AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Greenchef IPO: ಬೆಂಗಳೂರಿನ ಗ್ರೀನ್​ಚೆಫ್ ಷೇರುಪೇಟೆಗೆ ಭರ್ಜರಿ ಎಂಟ್ರಿ; 53.62 ಕೋಟಿ ರೂ ಐಪಿಒ ಯಶಸ್ವಿ; ತುಮಕೂರಿನಲ್ಲಿ ಹೊಸ ಫ್ಯಾಕ್ಟರಿ ಸ್ಥಾಪನೆಗೆ ವಿನಿಯೋಗ

NSE Emerge Listing: ಬೆಂಗಳೂರಿನ ಗ್ರೀನ್​ಚೆಫ್ ಅಪ್ಲಾಯನ್ಸಸ್ ಸಂಸ್ಥೆ ಮೊದಲ ಬಾರಿಗೆ ಕೈಗೊಂಡ ಐಪಿಒದಲ್ಲಿ 53.62 ಕೋಟಿ ರೂ ಸಂಗ್ರಹಿಸಿದ್ದು, ಎನ್​ಎಸ್​ಇ ಎಮರ್ಜ್ ಪ್ಲಾಟ್​ಫಾರ್ಮ್​ನಲ್ಲಿ 17 ರೂ ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿದೆ.

Greenchef IPO: ಬೆಂಗಳೂರಿನ ಗ್ರೀನ್​ಚೆಫ್ ಷೇರುಪೇಟೆಗೆ ಭರ್ಜರಿ ಎಂಟ್ರಿ; 53.62 ಕೋಟಿ ರೂ ಐಪಿಒ ಯಶಸ್ವಿ; ತುಮಕೂರಿನಲ್ಲಿ ಹೊಸ ಫ್ಯಾಕ್ಟರಿ ಸ್ಥಾಪನೆಗೆ ವಿನಿಯೋಗ
ಎನ್​ಎಸ್​ಇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 09, 2023 | 10:52 AM

Share

ನವದೆಹಲಿ: ಬೆಂಗಳೂರು ಮೂಲದ ಗೃಹೋಪಕರಣ ತಯಾರಕ ಸಂಸ್ಥೆ ಗ್ರೀನ್​ಚೆಫ್ ಅಪ್ಲಾಯನ್ಸಸ್ (Greechef Appliances) ಮೊದಲ ಬಾರಿಗೆ ನಡೆಸಿದ ಐಪಿಒದಲ್ಲಿ ನಿರೀಕ್ಷಿತ 53.62 ಕೋಟಿ ರೂ ಬಂಡವಾಳ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಈ ಹಣವನ್ನು ತುಮಕೂರಿನ ವಸಂತನರಸಪುರ ಬಳಿ ಸ್ಥಾಪನೆಯಾಗುತ್ತಿರುವ ಹೊಸ ಫ್ಯಾಕ್ಟರಿಗೆ ಬಳಸಲು ಸಂಸ್ಥೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ 3 ಸೇರಿದಂತೆ ಸದ್ಯ ಒಟ್ಟು 4 ಘಟಕಗಳನ್ನು ಹೊಂದಿರುವ ಗ್ರೀನ್​ಚೆಫ್ ಅಪ್ಲಾಯನ್ಸಸ್ ಲಿ ಸಂಸ್ಥೆ ಶುಕ್ರವಾರ (ಜುಲೈ 6) ಷೇರುಪೇಟೆಯಲ್ಲಿ ಭರ್ಜರಿಯಾಗಿ ಪ್ರವೇಶ ಮಾಡಿತು. ಐಪಿಒದಲ್ಲಿ 87 ರೂ ಬೆಲೆ ಹೊಂದಿದ್ದ ಗ್ರೀನ್​ಚೆಫ್​ನ ಷೇರು ಎನ್​ಎಸ್​ಇ ಎಮರ್ಜ್ ಪ್ಲಾಟ್​ಫಾರ್ಮ್​ನಲ್ಲಿ (NSE Emerge) 104 ರೂನಂತೆ ಲಿಸ್ಟ್ ಆಯಿತು. ಷೇರುಪೇಟೆ ವ್ಯವಹಾರ ಅಂತ್ಯಗೊಂಡ ಅಂದು ಸಂಜೆ ಅದರ ಷೇರುಬೆಲೆ ಇನ್ನೂ ಹೆಚ್ಚಾಗಿ 109.20 ರೂಗೆ ಹೋಗಿದೆ.

ಗ್ರೀನ್​ಚೆಫ್ ಅಪ್ಲಾಯನ್ಸಸ್ ಲಿ ಸಂಸ್ಥೆ ಐಪಿಒಗೆ ಹೋಗಿದ್ದು ಇದೇ ಮೊದಲು. 2023ರ ಜೂನ್ 23ರಿಂದ 27ರವರೆಗೂ ಐಪಿಒ ಆಫರ್ ಇತ್ತು. ಶೇ 60ರಷ್ಟು ಹೆಚ್ಚು ಮಂದಿ ಐಪಿಒ ಆಫರ್​ಗೆ ಮುಗಿಬಿದ್ದಿದ್ದರು. ಅಷ್ಟರಮಟ್ಟಿಗೆ ಗ್ರೀನ್​ಚೆಫ್ ಸಂಸ್ಥೆಯ ಷೇರಿಗೆ ಬೇಡಿಕೆ ಸೃಷ್ಟಿಯಾಗುವ ಸೂಚನೆ ಅದಾಗಿತ್ತು. ನಿರೀಕ್ಷಿಸಿದಂತೆ ಮೊದಲ ದಿನವೇ ಅದರ ಷೇರಿನ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ. ಎನ್​ಎಸ್​ಇ ವಿನಿಮಯ ಕೇಂದ್ರದ ಎಮರ್ಜ್ ಪ್ಲಾಟ್​ಫಾರ್ಮ್​ನಲ್ಲಿ ಗ್ರೀನ್​ಚೆಫ್ ಲಿಸ್ಟ್ ಆಗಿದೆ.

ಇದನ್ನೂ ಓದಿGST Share: ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಪಾಲು ಯಾಕೆ ಕಡಿಮೆ? ಜಿಎಸ್​ಟಿ ಹಂಚಿಕೆ ಸೂತ್ರ ಏನು? ಇಲ್ಲಿದೆ ಡೀಟೇಲ್ಸ್

ಗ್ರೀನ್​ಚೆಫ್ ಅಪ್ಲಾಯನ್ಸಸ್ ಸಂಸ್ಥೆಯ ಉತ್ಪನ್ನಗಳೇನು?

ಪೀಣ್ಯದಲ್ಲಿ ಮುಖ್ಯ ಘಟಕ ಹೊಂದಿರುವ ಗ್ರೀನ್​ಟೆಕ್ ಅಪ್ಲಾಯನ್ಸಸ್ ಲಿಮಿಟೆಡ್ ಸಂಸ್ಥೆ ಹಲವು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತದೆ. ಗ್ಯಾಸ್ ಸ್ಟೌವ್, ಮಿಕ್ಸರ್ ಗ್ರೈಂಡರ್, ಪ್ರೆಷರ್ ಕುಕರ್, ಇಂಡಕ್ಷನ್ ಕುಕ್​ಟಾಪ್, ರೈಸ್ ಕುಕರ್, ವೆಟ್ ಗ್ರೈಂಡರ್, ಸ್ಟೈನ್​ಲೆಸ್ ಸ್ಟೀಲ್ ಉಪಕರಣಗಳು ಮೊದಲಾದ ಉತ್ಪನ್ನಗಳನ್ನು ಅದು ತಯಾರಿಸುತ್ತದೆ.

ಬೆಂಗಳೂರಿನಲ್ಲಿ 3 ಫ್ಯಾಕ್ಟರಿಗಳನ್ನು ಹೊಂದಿದೆ. ಹಿಮಾಚಲಪ್ರದೇಶದಲ್ಲಿ ಒಂದು ಫ್ಯಾಕ್ಟರಿ ಇದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸಗಡ್ ಮತ್ತು ಬಿಹಾರ ರಾಜ್ಯಗಳಿಗೆ ತನ್ನ ಕಾರ್ಯಚಟುವಟಿಕೆ ವಿಸ್ತರಿಸುವ ಆಲೋಚನೆಯಲ್ಲಿ ಗ್ರೀನ್​ಟೆಕ್ ಇದೆ.

ತುಮಕೂರಿನ ವಸಂತನರಸಾಪುರದಲ್ಲಿ ಹೊಸ ಗ್ರೀನ್​ಟೆಕ್ ಫ್ಯಾಕ್ಟರಿ

ತುಮಕೂರಿನ ವಸಂತನರಸಾಪುರದಲ್ಲಿ 15 ಎಕರೆಯಷ್ಟು ವಿಶಾಲ ಜಮೀನಿನಲ್ಲಿ ಗ್ರೀನ್​ಚೆಫ್ ಸಂಸ್ಥೆಯ ಹೊಸ ಕಾರ್ಖಾನೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಐಪಿಒದಲ್ಲಿ ಸಂಗ್ರಹವಾದ ಹೂಡಿಕೆಯ ಕೆಲ ಭಾಗವನ್ನು ತುಮಕೂರಿನ ಫ್ಯಾಕ್ಟರಿಗೆ ವ್ಯಯಿಸಲು ಸಂಸ್ಥೆ ನಿರ್ಧರಿಸಿದೆ. ಆ ಕಾರ್ಖಾನೆ 2023ರ ಡಿಸೆಂಬರ್​ನಿಂದ 2024ರ ಮಾರ್ಚ್​ನೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sun, 9 July 23

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು