AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ

ವೈರಸ್ ದಾಳಿಯಿಂದ ಬ್ಯಾಂಕ್​ ಖಾತೆಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂರಕ್ಷಿಸಿಕೊಳ್ಳಲು ನಿಮಗೆ ಈ ಮಾಹಿತಿ ತಿಳಿದಿರಲಿ...

ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 29, 2022 | 5:52 PM

Share

ನವದೆಹಲಿ: ಡ್ರಿಲಿಂಕ್ ಕುತಂತ್ರಾಂಶದ (Drinik malware) ಸುಧಾರಿತ ಅಥವಾ ಅಪ್​ಗ್ರೇಡೆಡ್ ವರ್ಷನ್ ದಾಳಿಯಿಂದಾಗಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶಗಳು ಅಪಾಯದಲ್ಲಿವೆ ಎಂದು ವರದಿಯಾಗಿದೆ. ವಿಶ್ಲೇಷಕರ ಪ್ರಕಾರ, ಮಾಲ್​ವೇರ್ ಸದ್ಯ ಆ್ಯಂಡ್ರಾಯ್ಡ್ ಟ್ರೋಜನ್ ಆಗಿ ಪರಿವರ್ತನೆಗೊಂಡಿದ್ದು, ಮಹತ್ವದ ವೈಯಕ್ತಿ ವಿಚಾರಗಳು ಹಾಗೂ ಬ್ಯಾಂಕಿಂಗ್ ದತ್ತಾಂಶಕ್ಕೆ ಕನ್ನ ಹಾಕುವ ಸಾಧ್ಯತೆ ಇದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

2016ರಲ್ಲೇ ಕನ್ನ ಹಾಕಿದ್ದ ಮಾಲ್​ವೇರ್

ಡ್ರಿಲಿಂಕ್ ಕುತಂತ್ರಾಂಶ ಅಥವಾ ಮಾಲ್​ವೇರ್ 2016ರಲ್ಲೇ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಟಕೊಟ್ಟಿತ್ತು. ಆಗ ಎಸ್​ಎಂಎಸ್​ಗಳ ಮೂಲಕ ಗ್ರಾಹಕರ ದತ್ತಾಂಶ ಕದಿಯುತ್ತಿದ್ದ ಮಾಲ್​ವೇರ್ ಈಗ ಇನ್ನಷ್ಟು ಸುಧಾರಿತಗೊಂಡು ಮರಳಿದೆ. ಪ್ರಸ್ತುತ ಸ್ಕ್ರೀನ್​ ರೆಕಾರ್ಡಿಂಗ್, ಕೀಲಾಗಿಂಗ್, ಆಕ್ಸೆಸಿಬಿಲಿಟಿ ಸೇವೆಗಳ ದುರಪಯೋಗ, ಓವರ್​ಲೇ ದಾಳಿಗಳನ್ನು ನಡೆಸುವ ಸಾಮರ್ಥ್ಯ ಒಳಗೊಂಡಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಇದನ್ನೂ ಓದಿ
Image
ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ
Image
Maruti Suzuki: ಮಾರುತಿ ಸುಜುಕಿ ನಿವ್ವಳ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳ
Image
ಟಿಡಿಎಸ್​ ಸಲ್ಲಿಕೆ ಗಡುವು ನವೆಂಬರ್ 30ಕ್ಕೆ ವಿಸ್ತರಿಸಿದ ಸಿಬಿಡಿಟಿ
Image
RBI MPC meet: ಬೆಲೆ ಏರಿಕೆ, ಹಣದುಬ್ಬರ ತಡೆಯಲಾಗದ್ದಕ್ಕೆ ಏನು ಕಾರಣ ನೀಡಬಹುದು ಆರ್​ಬಿಐ?

ಮಾಲ್​ವೇರ್ ಗ್ರಾಹಕರನ್ನು ಗುರಿಯಾಗಿಸುವುದು ಹೀಗೆ…

ಮಾಧ್ಯಮ ವರದಿಗಳ ಪ್ರಕಾರ, ಡ್ರಿಲಿಂಕ್ ಮಾಲ್​ವೇರ್​ನ ಇತ್ತೀಚಿನ ಸುಧಾರಿತ ವರ್ಷನ್ ಎಪಿಕೆ ಹೆಸರಿನ (APK) ಐಅಸಿಸ್ಟ್ (iAssist) ಮೂಲಕ ಗ್ರಾಹಕರನ್ನು ಗುರಿಯಾಗಿಸುತ್ತದೆ. ಐಅಸಿಸ್ಟ್ ಎಂಬುದು ಭಾರತೀಯ ತೆರಿಗೆ ಇಲಾಖೆಯ ಅಧಿಕೃತ ತೆರಿಗೆ ನಿರ್ವಹಣಾ ಟೂಲ್ ಆಗಿದೆ. ಒಮ್ಮೆ ಮಾಲ್​ವೇರ್ ಬಾಧಿತ ಐಅಸಿಸ್ಟ್ ಇನ್​ಸ್ಟಾಲ್ ಮಾಡಿದರೆ, ಅದು ಎಸ್​ಎಂಎಸ್​ಗಳನ್ನು ಕಳುಹಿಸುವ, ಓದುವ ಅನುಮತಿ ಕೇಳುತ್ತದೆ. ಎಕ್ಸ್​​ಟರ್ನಲ್ ಸ್ಟೋರೇಜ್ ಅನ್ನು ಓದುವ ಅನುಮತಿಯನ್ನೂ ಕೇಳುತ್ತದೆ. ಇತರ ಬ್ಯಾಂಕಿಂಗ್ ಟ್ರೋಜನ್​ಗಳಂತೆ ಡ್ರಿಲಿಂಕ್ ಕೂಡ ಸರ್ವೀಸ್ ಆಕ್ಸೆಸಿಬಿಲಿಟಿ ಆಧಾರದಲ್ಲೇ ದಾಳಿ ನಡೆಸುತ್ತದೆ. ಒಮ್ಮೆ ಸಂತ್ರಸ್ತರು ಎಲ್ಲದಕ್ಕೂ ಅನುಮತಿಸಿದ ಬಳಿಕ ಗೂಗಲ್ ಪ್ಲೇ ಪ್ರೊಟೆಕ್ಟ್ ಅನ್ನು ಡಿಸೇಬಲ್ ಮಾಡುತ್ತದೆ. ನಂತರ ತನ್ನ ಕಾರ್ಯಾಚರಣೆ ಶುರುಮಾಡುತ್ತದೆ.

ನಂತರ ನಕಲಿ ಪೇಜ್​ಗಳನ್ನು ತೆರೆಯುವ ಬದಲು ಭಾರತೀಯ ಆದಾಯ ತೆರಿಗೆ ಇಲಾಖೆಯ ನೈಜ ಸೈಟ್​ ಅನ್ನು ಲೋಡ್ ಆಗುವಂತೆ ಮಾಡುತ್ತದೆ. ಲಾಗಿನ್ ಪೇಜ್​ ಅನ್ನು ತೋರಿಸುವ ಮೊದಲು ಮಾಲ್​ವೇರ್, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಥೆಂಟಿಕೇಷನ್ ಸ್ಕ್ರೀನ್​ ಅನ್ನು ಡಿಸ್​ಪ್ಲೇ ಮಾಡುತ್ತದೆ. ಸಂತ್ರಸ್ತರು ಪಿನ್ ಎಂಟರ್ ಮಾಡಿದ ಕೂಡಲೇ ಮಾಲ್​ವೇರ್, ಮೀಡಿಯಾ ಪ್ರೊಜೆಕ್ಷನ್ ಬಳಸಿಕೊಂಡು ಸ್ಕ್ರೀನ್​ರೆಕಾರ್ಡಿಂಗ್ ಮೂಲಕ ಬಯೋಮೆಟ್ರಿಕ್ ಪಿನ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಜತೆಗೆ ಕೀಸ್ಟ್ರೋಕ್​ಗಳನ್ನೂ ಸಂಗ್ರಹಿಸುತ್ತದೆ. ನಂಗತರ ಕದ್ದ ಮಾಹಿತಿಯನ್ನು C&C ಸರ್ವರ್​ಗೆ ಕಳುಹಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ