AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali: ವಿದೇಶೀ ಹೂಡಿಕೆಗಳಿಲ್ಲ, ಖಾಸಗಿ ಜೆಟ್​​ಗಳಿಲ್ಲ… ರಾಷ್ಟ್ರೀಯತೆಯ ಮಂತ್ರದೊಂದಿಗೆ ಪತಂಜಲಿ ಕಟ್ಟಿದ ಬಾಬಾ ರಾಮದೇವ್

Patanjali Ayurveda has no foreign investors, lavish private jets: ಪತಂಜಲಿ ಆಯುರ್ವೇದ, ತನ್ನ ಹಣ್ಣಿನ ರಸಗಳ ಮಾರಾಟದ ಮೂಲಕ ರಾಷ್ಟ್ರ ಸೇವೆಗೆ ಆದ್ಯತೆ ನೀಡುತ್ತದೆ. ಲಾಭಾಂಶವನ್ನು ನೀಡದೆ, ಗಳಿಕೆಯನ್ನು ದೇಶದಲ್ಲೇ ಮರುಹೂಡಿಕೆ ಮಾಡುತ್ತದೆ. ಶಿಕ್ಷಣ, ಗುರುಕುಲಗಳು, ಗೋಪಾಲನಾ ಕೇಂದ್ರಗಳು ಮತ್ತು ಸಾವಯವ ಕೃಷಿಗೆ ಬೆಂಬಲ ನೀಡುತ್ತದೆ. ರಾಷ್ಟ್ರೀಯ ಸೇವೆ ಮತ್ತು ಧಾರ್ಮಿಕ ಸೇವೆಯನ್ನು ಸಮನ್ವಯಗೊಳಿಸಿ, ಪತಂಜಲಿ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ.

Patanjali: ವಿದೇಶೀ ಹೂಡಿಕೆಗಳಿಲ್ಲ, ಖಾಸಗಿ ಜೆಟ್​​ಗಳಿಲ್ಲ... ರಾಷ್ಟ್ರೀಯತೆಯ ಮಂತ್ರದೊಂದಿಗೆ ಪತಂಜಲಿ ಕಟ್ಟಿದ ಬಾಬಾ ರಾಮದೇವ್
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 20, 2025 | 4:30 PM

Share

ಪತಂಜಲಿ ಆಯುರ್ವೇದ (Patanjali Ayurveda) ಸಂಸ್ಥೆ ಇತ್ತೀಚಿನ ದಿನಗಳಲ್ಲಿ ‘ಗುಲಾಬಿ ಶರಬತ್ತು‘ ಜೊತೆಗೆ ‘ಬೇಲ್’ (ಮರಸೇಬು) ಮತ್ತು ‘ಖುಸ್’ (ಗಸಗಸೆ) ಶರಬತ್ತುಗಳಿಗೂ ಸುದ್ದಿಯಲ್ಲಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ, ಈ ಶರಬತ್ತುಗಳಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾದ ಈ ಹಣ್ಣಿನ ರಸಗಳು ಜನರನ್ನು ಬಿಸಿಲಿನಲ್ಲಿ ತಂಪಾಗಿಸಲು ಕೆಲಸ ಮಾಡುತ್ತವೆ. ಆದರೆ ಈ ಶರಬತ್ತುಗಳನ್ನು ತಯಾರಿಸುವಲ್ಲಿಯೂ ಪತಂಜಲಿ ‘ರಾಷ್ಟ್ರ ಸೇವೆ’ಗೆ ಹೆಚ್ಚಿನ ಆದ್ಯತೆ ನೀಡಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಕಂಪನಿಯ ಡಿಎನ್‌ಎಯಲ್ಲಿ ‘ರಾಷ್ಟ್ರೀಯತೆ’ಯನ್ನು ಹೆಣೆದಿದ್ದಾರೆ.

ಇಂದು ಪತಂಜಲಿ ಆಯುರ್ವೇದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಯುರ್ವೇದ ಮತ್ತು FMCG ಕಂಪನಿಯಾಗಿ ಮಾರ್ಪಟ್ಟಿದೆ. ಈ ಕಂಪನಿಯನ್ನು ಸ್ಥಾಪಿಸಲು ಯಾವುದೇ ವಿದೇಶಿ ಹೂಡಿಕೆಗಳನ್ನು ಬಳಸಿಲ್ಲ. ಕಂಪನಿಯು ತನ್ನ ಹಿರಿಯ ಅಧಿಕಾರಿಗಳಿಗೆ ಯಾವುದೇ ಖಾಸಗಿ ಜೆಟ್ ಖರೀದಿಸಿಲ್ಲ. ‘ರಾಷ್ಟ್ರ ಸೇವೆ’ ಈ ಕಂಪನಿಯ ಡಿಎನ್‌ಎಯಲ್ಲಿದೆ ಎಂಬ ಅನಿಸಿಕೆಗೆ ಇದು ಪುಷ್ಟಿ ಕೊಡುತ್ತದೆ.

ಇದನ್ನೂ ಓದಿ: ಶಿಕ್ಷಣ, ಆರೋಗ್ಯ ಮಾತ್ರವಲ್ಲ, ಪತಂಜಲಿ ಗುಲಾಬ್ ಸಿರಪ್​​ನ ಪ್ರತಿ ಹನಿಯಲ್ಲೂ ‘ರಾಷ್ಟ್ರಸೇವೆ’

ಇದನ್ನೂ ಓದಿ
Image
ಪತಂಜಲಿ ಗುಲಾಬ್ ಸಿರಪ್​​ನ ಪ್ರತಿ ಹನಿಯಲ್ಲೂ ‘ರಾಷ್ಟ್ರಸೇವೆ’
Image
ಪಾನೀಯ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದ ಪತಂಜಲಿ ಗುಲಾಬ್ ಶರ್ಬತ್
Image
ಪ್ರಪಂಚಾದ್ಯಂತ ಪತಂಜಲಿ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ
Image
ಪತಂಜಲಿ ಸಂಸ್ಥೆಯ ವಿವಿಧ ಸಾಮಾಜಿಕ ಸೇವೆಗಳ ಪರಿಚಯ

ದೇಶದ ಹಣ, ದೇಶದ ಕೆಲಸ

‘ರಾಷ್ಟ್ರೀಯ ಸೇವೆ’ ಎಂಬುದು ಪತಂಜಲಿ ಆಯುರ್ವೇದದ ತತ್ವದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಕಂಪನಿಯು ತನ್ನ ಷೇರುದಾರರಿಗೆ ಯಾವುದೇ ಲಾಭಾಂಶವನ್ನು ನೀಡುವುದಿಲ್ಲ. ಬದಲಾಗಿ, ಅದು ಭಾರತದಲ್ಲಿ ಗಳಿಸಿದ ಗಳಿಕೆಯನ್ನು ದೇಶದಲ್ಲೇ ಮರು ಹೂಡಿಕೆ ಮಾಡುತ್ತದೆ. ಇದೇ ಕಾರಣಕ್ಕೆ ಪತಂಜಲಿ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ವಿಶ್ವದ ದೊಡ್ಡ FMCG ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದೆ.

ರಾಷ್ಟ್ರ ಸೇವೆ ಮತ್ತು ಧರ್ಮ ಸೇವೆಯ ಗುರಿಗಳು

ಪತಂಜಲಿ ಆಯುರ್ವೇದವು ತನ್ನ ರಾಷ್ಟ್ರೀಯ ಸೇವೆಯನ್ನು ಧಾರ್ಮಿಕ ಸೇವೆಯೊಂದಿಗೆ ಸಂಪರ್ಕಿಸುತ್ತದೆ. ಒಂದೆಡೆ, ಕಂಪನಿಯು ತನ್ನ ಲಾಭದ ಒಂದು ಭಾಗವನ್ನು ಹಳ್ಳಿಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಶಿಕ್ಷಣವನ್ನು ಹರಡಲು ಹೂಡಿಕೆ ಮಾಡುತ್ತದೆ. ಅದೇ ಸಮಯದಲ್ಲಿ, ಪತಂಜಲಿ ವೈದಿಕ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಉತ್ತೇಜಿಸಲು ಗುರುಕುಲವನ್ನು ಸಹ ಸ್ಥಾಪಿಸಿದೆ. ಇದಲ್ಲದೆ, ಕಂಪನಿಯು ಗೋ ಪಾಲನಾ ಕೇಂದ್ರಗಳನ್ನು ನಡೆಸುತ್ತಿದ್ದು, ಅವುಗಳಿಗೆ ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡುತ್ತದೆ.

ಇದನ್ನೂ ಓದಿ: ಪತಂಜಲಿ ಗುಲಾಬ್ ಶರ್ಬತ್; ಬೇಸಿಗೆಯ ಬಿಸಿಲಿಗೆ ಪರಿಹಾರ, ರೈತರಿಗೂ ಆಧಾರ

ಪತಂಜಲಿ ಆಯುರ್ವೇದ್​​ನ ಸಹ-ಸಂಸ್ಥಾಪಕರಾದ ಬಾಬಾ ರಾಮದೇವ್ ಅವರು ಕುಂಭಮೇಳದಲ್ಲಿ ಜನರಿಗೆ ಸೇವೆ ಸಲ್ಲಿಸುವುದು, ಗಂಗಾ ಶುದ್ಧೀಕರಣಕ್ಕೆ ಕೊಡುಗೆ ನೀಡುವುದು ಮತ್ತು ದೇವಾಲಯಗಳಲ್ಲಿ ದೇಣಿಗೆ ನೀಡುವುದನ್ನು ಕಾಣಬಹುದು. ಸಂಸ್ಥೆಯ ಹಣವನ್ನು ಯೋಗ ಕೇಂದ್ರಗಳು, ಆಯುರ್ವೇದ ಔಷಧಾಲಯಗಳನ್ನು ತೆರೆಯಲು ಮತ್ತು ಸಾವಯವ ಕೃಷಿ ನಡೆಸುವ ರೈತರಿಗೆ ಸಹಾಯ ಮಾಡಲು ಬಳಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ