AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanda Kochhar: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ

Bombay High Court Slams CBI: ಐಸಿಐಸಿಐನ ಮಾಜಿ ಸಿಇಒ ಚಂದಾ ಕೋಚರ್ ಮತ್ತವರ ಪತಿ ದೀಪಕ್ ಕೋಚರ್ ಅವರಿಗೆ ಕಳೆದ ವರ್ಷ ನೀಡಲಾಗಿದ್ದ ಜಾಮೀನು ಕ್ರಮವನ್ನು ಹೈಕೋರ್ಟ್ ಸಮರ್ಥಿಸಿಕೊಂಡಿದೆ. ಕೋಚರ್ ದಂಪತಿಯನ್ನು ಬಂಧಿಸಿರುವ ಸಿಬಿಐನಿಂದ ಅಧಿಕಾರ ದುರುಪಯೋಗ ಆಗಿದೆ ಎಂದು ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಚಂದಾ ಕೋಚರ್ ಸಿಇಒ ಆಗಿದ್ದ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್​ನಿಂದ ವಿಡಿಯೋಕಾನ್ ಗ್ರೂಪ್​ಗೆ ಸಾಲ ನೀಡಲಾಗಿತ್ತು. ಇದರಲ್ಲಿ ಅಕ್ರಮ ಆಗಿದೆ ಎಂಬುದು ಆರೋಪ.

Chanda Kochhar: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ
ಚಂದಾ ಕೋಚರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2024 | 3:35 PM

Share

ಮುಂಬೈ, ಫೆಬ್ರುವರಿ 19: ಮಾಜಿ ಐಸಿಐಸಿಐ ಬ್ಯಾಂಕ್​ನ ಮುಖ್ಯಸ್ಥೆ ಚಂದಾ ಕೋಚರ್ ಹಾಗೂ ಅವರ ಪತಿ ದೀಪಕ್ ಕೋಚರ್ (Chanda Kochhar and Deepak Kochhar) ವಿರುದ್ಧದ ಅವ್ಯವಹಾರ ಪ್ರಕರಣವನ್ನು ಸಿಬಿಐ ನಿರ್ವಹಿಸಿದ ರೀತಿಗೆ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದೆ. ಈ ಪ್ರಕರಣದಲ್ಲಿ ಚಂದಾ ಮತ್ತು ದೀಪಕ್ ಕೋಚರ್ ಅವರನ್ನು ಬಂಧಿಸಿರುವ ಸಿಬಿಐ ಸರಿಯಾಗಿ ಕಾನೂನು ಪಾಲಿಸದೇ ಅಧಿಕಾರ ದುರುಪಯೋಪಡಿಸಿಕೊಂಡಿದೆ ಎಂದು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ (Bombay high court) 2024ರ ಫೆಬ್ರುವರಿ 6ರಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಈ ತೀರ್ಪನ್ನು ಇವತ್ತು ಸೋಮವಾರ (ಫೆ 19) ಬಹಿರಂಗಪಡಿಸಲಾಗಿದೆ.

ಕೋಚರ್ ಅವರನ್ನು ಬಂಧಿಸಲು ಅಗತ್ಯ ಇರುವ ಸಾಕ್ಷ್ಯವನ್ನು ತೋರಿಸಲು ಸಿಬಿಐ ವಿಫಲವಾಗಿದೆ. ಕೋಚರ್ ದಂಪತಿಯ ಬಂಧನ ಅಕ್ರಮ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. 2023ರ ಜನವರಿ 9ರಂದು ಬಾಂಬೆ ಹೈಕೋರ್ಟ್​ನ ಮತ್ತೊಂದು ಪೀಠವು ಕೋಚರ್ ದಂಪತಿಗೆ ಜಾಮೀನು ನೀಡಿತ್ತು. ಕಳೆದ ವಾರದಂದು ನ್ಯಾಯಾಧೀಶರಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್ ನೋರ್ಗರ್ ಅವರಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಜಾಮೀನು ಆದೇಶವನ್ನು ಎತ್ತಿಹಿಡಿದು ಸಮರ್ಥಿಸಿಕೊಂಡಿದೆ. ಜೊತೆಗೆ, ಸಿಬಿಐಗೂ ಛೀಮಾರಿ ಹಾಕಿದೆ.

ಚಂದಾ ಕೋಚರ್ ಮತ್ತು ದೀಪಕ್ ಕೋಚರ್ ಅವರನ್ನು 2022ರ ಡಿಸೆಂಬರ್ 23ರಂದು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರಿಬ್ಬರು ತಮ್ಮ ವಕೀಲರ ಮೂಲಕ ಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ಸಂದೇಶಖಾಲಿ ಪ್ರಕರಣ: ಅಧಿಕಾರಿಗಳ ವಿರುದ್ಧ ಸಂಸತ್ ಸಮಿತಿ ತನಿಖೆಗೆ ಸುಪ್ರೀಂಕೋರ್ಟ್ ತಡೆ

ಚಂದಾ ಕೋಚರ್ ಬಂಧನ ಯಾಕೆ?

ಚಂದಾ ಕೋಚರ್ 2009ರಿಂದ 2018ರವರೆಗೆ ಐಸಿಐಸಿಐ ಬ್ಯಾಂಕ್​ನ ಸಿಇಒ ಆಗಿದ್ದರು. ಅವರ ಪತಿ ದೀಪಕ್ ಕೋಚರ್ ಹಾಗೂ ಕುಟುಂಬ ಸದಸ್ಯರು ನುಪವರ್ ರಿನಿವಬಲ್ಸ್ ಎಂಬ ಕಂಪನಿ ಹೊಂದಿದ್ದಾರೆ. ಅದರಲ್ಲಿ ವಿಡಿಯೋಕಾನ್ ಛೇರ್ಮನ್ ಹೂಡಿಕೆ ಮಾಡಿದ್ದರು. ಆ ಹೂಡಿಕೆಗೆ ಐಸಿಐಸಿಐ ಬ್ಯಾಂಕ್​ನಿಂದ ಸಾಲ ಒದಗಿಸಲಾಗಿತ್ತು. ಇದು ಹಿತಾಸಕ್ತಿ ಸಂಘರ್ಷವಾಗಿದೆ ಎಂಬ ಆರೋಪ ಕೇಳಿಬಂದಿತ್ತು. 2018ರಲ್ಲಿ ಚಂದಾ ಕೋಚರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

2019ರಲ್ಲಿ ಚಂದಾ ಕೋಚರ್ ವಿರುದ್ಧ ಪ್ರಕರಣ ದಾಖಲಾಯಿತು. 2012ರಲ್ಲಿ ವಿಡಿಯೋಕಾನ್ ಗ್ರೂಪ್​ಗೆ ಐಸಿಐಸಿಐನಿಂದ 3,250 ಕೋಟಿ ರೂ ಸಾಲ ನೀಡಲಾಗಿತ್ತು. ಇದು ಮರುಪಾವತಿಯಾಗದೇ ಎನ್​ಪಿಎ ಆಗಿ ಉಳಿದಿದೆ. ಈ ಸಾಲ ನೀಡುವಿಕೆಯ ಹಿಂದೆ ಚಂದಾ ಕೋಚರ್ ಕ್ರಿಮಿನಲ್ ಸಂಚು ಇದೆ ಎಂಬುದು ಸಿಬಿಐ ಆರೋಪ.

ಇದನ್ನೂ ಓದಿ: ಟಾಟಾ ಕಂಪನಿಗಳಿಂದ ಬೆಂಗಳೂರಲ್ಲಿ ಗನ್ ಫ್ಯಾಕ್ಟರಿ, ಎಂಆರ್​ಒ ಘಟಕ; 2,300 ಕೋಟಿ ರೂ ಹೂಡಿಕೆ ಸಾಧ್ಯತೆ

ತಮ್ಮ ಪತಿ ದೀಪಕ್ ಕೋಚರ್ ಮತ್ತು ಕುಟುಂಬ ಸದಸ್ಯರಿಗೆ ನೆರವಾಗುವ ಉದ್ದೇಶದಿಂದ ವಿಡಿಯೋಕಾನ್ ಗ್ರೂಪ್​ಗೆ ಚಂದಾ ಕೋಚರ್ ತಮ್ಮ ಸ್ಥಾನಬಲದಿಂದ ಸಾಲ ಕೊಡಿಸಿದ್ದಾರೆ. ಸಾಲ ಮಂಜೂರು ಮಾಡಿದ ಬೋರ್ಡ್​ಗೆ ಚಂದಾ ಅವರೇ ಮುಖ್ಯಸ್ಥೆಯಾಗಿದ್ದರು ಎಂಬುದು ಸಿಬಿಐನ ವಾದ.

ಆದರೆ, ಈ ಆರೋಪವನ್ನು ಚಂದಾ ಕೋಚರ್ ಅಲ್ಲಗಳೆಯುತ್ತಾ ಬಂದಿದ್ದಾರೆ. ಬ್ಯಾಂಕ್​ನಲ್ಲಿ ಸಾಲ ನೀಡಲು ತೆಗೆದುಕೊಳ್ಳಲಾದ ಯಾವುದೇ ನಿರ್ಣಯವು ಒಬ್ಬರಿಂದ ಆಗಿದ್ದಲ್ಲ. ಅಲ್ಲದೇ ಐಸಿಐಸಿಐ ಬ್ಯಾಂಕ್​ನಲ್ಲಿರುವ ವ್ಯವಸ್ಥೆಯಲ್ಲಿ ಈ ರೀತಿ ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ ಎಂದು ಚಂದಾ ಕೋಚರ್ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ