
ನವದೆಹಲಿ, ನವೆಂಬರ್ 2: ತನ್ನ ನೆಲದಲ್ಲೇ ಲಭ್ಯ ಇರುವ ಹೇರಳ ಖನಿಜ ಸಂಪನ್ಮೂಲವನ್ನು (mineral resources) ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ಸೆಂಟರ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್ಇಪಿ) ವರದಿಯಲ್ಲಿ ಹೇಳಲಾಗಿದೆ. ಭಾರತಕ್ಕೆ ಖನಿಜಗಳ ಅವಶ್ಯಕತೆ ಕುರಿತು ಸಿಎಸ್ಇಪಿ ತಯಾರಿಸುವ ವರದಿಯ ಪ್ರಕಾರ, ಖನಿಜ ಸಂಪನ್ಮೂಲಗಳನ್ನು ಹೆಚ್ಚುವರಿ ಮೈನಿಂಗ್ ಮೂಲಕ ಪಡೆದರೆ ಪ್ರತೀ ವರ್ಷ 100 ಬಿಲಿಯನ್ ಡಾಲರ್ (9 ಲಕ್ಷ ಕೋಟಿ ರೂ) ಆಮದು ವೆಚ್ಚವನ್ನು ತಪ್ಪಿಸಬಹುದು ಎಂದೆನ್ನಲಾಗಿದೆ.
ಭಾರತದಲ್ಲಿ ಸಮೃದ್ಧವಾಗಿರುವ ನೆಲ ಹೊಂದಿದೆ. ಇಲ್ಲಿ ಹೇರಳವಾದ ಮತ್ತು ವೈವಿಧ್ಯಮಯವಾದ ಖನಿಜಗಳ ಸಂಪನ್ಮಲ ಇದೆ. ಇಲ್ಲಿಯವರೆಗೆ ಶೇ. 30ರಷ್ಟನ್ನು ಮಾತ್ರ ಗುರುತಿಸಲಾಗಿದೆ. ಇತರ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಗಣಿಗಾರಿಕೆ ನಡೆಸಿಲ್ಲ. ಭಾರತದ ಜಿಡಿಪಿಗೆ ಮೈನಿಂಗ್ ಸೆಕ್ಟರ್ನ ಕೊಡುಗೆ ಕೇವಲ 2 ಪ್ರತಿಶತ ಇದೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾದಂತಹ ದೇಶಗಳಲ್ಲಿ ಅಲ್ಲಿಯ ಮೈನಿಂಗ್ ಸೆಕ್ಟರ್ಗಳು ಜಿಡಿಪಿಗೆ ಕೊಡುವ ಕೊಡುಗೆ ಶೇ. 7.5ರಿಂದ 12ರಷ್ಟಿದೆ ಎಂದು ಸಿಎಸ್ಇಪಿಯ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಟ್ಯಾರಿಫ್ ಹುಚ್ಚಾಟ, ಭಾರತಕ್ಕೆ ಸಂಕಟ; ಮೇನಿಂದ ಸೆಪ್ಟೆಂಬರ್ವರೆಗೆ ಅಮೆರಿಕಕ್ಕೆ ಭಾರತದ ರಫ್ತು ಶೇ. 37ರಷ್ಟು ಕುಸಿತ
ಭಾರತದ ನೆಲದೊಳಗೆ ವಿವಿಧ ಖನಿಜಗಳು, ಚಿನ್ನ, ತೈಲ ಇತ್ಯಾದಿ ಸಂಪನ್ಮೂಲಗಳು ಇವೆ. ಇವು ಎಲ್ಲೆಲ್ಲಿ ಲಭ್ಯ ಇವೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಲು ಅನ್ವೇಷಣೆ ಅಗತ್ಯ. ಇದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಈ ಕಾರ್ಯ ಕೈಗೊಳ್ಳಲು ಖಾಸಗಿ ಕಂಪನಿಗಳು ಹಿಂದೇಟು ಹಾಕುತ್ತವೆ. ಸರ್ಕಾರದ ನೀತಿಯೇ ಇದಕ್ಕೆ ಕಾರಣ ಎಂಬುದನ್ನು ಸಿಇಎಸ್ಪಿ ವರದಿಯಲ್ಲಿ ಗುರುತಿಸಲಾಗಿದೆ.
ಸಾಕಷ್ಟು ವೆಚ್ಚ ಮಾಡಿ ಸಂಪನ್ಮೂಲವನ್ನು ಪತ್ತೆ ಮಾಡಿದರೂ, ಆ ನಿಕ್ಷೇಪಗಳ ಮೇಲೆ ಕಂಪನಿಗೆ ಹಕ್ಕು ಇರುವುದಿಲ್ಲ. ಸರ್ಕಾರವು ಹರಾಜುಗಳ ಮೂಲಕ ಮೈನಿಂಗ್ ಲೀಸ್ಗಳನ್ನು ಹಂಚಿಕೆ ಮಾಡುತ್ತದೆ. ಇದರಿಂದಾಗಿ, ಸಂಪನ್ಮೂಲ ಅನ್ವೇಷಣೆಗೆ ಕಂಪನಿಗಳು ಹಿಂದೇಟು ಹಾಕುತ್ತವೆ ಎಂಬುದನ್ನು ಈ ವರದಿ ಒತ್ತಿ ಹೇಳುತ್ತಿದೆ.
ಇದನ್ನೂ ಓದಿ: ಒಂದು ತಿಂಗಳಲ್ಲಿ 2,070 ಕೋಟಿ, ಒಂದು ದಿನದಲ್ಲಿ 75 ಕೋಟಿ ಯುಪಿಐ ವಹಿವಾಟುಗಳು; ಇದು ಹೊಸ ದಾಖಲೆ
ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತಕ್ಕೆ ಸಾಕಷ್ಟು ಖನಿಜ ಮತ್ತು ಲೋಹಗಳ ಅವಶ್ಯಕತೆ ಇದೆ. 2022ರಲ್ಲಿ ಭಾರತವು ಈ ಖನಿಜ ಮತ್ತು ಲೋಹಗಳನ್ನು 157 ಬಿಲಿಯನ್ ಡಾಲರ್ ಮೌಲ್ಯದಷ್ಟು ಆಮದು ಮಾಡಿಕೊಂಡಿತ್ತು. ಆ ವರ್ಷ ಭಾರತದ ಒಟ್ಟು ಆಮದಿನಲ್ಲಿ ಇವುಗಳ ಪಾಲು ಶೇ. 20ಕ್ಕಿಂತಲೂ ಹೆಚ್ಚಿತ್ತು. ಅದರಲ್ಲೂ ಕ್ರಿಟಿಕಲ್ ಮಿನರಲ್ ಎನ್ನಲಾದ ಕಾಪರ್, ನಿಕಲ್, ಲಿಥಿಯಂ, ಕೊಬಾಲ್ಟ್ ಅನ್ನು ಭಾರತ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ