AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Banks & Dravid: ಬ್ಯಾಂಕುಗಳು ರಾಹುಲ್ ದ್ರಾವಿಡ್​ರಂತೆ ಆಡಬೇಕು: ಆರ್​ಬಿಐ ಗವರ್ನರ್ ಕರೆ; ಕ್ರಿಕೆಟಿಗನಿಗೂ ಬ್ಯಾಂಕಿಗೂ ಏನು ಸಂಬಂಧ?

RBI Governor Shaktikanta Das Speaks: ಭಾರತದ ಹಣಕಾಸು ವಲಯದ ಎಲ್ಲರೂ ಕೂಡ ರಾಹುಲ್ ದ್ರಾವಿಡ್ ಅವರಂತೆ ಆಡಬೇಕು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕರೆ ನೀಡಿದ್ದಾರೆ. ಬ್ಯಾಂಕುಗಳು ಕೇವಲ ಕಾರ್ಪೊರೇಟ್ ಲೋನ್ ಮತ್ತು ಅನ್​ಸೆಕ್ಯೂರ್ಡ್ ಲೋನ್ ಮೇಲೆ ಅವಲಂಬಿತವಾಗಿರುವುದು ಅಪಾಯಕಾರಿ ಎಂದಿದ್ದಾರೆ. ಮುಂಬೈನಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಇತ್ತೀಚೆಗೆ ಆಯೋಜಿಸಿದ್ದ ಬಿಎಫ್​ಎಸ್​ಐ ಸಮಿಟ್​ನಲ್ಲಿ ಶಕ್ತಿಕಾಂತ ದಾಸ್ ಮಾತನಾಡುತ್ತಿದ್ದರು.

Banks & Dravid: ಬ್ಯಾಂಕುಗಳು ರಾಹುಲ್ ದ್ರಾವಿಡ್​ರಂತೆ ಆಡಬೇಕು: ಆರ್​ಬಿಐ ಗವರ್ನರ್ ಕರೆ; ಕ್ರಿಕೆಟಿಗನಿಗೂ ಬ್ಯಾಂಕಿಗೂ ಏನು ಸಂಬಂಧ?
ಶಕ್ತಿಕಾಂತ ದಾಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 21, 2024 | 2:17 PM

Share

ಮುಂಬೈ, ಜನವರಿ 21: ರಾಹುಲ್ ದ್ರಾವಿಡ್ (Rahul Dravid) ಹೆಸರನ್ನು ಕ್ರಿಕೆಟ್ ಪ್ರೇಮಿಗಳಲ್ಲದವರೂ ಕೇಳಿದ್ದೇ ಇರುತ್ತಾರೆ. ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ದಿ ವಾಲ್, ಮಿಸ್ಟರ್ ಡಿಪೆಂಡಬಲ್ ಇತ್ಯಾದಿ ಬಿರುದಾಂಕಿತ ಬ್ಯಾಟರ್ ಅವರು. ಇನ್ನಿಂಗ್ಸ್ ಕಟ್ಟುವುದರಲ್ಲಿ ನಿಸ್ಸೀಮ. ರಕ್ಷಣಾತ್ಮಕವಾಗಿ ಆಡಿ ಎದುರಾಳಿ ಬೌಲರ್​ಗಳನ್ನು ನಿಸ್ತೇಜಗೊಳಿಸಬಲ್ಲ ಚಾಣಾಕ್ಷ್ಯ ಆಟಗಾರ. ಆಟದ ಮೈದಾನದಲ್ಲಿ, ಅದರಲ್ಲೂ ಬ್ಯಾಟಿಂಗ್ ಮಾಡುವಾಗ ಅವರದ್ದು ಅತಿ ವಿರಳದ ಏಕಾಗ್ರತೆ. ಎಂಥ ಒತ್ತಡದಲ್ಲೂ ಸಂಯಮ ಕಳೆದುಕೊಳ್ಳುವುದಿಲ್ಲ, ಉದ್ವೇಗಗೊಳ್ಳುವುದಿಲ್ಲ. ಬಿಸಿನೆಸ್ ಸುದ್ದಿಯಲ್ಲಿ ರಾಹುಲ್ ದ್ರಾವಿಡ್ ಗುಣಗಾನ ಯಾಕೆ ಎಂದು ಕೇಳಬಹುದು. ಅದಕ್ಕೆ ಕಾರಣ, ಇತ್ತೀಚೆಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (RBI Governor Shaktikanta Das) ಅವರು ಬ್ಯಾಂಕುಗಳಿಗೆ ರಾಹುಲ್ ದ್ರಾವಿಡ್​ರ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು. ಬ್ಯಾಂಕ್ ಮಾತ್ರವಲ್ಲ, ಎನ್​ಬಿಎಫ್​ಸಿ ಮತ್ತಿತರ ಹಣಕ್ಷೇತ್ರದ ಸರ್ವರಿಗೂ ಅನ್ವಯಿಸಿ ಅವರು ಸಲಹೆ ನೀಡಿದ್ದಾರೆ.

ಮುಂಬೈನಲ್ಲಿ ಕೆಲ ದಿನಗಳ ಹಿಂದೆ ನಡೆದ ಬಿಸಿನೆಸ್ ಸ್ಟ್ಯಾಂಡರ್ಡ್​ನ ಬಿಎಫ್​ಎಸ್​ಐ ಸಮಿಟ್​ನಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಬ್ಯಾಂಕುಗಳು ರಾಹುಲ್ ದ್ರಾವಿಡ್ ಬ್ಯಾಟಿಂಗ್​ನಂತೆ ದೀರ್ಘಾವಧಿ ಆಡಬೇಕು ಎಂದಿದ್ದಾರೆ. ಅಂದಹಾಗೆ ಶಕ್ತಿಕಾಂತ ದಾಸ್ ಕ್ರಿಕೆಟ್ ಅಭಿಮಾನಿಯಾಗಿದ್ದು, ಸಾಮಾನ್ಯವಾಗಿ ತಮ್ಮ ಭಾಷಣದ ವೇಳೆ ಕ್ರಿಕೆಟ್​ನ ನಿದರ್ಶನ ನೀಡುತ್ತಿರುತ್ತಿರುವುದುಂಟು.

ಇದನ್ನೂ ಓದಿ: Great Return: ಒಂದು ಲಕ್ಷ ಹಣ ಆರು ತಿಂಗಳಲ್ಲಿ 12 ಲಕ್ಷ ರೂ; ಇದು ಈ ಮಲ್ಟಿಬ್ಯಾಗರ್ ಮ್ಯಾಜಿಕ್

ಸಾಲದ ಮಿಶ್ರಣ ಸಮರ್ಪಕವಾಗಿರಬೇಕು

ಬ್ಯಾಂಕುಗಳು ಕೇವಲ ಕಾರ್ಪೊರೇಟ್ ಲೋನ್ ಮತ್ತು ಅನ್​ಸೆಕ್ಯೂರ್ಡ್ ಲೋನ್​ಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಈ ಪರಿಸ್ಥಿತಿ ಅಪಾಯಕಾರಿಯಾಗಿರುತ್ತದೆ. ಇದು ನಿಯಂತ್ರಣವಾಗಬೇಕು. ಗೃಹಸಾಲ, ವಾಹನ ಸಾಲ ಇತ್ಯಾದಿ ಎಲ್ಲಾ ರೀತಿಯ ಲೋನ್ ಪ್ರಾಡಕ್ಟ್​ಗಳ ಮಿಶ್ರಣವನ್ನು ಬ್ಯಾಂಕುಗಳು ಹೊಂದಿರಬೇಕು ಎಂದು ಆರ್​ಬಿಐ ಗವರ್ನರ್ ಸಲಹೆ ನೀಡಿದ್ದಾರೆ.

ಸರ್ಕಾರಿ ಬ್ಯಾಂಕುಗಳಲ್ಲಿನ ಉದ್ಯೋಗಿಗಳು, ಅದರಲ್ಲೂ ಉನ್ನತ ಹಂತದ ಅಧಿಕಾರಿಗಳ ಸಂಬಳ ಕಡಿಮೆ ಇದೆ. ಆರ್​ಬಿಐ ಒಂದು ನಿಯಮ ಹಾಕಬೇಕು ಎನ್ನುವ ಕೂಗನ್ನು ಆರ್​ಬಿಐ ಗವರ್ನರ್ ಇದೇ ವೇಳೆ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ

ಪಬ್ಲಿಸ್ ಸೆಕ್ಟರ್ ಬ್ಯಾಂಕ್​ನ ಉದ್ಯೋಗಿಯ ಸಂಬಳವನ್ನು ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಮಧ್ಯಸ್ಥಿಕೆಯಿಂದ ತೀರ್ಮಾನಿತವಾಗುತ್ತದೆ. ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್​ಗಳ ವೇತನಕ್ಕೆ ಸರ್ಕಾರದ ನಿಯಮ ಅನ್ವಯ ಆಗುತ್ತದೆ. ಇದರಲ್ಲಿ ಆರ್​ಬಿಐನ ಪಾತ್ರವೇನೂ ಇರುವುದಿಲ್ಲ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ