AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Updates: ಇಮೇಲ್, ವಾಟ್ಸಾಪ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಲು ದಾಖಲೆ ಕಳುಹಿಸದಿರಿ: ಯುಐಡಿಎಐ ಎಚ್ಚರ

UIDAI tweets: ಆಧಾರ್ ಅಪ್​ಡೇಟ್ ಮಾಡುತ್ತೇವೆಂದು ಹೇಳಿ ಕೆಲ ದುಷ್ಕರ್ಮಿಗಳು ಅಡ್ರೆಸ್ ಪ್ರೂಫ್, ಐಡಿ ಪ್ರೂಫ್ ದಾಖಲೆಗಳನ್ನು ವಾಟ್ಸಾಪ್, ಇಮೇಲ್ ಮೂಲಕ ಕೇಳುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿಗೆ ಅಲರ್ಟ್ ಮೆಸೇಜ್ ಹಾಕಿದೆ.

Aadhaar Updates: ಇಮೇಲ್, ವಾಟ್ಸಾಪ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಲು ದಾಖಲೆ ಕಳುಹಿಸದಿರಿ: ಯುಐಡಿಎಐ ಎಚ್ಚರ
ಆಧಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 22, 2023 | 2:39 PM

Share

ಆಧಾರ್ ಕಾರ್ಡ್ ಭಾರತದಲ್ಲಿ ಒಂದು ಪ್ರಮುಖ ದಾಖಲೆ ಎನಿಸಿದೆ. ಇದು ನಾಗರಿಕರಿಗೆ ಗುರುತಿನ ಚೀಟಿಯೂ ಹೌದು, ಅಡ್ರೆಸ್ ಪ್ರೂಫ್ ಕೂಡ ಹೌದು. ಸರ್ಕಾರದ ಯೋಜನೆಗಳ ಫಲ ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಯೂ ಹೌದು. ವ್ಯಕ್ತಿಯ ಬೆರಳಚ್ಚು, ಕಣ್ಣಿನ ಗುರುತಿನ ಬಯೋಮೆಟ್ರಿಕ್​ಗಳಂತಹ ಸೂಕ್ಷ್ಮ ಮಾಹಿತಿ ಆಧಾರ್​ನಲ್ಲಿ ಇರುತ್ತವೆ. ಯುಐಡಿಎಐನಿಂದ ನಿರ್ವಹಿಸಲಾಗುವ ಆಧಾರ್ ಕಾರ್ಡ್ ಅನ್ನು ದುಷ್ಕರ್ಮಿಗಳು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಇದ್ದೇ ಇದೆ. ಈಗ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಬಹುದಾದ್ದರಿಂದ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಿವೆ. ಯುಐಡಿಎಐ (UIDAI) ಆಗಾಗ್ಗೆ ಜನರಿಗೆ ಈ ವಂಚನೆಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುತ್ತದೆ. ಈಗ ವಂಚಕರು ಇಮೇಲ್ ಮತ್ತು ವಾಟ್ಸಾಪ್ ಮೂಲಕ ಆಧಾರ್ ಪ್ರೂಫ್​ಗೆ ಸಂಬಂಧಿಸಿದ ದಾಖಲೆಗಳನ್ನು ಕೇಳುತ್ತಿರುವುದು ಹೆಚ್ಚಾಗಿದೆ. ಈ ಬಗ್ಗೆ ಆಧಾರ್ ಪ್ರಾಧಿಕಾರ ಸೋಷಿಯಲ್ ಮೀಡಿಯಾದಲ್ಲಿ ಅಲರ್ಟ್ ಮೆಸೇಜ್ ಪೋಸ್ಟ್ ಮಾಡಿದೆ.

‘ಆಧಾರ್ ಅನ್ನು ಅಪ್​ಡೇಟ್ ಮಾಡಲು ಐಡಿ ಪ್ರೂಫ್ ಅಥವಾ ವಿಳಾಸ ಪ್ರೂಫ್ ದಾಖಲೆಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಯುಐಡಿಎಐ ಯಾವತ್ತೂ ಕೇಳುವುದಿಲ್ಲ. ವಂಚಕರ ಬಗ್ಗೆ ಹುಷಾರ್. ಮೈ ಆಧಾರ್​ನ ಪೋರ್ಟಲ್ ಮೂಲಕ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಿ. ಅಥವಾ ನಿಮಗೆ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಅಪ್​ಡೇಟ್ ಮಾಡಿ,’ ಎಂದು ಯುಐಡಿಎಐ ಹೇಳುತ್ತಿದೆ.

ಆಧಾರ್ ಅನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡುವ ಕ್ರಮಗಳು

  • ಯುಐಡಿಎಐ ವೆಬ್​ಸೈಟ್​ನಲ್ಲಿ ಮೈ ಆಧಾರ್ ಪೋರ್ಟಲ್​ಗೆ ಹೋಗಿ: myaadhaar.uidai.gov.in
  • ನಿಮ್ಮ ಆಧಾರ್ ನಂಬರ್ ಬಳಸಿ ಪೋರ್ಟಲ್​ಗೆ ಲಾಗಿನ್ ಆಗಿ
  • ಡಾಕ್ಯುಮೆಂಟ್ ಅಪ್​ಡೇಟ್ ಸೆಕ್ಷನ್​ಗೆ ಹೋಗಿ ಅಲ್ಲಿರುವ ವಿವರಗಳು ನಿಖರವಾಗಿವೆಯಾ ಪರಿಶೀಲಿಸಿ.
  • ಡ್ರಾಪ್ ಡೌನ್ ಲಿಸ್ಟ್​ನಲ್ಲಿ ಯಾವ ಡಾಕ್ಯುಮೆಂಟ್ ಅಪ್​ಡೇಟ್ ಆಗಬೇಕು ಎಂಬುದನ್ನು ಅರಿಸಿ. ಮೂಲ ದಾಖಲೆಯ ಸ್ಕ್ಯಾನ್ಡ್ ಕಾಪಿಯನ್ನು ವೆರಿಫಿಕೇಶನ್​ಗಾಗಿ ಅಪ್​ಲೋಡ್ ಮಾಡಿ.
  • ಇದಾದ ಬಳಿಕ ನಿಮಗೆ ಎಸ್​ಆರ್​ಎನ್ ಸಂಖ್ಯೆ ಅಥವಾ ಸರ್ವಿಸ್ ರಿಕ್ವೆಸ್ಟ್ ನಂಬರ್ ಕಾಣುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ. ಮುಂದಿನ ಪ್ರಕ್ರಿಯೆ ಬೇಕಾದಾಗ ರೆಫರೆನ್ಸ್​ಗೆ ಈ ನಂಬರ್ ಬೇಕಾಗಬಹುದು.

ಇದನ್ನೂ ಓದಿ: ಭಾರತದಲ್ಲಿ ಈರುಳ್ಳಿ ಬೆಲೆ ಯಾಕೆ ಹೆಚ್ಚುತ್ತಿದೆ? ಶೇ. 40ರಷ್ಟು ರಫ್ತುಸುಂಕ ವಿಧಿಸುವ ಕ್ರಮ ಹಿಂದೆ ಏನಿದೆ ತಂತ್ರ?

ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಆಗದೇ ಇರಲು ಕಾರಣಗಳು?

ಆನ್​ಲೈನ್ ಮೂಲಕ ನಾವು ಆಧಾರ್ ಅಪ್​ಡೇಟ್ ಮಾಡಲು ಯತ್ನಿಸುವಾಗ ಕೆಲವೊಮ್ಮೆ ವಿಫಲವಾಗಬಹುದು. ಸರಿಯಾದ ದಾಖಲೆಗಳನ್ನು ಅಪ್​ಲೋಡ್ ಮಾಡದೇ ಇದ್ದಾಗ ಹೀಗಾಗಬಹುದು. ದಾಖಲೆಯ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅದನ್ನು ಅಪ್​ಲೋಡ್ ಮಾಡಬೇಕು. ಹಾಗೆ ಮಾಡಿರದಿದ್ದರೆ ಅಪ್​ಡೇಟ್ ಆಗದೇ ಇರಬಹುದು. ಹಾಗೆಯೇ, ಪ್ರೂಫ್ ದಾಖಲೆಗಳು ನಿಮ್ಮ ಹೆಸರಿನಲ್ಲಿ ಇಲ್ಲದೇ ಇದ್ದಾಗಲೂ ಹೀಗಾಗಬಹುದು.

ಆಧಾರ್ ಸೆಂಟರ್​ಗೆ ಹೋಗಿ ಅಪ್​ಡೇಟ್ ಮಾಡಿ

ಸಮೀಪದ ಆಧಾರ್ ಕೇಂದ್ರವೊಂದಕ್ಕೆ ಹೋಗಿಯೂ ಆಧಾರ್ ಅಪ್​ಡೇಶನ್ ಮಾಡಬಹುದು. ಹೋಗುವಾಗ ಜೊತೆಯಲ್ಲಿ ವಿಳಾಸ ಪ್ರೂಫ್ ಮತ್ತು ಐಡಿ ಪ್ರೂಫ್ ದಾಖಲೆಗಳನ್ನು ತೆಗೆದುಕೊಂಡು ಹೋಗಿ. ಅಲ್ಲಿ ಸಹಾಯಕ ಸಿಬ್ಬಂದಿಗೆ ನಿರ್ದಿಷ್ಟ ಶುಲ್ಕ ಪಾವತಿಸಿ ಆಧಾರ್ ಅಪ್​ಡೇಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?