Ayushman Bhav: ನಾಲ್ಕೇ ದಿನದಲ್ಲಿ 5 ಲಕ್ಷ ಆಯುಷ್ಮಾನ್ ಕಾರ್ಡ್ ವಿತರಣೆ; ಅಭಿಯಾನಕ್ಕೆ ಲಕ್ಷಾಂತರ ಮಂದಿ ಸ್ಪಂದನೆ

|

Updated on: Sep 22, 2023 | 11:30 AM

Central Health Schemes Implementation: ಸೆಪ್ಟೆಂಬರ್ 13ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್​ನ ಗಾಂಧಿನಗರದಲ್ಲಿ ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಸೆಪ್ಟೆಂಬರ್ 17ರಂದು ಇದರ ಜಾರಿ ಆರಂಭವಾಯಿತು. ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರವರೆಗೂ ಆಯುಷ್ಮಾನ್ ಭವ ಅಭಿಯಾನ ಚಾಲನೆಯಲ್ಲಿ ಇರಲಿದೆ. ಆಯುಷ್ಮಾನ್ ಭವ ಅಭಿಯಾನದಲ್ಲಿ ನಾಲ್ಕೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್​ಗಳ ವಿತರಣೆ ಆಗಿದೆ. 20 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಐಡಿ ಕಾರ್ಡ್​ಗಳನ್ನು ನಿರ್ಮಿಸಲಾಗಿದೆ. ದೇಶಾದ್ಯಂತ ವಿವಿಧ ಆರೋಗ್ಯ ಕೇಂದ್ರಗಳಲ್ಲಿ (ಸಿಎಚ್​ಸಿ) ನಾಲ್ಕು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ.

Ayushman Bhav: ನಾಲ್ಕೇ ದಿನದಲ್ಲಿ 5 ಲಕ್ಷ ಆಯುಷ್ಮಾನ್ ಕಾರ್ಡ್ ವಿತರಣೆ; ಅಭಿಯಾನಕ್ಕೆ ಲಕ್ಷಾಂತರ ಮಂದಿ ಸ್ಪಂದನೆ
ಆಯುಷ್ಮಾನ್ ಭವ
Follow us on

ಕೇಂದ್ರ ಸರ್ಕಾರದ ಆಯುಷ್ಮಾನ್ ಭವ ಅಭಿಯಾನಕ್ಕೆ (Ayushman bhav campaign) ಬಹಳ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಸೆಪ್ಟೆಂಬರ್ 17ರಂದು ಶುರುವಾದ ಆಯುಷ್ಮಾನ್ ಭವ ಅಭಿಯಾನದಲ್ಲಿ ನಾಲ್ಕೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್​ಗಳ ವಿತರಣೆ ಆಗಿದೆ. 20 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA- Ayushman Bharat Health Account) ಐಡಿ ಕಾರ್ಡ್​ಗಳನ್ನು ನಿರ್ಮಿಸಲಾಗಿದೆ. ದೇಶಾದ್ಯಂತ ವಿವಿಧ ಆರೋಗ್ಯ ಕೇಂದ್ರಗಳಲ್ಲಿ (CHC- community health centre) ನಾಲ್ಕು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಸುಧಾಂಶ್ ಪಂತ್ ಈ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ದೇಶಾದ್ಯಂತ ಪ್ರಾಥಮಿಕ ಮತ್ತು ದ್ವಿತೀಯ ಮಟ್ಟಗಳಲ್ಲಿ ಆರೋಗ್ಯ ಸೇವೆಗಳು ಪೂರ್ಣಮಟ್ಟದಲ್ಲಿ ಸಿಗುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿದೆ ಎಂದು ಸುಧಾಂಶ್ ಹೇಳಿದ್ದಾರೆ.

ಸೆಪ್ಟೆಂಬರ್ 13ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್​ನ ಗಾಂಧಿನಗರದಲ್ಲಿ ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಸೆಪ್ಟೆಂಬರ್ 17ರಂದು ಇದರ ಜಾರಿ ಆರಂಭವಾಯಿತು. ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರವರೆಗೂ ಆಯುಷ್ಮಾನ್ ಭವ ಅಭಿಯಾನ ಚಾಲನೆಯಲ್ಲಿ ಇರಲಿದೆ.

ಇದನ್ನೂ ಓದಿ: Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ

ಏನಿದು ಆಯುಷ್ಮಾನ್ ಭವ ಯೋಜನೆ?

ಆಯುಷ್ಮಾನ್ ಭವ ಎಂಬುದು ಸರ್ಕಾರದ ಎಲ್ಲಾ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸಲು ಶುರುವಾಗಿರುವ ಒಂದು ಅಭಿಯಾನ. ಅಯುಷ್ಮಾನ್ ಆಪ್ಕೇ ದ್ವಾರ್ 3.0, ಆಯುಷ್ಮಾನ್ ಸಭಾ, ಅಯುಷ್ಮಾನ್ ಮೇಳಾ ಇತ್ಯಾದಿ ಚಟುವಟಿಕೆಗಳು ಈ ಅಭಿಯಾನದ ಭಾಗವಾಗಿದೆ. ಸರ್ಕಾರದ ಹೆಲ್ತ್ ಸ್ಕೀಮ್​ಗಳ ಬಗ್ಗೆ ತಳಮಟ್ಟದಲ್ಲಿ ಫಲಾನುಭವಿಗಳಲ್ಲಿ ಅರಿವು ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಪಿಎಂ ಜನ್ ಆರೋಗ್ಯ ಯೋಜನಾ ( PMJAY) ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಸ್ಕೀಮ್​ನ ಕಾರ್ಡ್​ಗಳನ್ನು ವಿತರಿಸಲು ಮತ್ತು ಆಯಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ನಂಬರ್​ಗಳನ್ನು ತಯಾರಿಸುವುದು ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮ ಮತ್ತು ಪಟ್ಟಣಗಳಲ್ಲಿ ಈ ಅಭಿಯಾನ ನಡೆಯುತ್ತಿದೆ.

ಇದನ್ನೂ ಓದಿ: ಹೂಡಿಕೆಗಳ ಮೂಲಕ 15 ವರ್ಷದಲ್ಲಿ 1 ಕೋಟಿ ಗಳಿಸುವುದು ಹೇಗೆ? ಇಲ್ಲಿದೆ ಟ್ರಿಪಲ್ 15 ಫಾರ್ಮುಲ

ವಿವಿಧ ಸಾಮುದಾಯಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ ಇರುವ ಚಿಕಿತ್ಸೆಗಳನ್ನು ಬಳಸಿಕೊಳ್ಳುವಂತೆಯೂ ಕೆಂಪೈನ್ ನಡೆಯುತ್ತಿದೆ. ಮಗುವಿನ ಅರೋಗ್ಯ, ಲಸಿಕೆ, ಪೌಷ್ಟಿಕತೆ ಇತ್ಯಾದಿ ಬಗ್ಗೆ ಜಾಗೃತಿ ನಡೆಯುತ್ತಿದೆ.

ಆಯುಷ್ಮಾನ್ ಸಭೆಗಳನ್ನು ಪ್ರತಿಯೊಂದು ಗ್ರಾಮದಲ್ಲೂ ನಡೆಸಲಾಗುತ್ತಿದ್ದು, ಜನ್ ಆರೋಗ್ಯ ಯೋಜನೆಗಳ ಕಾರ್ಡ್ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿ ಕಾರ್ಡ್​ಗಳನ್ನು ವಿತರಿಸಲಾಗುತ್ತಿದೆ. ಈ ಸ್ಕೀಮ್​ನಲ್ಲಿ ಯಾವೆಲ್ಲಾ ಆಸ್ಪತ್ರೆಗಳಲ್ಲಿ ಯಾವೆಲ್ಲಾ ಚಿಕಿತ್ಸೆಗಳು ಉಚಿತವಾಗಿ ಸಿಗುತ್ತವೆ ಎಂಬೆಲ್ಲಾ ಮಾಹಿತಿಯನ್ನು ಜನರಿಗೆ ಒದಗಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ