AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Power: ಅದಾನಿ ಸಮೂಹದಲ್ಲಿ 1 ಲಕ್ಷ ಕೋಟಿ ರೂ. ಬಂಡವಾಳ ಮೌಲ್ಯ ದಾಟಿದ ಆರನೇ ಸಂಸ್ಥೆ ಅದಾನಿ ಪವರ್

ಅದಾನಿ ಪವರ್ ಸಮೂಹದ ಆರನೇ ಕಂಪೆನಿಯಾಗಿದ್ದು, ಮಾರುಕಟ್ಟೆ ಬಂಡವಾಳ ಮೌಲ್ಯ 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಆ ಬಗ್ಗೆ ವಿವರ ಇಲ್ಲಿದೆ.

Adani Power: ಅದಾನಿ ಸಮೂಹದಲ್ಲಿ 1 ಲಕ್ಷ ಕೋಟಿ ರೂ. ಬಂಡವಾಳ ಮೌಲ್ಯ ದಾಟಿದ ಆರನೇ ಸಂಸ್ಥೆ ಅದಾನಿ ಪವರ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 25, 2022 | 10:57 AM

Share

ಅದಾನಿ (Adani) ಸಮೂಹಕ್ಕೆ ಸೇರಿದ ಕಂಪೆನಿಯಾದ ಅದಾನಿ ಪವರ್ 1 ಟ್ರಿಲಿಯನ್ (ಲಕ್ಷ ಕೋಟಿ) ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ದಾಟಿದ ಈ ಗುಂಪಿನ ಆರನೇ ಸಂಸ್ಥೆ ಎನಿಸಿಕೊಂಡಿದೆ. ಸೋಮವಾರದಂದು ಅದಾನಿ ಪವರ್ ಷೇರು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 270.80 ರೂಪಾಯಿ ತಲುಪುವ ಮೂಲಕ ಈ ಸಾಧನೆಯನ್ನು ಮಾಡಿತು. ಅದಾನಿ ಪವರ್ ಷೇರು ಈ ವರ್ಷ ಶೇ 165ರಷ್ಟು ಏರಿಕೆಯನ್ನು ಕಂಡಿದೆ ಮತ್ತು ಈ ತಿಂಗಳು ಶೇ 46ರಷ್ಟು ಗಳಿಸಿಕೊಂಡಿದೆ. ಈ ಹಿಂದೆ, ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಈ ಮೈಲುಗಲ್ಲನ್ನು ಮುಟ್ಟಿದ್ದವು.

2021-22ರ ನಾಲ್ಕನೇ ತ್ರೈಮಾಸಿಕದಲ್ಲಿ ಎನರ್ಜಿ ಉತ್ಪಾದಿಸುವ ಕಂಪೆನಿಗಳು ಬಲವಾದ ಫಲಿತಾಂಶಗಳನ್ನು ವರದಿ ಮಾಡಬಹುದು ಎಂಬ ನಿರೀಕ್ಷೆಯ ಮೇಲೆ ವರ್ಷದ ಆರಂಭದಿಂದಲೂ ವಿದ್ಯುತ್ ಸ್ಟಾಕ್‌ಗಳು ಏರಿವೆ. ಅಲ್ಲದೆ, ಈ ಕಂಪೆನಿಗಳು ಪವರ್ ಡಿಸ್ಕಾಮ್‌ಗಳಿಂದ ಬಾಕಿ ಪಾವತಿ ಮೇಲೆ ಉತ್ತಮ ನಗದು ಹರಿವಿಗೆ ಸಾಕ್ಷಿ ಆಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಮಾರ್ಚ್ ಮಧ್ಯದಿಂದ ದೇಶಾದ್ಯಂತ ತಾಪಮಾನ ಏರಿರುವುದರಿಂದ ವಿದ್ಯುತ್ ಬೇಡಿಕೆಯಲ್ಲಿ ಹಠಾತ್ ಹೆಚ್ಚಳ ಕಂಡುಬಂದಿದೆ, ಬೇಡಿಕೆ-ಪೂರೈಕೆ ಅಂತರವನ್ನು ಹೆಚ್ಚಿಸಿದೆ.

ಅದಾನಿ ಪವರ್ ಇತ್ತೀಚೆಗೆ ರಾಜಸ್ಥಾನದ ಸರ್ಕಾರಿ ಡಿಸ್ಕಾಮ್‌ನಿಂದ ಒಟ್ಟು 3,000 ಕೋಟಿ ರೂಪಾಯಿಗಳ ಬಡ್ಡಿಯೊಂದಿಗೆ ಬಾಕಿಯನ್ನು ಸ್ವೀಕರಿಸಿದೆ. ಫೆಬ್ರವರಿಯಲ್ಲಿ ಪಾವತಿಸಲು ಡಿಸ್ಕಾಂಗೆ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ಷೇರುಗಳು ಈಗಾಗಲೇ ಗಳಿಸಿದ್ದರೂ ಪಾವತಿಯ ರಸೀದಿಯು ಮೇಲಕ್ಕೆ ಏರಿತು. ಕ್ಷೇತ್ರದಲ್ಲಿ ದಕ್ಷತೆ ಮತ್ತು ಶಿಸ್ತು ತರಲು ಹಲವು ವಿದ್ಯುತ್ ವಲಯದ ಸುಧಾರಣೆಗಳನ್ನು ಪರಿಚಯಿಸಿದ ನಂತರವೂ ಈ ಹೆಚ್ಚಳವು ಸಂಭವಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ವಿಶ್ಲೇಷಕರ ಪ್ರಕಾರ, ಭಾರತದ ಹೆಚ್ಚುತ್ತಿರುವ ನಗರ ಜನಸಂಖ್ಯೆ, ಇತ್ತೀಚಿನ ತಿಂಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಸುಧಾರಣೆ ಮತ್ತು ಶುದ್ಧ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಅಗತ್ಯವು ವಿದ್ಯುತ್ ಬೇಡಿಕೆಯಲ್ಲಿ ನಿರಂತರ ಬೆಳವಣಿಗೆಗೆ ದೊಡ್ಡ ಅವಕಾಶವನ್ನು ಒದಗಿಸುತ್ತಿದೆ.

ಇದನ್ನೂ ಓದಿ: Adani Green Energy: ಅದಾನಿ ಗ್ರೀನ್ ಎನರ್ಜಿ ಮಾರುಕಟ್ಟೆ ಬಂಡವಾಳ ಮೌಲ್ಯ ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ