AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BSNL Offer: ಬಿಎಸ್​ಎನ್​ಎಲ್​ನಿಂದ ಹೊಸ ಭರ್ಜರಿ ಪ್ಲಾನ್ ಬಿಡುಗಡೆ; ಜಿಯೋ, ಏರ್ಟೆಲ್​ನಿಂದ ಗ್ರಾಹಕರ ವಲಸೆ?

BSNL cheaper recharge plans: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ ಅಥವಾ ಬಿಎಸ್​ಎನ್​ಎಲ್ ಸದ್ದಲ್ಲೇ 4ಜಿ ನೆಟ್ವರ್ಕ್​ಗೆ ಅಪ್​ಗ್ರೇಡ್ ಆಗುತ್ತಿದೆ. ಈ ಮಧ್ಯೆ ಆಕರ್ಷಕ ಬೆಲೆಗಳಿರುವ ಭರ್ಜರಿ ರೀಚಾರ್ಜ್ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. 200 ರೂಗೂ ಕಡಿಮೆ ಬೆಲೆಗೆ ದಿನಕ್ಕೆ 2ಜಿಬಿ ಡಾಟಾ ಕೊಡುವಂತಹ ಪ್ಲಾನ್ ಕೂಡ ಇದೆ.

BSNL Offer: ಬಿಎಸ್​ಎನ್​ಎಲ್​ನಿಂದ ಹೊಸ ಭರ್ಜರಿ ಪ್ಲಾನ್ ಬಿಡುಗಡೆ; ಜಿಯೋ, ಏರ್ಟೆಲ್​ನಿಂದ ಗ್ರಾಹಕರ ವಲಸೆ?
ಬಿಎಸ್​ಎನ್​ಎಲ್​
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Jul 11, 2024 | 5:24 PM

Share

ನವದೆಹಲಿ, ಜುಲೈ 11: ಕಳೆದ ಎರಡು ವರ್ಷದಿಂದ ಬಹುತೇಕ ನಿಷ್ಕ್ರಿಯಗೊಂಡಂತಿದ್ದ ಬಿಎಸ್​ಎನ್​ಎಲ್ ಮರಳಿ ಫಾರ್ಮ್​ಗೆ ಬರುತ್ತಿದೆ. ಸದ್ಯ 3ಜಿ ನೆಟ್ವರ್ಕ್ ಹೊಂದಿರುವ ಬಿಎಸ್​ಎನ್​ಎಲ್ ಸದ್ಯದಲ್ಲೇ ದೇಶಾದ್ಯಂತ 4ಜಿ ನೆಟ್ವರ್ಕ್​ಗೆ ಅಪ್​ಡೇಟ್ ಆಗಲಿದೆ. ಇದರ ಜೊತೆಗೆ ಆಕರ್ಷಕ ಡಾಟಾ ಪ್ಲಾನ್​ಗಳನ್ನು ಬಿಎಸ್​ಎನ್​ಎಲ್ ಬಿಡುಗಡೆ ಮಾಡಿದೆ. ರಿಲಾಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಬೆಲೆಗಳನ್ನು ತೀವ್ರವಾಗಿ ಹೆಚ್ಚಳ ಮಾಡಿದ ಬಳಿಕ ಟೆಲಿಕಾಂ ಗ್ರಾಹಕರಿಂದ ಘರ್ ವಾಪ್ಸಿ, ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಜಿಯೋ ಮತ್ತು ಏರ್ಟೆಲ್​ನಿಂದ ಬಹಳಷ್ಟು ಗ್ರಾಹಕರು ಬಿಎಸ್​ಎನ್​ಎಲ್ ಕಡೆ ಮುಖ ಮಾಡತೊಡಗಿದ್ದಾರೆ.

395 ದಿನಗಳ ರೀಚಾರ್ಜ್ ಪ್ಲಾನ್

ಬಿಎಸ್​ಎನ್​ಎಲ್ ತನ್ನ ಎಲ್ಲಾ ಪ್ರೀಪೇಡ್ ಪ್ಲಾನ್​ಗಳನ್ನು ಪರಿಷ್ಕರಿಸಿದೆ. ಅದರಲ್ಲಿ ಗಮನ ಸೆಳೆದದ್ದು 395 ದಿನಗಳ ಒಂದು ಪ್ಲಾನ್. 13 ತಿಂಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ಬೆಲೆ ಕೇವಲ 2,399 ರೂ ಮಾತ್ರ. ಅಂದರೆ ತಿಂಗಳಿಗೆ ಸುಮಾರು 184 ರೂ ಮಾತ್ರವೇ.

ಈ ಪ್ಲಾನ್​ನಲ್ಲಿ ಗ್ರಾಹಕರು ದಿನಕ್ಕೆ 2ಜಿಬಿಯಷ್ಟು ಹೈಸ್ಪೀಡ್ ಡೇಟಾ ಪಡೆಯುತ್ತಾರೆ. ದಿನಕ್ಕೆ 100 ಎಸ್ಸೆಮ್ಮೆಸ್ ಕಳುಹಿಸುವ ಅವಕಾಶ ಇರುತ್ತದೆ. ಜಿಂಗ್ ಮ್ಯೂಸಿಕ್, ಹಾರ್ಡಿ ಗೇಮ್ಸ್ ಇತ್ಯಾದಿ ವಿವಿಧ ಹೆಚ್ಚುವರಿ ಉಚಿತ ಸರ್ವಿಸ್ ಸಿಗುತ್ತದೆ.

ಇದನ್ನೂ ಓದಿ: ದೇಶದ ಹಣದ ಕೊರತೆ ಐದೇ ನಿಮಿಷದಲ್ಲಿ ಬಗೆಹರಿಸ್ತೀನಿ: 13 ವರ್ಷದ ಹಿಂದೆ ವಾರನ್ ಬಫೆಟ್ ಹೇಳಿದ ಮಾತು ಈಗ ವೈರಲ್

ಬಿಎಸ್​ಎನ್​ಎಲ್ 365 ದಿನದ ಪ್ಲಾನ್

ಬಿಎಸ್​ಎನ್​ಎಲ್​ನ ಪ್ಲಾನ್​ಗಳಲ್ಲಿ ಗಮನ ಸೆಳೆದ ಇನ್ನೊಂದೆಂದರೆ 365 ದಿನದ ಪ್ಲಾನ್. ಇದರಲ್ಲಿ ದೈನಂದಿನ ಡಾಟಾ ಮಿತಿ ಬದಲು ಒಟ್ಟಾರೆ 600 ಜಿಬಿಯಷ್ಟು ಡಾಟಾವನ್ನು ಕೊಡಲಾಗುತ್ತದೆ. ಇದರ ಬೆಲೆ 1,999 ರೂ ಮಾತ್ರವೇ.

ಇತರ ಪ್ರಮುಖ ಪ್ಲಾನ್​ಗಳಲ್ಲಿ 997 ರೂನದ್ದಿದೆ. 160 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. 599 ರೂ ಪ್ಲಾನ್​ನಲ್ಲಿ ದಿನಕ್ಕೆ 3ಜಿಬಿ ಡಾಟಾ ಸಿಗಲಿದ್ದು, 84 ದಿನ ವ್ಯಾಲಿಡಿಟಿ ಇದೆ.

30 ದಿನಗಳ ವ್ಯಾಲಿಡಿಟಿ ಇರುವ ಡಾಟಾ ಪ್ಲಾನ್ 199 ರೂಗೆ ಸಿಗುತ್ತದೆ. ಬಿಎಸ್​ಎನ್​ಎಲ್​ನಿಂದ ಇನ್ನೂ ಕೆಲ ಆಕರ್ಷಕ ಡಾಟಾ ಪ್ಲಾನ್​ಗಳು ಬಿಡುಗಡೆ ಆಗಿವೆ. ಏರ್ಟೆಲ್, ಜಿಯೋ, ವಿಐಗೆ ಹೋಲಿಸಿದರೆ ಬಿಎಸ್​ಎನ್​ಎಲ್ ಪ್ಲಾನ್​ಗಳು ಬಹಳ ಅಗ್ಗದ ದರ ಹೊಂದಿವೆ.

ಇದನ್ನೂ ಓದಿ: Airtel Recharge Plan: ರಿಲಯನ್ಸ್​​ ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ

ಬಿಎಸ್​ಎನ್​ಎಲ್​ಗೆ ಪೋರ್ಟ್ ಆಗುವುದು ಹೇಗೆ?

ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜಿಯೋ, ಏರ್ಟೆಲ್ ಮತ್ತು ವಿಐ ಗ್ರಾಹಕರು ಬಿಎಸ್​ಎನ್​ಎಲ್​ನತ್ತ ಮುಖ ಮಾಡುತ್ತಿದ್ದಾರೆ. ಅಂದಹಾಗೆ, ಈಗ ಒಂದು ಟೆಲಿಕಾಂ ಆಪರೇಟರ್​ನಿಂದ ಮತ್ತೊಂದಕ್ಕೆ ವರ್ಗಾವಣೆ ಅಥವಾ ಪೋರ್ಟ್ ಆಗುವುದು ಸುಲಭ. ಬಿಎಸ್​ಎನ್​ಎಲ್​ಗೆ ಹೇಗೆ ಪೋರ್ಟ್ ಆಗುವುದು, ಕ್ರಮ ಇಲ್ಲಿದೆ:

ಮೊದಲಿಗೆ ನಿಮ್ಮ ಮೊಬೈಲ್​ನಿಂದ ‘Port <10 ಅಂಕಿ ಮೊಬೈಲ್ ನಂಬರ್>’ ಟೈಪಿಸಿ 1900 ನಂಬರ್​ಗೆ ಎಸ್ಸೆಮ್ಮೆಸ್ ಕಳುಹಿಸಬೇಕು. (ಉದಾ: Port 9895600426). ಆಗ ಯುಪಿಸಿ ನಂಬರ್ ಅಥವಾ ಯೂನಿಕ್ ಪೋರ್ಟಿಂಗ್ ಕೋಡ್ ಸಿಗುತ್ತದೆ. ಈ ಕೋಡ್ 15 ದಿನ ವ್ಯಾಲಿಡಿಟಿ ಹೊಂದಿರುತ್ತದೆ. ಅಷ್ಟರೊಳಗೆ ನೀವು ಯಾವುದೇ ಬಿಎಸ್​ಎನ್​ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ಬಿಎಸ್​ಎನ್​ಎಲ್ ಫ್ರಾಂಚೈಸಿಗೆ ಹೋಗಿ ಅಲ್ಲಿ ಅರ್ಜಿ ತುಂಬಿಸಿಬೇಕು. ಆಗ ಅಲ್ಲಿರುವ ಆಪರೇಟರ್​ಗಳು ನಿಮ್ಮ ನಂಬರ್ ಅನ್ನು ಹೊಸ ಸಿಮ್​ಗೆ ಪೋರ್ಟ್ ಮಾಡಿಕೊಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Thu, 11 July 24

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ