AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ 150ನೇ ಸಂಸ್ಥಾಪನಾ ದಿನ; ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್​ನ ಕುತೂಹಲದ ಕಥೆ

Bombay Stock Exchange founded on 1875 July 9th: ಮುಂಬೈನ ದಲಾಲ್ ಸ್ಟ್ರೀಟ್​ನಲ್ಲಿರುವ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸ್ಥಾಪನೆಯಾಗಿದ್ದು 1875ರ ಜುಲೈ 9ರಂದು. ಬಿಎಸ್​ಇ ಭಾರತದ ಮತ್ತು ಏಷ್ಯಾದ ಮೊದಲ ಷೇರು ವಿನಿಮಯ ಕೇಂದ್ರ. ಇದು ಸ್ಥಾಪನೆಯಾಗಿ ಮೂರು ವರ್ಷದ ಬಳಿಕ ಜಪಾನ್​ನಲ್ಲಿ ಸ್ಟಾಕ್ ಎಕ್ಸ್​ಚೇಂಜ್ ಆರಂಭವಾಯಿತು. 1855ರಲ್ಲಿ ಆಲದ ಮರದ ಕೆಳಗೆ ಕೆಲವೇ ವರ್ತಕರಿಂದ ನಡೆಯುತ್ತಿದ್ದ ವ್ಯವಹಾರ ಈಗ ಬೃಹತ್ ಆಗಿ ವಿಸ್ತರಿಸಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ 150ನೇ ಸಂಸ್ಥಾಪನಾ ದಿನ; ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್​ನ ಕುತೂಹಲದ ಕಥೆ
ಬಿಎಸ್​ಇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 10, 2024 | 12:43 PM

Share

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸ್ಥಾಪನೆಯಾಗಿ 149 ವರ್ಷ ಗತಿಸಿ, 150ನೇ ವರ್ಷಕ್ಕೆ ಕಾಲಿಟ್ಟಿದೆ. 1875ರ ಜುಲೈ 9ರಂದು ಇದರ ಸ್ಥಾಪನೆಯಾಗಿದೆ. ಇದು ಭಾರತದ ಮೊದಲ ಷೇರು ವಿನಿಮಯ ಕೇಂದ್ರವಾಗಿದೆ. ಭಾರತ ಮಾತ್ರವಲ್ಲ ಏಷ್ಯಾದ ಚೊಚ್ಚಲ ಸ್ಟಾಕ್ ಮಾರ್ಕೆಟ್ ಕೂಡ ಹೌದು. ವಿಶ್ವದ 10ನೇ ಅತಿ ಹಳೆಯ ಮಾರುಕಟ್ಟೆ ಅದು. ಆಲದ ಮರದ ಕೆಳಗೆ ಆರಂಭವಾದ ಬಿಎಸ್​ಇ ಇವತ್ತು ವಿಶ್ವದ ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದಾಗಿದೆ. ಬಿಎಸ್​ಇ ಬಳಿಕ ದೇಶದಲ್ಲಿ ಹಲವು ಸ್ಟಾಕ್ ಎಕ್ಸ್​ಚೇಂಜ್​ಗಳು ಸ್ಥಾಪನೆಯಾದವರಾದರೂ ಅಂತಿಮವಾಗಿ ಈಗ ಬಿಎಸ್​ಇ ಮತ್ತು ಎನ್​ಎಸ್​ಇ ಮಾತ್ರವೇ ಉಳಿದುಕೊಂಡಿರುವುದು.

ಆಲದ ಮರದ ಕೆಳಗೆ ಶುರುವಾದ ಷೇರುಪೇಟೆ

ಭಾರತದಲ್ಲಿ ಷೇರು ಮಾರುಕಟ್ಟೆಯ ಹುಟ್ಟಿನ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. 1855ರಲ್ಲಿ 22 ಮಂದಿ ಕಾಟನ್ ಮಾರಾಟಗಾರರು ಮುಂಬೈನ ಟೌನ್ ಹಾಲ್ ಸಮೀಪ ಸಂತೆಯ ರೀತಿಯಲ್ಲಿ ಸೇರಿ ವ್ಯವಹಾರ ನಡೆಸತೊಡಗದರು. ಕ್ರಮೇಣ ವರ್ತಕರ ಸಂಖ್ಯೆ ಹೆಚ್ಚತೊಡಗಿತು. ಸ್ಥಳ ಬದಲಾವಣೆ ಮಾಡಲಾಯಿತು. 20 ವರ್ಷದ ಬಳಿಕ 1875ರ ಜುಲೈ 9ರಂದು ನೇಟಿವ್ ಶೇರ್ ಅಂಡ್ ಸ್ಟಾಕ್ ಬ್ರೋಕರ್ಸ್ ಅಸೋಸಿಯೇಶನ್ ಸಂಸ್ಥೆ ಸ್ಥಾಪನೆ ಆಯಿತು. ಈ ರೀತಿಯಲ್ಲಿ ಷೇರು ವಿನಿಮಯ ಕೇಂದ್ರವೊಂದು ಸ್ಥಾಪನೆ ಆಯಿತು.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಎಫ್ ಅಂಡ್ ಒ ವ್ಯವಹಾರಕ್ಕೆ ಕಡಿವಾಣ ಹಾಕಲು ಸೆಬಿ ಕ್ರಮ; ಹೊಸ ನಿಯಮಗಳು ಸದ್ಯದಲ್ಲೇ ಜಾರಿ

318 ಆರಂಭಿಕ ಸದಸ್ಯರು

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಆರಂಭವಾದಾಗ ನೊಂದಾಯಿತ ಸದಸ್ಯರ ಸಂಖ್ಯೆ 318 ಇತ್ತು. ಆಗ ಪ್ರವೇಶ ಶುಲ್ಕ ಒಂದು ರೂ ಇತ್ತು. 1895ರವರೆಗೂ ಅಧಿಕೃತ ಕಚೇರಿ ಎಂಬುದಿರಲಿಲ್ಲ. 1928ರಲ್ಲಿ ದಲಾಲ್ ಸ್ಟ್ರೀಟ್​ನಲ್ಲಿ ಈಗಿರುವ ಬಿಎಸ್​ಇ ಕಚೇರಿ ಸ್ಥಳವನ್ನು ಖರೀದಿಸಲಾಯಿತು. ಈಗಿರುವ ಸ್ಟಾಕ್ ಎಕ್ಸ್​ಚೇಂಜ್ ಕಟ್ಟಡ ನಿರ್ಮಾಣ ಆಗಿದ್ದು 1930ರಲ್ಲಿ.

ಫಿರೋಜ್ ಜೀಜೀಭಾಯ್ ಟವರ್ ಹೆಸರು ಯಾಕೆ?

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಅನ್ನು ಮೂಲತಃ ಸ್ಥಾಪನೆ ಮಾಡಿದ್ದು ಪ್ರೇಮ್​ಚಂದ್ ರಾಯ್​ಚಂದ್ ಎಂಬುವರು. ಈಗಿರುವ ಷೇರು ವಿನಿಮಯ ಕೇಂದ್ರದ ಕಟ್ಟಡಕ್ಕೆ ಫಿರೋಜ್ ಜೀಜೀಭಾಯ್ ಟವರ್ ಎಂದು ಹೆಸರಿಸಲಾಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಮಾಜಿ ಛೇರ್ಮನ್ ಫಿರೋಜ್ ಜಮ್​ಶೆಡ್​ಜಿ ಜೀಜೀಭಾಯ್ ಅವರ ಸ್ಮರಣಾರ್ಥವಾಗಿ ಈ ಕಟ್ಟಡಕ್ಕೆ ಆ ಹೆಸರು ಇಡಲಾಗಿದೆ.

ಇದನ್ನೂ ಓದಿ: ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು

1,000 ಅಂಕದಿಂದ 80,000 ಅಂಕಗಳವರೆಗೆ

ಬಿಎಸ್​ಇ ಸೆನ್ಸೆಕ್ಸ್ ಎಂಬುದು ನಿರ್ದಿಷ್ಟ ಷೇರುಗಳ ಮೌಲ್ಯ ಒಳಗೊಂಡಿರುವ ಸೂಚ್ಯಂಕವಾಗಿದೆ. ಇದು ಭಾರತದ ಮೊದಲ ಷೇರು ಸೂಚ್ಯಂಕವಾಗಿದೆ. 1986ರಲ್ಲಿ ಸೆನ್ಸೆಕ್ಸ್ ಮೊದಲಿಗೆ ಅನಾವರಣಗೊಂಡಿತು. ಆಗ ಇದಕ್ಕೆ ಮೂಲಾಂಕವಾಗಿ 1,000 ಇತ್ತು. ಈ ಮಟ್ಟವನ್ನು ದಾಟಲು ನಾಲ್ಕು ವರ್ಷ ಬೇಕಾಯಿತು. ಈಗ 80,000 ಅಂಕಗಳ ಗಡಿ ದಾಟಿದೆ. ಇನ್ನೊಂದು ವರ್ಷದಲ್ಲಿ ಸೆನ್ಸೆಕ್ಸ್ 1,00,000 ಅಂಕಗಳ ಗಡಿ ದಾಟಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Wed, 10 July 24

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ