AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯ ಯಾವ ದಿನದಂದು ಷೇರು ಮಾರುಕಟ್ಟೆ ರಜೆ; ಮೂಹೂರ್ತ ವ್ಯಾಪಾರ ಯಾವ ನಡೆಯುತ್ತದೆ? ಇಲ್ಲಿದೆ ಡೀಟೇಲ್ಸ್

Deepavali Stock Market Holiday Details: ನವೆಂಬರ್ 14ರಂದು ದೇಶದ ಬಹುತೇಕ ಕಡೆ ದೀಪಾವಳಿ ರಜೆ ಇದೆ. ಷೇರುಪೇಟೆಯೂ ಬಂದ್ ಆಗಿರುತ್ತದೆ. ಆದರೆ, ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್) ಅರ್ಧದಿನ ಮಾತ್ರವೇ ತೆರೆದಿರುತ್ತದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ದಿನವೂ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮೊದಲ ಸೆಷನ್ ಹಾಗೂ ಸಂಜೆ 5ಗಂಟೆಯಿಂದ ರಾತ್ರಿ 11:55ರವರೆಗೂ ಎರಡನೆ ಸೆಷನ್ ವಹಿವಾಟುಗಳು ನಡೆಯುತ್ತವೆ.

ದೀಪಾವಳಿಯ ಯಾವ ದಿನದಂದು ಷೇರು ಮಾರುಕಟ್ಟೆ ರಜೆ; ಮೂಹೂರ್ತ ವ್ಯಾಪಾರ ಯಾವ ನಡೆಯುತ್ತದೆ? ಇಲ್ಲಿದೆ ಡೀಟೇಲ್ಸ್
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2023 | 2:05 PM

Share

ನವೆಂಬರ್ 10ರಿಂದ 15ರವರೆಗೆ ದೇಶಾದ್ಯಂತ ದೀಪಾವಳಿ ಹಬ್ಬದ (deepavali festival) ಸಡಗರ ಇದೆ. ಈ ಆರೂ ದಿನಗಳು ವಿವಿಧೆಡೆ ರಜೆಗಳಿವೆ. ಷೇರು ಮಾರುಕಟ್ಟೆ ಶನಿವಾರ ಮತ್ತು ಭಾನುವಾರ ಮುಚ್ಚಿರುತ್ತದೆ. ಆದರೆ, ಈ ಬಾರಿ ಭಾನುವಾರದಂದು ದೀಪಾವಳಿ ಪ್ರಯುಕ್ತ ವಿಶೇಷ ಮೂಹೂರತ್ ಟ್ರೇಡಿಂಗ್ (Muhurat Trading) ಅಥವಾ ಮುಹೂರ್ತ ವ್ಯಾಪಾರ ನಡೆಯಲಿದೆ. ಇನ್ನು, ದೀಪಾವಳಿ ಬಲಿಪಾಡ್ಯಮಿ ದಿನವಾದ ನವೆಂಬರ್ 14ಕ್ಕೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಮುಚ್ಚಿರುತ್ತವೆ.

ನವೆಂಬರ್ 14ರಂದು ದೇಶದ ಬಹುತೇಕ ಕಡೆ ದೀಪಾವಳಿ ರಜೆ ಇದೆ. ಷೇರುಪೇಟೆಯೂ ಬಂದ್ ಆಗಿರುತ್ತದೆ. ಆದರೆ, ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್) ಅರ್ಧದಿನ ಮಾತ್ರವೇ ತೆರೆದಿರುತ್ತದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ದಿನವೂ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮೊದಲ ಸೆಷನ್ ಹಾಗೂ ಸಂಜೆ 5ಗಂಟೆಯಿಂದ ರಾತ್ರಿ 11:55ರವರೆಗೂ ಎರಡನೆ ಸೆಷನ್ ವಹಿವಾಟುಗಳು ನಡೆಯುತ್ತವೆ. ಆದರೆ, ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನವಾದ ನವೆಂಬರ್ 14ರಂದು ಎಂಸಿಎಕ್ಸ್​ನ ಬೆಳಗಿನ ಅವಧಿ ರಜೆ ಇರುತ್ತದೆ. ಸಂಜೆ 5 ಗಂಟೆಯವರೆಗೂ ಯಾವುದೇ ವಹಿವಾಟು ನಡೆಯುವುದಿಲ್ಲ. ಸಂಜೆ 5ರ ನಂತರ ಅಲ್ಲಿ ಚಟುವಟಿಕೆ ಶುರುವಾಗುತ್ತದೆ.

ಇದನ್ನೂ ಓದಿ: ದೀಪಾವಳಿ ಸೀಸನ್​ನಲ್ಲಿ ಹೆಚ್ಚಿದ ವೋಕಲ್ ಫಾರ್ ಲೋಕಲ್ ಕೂಗು; ಚೀನಾಗೆ ಲಕ್ಷಕೋಟಿ ರೂ ನಷ್ಟ ಸಾಧ್ಯತೆ

ಮುಹೂರ್ತ ಟ್ರೇಡಿಂಗ್…

ಈ ಬಾರಿಯ ದೀಪಾವಳಿ ಮುಹೂರ್ತ ವ್ಯಾಪಾರ ನವೆಂಬರ್ 12ರಂದು, ಸಂಜೆ 6ರಿಂದ 7:15ಕ್ಕೆ ನಡೆಯಲಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ತಿಳಿಸಿದೆ. ಅಂದು ಭಾನುವಾದ್ದರಿಂದ ಷೇರುಪೇಟೆ ಬಂದ್ ಆಗಿರುತ್ತದಾದರೂ ಮುಹೂರತ್ ಟ್ರೇಡಿಂಗ್ ಮಾತ್ರವೇ ನಡೆಯುವುದು. ಅದಕ್ಕಾಗಿ ಒಂದು ಗಂಟೆ ಮಾತ್ರವೇ ಈ ಟ್ರೇಡಿಂಗ್ ಇರುತ್ತದೆ. ದೀಪಾವಳಿ ಹಬ್ಬದಂದು ವಿಕ್ರಮ್ ಸಂವತ್ಸರ 2080ರ ಹೊಸ ವರ್ಷ ಆರಂಭವಾಗುತ್ತದೆ. ಅದರ ಹಿನ್ನೆಲೆಯಲ್ಲಿ ಮುಹೂರ್ತ ವ್ಯಾಪಾರ ನಡೆಯುತ್ತದೆ.

ಇದನ್ನೂ ಓದಿ: ದೀಪಾವಳಿ ಹಬ್ಬದಂದು ಆರು ದಿನ ಬ್ಯಾಂಕುಗಳ ರಜೆ; ನಿಮ್ಮ ಪ್ರದೇಶದಲ್ಲಿ ಯಾವ್ಯಾವತ್ತು ಇದೆ ರಜೆ, ಇಲ್ಲಿದೆ ಪಟ್ಟಿ

ಹೊಸ ವರ್ಷಾರಂಭದ ಶುಭ ಮುಹೂರ್ತದಲ್ಲಿ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಷೇರು ಮಾರುಕಟ್ಟೆಯಲ್ಲೂ ಜನರು ಇದನ್ನು ನಂಬಿ ಷೇರು ಖರೀದಿಗೆ ಮುಂದಾಗುತ್ತಾರೆ. ಅದಕ್ಕಾಗಿ ಈ ಕಾಲಘಟ್ಟದಲ್ಲಿ ಒಂದು ಗಂಟೆಯನ್ನು ಟ್ರೇಡಿಂಗ್​ಗಾಗಿ ಮೀಸಲಿಡಲಾಗುತ್ತದೆ. ಅಂದು ಷೇರುಗಳನ್ನು ಖರೀದಿಸಿದರೆ ಸಂಪತ್ತು ಹೆಚ್ಚುತ್ತದೆಂಬ ನಂಬಿಕೆ ಇದೆ. ಹೀಗಾಗಿ, ಮುಹೂರತ್ ಟ್ರೇಡಿಂಗ್​ನ ಒಂದು ಗಂಟೆಯಲ್ಲಿ ಷೇರುವಹಿವಾಟು ಬಹಳ ಹೆಚ್ಚಿರುತ್ತದೆ. ಹಿಂದಿನ ಎರಡು ವರ್ಷಗಳಲ್ಲಿ ಷೇರುಪೇಟೆ ತುಸು ಹೆಚ್ಚಳ ಕಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯ
‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯ
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ