AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕ್ ಕೆವೈಸಿ ಶಿಬಿರ; ದಾಖಲೆಗಳೇನು ಬೇಕು? ಇಲ್ಲಿದೆ ವಿವರ

Banks hold camps till Sep 30 for re-KYC of Jan Dhan accounts: ಬ್ಯಾಂಕ್ ಖಾತೆಗಳ ಮರು ಕೆವೈಸಿ ಮಾಡಿಸಲು ಗ್ರಾಹಕರ ಮನೆ ಬಾಗಿಲಿಗೇ ಬ್ಯಾಂಕುಗಳು ಬಂದಿವೆ. ಆರ್​ಬಿಐ ಅಣತಿ ಮೇರೆಗೆ ಬ್ಯಾಂಕುಗಳು ಗ್ರಾಮ ಪಂಚಾಯಿತಿಗಳಲ್ಲಿ ಶಿಬಿರ ಸ್ಥಾಪಿಸಿವೆ. ಗ್ರಾಹಕರು ಇಲ್ಲಿಯೇ ತಮ್ಮ ಖಾತೆಗಳ ರೀ-ಕೆವೈಸಿ ಮಾಡಿಸಿ ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಳ್ಳದಂತೆ ಎಚ್ಚರ ವಹಿಸಬಹುದು. ಜುಲೈ 1ರಿಂದಲೇ ಆರಂಭವಾಗಿರುವ ಈ ಶಿಬಿರ ಸೆ. 30ರವರೆಗೂ ಇರುತ್ತದೆ.

ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕ್ ಕೆವೈಸಿ ಶಿಬಿರ; ದಾಖಲೆಗಳೇನು ಬೇಕು? ಇಲ್ಲಿದೆ ವಿವರ
ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 27, 2025 | 12:08 PM

Share

ನವದೆಹಲಿ, ಆಗಸ್ಟ್ 27: ಪಿಎಂ ಜನ್ ಧನ್ ಅಕೌಂಟ್ ಸ್ಕೀಮ್ 10 ವರ್ಷ ಪೂರ್ಣಗೊಂಡಿದ್ದು, ಅದರಡಿ ತೆರೆಯಲಾಗಿರುವ ಬಹಳಷ್ಟು ಬ್ಯಾಂಕ್ ಖಾತೆಗಳಿಗೆ ರೀ-ಕೆವೈಸಿ (Re-KYC) ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ಪಂಚಾಯಿತಿ ಮಟ್ಟದಲ್ಲಿ ಜನ್ ಧನ್ ಖಾತೆಗಳಿಗಾಗಿ ಮರು ಕೆವೈಸಿ ಮಾಡಲು ಶಿಬಿರಗಳನ್ನು ನಡೆಸುತ್ತಿವೆ. ಜುಲೈ 1ರಿಂದಲೇ ಕ್ಯಾಂಪ್​ಗಳು ಆರಂಭವಾಗಿದ್ದು, ಅಲ್ಲಿ ಮರು ಕೆವೈಸಿಗೆ ಸೆಪ್ಟೆಂಬರ್ 30ರವರೆಗೂ ಅವಕಾಶ ನೀಡಲಾಗಿದೆ. ಈ ಪಂಚಾಯಿತಿ ಮಟ್ಟದ ಕ್ಯಾಂಪ್​ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಮರು-ಕೆವೈಸಿ ಮಾಡುವುದು ಮಾತ್ರವಲ್ಲ, ಖಾತೆಯಲ್ಲಿ ಸಮಸ್ಯೆ ಇದ್ದರೆ ಸರಿಪಡಿಸುವುದು ಸೇರಿದಂತೆ ವಿವಿಧ ಸೇವೆಗಳು ಲಭ್ಯ ಇವೆ. ನಿಮ್ಮ ಮನೆ ಬಾಗಿಲಿನ ಸಮೀಪವೇ ಬಂದಿರುವ ಬ್ಯಾಂಕುಗಳ ಸೌಲಭ್ಯದ ಅವಕಾಶ ಬಳಸಿಕೊಳ್ಳಬಹುದು.

ಬ್ಯಾಂಕ್ ಖಾತೆಯ ಕೆವೈಸಿ ನವೀಕರಣದ ಮಾಹಿತಿ

  • ಸ್ಥಳ: ನಿಮ್ಮ ಗ್ರಾಮ ಪಂಚಾಯಿತಿ
  • ದಿನ: ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ
  • ದಾಖಲೆಗಳು: ನಿಮ್ಮ ಹೆಸರು ಮತ್ತು ವಿಳಾಸದಲ್ಲಿ ಯಾವುದೇ ಬದಲಾವಣೆ ಆಗಿರದಿದ್ದರೆ ಸ್ವಯಂ ಘೋಷಣೆ ಅಥವಾ ಸೆಲ್ಫ್ ಡಿಕ್ಲರೇಶನ್ ಫಾರ್ಮ್ ಭರ್ತಿ ಮಾಡಿಕೊಡಬಹುದು.

ಹೆಸರು ಮತ್ತು ವಿಳಾಸ ಬದಲಾಗಿದ್ದರೆ, ಅದನ್ನು ಪುಷ್ಟೀಕರಿಸುವ ಒಂದು ದಾಖಲೆ ಬೇಕಾಗುತ್ತದೆ. ಆರ್​ಬಿಐ ನಿಗದಿ ಮಾಡಿದ ಈ ಕೆಳಗಿನ ಒಂದು ದಾಖಲೆ ನೀಡಿದರೆ ಸಾಕಾಗುತ್ತದೆ:

  1. ಆಧಾರ್
  2. ವೋಟರ್ ಐಡಿ
  3. ನರೇಗಾ ಜಾಬ್ ಕಾರ್ಡ್
  4. ಡ್ರೈವಿಂಗ್ ಲೈಸೆನ್ಸ್
  5. ಪಾಸ್​ಪೋರ್ಟ್
  6. ರಾಷ್ಟ್ರೀಯ ಜನಸಂಖ್ಯಾ ನೊಂದಣಿಯಿಂದ ಹೊರಡಿಸಲಾದ ಪತ್ರ

ಇದನ್ನೂ ಓದಿ: ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್​ಗೆ ಅ. 17ರವರೆಗೂ ಅವಕಾಶ

ಪಿಎಂ ಜನ್ ಧನ್ ಖಾತೆಗಳಿಗೆ

ಭಾರತೀಯ ರಿಸರ್ವ್ ಬ್ಯಾಂಕ್ ಈಗ ಪಂಚಾಯಿತಿ ಮಟ್ಟದಲ್ಲಿ ರೀ-ಕೆವೈಸಿ ಮಾಡಿಸುತ್ತಿರುವುದು ಪಿಎಂ ಜನ್ ಧನ್ ಸ್ಕೀಮ್ ಅಡಿ ತೆರೆಯಲಾಗಿರುವ ಬ್ಯಾಂಕ್ ಖಾತೆಗಳಿಗೆ. ಸರ್ಕಾರದ ಸ್ಕೀಮ್​ಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಬಹುತೇಕ ಈ ಬ್ಯಾಂಕ್ ಖಾತೆಗಳಿಗೆ. ಇವುಗಳ ಕೆವೈಸಿ ಅಪ್​ಡೇಟ್ ಆಗದೇ ಹೋದರೆ ಖಾತೆ ಇನಾಪರೇಟಿವ್ ಎಂದು ಪರಿಗಣಿಸಲಾಗಬಹುದು. ಆಗ ಹಣ ರವಾನೆಯಾಗದೇ ಸ್ಥಗಿತಗೊಳ್ಳಬಹುದು. ಈ ಕಾರಣಕ್ಕೆ ಬ್ಯಾಂಕ್ ಖಾತೆಯ ನವೀಕರಣಕ್ಕಾಗಿ ಮರು ಕೆವೈಸಿ ಮಾಡುವುದು ಅತ್ಯಗತ್ಯ.

ಪಂಚಾಯಿತಿ ಮಟ್ಟದಲ್ಲಿ ನಡೆಸಲಾಗುವ ಈ ಶಿಬಿರಗಳಲ್ಲಿ ಬ್ಯಾಂಕ್ ಖಾತೆಗಳಿಗೆ ರೀ-ಕೆವೈಸಿ ಪಡೆಯಲಾಗುತ್ತದೆ. ಜೊತೆಗೆ ಮೈಕ್ರೋ ಇನ್ಷೂರೆನ್ಸ್ ಸ್ಕೀಮ್​ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನವಾಗಲಿದೆ. ಜನರು ಇಂಥ ಸ್ಕೀಮ್​ಗಳಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಬಹುದು. ಆರ್​ಬಿಐನ ಬಾಂಡ್​ಗಳ ಬಗ್ಗೆಯೂ ಗ್ರಾಹಕರಲ್ಲಿ ತಿಳಿವಳಿಕೆ ಮೂಡಿಸಲು ಈ ಶಿಬಿರದಲ್ಲಿ ಪ್ರಯತ್ನವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ