AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Row: ಬ್ಯಾಂಕಿಂಗ್ ವಲಯ ಸ್ಥಿರವಾಗಿದೆ; ಆರ್​ಬಿಐ ಸ್ಪಷ್ಟನೆ

ಬ್ಯಾಂಕ್​ಗಳು ಭಾರೀ ಮೊತ್ತದ ಸಾಲ ನೀಡಿರುವ ಬಗ್ಗೆ ಆರ್​ಬಿಐ ದತ್ತಾಂಶ ಸಂಗ್ರಹ ಮಾಡಿರುತ್ತದೆ. 5 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ನೀಡಿದ್ದರೆ ಬ್ಯಾಂಕ್​ಗಳು ಆರ್​​ಬಿಐಗೆ ವರದಿ ಮಾಡಬೇಕಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Adani Row: ಬ್ಯಾಂಕಿಂಗ್ ವಲಯ ಸ್ಥಿರವಾಗಿದೆ; ಆರ್​ಬಿಐ ಸ್ಪಷ್ಟನೆ
RBI repo rate hike Best time to book your fixed deposits FDs know interest rates here
Ganapathi Sharma
|

Updated on:Feb 04, 2023 | 10:25 AM

Share

ನವದೆಹಲಿ: ದೇಶದ ಬ್ಯಾಂಕಿಂಗ್ ವಲಯ (Banking Sector) ಸದೃಢ ಮತ್ತು ಸ್ಥಿರವಾಗಿದೆ ಎಂದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತಿಳಿಸಿದೆ. ಅದಾನಿ ಸಮೂಹ (Adani group) ಕಂಪನಿಗಳಿಗೆ ಬ್ಯಾಂಕ್​ಗಳು ಸಾಲ ನೀಡಿದ್ದು, ನಷ್ಟದ ಭೀತಿಯಲ್ಲಿವೆ ಎಂಬ ಊಹಾಪೋಹಗಳ ಬೆನ್ನಲ್ಲೇ ಆರ್​ಬಿಐ ಈ ಸ್ಪಷ್ಟನೆ ನೀಡಿದೆ. ಬಂಡವಾಳ ಸಮರ್ಪಕತೆ, ಸ್ವತ್ತು ಗುಣಮಟ್ಟ, ಲಿಕ್ವಿಡಿಟಿ, ಲಾಭದಾಯಕತೆಯು ಆರೋಗ್ಯರವಾಗಿವೆ. ಆರ್​ಬಿಐ ಮಾರ್ಗಸೂಚಿಯನ್ನು ಬ್ಯಾಂಕ್​​ಗಳು ಪಾಲನೆ ಮಾಡುತ್ತಿವೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ. ದೇಶದ ಬ್ಯಾಂಕಿಂಗ್ ವಲಯದ ಮೇಲೆ ನಿಗಾ ಇಡುವುದನ್ನು ಮುಂದುವರಿಸಲಾಗಿದೆ. ಪ್ರಸ್ತುತ ಬ್ಯಾಂಕಿಂಗ್ ವಲಯ ಸ್ಥಿರವಾಗಿದೆ ಎಂದೂ ಆರ್​​ಬಿಐ ಪ್ರಕಟಣೆ ತಿಳಿಸಿದೆ. ದೇಶದ ಬ್ಯಾಂಕ್​ಗಳು ಉದ್ಯಮ ಸಮೂಹಕ್ಕೆ ಭಾರೀ ಪ್ರಮಾಣದಲ್ಲಿ ಸಾಲ ನೀಡಿರುವ ಬಗ್ಗೆ ಮಾಧ್ಯಮ ವರದಿಗಳಾಗಿದ್ದವು. ಈ ವಿಚಾರವಾಗಿ ಆರ್​ಬಿಐ ಪ್ರತಿಕ್ರಿಯೆ ನೀಡಿದೆ. ಆದರೆ ಎಲ್ಲಿಯೂ ಅದಾನಿ ಸಮೂಹದ ಹೆಸರನ್ನು ಉಲ್ಲೇಖಿಸಿಲ್ಲ.

ಬ್ಯಾಂಕ್​ಗಳು ಭಾರೀ ಮೊತ್ತದ ಸಾಲ ನೀಡಿರುವ ಬಗ್ಗೆ ಆರ್​ಬಿಐ ದತ್ತಾಂಶ ಸಂಗ್ರಹ ಮಾಡಿರುತ್ತದೆ. 5 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ನೀಡಿದ್ದರೆ ಬ್ಯಾಂಕ್​ಗಳು ಆರ್​​ಬಿಐಗೆ ವರದಿ ಮಾಡಬೇಕಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಅಮೆರಿಕದ ಹಿಂಡನ್​​ಬರ್ಗ್ ರಿಸರ್ಚ್ ಕಂಪನಿ ಕಳೆದ ವಾರ ಸ್ಫೋಟಕ ವರದಿ ಬಿಡುಗಡೆ ಮಾಡಿದ ಬಳಿಕ ಗೌತಮ್ ಅದಾನಿ ಮಾಲಿಕತ್ವದ ಕಂಪನಿಗಳು ಒಂದು ವಾರದಲ್ಲಿ ನೂರು ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಸಂಪತ್ತನ್ನು ಕಳೆದುಕೊಂಡಿವೆ. ಇವು ವ್ಯವಹಾರದಲ್ಲಿ ಆದ ನಷ್ಟ ಅಲ್ಲ. ಅದಾನಿ ಗ್ರೂಪ್ ಕಂಪನಿಗಳು ಷೇರುಪೇಟೆಯಲ್ಲಿ ಮೌಲ್ಯ ಕಳೆದುಕೊಂಡಿವೆ. ಪರಿಣಾಮವಾಗಿ ಅದಾನಿ ಷೇರು ಸಂಪತ್ತಿನ ಮೊತ್ತ ಬಹಳಷ್ಟು ಕರಗಿಹೋಗಿದೆ.

ಇದನ್ನೂ ಓದಿ: Adani Row: ಅದಾನಿ ಮಹಾಕುಸಿತದಿಂದ ಎಲ್​ಐಸಿ, ಎಸ್​ಬಿಐಗೆ ಹೆಚ್ಚಿನ ಹಾನಿಯಿಲ್ಲ; ಹಣಕಾಸು ಕಾರ್ಯದರ್ಶಿ ಸ್ಪಷ್ಟನೆ

ಇದರ ಬೆನ್ನಲ್ಲೇ ಎಸ್​ಬಿಐ ಸೇರಿದಂತೆ ದೇಶದ ಬ್ಯಾಂಕ್​ಗಳು ಅದಾನಿ ಸಮೂಹದ ಕಂಪನಿಗಳಿಗೆ ನೀಡಿದ ಸಾಲದ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಎಸ್​ಬಿಐ ಮತ್ತು ಎಲ್​ಐಸಿಯಲ್ಲಿರುವ ಬಹಳಷ್ಟು ಸಾರ್ವಜನಿಕರ ಹಣವು ಅದಾನಿ ಗ್ರೂಪ್​ಗಳಲ್ಲಿ ಹೂಡಿಕೆಯಾಗಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿತ್ತು. ಈ ಮಧ್ಯೆ, ಅದಾನಿ ಗ್ರೂಪ್​ನ ವಿವಿಧ ಕಂಪನಿಗಳಿಗೆ ಯಾವ್ಯಾವ ಬ್ಯಾಂಕುಗಳು ಸಾಲ ನೀಡಿವೆ ಎಂದು ಆರ್​ಬಿಐ ಮಾಹಿತಿ ಕಲೆಹಾಕಲು ಆರಂಭಿಸಿತ್ತು. ಈ ಸಂಬಂಧ ಸ್ಥಳೀಯ ಬ್ಯಾಂಕುಗಳಿಂದ ಆರ್​ಬಿಐ ವಿವರ ಕೋರಿತ್ತು.

ಅದಾನಿ ಸಮೂಹ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿರುವುದರಿಂದ ಎಲ್​​ಐಸಿ ಮತ್ತು ಎಸ್​​ಬಿಐಗೆ ಹೆಚ್ಚಿನ ಹಾನಿಯಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಶುಕ್ರವಾರ ಸ್ಪಷ್ಟನೆ ನೀಡಿದ್ದರು. ಆದರೆ, ಅವರು ಅದಾನಿ ಕಂಪನಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Sat, 4 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ