Dunzo: ಬೆಂಗಳೂರಿನ ಡುಂಜೋದಿಂದ ವಿಭಿನ್ನ ರೀತಿಯಲ್ಲಿ ಸ್ಯಾಲರಿ ಕಟ್; ಸಂಬಳ ಮಿತಿ 75,000 ರೂ

Salary Cut: ಈ ವರ್ಷ ಎರಡು ಬಾರಿ ಉದ್ಯೋಗಕಡಿತ ಮಾಡಿದ್ದ ಡುಂಜೋ ಸಂಸ್ಥೆ ಇದೀಗ ಜೂನ್ ತಿಂಗಳಿಗೆ ಉದ್ಯೋಗಿಗಳ ಸಂಬಳಕಡಿತಗೊಳಿಸಿದೆ. ಸಂಬಳಮಿತಿ 75,000 ರೂ ಎಂದು ನಿಗದಿ ಮಾಡಿ ಸಂಬಳಕಡಿತ ಮಾಡಲಾಗಿದೆ.

Dunzo: ಬೆಂಗಳೂರಿನ ಡುಂಜೋದಿಂದ ವಿಭಿನ್ನ ರೀತಿಯಲ್ಲಿ ಸ್ಯಾಲರಿ ಕಟ್; ಸಂಬಳ ಮಿತಿ 75,000 ರೂ
ಡುಂಜೋ
Follow us
|

Updated on:Jul 12, 2023 | 4:23 PM

ನವದೆಹಲಿ: ರಿಲಾಯನ್ಸ್ ಬೆಂಬಲಿತ ಡುಂಜೋ ಸಂಸ್ಥೆ (Dunzo) ತನ್ನ ಹಣಕಾಸು ಸಂಕಷ್ಟ ಸರಿಪಡಿಸುವ ನಿಟ್ಟಿನಲ್ಲಿ ವೇತನಕಡಿತಕ್ಕೆ (Salary Cut) ಕೈಹಾಕಿದೆ. ಆದರೆ, ಎಲ್ಲರಿಗೂ ಏಕ ರೀತಿಯಲ್ಲಿ ವೇತನ ಕಡಿತ ಮಾಡದೇ ಹೆಚ್ಚಿನ ಸಂಬಳದಾರರನ್ನು ಮಾತ್ರ ಗುರಿ ಮಾಡಲಾಗಿದೆ. ಮನಿಕಂಟ್ರೋಲ್​ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಡುಂಜೋದಲ್ಲಿ ಯಾರೇ ಉದ್ಯೋಗಿಗಳಾಗಿದ್ದರೂ ಸಂಬಳಮಿತಿ (Salary Cap) 75,000 ರೂ ಎಂದು ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದವರಿಗೆ ಸಂಬಳಕಡಿತವಾಗಲಿದೆ. 75,000 ರೂಗಿಂತ ಕಡಿಮೆ ಸಂಬಳ ಪಡೆಯುತ್ತಿರುವವರಿಗೆ ಯಾವುದೇ ಕಡಿತ ಇರುವುದಿಲ್ಲ. ಆದರೆ, ಈ ಕ್ರಮ ಕೇವಲ ತಾತ್ಕಾಲಿಕ ಮಾತ್ರ. ತುರ್ತು ಹಣಕಾಸು ಸಂಕಷ್ಟ ಎದುರಿಸಲು ಡುಂಜೋ ಸಂಬಳಮಿತಿ ನಿರ್ಧಾರ ಕೈಗೊಂಡಿದೆ.

ವರದಿಯ ಪ್ರಕಾರ, ಶೇ. 50ರಷ್ಟು ಸಿಬ್ಬಂದಿಗೆ, ಅಂದರೆ 500 ಮಂದಿಗೆ ಮಾತ್ರ ಸಂಬಳಕಡಿತ ಇರಲಿದೆ. ಇದು ಜೂನ್ ತಿಂಗಳ ಸಂಬಳಕ್ಕೆ ಮಾತ್ರ ಆಗುವ ಕಡಿತ. ಆದರೆ, ಸಂಬಳಕಡಿತಗೊಂಡವರು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಜುಲೈ 20ರೊಳಗೆ ಬಾಕಿ ಸಂಬಳವೆಲ್ಲವೂ ಜಮೆ ಆಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿCess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?

ಸಂಬಳಕಡಿತವಾದವರಲ್ಲಿ ಎಲ್ಲರೂ ಹಿರಿಯ ಉದ್ಯೋಗಿಗಳೇ. ಈ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸಿಬ್ಬಂದಿಗೂ ಮುಂಚಿತವಾಗಿ ತಿಳಿಸಿರಲಿಲ್ಲ. ಸಂಬಳ ಪಡೆಯುವ ದಿನದಂದು ಮಾತ್ರವೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವರದಿಗಳ ಪ್ರಕಾರ ಡುಂಜೋ ಸಂಬಳಕಡಿತದ ನಿರ್ಧಾರ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದ್ದು. ಸಂಬಳದ ದಿನ ಸಮೀಪಿಸುತ್ತಿರುವಂತೆಯೇ ವ್ಯವಹಾರ ಉದ್ದೇಶಕ್ಕೆ ತುರ್ತಾಗಿ ಹಣ ಬೇಕಕದ್ದರಿಂದ ಕಂಪನಿ ಅನಿವಾರ್ಯವಾಗಿ ಸಂಬಳಕಡಿತಕ್ಕೆ ಕೈಹಾಕಿದ್ದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಡುಂಜೋ ಸಂಸ್ಥೆ ಆನ್​ಲೈನ್ ಆರ್ಡರ್ ಪಡೆದು ಮನೆಮನೆಗೆ ವಿವಿಧ ವಸ್ತುಗಳನ್ನು ಡೆಲಿವರಿ ಮಾಡುತ್ತದೆ. ಕೊರಿಯರ್, ಲಾಂಡ್ರಿ, ಔಷಧಿ ಇತ್ಯಾದಿಯನ್ನೂ ಡೆಲಿವರ್ ಮಾಡುತ್ತದೆ. ಬೆಂಗಳೂರಷ್ಟೇ ಅಲ್ಲದೇ ದೆಹಲಿ, ಗುರುಗ್ರಾಮ್, ಪುಣೆ, ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲೂ ಡುಂಜೋ ಕಾರ್ಯನಿರತವಾಗಿದೆ. ಗುರುಗ್ರಾಮ್​ನಲ್ಲಿ ಡುಂಜೋದಿಂದ ಬೈಕ್ ಟ್ಯಾಕ್ಸಿಯೂ ಇದೆ. 2022ರಲ್ಲಿ ರಿಲಾಯನ್ಸ್ ರೀಟೇಲ್ 240 ಮಿಲಿಯನ್ ಡಾಲರ್ ಮೊತ್ತಕ್ಕೆ ಡುಂಜೋದಲ್ಲಿ ಶೇ. 25.8ರಷ್ಟು ಪಾಲು ಖರೀದಿಸಿದೆ.

ಇಷ್ಟಾದರೂ ಡುಂಜೋಗೆ ನಿರೀಕ್ಷಿತ ಆದಾಯ ಬರದೇ ಹಣಕಾಸು ಸಂಕಷ್ಟ ಮುಂದುವರಿದಿದೆ. ಈ ವರ್ಷ ಎರಡು ಸುತ್ತುಗಳಲ್ಲಿ ಅದು ಉದ್ಯೋಗಿಗಳ ಲೇ ಆಫ್ ಮಾಡಿದೆ. ಒಟ್ಟು 380 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Wed, 12 July 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್