Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು

Stock market updates: ಜೂನ್ ತಿಂಗಳಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಅಕೌಂಟ್​​ಗಳ ರಚನೆ ಆಗಿರುವುದು ಡೆಪಾಸಿಟರಿ ಸಂಸ್ಥೆಗಳ ದತ್ತಾಂಶದಿಂದ ಗೊತ್ತಾಗಿದೆ. ಷೇರು ಮಾರುಕಟ್ಟೆ ಇತಿಹಾಸದಲ್ಲಿ ಒಂದು ತಿಂಗಳಲ್ಲಿ ಹೊಸ ಡೀಮ್ಯಾಟ್ ಅಕೌಂಟ್​ಗಳ ಸಂಖ್ಯೆ 40 ಲಕ್ಷ ದಾಟಿದ್ದು ಇದು ನಾಲ್ಕನೇ ಬಾರಿ. ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ, ಸತತ ಮೂರು ತಿಂಗಳು ಆ ಮೈಲಿಗಲ್ಲು ಮುಟ್ಟಲಾಗಿತ್ತು.

ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 05, 2024 | 7:03 PM

ನವದೆಹಲಿ, ಜುಲೈ 5: ಭಾರತದಲ್ಲಿ ಷೇರು ಮಾರುಕಟ್ಟೆಯ ಬುಲ್ ರನ್ ಜೋರಾಗುತ್ತಿರುವಂತೆಯೇ ಹೊಸ ಡೀಮ್ಯಾಟ್ ಖಾತೆಗಳು ಪ್ರವಾಹೋಪಾದಿಯಲ್ಲಿ ಸೃಷ್ಟಿಯಾಗುತ್ತಿವೆ. ಜೂನ್ ತಿಂಗಳಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆಗಳು ರಚನೆ ಆಗಿವೆ ಎಂದು ಸೆಂಟ್ರಲ್ ಡೆಪಾಸಿಟರಿ ಸರ್ವಿಸ್ (CDSL) ಮತ್ತು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟಿರಿ (NSDL) ಬಿಡುಗಡೆ ಮಾಡಿದ ದತ್ತಾಂಶದಿಂದ ಗೊತ್ತಾಗಿದೆ. ಒಂದು ತಿಂಗಳಲ್ಲಿ 40 ಲಕ್ಷಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್ ತೆರೆಯಲ್ಪಟ್ಟಿರುವುದು ಭಾರತದ ಷೇರುಮಾರುಕಟ್ಟೆ ಇತಿಹಾಸದಲ್ಲೇ ಇದು ನಾಲ್ಕನೇ ಬಾರಿ. 2023ರ ಡಿಸೆಂಬರ್, 2024ರ ಜನವರಿ ಮತ್ತು ಫೆಬ್ರುವರಿಯಲ್ಲಿ ಈ ಮೈಲಿಗಲ್ಲು ಮುಟ್ಟಲಾಗಿತ್ತು.

ಮೇ ತಿಂಗಳಲ್ಲಿ 36 ಲಕ್ಷ ಹೊಸ ಡೀಮ್ಯಾಟ್ ಅಕೌಂಟ್ಸ್ ರಚನೆಯಾಗಿದ್ದವು. 2023ರ ಜೂನ್ ತಿಂಗಳಲ್ಲಿ 23.6 ಲಕ್ಷ ಹೊಸ ಖಾತೆಗಳನ್ನು ಆರಂಭಿಸಲಾಗಿತ್ತು. ವರ್ಷದ ಹಿಂದಿನದಕ್ಕೆ ಹೋಲಿಸಿದರೆ ಈ ಬಾರಿಯ ಜೂನ್​ನಲ್ಲಿ ಶೇ. 34.66ರಷ್ಟು ಹೆಚ್ಚು ಡೀಮ್ಯಾಟ್ ಖಾತೆಗಳು ರಚನೆಯಾಗಿವೆ. ಇಲ್ಲಿಯವರೆಗೆ ರಚನೆಯಾಗಿರುವ ಡೀಮ್ಯಾಟ್ ಖಾತೆಗಳ ಸಂಖ್ಯೆ 16.2 ಕೋಟಿ ಆಗಿದೆ.

ಇದನ್ನೂ ಓದಿ: ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ

ಹಿಂದಿನ ಸರ್ಕಾರವೇ ಮುಂದುವರಿದಿರುವುದರಿಂದ ಆರ್ಥಿಕ ನೀತಿಗಳೂ ಮುಂದುವರಿಯುವುದು ಖಾತ್ರಿಯಾದ್ದರಿಂದ ಹೂಡಿಕೆದಾರರು ಆಕರ್ಷಿತರಾಗುತ್ತಿದ್ದಾರೆ. ಇದು ಹೊಸ ಡೀಮ್ಯಾಟ್ ಖಾತೆಗಳ ರಚನೆಗೆ ಒಂದು ಕಾರಣವಾದರೆ, ಮತ್ತೊಂದು ಕಾರಣವು ಷೇರು ಮಾರುಕಟ್ಟೆ ಭರ್ಜರಿಯಾಗಿ ಬೆಳೆಯುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಮಾರುಕಟ್ಟೆ ಅದ್ವಿತೀಯ ವೇಗದಲ್ಲಿ ಹಿಗ್ಗುತ್ತಿದೆ. ಹೀಗಾಗಿ ಈಕ್ವಿಟಿ ಮಾರುಕಟ್ಟೆಯತ್ತ ಹೂಡಿಕೆದಾರರು ದೌಡಾಯಿಸುತ್ತಿರುವುದು ಹೆಚ್ಚಾಗಿದೆ.

ತಜ್ಞರ ಪ್ರಕಾರ ಇನ್ನಷ್ಟು ಡೀಮ್ಯಾಟ್ ಅಕೌಂಟ್​ಗಳ ರಚನೆಗೆ ಅವಕಾಶ ಇದೆ. ಐಪಿಒಗಳಿಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಹಲವು ಷೇರುಗಳು ಶೇ. 50ಕ್ಕಿಂತಲೂ ಹೆಚ್ಚು ವೇಗದಲ್ಲಿ ಮೌಲ್ಯ ಹೆಚ್ಚಿಸಿಕೊಳ್ಳುತ್ತಿವೆ. ಈ ಸುಗ್ಗಿಯಲ್ಲಿ ಲಾಭದಿಂದ ದೂರ ಉಳಿಯಲು ಹೇಗೆ ಸಾಧ್ಯ? ಅಂತೆಯೇ ಹೊಸ ಹೂಡಿಕೆದಾರರು ಹುಮ್ಮಸ್ಸಿನಿಂದ ಈಕ್ವಿಟಿ ಕಡೆಗೆ ವಾಲುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ

ಚುನಾವಣೆ ಬಳಿಕ ಷೇರು ಮಾರುಕಟ್ಟೆ 70,000 ದಿಂದ 80,000ಕ್ಕೆ ಹೆಚ್ಚಾಗಿದೆ. ಇಷ್ಟು ಅಮೋಘವಾಗಿ ಮಾರುಕಟ್ಟೆಯ ಓಟ ಸಾಗಿದೆ. ಇದೇ ರೀತಿ ಮಾರುಕಟ್ಟೆ ನಡೆಯುತ್ತಿದ್ದಲ್ಲಿ ಡೀಮ್ಯಾಟ್ ಅಕೌಂಟ್ ರಚನೆಯ ವೇಗ ಕೂಡ ಹಾಗೇ ಮುಂದುವರಿಯುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ