AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಹಣದ ಕೊರತೆ ಐದೇ ನಿಮಿಷದಲ್ಲಿ ಬಗೆಹರಿಸ್ತೀನಿ: 13 ವರ್ಷದ ಹಿಂದೆ ವಾರನ್ ಬಫೆಟ್ ಹೇಳಿದ ಮಾತು ಈಗ ವೈರಲ್

Warren Buffet solution to fiscal deficit problem: ಅಮೆರಿಕದಲ್ಲಿ ಇರುವ ಪ್ರಮುಖ ಆರ್ಥಿಕ ಸಮಸ್ಯೆಗಳಲ್ಲಿ ಅದರ ವಿತ್ತೀಯ ಕೊರತೆಯೂ ಒಂದು. ಕಳೆದ ವರ್ಷದಂದು ಅಮೆರಿಕದಲ್ಲಿ ಫಿಸ್ಕಲ್ ಡೆಫಿಸಿಟ್ 1.91 ಟ್ರಿಲಿಯನ್ ಡಾಲರ್, ಅಥವಾ 160 ಲಕ್ಷ ಕೋಟಿ ರೂನಷ್ಟಿತ್ತು. ವಿತ್ತೀಯ ಕೊರತೆಯ ಸಮಸ್ಯೆ ನೀಗಿಸಲು ತನಗೆ ಐದೇ ನಿಮಿಷ ಸಾಕು ಎಂದು ಖ್ಯಾತ ಹೂಡಿಕೆದಾರ ವಾರನ್ ಬಫೆಟ್ 13 ವರ್ಷದ ಹಿಂದೊಮ್ಮೆ ಹೇಳಿದ್ದರು.

ದೇಶದ ಹಣದ ಕೊರತೆ ಐದೇ ನಿಮಿಷದಲ್ಲಿ ಬಗೆಹರಿಸ್ತೀನಿ: 13 ವರ್ಷದ ಹಿಂದೆ ವಾರನ್ ಬಫೆಟ್ ಹೇಳಿದ ಮಾತು ಈಗ ವೈರಲ್
ವಾರನ್ ಬಫೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 10, 2024 | 2:01 PM

Share

ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕದಲ್ಲಿ ವಿತ್ತೀಯ ಕೊರತೆಯೂ ಅಗಾಧವಾಗಿದೆ. ಅಮೆರಿಕದ ಫಿಸ್ಕಲ್ ಡೆಫಿಸಿಟ್ ಅಥವಾ ವಿತ್ತೀಯ ಕೊರತೆ ಅದರ ಜಿಡಿಪಿಯ ಶೇ. 6ರಿಂದ 7ರಷ್ಟು ಇದೆ. ಹಣದ ಲೆಕ್ಕದಲ್ಲಿ 2023ರಲ್ಲಿ ಬರೋಬ್ಬರಿ 1.91 ಟ್ರಿಲಿಯನ್ ಡಾಲರ್​ನಷ್ಟು ವಿತ್ತೀಯ ಕೊರತೆ ಸೃಷ್ಟಿಯಾಗಿತ್ತು. ಅಂದರೆ, ಬರೋಬ್ಬರಿ 160 ಲಕ್ಷ ಕೋಟಿ ರೂಪಾಯಿಯಷ್ಟು ಹಣದ ಕೊರತೆಯಾಗಿದೆ. ಬಹುತೇಕ ಅಷ್ಟು ಮೊತ್ತದ ಹಣವನ್ನು ಅದು ಸಾಲವಾಗಿ ಪಡೆಯುವಂತಾಗುತ್ತದೆ. ಅಮೆರಿಕಕ್ಕೆ ಈ ವಿತ್ತೀಯ ಕೊರತೆ ಸಮಸ್ಯೆ ಇವತ್ತು, ನಿನ್ನೆಯದಲ್ಲ, ದಶಕಗಳಿಂದಲೂ ಈ ಬಾಧೆ ಇದೆ. ಈ ಫಿಸ್ಕಲ್ ಡೆಫಿಸಿಟ್ ಅನ್ನು ಕಡಿಮೆ ಮಾಡಲು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಇದೇ ವೇಳೆ, ವಿಶ್ವಖ್ಯಾತ ಹೂಡಿಕೆದಾರ ಎನಿಸಿರುವ ವಾರನ್ ಬಫೆಟ್ ತಾನು ಅಮೆರಿಕದ ಈ ವಿತ್ತೀಯ ಕೊರತೆ ಸಮಸ್ಯೆಯನ್ನು ಕೇವಲ ಐದು ನಿಮಿಷದಲ್ಲಿ ಪರಿಹರಿಸುವುದಾಗಿ 2011ರಲ್ಲಿ ಹೇಳಿದ ಮಾತು ಈಗ ವೈರಲ್ ಆಗುತ್ತಿದೆ.

ವಿತ್ತೀಯ ಕೊರತೆ ಎಂದರೇನು?

ವಿತ್ತೀಯ ಕೊರತೆಗೆ ವಾರನ್ ಬಫೆಟ್ ಬಳಿ ಏನು ಪರಿಹಾರ ಇದೆ ಎಂದು ತಿಳಿಯುವ ಮುನ್ನ ಈ ವಿತ್ತೀಯ ಕೊರತೆ ಎಂದರೇನು ಎಂಬುದನ್ನು ತಿಳಿಯುವುದು ಅವಶ್ಯಕ. ಸರ್ಕಾರ ತನಗೆ ಬರುವ ಆದಾಯದ ಹಣವನ್ನು ಜನಕಲ್ಯಾಣ ಮತ್ತಿತರ ಕಾರ್ಯಗಳಿಗೆ ವೆಚ್ಚ ಮಾಡುತ್ತದೆ. ಆದಾಯ ಮತ್ತು ವೆಚ್ಚದಲ್ಲಿ ಆಗುವ ವ್ಯತ್ಯಾಸವೇ ವಿತ್ತೀಯ ಕೊರತೆ. ಆದಾಯಕ್ಕಿಂತ ವೆಚ್ಚ ಹೆಚ್ಚಾದರೆ ವಿತ್ತೀಯ ಕೊರತೆ ಹೆಚ್ಚುತ್ತದೆ.

ಇದನ್ನೂ ಓದಿ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ 150ನೇ ಸಂಸ್ಥಾಪನಾ ದಿನ; ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್​ನ ಕುತೂಹಲದ ಕಥೆ

ಐದು ನಿಮಿಷದಲ್ಲಿ ಹೇಗೆ ಪರಿಹಾರ?

‘ಯಾವುದೇ ಸಂದರ್ಭದಲ್ಲಾದರೂ ಸರಿ, ಜಿಡಿಪಿಯ ಶೇ. 3ಕ್ಕಿಂತಲೂ ಹೆಚ್ಚು ವಿತ್ತೀಯ ಕೊರತೆ ಸೃಷ್ಟಿಯಾದರೆ ಸಂಸತ್ತಿನ ಎಲ್ಲಾ ಸದಸ್ಯರೂ ಮತ್ತೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಕಾನೂನು ಜಾರಿ ಮಾಡಬೇಕು,’ ಎಂದು ವಾರನ್ ಬಫೆಟ್ ಹೇಳುತ್ತಾರೆ. 2011ರಲ್ಲಿ ಸಿಎನ್​ಬಿಸಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಈ ಸಲಹೆ ನೀಡಿದ್ದರು.

ಜರ್ಮನಿಯಲ್ಲಿ ಇಂಥದ್ದೊಂದು ಕಾನೂನು ಇದೆ. ಅಮೆರಿಕದಲ್ಲಿ ಇದು ಜಾರಿ ಮಾಡಬೇಕೆಂದು ಬಫೆಟ್ ಒತ್ತಾಯಿಸುತ್ತಾರೆ. ವಿತ್ತೀಯ ಕೊರತೆ ಸತತವಾಗಿ ಇದ್ದರೆ ಅದನ್ನು ನೀಗಿಸಲು ಸಾಲ ಮಾಡಬೇಕಾಗುತ್ತದೆ. ಅಮೆರಿಕ ಸರ್ಕಾರ ಹಣದ ಕೊರತೆಯಾದಾಗ ಸಾಮಾನ್ಯವಾಗಿ ಹೆಚ್ಚುವರಿ ನೋಟುಗಳನ್ನು ಮುದ್ರಿಸುತ್ತದೆ. ಇದರಿಂದ ಹಣದುಬ್ಬರ, ಬಡ್ಡಿದರ ನಿಯಂತ್ರಣಕ್ಕೆ ಬರುವುದು ಕಷ್ಟವಾಗುತ್ತದೆ. ಅಮೆರಿಕದ ಡಾಲರ್ ಪ್ರಮುಖ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಉಳಿದಿರುವುದರಿಂದ ಕರೆನ್ಸಿ ಮೌಲ್ಯ ಉಳಿದುಕೊಂಡು ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ