸಿ ಮೇ 18 2017 ರಂದು ಅದರ ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಯಿತು.

ವೈಷ್ಣವಿ ಪುರಾಣಿಕ್ ಕುಂಭಾಸಿ, ಕುಂದಾಪುರ 

Follow Us
Web contact
Web contact

TV9 Kannada

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?