AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple: ಭಾರತೀಯ ಕಂಪನಿಗಳಿಗೆ ಐಫೋನ್ ಚಿಪ್ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತಾ ಆ್ಯಪಲ್?

Apple in talks with Indian companies for iPhone components assembly: ಆ್ಯಪಲ್ ಕಂಪನಿ ತನ್ನ ಸರಬರಾಜು ಸರಪಳಿಯನ್ನು ಭಾರತಕ್ಕೆ ಹೆಚ್ಚೆಚ್ಚು ವಿಸ್ತರಿಸಲು ಹೊರಟಿದೆ. ಐಫೋನ್ ಅಸೆಂಬ್ಲಿಂಗ್ ಕೆಲಸ ಯಶಸ್ವಿಯಾಗಿ ನಡೆಯುತ್ತಿರುವಂತೆಯೇ ಇದೀಗ ಬಿಡಿಭಾಗಗಳ ಚಿಪ್ ಅಸೆಂಬ್ಲಿಂಗ್ ಕೆಲಸವನ್ನೂ ಭಾರತದಲ್ಲೇ ನಡೆಸಲು ಉದ್ದೇಶಿಸಿದೆ. ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ ಸೇರಿದಂತೆ ಕೆಲ ಭಾರತೀಯ ಸೆಮಿಕಂಡಕ್ಟರ್ ಕಂಪನಿಗಳೊಂದಿಗೆ ಆ್ಯಪಲ್ ಮಾತನಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Apple: ಭಾರತೀಯ ಕಂಪನಿಗಳಿಗೆ ಐಫೋನ್ ಚಿಪ್ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತಾ ಆ್ಯಪಲ್?
ಚಿಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2025 | 5:48 PM

Share

ನವದೆಹಲಿ, ಡಿಸೆಂಬರ್ 17: ಆ್ಯಪಲ್ ಕಂಪನಿ (Apple) ಭಾರತದೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಐಫೋನ್​ಗಳ ಬಿಡಿಭಾಗಗಳಿಗೆ ಬಳಕೆಯಾಗುವ ಚಿಪ್ ಅಸೆಂಬ್ಲಿಂಗ್ ಅನ್ನೂ ಭಾರತದಲ್ಲಿ ನಿರ್ಮಿಸಲು ಆಲೋಚನೆಯಲ್ಲಿದೆ ಆ್ಯಪಲ್. ಈ ಯೋಜನೆ ಸಾಕಾರಗೊಂಡರೆ ಭಾರತದ ಸೆಮಿಕಂಡಕ್ಟರ್ ಮಿಷನ್​ಗೆ ಒಂದು ದೊಡ್ಡ ಶಕ್ತಿ ಮತ್ತು ಯಶಸ್ಸು ಸಿಕ್ಕಂತಾಗಬಹುದು. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಐಫೋನ್ ಕಾಂಪೊನೆಂಟ್​ಗಳ ಅಸೆಂಬ್ಲಿ ಮತ್ತು ಪ್ಯಾಕೇಜಿಂಗ್ ಕಾರ್ಯಕ್ಕಾಗಿ ಆ್ಯಪಲ್ ಕಂಪನಿಯು ಭಾರತದ ಕೆಲ ಸೆಮಿಕಂಡಕ್ಟರ್ ಕಂಪನಿಗಳೊಂದಿಗೆ ಮಾತುಕತೆ ಶುರುವಿಟ್ಟಿದೆಯಂತೆ.

ಐಫೋನ್​ಗಳಲ್ಲಿ ಬಹಳ ಮುಖ್ಯ ಭಾಗವೆನಿಸುವುದು ಅದರ ಚಿಪ್​ಗಳು. ಹೀಗಾಗಿ, ಇವುಗಳ ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಕಾರ್ಯವು ಭಾರತದಲ್ಲಿ ನಡೆದರೆ ಅದು ಒಂದು ಭಾರತದ ಪಾಲಿಗೆ ಒಂದು ಮಹತ್ವದ ಬೆಳವಣಿಗೆಯೇ ಆಗುತ್ತದೆ. ಜಾಗತಿಕ ಎಲೆಕ್ಟ್ರಾನಿಕ್ಸ್ ಸರಬರಾಜು ಸರಪಳಿಯಲ್ಲಿ ಭಾರತವು ಹೆಚ್ಚಿನ ಮೌಲ್ಯ ಗಳಿಸಬಹುದು.

ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ ಜೊತೆ ಆ್ಯಪಲ್ ಮಾತುಕತೆ?

ವರದಿ ಪ್ರಕಾರ ಚಿಪ್ ಅಸೆಂಬ್ಲಿಂಗ್​ಗಾಗಿ ಆ್ಯಪಲ್ ಕಂಪನಿಯು ಕೆಲ ಭಾರತೀಯ ಸೆಮಿಕಂಡಕ್ಟರ್ ಕಂಪನಿಳ ಜೊತೆ ಮಾತನಾಡುತ್ತಿದೆ. ಇವುಗಳಲ್ಲಿ ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ (CG Semi of Murugappa Group) ಕಂಪನಿಯೂ ಒಂದು. ಈ ಸಂಸ್ಥೆ ಗುಜರಾತ್​ನ ಸಾನಂದ್​ನಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (ಒಸಾಟ್) ಘಟಕ ಸ್ಥಾಪಿಸಿದೆ. ಇಲ್ಲಿ ಡಿಸ್​ಪ್ಲೇ ಸಂಬಂಧಿತ ಚಿಪ್​ಗಳ ಅಸೆಂಬ್ಲಿಂಗ್ ಮತ್ತು ಪರೀಕ್ಷೆ ನಡೆಯುವ ಉದ್ದೇಶ ಇದೆ.

ಆದರೆ, ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಆ್ಯಪಲ್ ಕಂಪನಿ ಅಳೆದು ತೂಗಿ ಗುತ್ತಿಗೆಗಳನ್ನು ನೀಡುತ್ತದೆ. ತನಗೆ ಸಮಾಧಾನವಾಗುವಂತಹ ಗುಣಮಟ್ಟದಲ್ಲಿ ಕೆಲಸ ಮಾಡಬಲ್ಲ ಕಂಪನಿಗಳಿಗೆ ಅದು ಕಾಂಟ್ರಾಕ್ಟ್ ನೀಡುತ್ತದೆ. ಒಂದು ವೇಳೆ, ಸಿಜಿ ಸೆಮಿಗೆ ಈ ಆ್ಯಪಲ್ ಕಾಂಟ್ರಾಕ್ಟ್ ಸಿಕ್ಕರೆ ಮಹತ್ವದ ಮೈಲಿಗಲ್ಲೆನಿಸಬಹುದು.

ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್​ಗೆ ತಕ್ಕ ಉತ್ತರ; ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ

ಸದ್ಯ ಆ್ಯಪಲ್ ಕಂಪನಿ ತನ್ನ ಐಫೋನ್ ಡಿಸ್​ಪ್ಲೇ ಪ್ಯಾನಲ್​ಗಳನ್ನು ಸ್ಯಾಮ್ಸುಂಗ್ ಡಿಸ್​ಪ್ಲೇ, ಎಲ್​ಜಿ ಡಿಸ್​ಪ್ಲೇ ಮತ್ತು ಬಿಒಇ ಕಂಪನಿಗಳಿಂದ ತರಿಸಿಕೊಳ್ಳುತ್ತದೆ. ಈ ಡಿಸ್​ಪ್ಲೇ ಪ್ಯಾನಲ್​ಗಳಿಗೆ ಬೇಕಾದ ಡಿಸ್​ಪ್ಲೇ ಡ್ರೈವರ್ ಐಸಿಗಳನ್ನು ಸ್ಯಾಮ್ಸುಂಗ್, ನೊವಾಟೆಕ್, ಹಿಮಾಕ್ಸ್, ಎಲ್​ಎಕ್ಸ್ ಸೆಮಿಕಾನ್ ಕಂಪನಿಗಳು ಸರಬರಾಜು ಮಾಡುತ್ತವೆ. ಇವೆಲ್ಲ ಘಟಕಗಳು ಸೌತ್ ಕೊರಿಯಾ, ತೈವಾನ್ ಮತ್ತು ಚೀನಾದಲ್ಲೇ ಇರುವುದು.

ಅಲ್ಲಿ ಒತ್ತೊತ್ತಾಗಿರುವ ಸರಬರಾಜು ಸರಪಳಿಯನ್ನು ವಿಸ್ತರಿಸಬೇಕೆಂದಿರುವ ಆ್ಯಪಲ್ ಕಂಪನಿ ಈಗ ಭಾರತದಲ್ಲಿ ಅಂಥ ಕಂಪನಿಗಳನ್ನು ನೆಲೆಗೊಳಿಸಲು ಯೋಜಿಸುತ್ತಿದೆ. ಐಫೋನ್ ಅಸೆಂಬ್ಲಿಂಗ್​ಗಾಗಿ ಫಾಕ್ಸ್​ಕಾನ್, ಟಾಟಾ ಎಲೆಕ್ಟ್ರಾನಿಕ್ಸ್, ಪೆಗಾಟ್ರಾನ್ ಕಂಪನಿಗಳಿಗೆ ಗುತ್ತಿಗೆ ಕೊಟ್ಟಂತೆ, ಚಿಪ್ ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಕೂಡ ಭಾರತದಲ್ಲೇ ಆಗಬೇಕೆಂಬುದು ಆ್ಯಪಲ್​ನ ಪ್ಲಾನ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ