AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ

Interesting History of Bombay Stock Exchange: ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್ ಬಿಎಸ್​ಇ 1875ರ ಜುಲೈ 9ರಂದು ಆರಂಭವಾಗಿದ್ದು. ಇವತ್ತಿಗೆ ಸರಿಯಾಗಿ 148 ವರ್ಷಗಳಾದವು. 1855ರಲ್ಲಿ 22 ಷೇರುಬ್ರೋಕರುಗಳು ಆಲದಮರದ ಕೆಳಗೆ ಆರಂಭಿಸಿದ ಬಿಎಸ್​ಇ ಕೇಂದ್ರದ ಬಗ್ಗೆ ಒಂದು ಲೇಖನ...

BSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2023 | 12:54 PM

Share

ಮುಂಬೈ: ಭಾರತದ ಹಾಗೂ ಏಷ್ಯಾದ ಮೊತ್ತಮೊದಲ ಸ್ಟಾಕ್ ಎಕ್ಸ್​ಚೇಂಜ್ ಎನಿಸಿರುವ ಬಿಎಸ್​ಇ ಆರಂಭವಾಗಿ ಇವತ್ತಿಗೆ (ಜುಲೈ 9) ಸರಿಯಾಗಿ 148 ವರ್ಷಗಳು ಗತಿಸಿವೆ. ಹಾಗೆ ನೋಡಿದರೆ ಬಾಂಬೆ ಸ್ಟಾಕ್ ಎಕ್​​ಚೇಂಜ್ (BSE- Bombay Stock Exchange) ಇತಿಹಾಸ 168 ವರ್ಷಗಳಷ್ಟು ಹಳೆಯದು. ಆಲದ ಮರದ ಕೆಳಗೆ ಶುರುವಾದ ಈ ಷೇರುಪೇಟೆ ಇದೀಗ ವಿಶ್ವದ ಅತಿದೊಡ್ಡ ಸ್ಟಾಕ್ ಎಕ್ಸ್​ಚೇಂಜ್​ಗಳ ಪೈಕಿ ಒಂದಾಗಿದೆ. 5,200ಕ್ಕೂ ಹೆಚ್ಚು ಕಂಪನಿಗಳ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿವೆ. ಇಲ್ಲಿರುವ ಕಂಪನಿಗಳ ಒಟ್ಟೂ ಷೇರುಸಂಪತ್ತು ಹತ್ತಿರಹತ್ತಿರ 300 ಲಕ್ಷಕೋಟಿ ರೂನಷ್ಟಿದೆ. ಭಾರತದಲ್ಲಿ ಈ ಹಿಂದೆ ಹಲವು ಷೇರುಪೇಟೆಗಳು ಅಸ್ತಿತ್ವದಲ್ಲಿದ್ದರೂ ಸದ್ಯ ಬಿಎಸ್​ಇ ಮತ್ತು ಎನ್​ಎಸ್​ಇ ಎರಡು ಮಾತ್ರ ಅಧಿಕೃತವಾಗಿ ಇರುವುದು. ಇವೆರಡೂ ಕೂಡ ಮುಂಬೈನಲ್ಲಿವೆ. ಎನ್​ಎಸ್​ಇನಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಕಡಿಮೆ ಆದರೂ ಒಟ್ಟು ಷೇರುಸಂಪತ್ತು ಬಿಎಸ್​ಇಗಿಂತ ಹೆಚ್ಚಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಎರಡಕ್ಕೂ ಬಹಳ ಕುತೂಹಲ ಮೂಡಿಸುವ ಇತಿಹಾಸ ಇದೆ.

ಆಲದ ಮರದ ಕೆಳಗೆ ಶುರುವಾದ ಬಿಎಸ್​ಇ

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಎಂಬುದು ಸರ್ಕಾರದಿಂದ ನಿರ್ವಹಿಸುವ ಷೇರುಪೇಟೆಯಲ್ಲ. ಖಾಸಗಿ ಒಡೆತನದಲ್ಲಿರುವ ವಿನಿಮಯ ಕೇಂದ್ರ. 19ನೇ ಶತಮಾನದಲ್ಲಿ ಭಾರತದ ಕಾಟನ್ ಕಿಂಗ್ ಎನಿಸಿದ್ದ ಪ್ರೇಮಚಂದ್ ರಾಯಚಂದ್ ಎಂಬುವವರು ಸ್ಥಾಪಿಸಿದ ಸ್ಟಾಕ್ ಎಕ್ಸ್​ಚೇಂಜ್ ಇದು. 1875ರ ಜುಲೈ 9ರಂದು ಭಾರತದ ಷೇರುಬ್ರೋಕರ್​ಗಳು ಮತ್ತು ಷೇರುಗಳನ್ನು ಉಳಿಸಲು ಬಾಂಬೆ ಬ್ರೋಕರ್​ಗಳ ಸಂಘವೊಂದು ನಿರ್ಣಯ ಹೊರಡಿಸಿತು.

ಇದನ್ನೂ ಓದಿGreenchef IPO: ಬೆಂಗಳೂರಿನ ಗ್ರೀನ್​ಚೆಫ್ ಷೇರುಪೇಟೆಗೆ ಭರ್ಜರಿ ಎಂಟ್ರಿ; 53.62 ಕೋಟಿ ರೂ ಐಪಿಒ ಯಶಸ್ವಿ; ತುಮಕೂರಿನಲ್ಲಿ ಹೊಸ ಫ್ಯಾಕ್ಟರಿ ಸ್ಥಾಪನೆಗೆ ವಿನಿಯೋಗ

ಆದರೆ, ಇದಕ್ಕೂ ಹಿಂದಿನ 20 ವರ್ಷಗಳಿಂದಲೇ ಇದರ ಚಟುವಟಿಕೆಗಳು ಆರಂಭವಾಗಿದ್ದವು. ಅಂದಿನ ಬಾಂಬೆಯ ದಕ್ಷಿಣ ಭಾಗದಲ್ಲಿದ್ದ ಟೌನ್​ಹಾಲ್​ನ ಬಳಿಯ ಆಲದ ಮರದ ಕೆಳಗೆ 1855ರಲ್ಲಿ 22 ಷೇರುಬ್ರೋಕರ್​ಗಳು ಒಟ್ಟು ಸೇರಲು ಆರಂಭಿಸುತ್ತಾರೆ. ಅಲ್ಲಿ ತಮ್ಮ ಷೇರುಗಳ ಮಾರಾಟ ಮತ್ತು ಖರೀದಿ ನಡೆಸುತ್ತಿರುತ್ತಾರೆ. ಅಂದರೆ ಅದೊಂದು ರೀತಿಯಲ್ಲಿ ಷೇರುಸಂತೆಯಾಗಿತ್ತು. ಏಷ್ಯಾದಲ್ಲೇ ಇಂಥ ಷೇರುವಿನಿಮಯ ಮಾರುಕಟ್ಟೆ ಶುರುವಾಗಿದ್ದು ಅದೇ ಮೊದಲು. ಪ್ರೇಮಚಂದ್ ರಾಯಚಂದ್ ಈ ಮಾರುಕಟ್ಟೆಯ ಸೂತ್ರಧಾರ.

ದಲಾಲ್ ಸ್ಟ್ರೀಟ್​ಗೆ ಸ್ಥಳ ಬದಲಾವಣೆ

ವರ್ಷಗಳುರುಳುತ್ತಿರುವಂತೆ ಬ್ರೋಕರ್​ಗಳ ಸಂಖ್ಯೆ ಹೆಚ್ಚಾಗತೊಡಗುತ್ತದೆ. ಸಂಖ್ಯೆ ದೊಡ್ಡದಾಗುತ್ತಿದ್ದಂತೆಯೇ ಬೇರೆ ಸ್ಥಳಗಳಿಗೆ ಇವರ ಸ್ಥಳವೂ ವರ್ಗವಾಗುತ್ತಿರುತ್ತದೆ. ಕೊನೆಗೆ 1874ರಲ್ಲಿ ಇವತ್ತಿನ ದಲಾಲ್ ಸ್ಟ್ರೀಟ್ ರಸ್ತೆಗೆ ಇವರ ಅಡ್ಡೆ ವರ್ಗವಾಗುತ್ತದೆ. 1875ರಲ್ಲಿ ಇವರು ನೇಟಿವ್ ಷೇರ್ ಅಂಡ್ ಸ್ಟಾಕ್ ಬ್ರೋಕರ್ಸ್ ಅಸೋಷಿಯೇಶನ್ ಎಂದು ಸಂಸ್ಥೆಗೆ ಹೆಸರಿಸುತ್ತಾರೆ. ಈ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಅನ್ನು ಭಾರತ ಸರ್ಕಾರ 1957ರ ಆಗಸ್ಟ್ ಮಾನ್ಯ ಮಾಡುತ್ತದೆ. 1980ರಲ್ಲಿ ದಲಾಲ್ ಸ್ಟ್ರೀಟ್​ನಲ್ಲಿರುವ 22 ಮಹಡಿಗಳ ಪಿಜೆ ಟವರ್ಸ್​ಗೆ ಬಿಎಸ್​ಇ ಕೇಂದ್ರವು ವರ್ಗವಾಗುತ್ತದೆ.

ಇದನ್ನೂ ಓದಿBSE Share Buyback: ಟೆಂಡರ್ ಮೂಲಕ ಷೇರುದಾರರಿಂದ ಹೆಚ್ಚಿನ ಬೆಲೆಗೆ ಷೇರು ಖರೀದಿಸಲಿರುವ ಬಿಎಸ್​ಇ

22 ಬ್ರೋಕರ್​ಗಳಿದ್ದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಇವತ್ತು 1,300ಕ್ಕೂ ಹೆಚ್ಚು ಅಧಿಕೃತ ಷೇರುಬ್ರೋಕರುಗಳನ್ನು ಹೊಂದಿದೆ. ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟು ಷೇರುಮೌಲ್ಯ 299 ಲಕ್ಷ ಕೋಟಿ ರೂಗೂ ಹೆಚ್ಚಿದೆ. ಬಿಎಸ್​ಇ ಸೆನ್ಸೆಕ್ಸ್ ಸೇರಿದ ನಾಲ್ಕೈದು ಪ್ರಮುಖ ಸೂಚ್ಯಂಕಗಳಿವೆ. ಸೆನ್ಸೆಕ್ಸ್ ಎಂಬುದು ಭಾರತದ ಷೇರುಮಾರುಕಟ್ಟೆಗೆ ಪ್ರಮುಖ ಕೈಗನ್ನಡಿಯಂತಿದೆ. ಇದರಲ್ಲಿ 30 ಆಯ್ದ ಕಂಪನಿಗಳ ಷೇರುಗಳ ಪಟ್ಟಿ ಮಾಡಲಾಗಿದೆ.

ಎನ್​ಎಸ್​ಇ ಸ್ಥಾಪನೆ ಯಾಕೆ?

ಎಂಬತ್ತರದ ದಶಕ ಮತ್ತು ತೊಂಬತ್ತರ ದಶಕದ ಆರಂಭದಲ್ಲಿ ಹರ್ಷದ್ ಮೆಹ್ತಾ ಮೊದಲಾದ ಹಲವು ಹಗರಣಗಳು ಬಿಎಸ್​ಇಗೆ ಕಳಂಕ ತರುತ್ತವೆ. ಆಗ ಸರ್ಕಾರಕ್ಕೆ ಭಾರತದ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗೆ ಒಂದು ಪರ್ಯಾಯ ಬೇಕೆಂದು ಅನಿಸುತ್ತದೆ. ಬ್ರೋಕರ್​ಗಳ ನಿಯಂತ್ರಣದಲ್ಲಿ ಬಿಎಸ್​ಇ ಇತ್ತು. ಭ್ರಷ್ಟಾಚಾರಕ್ಕೆ ವಿಫುಲ ಅವಕಾಶಗಳಿದ್ದವು. ಇದನ್ನು ತಪ್ಪಿಸಲು ಕಂಪ್ಯೂಟರೈಸ್ಡ್ ಆಗಿರುವ ಆಧುನಿಕ ತಂತಜ್ಞಾನ ಹೊಂದಿದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಕೇಂದ್ರದ ಸ್ಥಾಪನೆಯಾಯಿತು. ಇದರ ವಹಿವಾಟು ವ್ಯವಸ್ಥೆ ಬಿಎಸ್​ಇಗಿಂತಲೂ ಬಹಳ ಸರಳವಾಗಿತ್ತು. ಆರಂಭದಲ್ಲಿ ಕೆಲ ಪ್ರಮುಖ ಷೇರುಬ್ರೋಕರುಗಳಿಂದ ಎನ್​ಎಸ್​ಇಗೆ ವಿರೋಧ ಬಂದರೂ ದಿನೇದಿನೇ ಎನ್​ಎಸ್​ಇ ಜನಪ್ರಿಯತೆ ಹೆಚ್ಚತೊಡಗಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್